ಕ್ರಿಕೆಟ್ದೊಡ್ಡ ಆಟಗಾರ ದೊಡ್ಡ ಪಂದ್ಯಗಳಲ್ಲಿ ದೊಡ್ಡದಾಗಿಯೇ ಆಡುತ್ತಾನೆ..!

ದೊಡ್ಡ ಆಟಗಾರ ದೊಡ್ಡ ಪಂದ್ಯಗಳಲ್ಲಿ ದೊಡ್ಡದಾಗಿಯೇ ಆಡುತ್ತಾನೆ..!

-

- Advertisment -spot_img
ಅವನ ಸಾಮರ್ಥ್ಯವನ್ನು ಪ್ರಶ್ನಿಸುವ ಧೈರ್ಯ ಮಾಡಿದವರಿಗೆ ಆತ ಕೊಟ್ಟ ಉತ್ತರವಿದು.
ಅವನು ಬೆಂಕಿ.. ಕೆರಿಬಿಯನ್ ನೆಲದಲ್ಲಿ ಹೊತ್ತಿಕೊಂಡ ಆ ಜ್ವಾಲೆ ಭಾರತಕ್ಕೆ 13 ವರ್ಷಗಳ ನಂತರ ವಿಶ್ವಕಪ್ ಗೆಲ್ಲಿಸಿತು.
ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 9 ರನ್ ಗಳಿಸಿ ಔಟಾಗಿದ್ದ ವಿರಾಟ್ ಕೊಹ್ಲಿ ಪೆವಿಲಿಯನ್’ನಲ್ಲಿ ಹತಾಶನಾಗಿ ಕೂತು ಬಿಟ್ಟಿದ್ದ. ವಿರಾಟನನ್ನು ಕೋಚ್ ರಾಹುಲ್ ದ್ರಾವಿಡ್ ಸಂತೈಸಿದ್ದರು. ಒಬ್ಬ ದಿಗ್ಗಜನ ಮನಸ್ಥಿತಿ ಮತ್ತೊಬ್ಬ ದಿಗ್ಗಜನಿಗಷ್ಟೇ ಅರ್ಥವಾಗಲು ಸಾಧ್ಯ.
ಫೈನಲ್’ಗೂ ಮುನ್ನ ಏಳು ಪಂದ್ಯಗಳಲ್ಲಿ ಕೇವಲ 75 ರನ್. ಬ್ಯಾಟಿಂಗ್ ಸಾಮ್ರಾಟನ ಸಾಮರ್ಥ್ಯಕ್ಕೇ ಸವಾಲು ಎದುರಾಗಿದ್ದ ಸಮಯ. ಕೊಹ್ಲಿಯಂಥಾ ಒಬ್ಬ ಕ್ರಿಕೆಟಿಗನಿಗೆ, ಪ್ರತೀ ಪಂದ್ಯದಲ್ಲೂ ಭಾರತವನ್ನು ಗೆಲ್ಲಿಸಲೇಬೇಕೆಂಬ ಒಂದೇ ಒಂದು ಅಜೆಂಡಾದೊಂದಿಗೆ ಆಡುವ ಆಟಗಾರನಿಗೆ ತನ್ನ ಸಾಮರ್ಥ್ಯದ ಬಗ್ಗೆಯೇ ಅಪನಂಬಿಕೆ ಮೂಡಿದ್ದ ಸಂದರ್ಭ.  ತಾನು ತಂಡಕ್ಕೆ ಹೊರೆಯಾಗುತ್ತಿರುವೆನೇ ಎಂಬ ಪರಿಸ್ಥಿತಿ. ಕಾರಣ, ಯಾರ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿದ್ದವೋ, ಆತ ರನ್ ಗಳಿಸಲು ಪರದಾಡುತ್ತಿದ್ದ.
ಒಂದು ಮಾತಿದೆ. Comeback is greater than setback ಅಂತ.
ವಿರಾಟ್ ಕೊಹ್ಲಿ ತನ್ನೆಲ್ಲಾ ಶಕ್ತಿಯನ್ನು ದೊಡ್ಡ ಪಂದ್ಯಕ್ಕಾಗಿಯೇ ಮೀಸಲಿಟ್ಟು ಬಿಟ್ಟಿದ್ದ. ಫೈನಲ್’ವರೆಗೆ ಒಂದು ಲೆಕ್ಕವಾದರೆ, ಫೈನಲ್ ಲೆಕ್ಕವೇ ಬೇರೆ. ದೊಡ್ಡ ಆಟಗಾರರು ದೊಡ್ಡ ಪಂದ್ಯಗಳಲ್ಲಿ ಆಡುವುದೇ ಹಾಗೆ.
ಟನ್’ಗಟ್ಟಲೆ ಗಳಿಸುವ ರನ್’ಗಳಿಗಿಂತ ತಂಡಕ್ಕೆ ತುಂಬಾ ಅವಶ್ಯಕತೆ ಇದ್ದಾಗ ಗಳಿಸುವ ರನ್’ಗಳ ಮೌಲ್ಯವೇ ಬೇರೆ. ವಿರಾಟ್ ಆಡಿದ್ದು ಅಂಥದ್ದೇ ಆಟ.
THE GOAT in big stages standing tall for India:
– 72*(44) in 2014 T20 World Cup Semifinal
– 77(58) in 2014 T20 World Cup Final.
– 89*(47) in 2016 T20 World Cup Semifinal
– 50(40) in 2022 T20 World Cup Semifinal
– 78(59) in 2024 T20 World Cup Final
ಇದು ಒಬ್ಬ ಶ್ರೇಷ್ಠ ಆಟಗಾರನ ಶ್ರೇಷ್ಠತೆ. ಭಾರತಕ್ಕೆ 17 ವರ್ಷಗಳ ನಂತರ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟು, ತನ್ನ ಪಾಲಿಗೆ ಮರೀಚಿಕೆಯಾಗಿದ್ದ ಟಿ20 ವಿಶ್ವಕಪ್ ಗೆದ್ದ ಕ್ಷಣ ಇನ್ನೆೆಂದೂ ಭಾರತ ಪರ ಟಿ20 ಪಂದ್ಯವಾಡಲಾರೆನೆಂದು ಹೇಳಿ ಎದ್ದು ನಡೆದಿದ್ದಾನೆ ವಿರಾಟ್ ಕೊಹ್ಲಿ.
Thank you Legend King Kohli  ನೀನು ಬರೀ ಗ್ರೇಟ್ ಅಲ್ಲ, greatest.. Greatest of all time. ನಿನ್ನನ್ನು ಈ ಕ್ರಿಕೆಟ್ ಜಗತ್ತು ಎಂದಿಗೂ ಮರೆಯದು..!❤️❤️❤️

LEAVE A REPLY

Please enter your comment!
Please enter your name here

one + 15 =

Latest news

ಆರ್‌ಸಿಬಿ ಮಾಲೀಕತ್ವದ ಬದಲಾವಣೆ: ಬೆಂಗಳೂರಿನ ಉದ್ಯಮಿಗಳ ಹೊಸ ಅಧ್ಯಾಯ?

ಆರ್‌ಸಿಬಿ ಮಾಲೀಕತ್ವದ ಬದಲಾವಣೆ: ಬೆಂಗಳೂರಿನ ಉದ್ಯಮಿಗಳ ಹೊಸ ಅಧ್ಯಾಯ? ಐಪಿಎಲ್‌ನ ಅತ್ಯಂತ ಜನಪ್ರಿಯ ಮತ್ತು ವ್ಯಾಪಾರಿಕವಾಗಿ ಯಶಸ್ವಿಯಾದ ಫ್ರಾಂಚೈಸಿಗಳಲ್ಲಿ ಒಂದಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹೊಸ...

10 ಮಂದಿ ಹುಡುಗರ ಮಧ್ಯೆ ಒಬ್ಬಳು ಹೆಣ್ಣು ಹುಲಿ.. ಅವಳು ಬಂಗಾಳದ ಬಂಗಾರ..!

10 ಮಂದಿ ಹುಡುಗರ ಮಧ್ಯೆ ಒಬ್ಬಳು ಹೆಣ್ಣು ಹುಲಿ.. ಅವಳು ಬಂಗಾಳದ ಬಂಗಾರ..! ಪಶ್ಚಿಮ ಬಂಗಾಳದಲ್ಲಿ ಕ್ರಿಕೆಟ್ ಎಂದಾಕ್ಷಣ ಕಿವಿಗಪ್ಪಳಿಸುವ ಮೊದಲ ಹೆಸರು ‘ದಾದಾ’.. ಬಂಗಾಳದ ಮನೆ...

ಬ್ರಹ್ಮಾವರದ ಹೆಮ್ಮೆ – ವಿಶ್ವವಿಜೇತ ಜೆಮೀಮಾ ರೊಡ್ರಿಗಸ್ ಅವರ ಕೋಚ್ ಪ್ರಶಾಂತ್ ಶೆಟ್ಟಿ

ಬ್ರಹ್ಮಾವರದ ಹೆಮ್ಮೆ – ವಿಶ್ವವಿಜೇತ ಜೆಮೀಮಾ ರೊಡ್ರಿಗಸ್ ಅವರ ಕೋಚ್ ಪ್ರಶಾಂತ್ ಶೆಟ್ಟಿ ಇತ್ತೀಚೆಗೆ ನಡೆದ ಮಹಿಳೆಯರ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಪ್ರತಿಭಾವಂತ ಕ್ರಿಕೆಟರ್ ಜೆಮೀಮಾ...

ಲಾರೆನ್ಸ್ ಸಲ್ದಾನ: ಕೌಡೂರಿನ ಕ್ರೀಡೆ ಮತ್ತು ಕಲೆಗೆ ಹೊಸ ಉಸಿರು

  ಲಾರೆನ್ಸ್ ಸಲ್ದಾನ: ಕೌಡೂರಿನ ಕ್ರೀಡೆ ಮತ್ತು ಕಲೆಗೆ ಹೊಸ ಉಸಿರು ಇತ್ತೀಚೆಗೆ ನಡೆದ ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಭಾರತದ ಪ್ರತಿಭಾವಂತ ಬ್ಯಾಟ್ಸ್‌ವುಮನ್ ಜೆಮೀಮಾ ರೊಡ್ರಿಗಸ್ ಮಿಂಚಿ...
- Advertisement -spot_imgspot_img

ಬಂಟ್ವಾಳದಲ್ಲಿ ‘ಟೀಮ್ ಬ್ರದರ್ಸ್ ಬರೆಕ್ಕಾಡ್ ಸೀಸನ್–2’ ಕ್ರಿಕೆಟ್

ಬಂಟ್ವಾಳದಲ್ಲಿ ‘ಟೀಮ್ ಬ್ರದರ್ಸ್ ಬರೆಕ್ಕಾಡ್ ಸೀಸನ್–2’ ಕ್ರಿಕೆಟ್ “ಟೀಮ್ ಬ್ರದರ್ಸ್ ಬರೆಕ್ಕಾಡ್ ಸೀಸನ್ –2” ಕ್ರಿಕೆಟ್ ಟೂರ್ನಮೆಂಟ್ ಡಿಸೆಂಬರ್ 27 ಮತ್ತು 28ರಂದು ಬಂಟ್ವಾಳ ಮೈದಾನದಲ್ಲಿ ಜರುಗಲಿದೆ. ‘ಟೀಮ್ ಬ್ರದರ್ಸ್ ವತಿಯಿಂದ ಆಯೋಜಿಸಲಾದ...

ಜೈ ಭೀಮ್ ಟ್ರೋಫಿ – 2025: ಹೊಳೆನರಸೀಪುರದಲ್ಲಿ “ಫ್ರೆಂಡ್ಸ್ ಬೆಂಗಳೂರು” ತಂಡದ ವಿಜಯ ಕಿರೀಟ!

ಜೈ ಭೀಮ್ ಟ್ರೋಫಿ – 2025: ಹೊಳೆನರಸೀಪುರದಲ್ಲಿ “ಫ್ರೆಂಡ್ಸ್ ಬೆಂಗಳೂರು” ತಂಡದ ವಿಜಯ ಕಿರೀಟ! ಹೊಳೆನರಸೀಪುರದಲ್ಲಿ ನಡೆದ ಜೈ ಭೀಮ್ ಟ್ರೋಫಿ 2025 ಕ್ರಿಕೆಟ್ ಟೂರ್ನಿಯಲ್ಲಿ,...

Must read

- Advertisement -spot_imgspot_img

You might also likeRELATED
Recommended to you