ಕ್ರಿಕೆಟ್ಗೋಡೆ ಏರಿ ಕುಳಿತು ವಿದಾಯ ಹೇಳಿದ ದಿಗ್ಗಜರು!

ಗೋಡೆ ಏರಿ ಕುಳಿತು ವಿದಾಯ ಹೇಳಿದ ದಿಗ್ಗಜರು!

-

- Advertisment -spot_img
ವಾವ್..! ಇಂತದ್ದೊಂದು ಕ್ಷಣಕ್ಕೆ ಅದೆಷ್ಟು ವರ್ಷಗಳಿಂದ ಕಾದಿದ್ವೋ..! ಬಾಲ್ಯದಿಂದಲೂ ರಾಹುಲ್ ದ್ರಾವಿಡ್ ಅಂದ್ರೆ ಅಷ್ಟು ಇಷ್ಟ. Cricket is a gentleman’s game ಅಂತ ದ್ರಾವಿಡ್ ನೋಡಿ ಹೇಳಿರಬೇಕು ಎಂಬಂತಹ ನಡತೆ, ಗಂಭೀರತೆ..
ಅಂತದ್ದೊಂದು ವ್ಯಕ್ತಿತ್ವಕ್ಕೆ ಅದೃಷ್ಟ ಅನ್ನೋದು ಯಾಕೆ ಕೈಹಿಡಿಯಲಿಲ್ಲ ಅಂತ ಯಾವಾಗಲೂ ಬೇಸರವಾಗ್ತಿತ್ತು.. ಅವರ ವ್ಯಕ್ತಿಗತ ಸಾಧನೆ ಏನೇ ಇದ್ರೂ ವಿಶ್ವಕಪ್ ಅಂತ ಬಂದಾಗ ಗೆದ್ದ ತಂಡದಲ್ಲಿ ಒಮ್ಮೆಯೂ ಇರಲಿಲ್ಲ ಅಂತ ಪದೇ ಪದೇ ಕಾಡ್ತಿದ್ದ ಬೇಸರ. ವ್ಯಕ್ತಿಗತವಾದ ಸಾಧನೆಯಲ್ಲೂ ಸಹ ಅವ್ರ ಸಮಕಾಲೀನ ಬೇರವರೊಡನೆ ಮರೆಮಾಚಿಬಿಡ್ತಿತ್ತು.. ಕೊನೆಗೆ ಒಂದು ಸರಿಯಾದ ವಿದಾಯ ಸಹ ಸಿಗಲಿಲ್ಲ.
.ಸರಿ ಅಧ್ಯಾಯ ಮುಗಿಯಿತು ಇನ್ಯಾರು ಎಂದು ಆಲೋಚಿಸುವ ಹೊತ್ತಿಗೆ ಕೊಹ್ಲಿ ಎಂಬ ಅತ್ಯುತ್ತಮ ಆಟಗಾರನ ಆಗಮನ.. ಬ್ರಾಡ್ಮಾನ್ ಕಥೆಗಳನ್ನು ಕೇಳ್ತಿದ್ದ ನಮಗೆ ಕೊಹ್ಲಿಯಲ್ಲಿ ಬ್ರಾಡ್ಮಾನ್ ಕಂಡಂತ ಅನುಭವ.. Consistency throughout the career, fitness, energy, aggressiveness.. ಗಂಗೂಲಿ ಇತ್ತೀಚಿಗೆ ಹೇಳಿದಂತ Kohliಯಂತಹ ಆಟಗಾರ one time special.. ಮತ್ತೆ ಯಾರೂ replace ಮಾಡದಂತಹ ಆಟಗಾರ‌. ಆದ್ರೆ ಇಲ್ಲೂ ಸಹ ವಿಶ್ವಕಪ್ ಗೆದ್ದ ತಂಡದಲ್ಲಿ ಇವ ಇಲ್ಲ ಎಂಬ ಕೊರತೆ ಕಾಡುತ್ತಲೇ ಇತ್ತು.. ಕಳೆದ ವರ್ಷದ ಏಕದಿನ ವಿಶ್ವಕಪ್ನಲ್ಲಿ ನನ್ನ ಇಷ್ಟು ದಿನದ ಕಾಯಿವಿಕೆ ಮುಗೀತು.. ಭಾರತದ ನೆಲದಲ್ಲಿ ಇಬ್ರನ್ನು ಹೊತ್ತು ಮೆರೆಸೋ ಕಾಲ ಬಂದೇ ಬಿಡ್ತು ಅಂದ್ಕೊಂಡಿದ್ದೆ ಆದ್ರೆ ಆಸ್ಟ್ರೇಲಿಯಾ ಅದನ್ನು ಕಸಿದುಬಿಡ್ತು..
ನಿಜಕ್ಕೂ ಈ ವಿಶ್ವಕಪ್ ಶುರುವಾದಾಗಿಂದ ಇವರು ಗೆಲ್ಲಬಹುದು ಅಂತ ನಿರೀಕ್ಷೆ ಇಟ್ಕೊಂಡಿರಲಿಲ್ಲ‌. ಒಂದು ಪೋಸ್ಟ್ ಸಹ ಯಾವ ಮ್ಯಾಚ್ ಬಗ್ಗೆ ಹಾಕ್ಲಿಲ್ಲ.. ಚೋಕರ್ಸ್ ಎಂಬ ಹಣೆಪಟ್ಟಿಯ ಸೌತಾಫ್ರಿಕ ಎದುರಾಳಿ ಅಂತ ಗೊತ್ತಾದ್ಮೇಲೂ ಸಹ ಕಳೆದ ವರ್ಷದ ಕಹಿನೆನಪು ಮತ್ತೇ ಕಾಡ್ತಾನೇ ಇತ್ತು.. ಮೂವತ್ತು ಬಾಲಿಗೆ ಮೂವತ್ತು ರನ್ನಿನ ಪರಿಸ್ಥಿತಿಯಲ್ಲಂತೂ ರಾಹುಲ್ ಮತ್ತು ಕೊಹ್ಲಿ ಹಣೆಯಲ್ಲೇ ಬರೆದಿದ್ದದ್ದು ನಾವು ಎಷ್ಟು ಬಯಸಿದರೆ ಏನು ಪ್ರಯೋಜನ ಅಂತಲೇ ಮ್ಯಾಚ್ ನೋಡ್ತಿದ್ದೆ.. ಆದರೆ ಪವಾಡ ನಡೆದೇ ಹೋಯಿತು.. ❤
ಸಂತಸದ ವಿಷಯ ಏನಂದ್ರೆ ಯಾವ ಕ್ರಿಕೆಟ್‌ ಜಗತ್ತು ಕೊಹ್ಲಿ unlucky player.. ವಿಶ್ವಕಪ್ನಂತಹ ಪಂದ್ಯಾವಳಿ ಗೆಲ್ಲಲಾರ ಅಂತಿತ್ತೋ ಅದೇ ಜಗತ್ತಿನ ಮುಂದೆ ಫೈನಲ್ ಪಂದ್ಯದಲ್ಲಿ ಪಂದ್ಯ ಪುರುಷೋತ್ತಮನಾಗಿ ಗೆಲ್ಲೋದು..❤
ಯಾವ ಕ್ರಿಕೆಟ್ ಜಗತ್ತು ಟಿಟ್ವೆಂಟಿ ಫಾರ್ಮ್ಯಾಟ್ ಶುರುವಾದಾಗ ದ್ರಾವಿಡ್ನಂತಹ ಆಟಗಾರನಿಗೆ ಇವೆಲ್ಲಾ ಆಗಲ್ಲ ಅಂತಿಂತ್ತೋ ಅದೇ ಜಗತ್ತಿನ ಮುಂದೆ ದ್ರಾವಿಡ್ ಕೋಚ್ ಆಗಿ ಟಿಟ್ವೆಂಟಿ ವಿಶ್ವಕಪ್ ಗೆಲ್ಲೋದು.. ❤
We can’t expect more than this from God..! ಇಂತಹ ಒಂದು ಬೀಳ್ಕೊಡುಗೆ ಎಲ್ಲರಿಗೂ ಸಿಗಲ್ಲ.. ಅಂತದ್ದೊಂದು ಅದೃಷ್ಟ ದ್ರಾವಿಡ್ ಮತ್ತು ಕೊಹ್ಲಿಗೆ ಸಿಕ್ಕಿಬಿಡ್ತು ಮತ್ತು ನಾವೆಲ್ಲಾ ಅದಕ್ಕೆ ಸಾಕ್ಷಿಯಾಗಿಬಿಟ್ವಿ ❤
ಇದೊಂದು ಕೇವಲ ವಿಶ್ವಕಪ್ ಗೆಲುವು ಅಂತ ಅನ್ನಿಸ್ತಾನೇ ಇಲ್ಲ. ಇದು ನಮ್ಮ ಜನರೇಷನ್ನಿನ ಗೆಲುವು.. ದಶಕಗಳ ಕನಸು.. ಕಾಯುತ್ತಿದ್ದ ಕ್ಷಣ..
ತುಂಬಾ Emotional ಅಂತ ಹೇಳೋದು ಸಹ ಸಣ್ಣದೋ ಏನೊ.. ಹೇಳಲಿಕ್ಕಾಗದಷ್ಟು ಖುಷಿ.. Its an experience that never ends.. ❤

LEAVE A REPLY

Please enter your comment!
Please enter your name here

six + 17 =

Latest news

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ ಸಿರ್ಸಿಯ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ Shri Marikamba Trophy ಓಪನ್ ಹಾರ್ಡ್ ಟೆನಿಸ್ ಕ್ರಿಕೆಟ್...

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ!

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ! ಹೆಜಮಾಡಿ ಸಮೀಪದ ಶಾನುಭಾಗ...

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ ಉಡುಪಿ, ಏಪ್ರಿಲ್ 5, 2026: ಪರಿಸರ ಸಂರಕ್ಷಣೆಗೆ ಹೊಸ ದಿಕ್ಕು ತೋರಿಸುವ ವಿಶಿಷ್ಟ ಪ್ರಯತ್ನವಾಗಿ, ಕ್ರಿಕೆಟ್ ದಂತಕಥೆ...

ಅಮ್ಗೆಲೆ ಅಭರಣ್ GPL ಉತ್ಸವ – 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ

ಅಮ್ಗೆಲೆ ಅಭರಣ್ GPL– 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ ಜಿಎಸ್‌ಬಿ ಕ್ರೀಡಾಭಿಮಾನಿಗಳು ಆತುರದಿಂದ ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. *ಅಮ್ಗೆಲೆ ಅಭರಣ್ GPL...
- Advertisement -spot_imgspot_img

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ ರೈಲ್ವೇಸ್ ಪರವಾಗಿ ರಣಜಿ ಟ್ರೋಫಿಯಲ್ಲಿ ಪ್ರತಿನಿಧಿಸಿದ್ದ ಮಾಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ಅವರು ಹೃದಯಾಘಾತದಿಂದ ಮುಂಬೈನ ಮುಲುಂಡ್‌ನಲ್ಲಿರುವ...

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು ಫ್ರೆಂಡ್ಸ್ ಅಳಿಯೂರು ವತಿಯಿಂದ ಮೊದಲ ಬಾರಿಗೆ ಅಳಿಯೂರು ಪ್ರೀಮಿಯರ್ ಲೀಗ್ (APL-2026) – ಸೀಸನ್ 1 ಆಯೋಜಿಸಲಾಗಿದೆ....

Must read

- Advertisement -spot_imgspot_img

You might also likeRELATED
Recommended to you