ಕ್ರಿಕೆಟ್ಕರ್ನಾಟಕಕ್ಕೆ ಮತ್ತೊಬ್ಬ ಮಿಥುನ್ ಆಗಬಲ್ಲನೇ ವೈಶಾಖ್..?

ಕರ್ನಾಟಕಕ್ಕೆ ಮತ್ತೊಬ್ಬ ಮಿಥುನ್ ಆಗಬಲ್ಲನೇ ವೈಶಾಖ್..?

-

- Advertisment -spot_img
ಪೀಣ್ಯ ಎಕ್ಸ್’ಪ್ರೆಸ್ ಖ್ಯಾತಿಯ ಅಭಿಮನ್ಯು ಮಿಥುನ್ ಕರ್ನಾಟಕ ಕ್ರಿಕೆಟ್ ಕಂಡ ಸಾರ್ವಕಾಲಿಕ ಶ್ರೇಷ್ಠ ವೇಗದ ಬೌಲರ್’ಗಳಲ್ಲಿ ಒಬ್ಬರು. ಕಳೆದ 14 ವರ್ಷಗಳಲ್ಲಿ ತಮ್ಮ ಸ್ಪೀಡ್’ನಿಂದಲೇ ಎದುರಾಳಿ ಬ್ಯಾಟ್ಸ್’ಮನ್’ಗಳಲ್ಲಿ ಭಯ ಹುಟ್ಟಿಸಿದ ಕರ್ನಾಟಕದ ವೇಗದ ಬೌಲರ್ ಅಂತ ಯಾರಾದ್ರೂ ಇದ್ರೆ ಅದು ಅಭಿಮನ್ಯು ಮಿಥುನ್.
ಮಿಥುನ್ ಎಂಥಾ ಕ್ರಿಕೆಟರ್ ಅಂದ್ರೆ, ಆ ದಿನ ಅವರದ್ದಾಗಿದ್ರೆ ಮುಗೀತು ಎದುರಾಳಿ ತಂಡದ ಕಥೆ. ಬೌಲಿಂಗ್’ನಲ್ಲಂತೂ ಎರಡು ಮಾತೇ ಇಲ್ಲ, ಬಿರುಗಾಳಿ. ಬ್ಯಾಟಿಂಗ್’ನಲ್ಲೂ ಪಿಂಚ್ ಹಿಟ್ಟರ್ ಆಗಿ ಬಂದು ಕರ್ನಾಟಕಕ್ಕೆ ಹಲವಾರು ಮ್ಯಾಚ್’ಗಳನ್ನು ಗೆಲ್ಲಿಸಿದ್ದ out & out ಮ್ಯಾಚ್ ವಿನ್ನರ್.
ಈಗ ಕರ್ನಾಟಕ ಪರ ಆಡುತ್ತಿರುವ  ವೈಶಾಖ್ ವಿಜಯ್ ಕುಮಾರ್ ಎಂಬ ಹುಡುಗನಲ್ಲಿ ಸ್ವಲ್ಪ ಮಟ್ಟಿಗೆ ಮಿಥುನ್ ಅವರ ನೆರಳು ಕಾಣುತ್ತಿದೆ. ಮಿಥುನ್ ಅವರಂತೆ quick spellಗಳಲ್ಲಿ ವಿಕೆಟ್ ಎತ್ತುವ, ಕೆಳ ಕ್ರಮಾಂಕದಲ್ಲಿ ಉಪಯುಕ್ತ ರನ್ ಗಳಿಸುವ ಕೌಶಲ್ಯ ಈ ಹುಡುಗನಿಗಿದೆ.
ತ್ರಿಪುರ ವಿರುದ್ಧದ ರಣಜಿ ಪಂದ್ಯದಲ್ಲಿ 72 ರನ್ ಗಳಿಸಿ, 5 ವಿಕೆಟ್ ಕಬಳಿಸಿ “ಮ್ಯಾನ್ ಆಫ್ ದಿ ಮ್ಯಾಚ್” ಆಗಿದ್ದನ್ನು ನೋಡಿದಾಗ, ಕರ್ನಾಟಕಕ್ಕೆ ಈತ “ಮತ್ತೊಬ್ಬ ಮಿಥುನ್” ಆಗಬಲ್ಲನೇ ಎಂಬ ಯೋಚನೆ ಬಂತು.
ಆ ಯೋಚನೆಗೆ ಮತ್ತಷ್ಟು ಅರ್ಥ ತಂದುಕೊಟ್ಟದ್ದು ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ವೈಶಾಖ್ ಆಡಿದ ಆಟ. 229 ರನ್’ಗಳನ್ನು ಚೇಸ್ ಮಾಡುವ ಸಂದರ್ಭದಲ್ಲಿ 133 ರನ್ನಿಗೆ 7ನೇ ವಿಕೆಟ್ ಕಳೆದುಕೊಂಡಿದ್ದ ಕರ್ನಾಟಕ, ಅಲ್ಲಿಂದ ಎದ್ದು ಬಂದು ಮ್ಯಾಚ್ ಗೆದ್ದಿದೆ ಅಂದ್ರೆ ಅದರಲ್ಲಿ ವೈಶಾಖ್ ಪಾತ್ರ ದೊಡ್ಡದು. ಪಂದ್ಯ ಗೆಲ್ಲಿಸಿದ ಮನೀಶ್ ಪಾಂಡೆ ಜೊತೆ ವೈಶಾಖ್ 64 ರನ್ ಸೇರಿಸದೆ ಹೋಗಿದ್ದರೆ, ಅತೀವ ಒತ್ತಡದಲ್ಲಿ ಎದೆಗುಂದದೆ ನಿಂತು 38 ರನ್ ಗಳಿಸದೇ ಇದ್ದಿದ್ದರೆ ರೈಲ್ವೇಸ್ ವಿರುದ್ಧ ಕರ್ನಾಟಕ ಗೆಲ್ಲುತ್ತಲೇ ಇರಲಿಲ್ಲ. ಬೌಲಿಂಗ್’ನಲ್ಲೂ ಬೆಂಕಿಯಂಥಾ ಆಟವಾಡಿದ್ದ ವೈಶಾಖ್ ಸೆಕೆಂಡ್ ಇನ್ನಿಂಗ್ಸ್’ನಲ್ಲಿ 5 ವಿಕೆಟ್ ಸಹಿತ ಪಂದ್ಯದಲ್ಲಿ ಒಟ್ಟು ಏಳು ವಿಕೆಟ್ ಪಡೆದು ಮಿಂಚಿದ್ದ.
ಕರ್ನಾಟಕಕ್ಕೆ ವೈಶಾಖ್ ಮತ್ತೊಬ್ಬ ಮಿಥುನ್ ಆಗಬಲ್ಲನೇ..? ಇದಕ್ಕೆ ಕಾಲವೇ ಉತ್ತರ ಕೊಡಲಿದೆ. ಆದರೆ ಪೀಣ್ಯ ಎಕ್ಸ್’ಪ್ರೆಸ್ ಹಾದಿಯಲ್ಲಿ ಈ ಹುಡುಗ ಹೆಜ್ಜೆ ಗುರುತುಗಳನ್ನು ಮೂಡಿಸುತ್ತಿರುವುದಂತೂ ಸತ್ಯ. ಕುತೂಹಲದ ಸಂಗತಿ ಏನೆಂದರೆ ವೈಶಾಖ್’ಗೆ ಅಭಿಮನ್ಯು ಮಿಥುನ್ ಅವರೇ  ದ್ರೋಣಾಚಾರ್ಯ. ಬೌಲಿಂಗ್ ಶುರು ಮಾಡಿದಾಗ ಕೋಚ್ ಆಗಿದ್ದವರು ಯಾರೋ ನನಗೆ ತಿಳಿಯದು, ಆದರೆ ಈಗ ವೈಶಾಖ್ ಪಳಗುತ್ತಿರುವುದು ಮಿಥುನ್ ಗರಡಿಯಲ್ಲಿ. ತಮ್ಮ 31ನೇ ವಯಸ್ಸಲ್ಲೇ ದೇಶೀಯ ಕ್ರಿಕೆಟ್’ಗೆ ಗುಡ್ ಬೈ ಹೇಳಿ ಯುವಕರಿಗೆ ದಾರಿ ಮಾಡಿಕೊಟ್ಟಿದ್ದ ಮಿಥುನ್, ಈಗ ವೈಶಾಖ್’ನಂಥಾ ಯುವ ಬೌಲರ್’ಗಳಿಗೆ ತಮ್ಮ ಅನುಭವವನ್ನು ಧಾರೆ ಎರೆಯುತ್ತಿದ್ದಾರೆ.
ಕರ್ನಾಟಕ ಕ್ರಿಕೆಟ್’ನಲ್ಲಿ ದೊಡ್ಡ ಹೆಸರು ಮಾಡಿರುವ ಅಭಿಮನ್ಯು ಮಿಥುನ್ ಅವರಂಥಾ ದಿಗ್ಗಜರನ್ನು replace ಮಾಡಬಹುದೇ ವಿನಃ ಅವರ ಸ್ಥಾನ ತುಂಬಲು ಸಾಧ್ಯವಿಲ್ಲ ಮತ್ತು ಹಾಗೆ ನಿರೀಕ್ಷೆ ಮಾಡುವುದರಲ್ಲೂ ಅರ್ಥವಿಲ್ಲ. ಆದರೆ ಭರವಸೆ ಮೂಡಿಸಿರುವ ವೈಶಾಖ್, ಮಿಥುನ್ ಅವರ ಸ್ಥಾನವನ್ನೇನಾದರೂ ತುಂಬಿ ಬಿಟ್ಟರೆ, ಕರ್ನಾಟಕ ತಂಡಕ್ಕೆ ಅದುವೇ ಆನೆಬಲ.
#RanjiTrophy

LEAVE A REPLY

Please enter your comment!
Please enter your name here

15 + 16 =

Latest news

ಉಡುಪಿಯಲ್ಲಿ ಸುಸಜ್ಜಿತ ಫುಟ್ಬಾಲ್ ಕ್ರೀಡಾಂಗಣ ನಿರ್ಮಾಣ-ಎಂ.ಗಫೂರ್

ಉಡುಪಿಯಲ್ಲಿ ಸುಸಜ್ಜಿತ ಫುಟ್ಬಾಲ್ ಕ್ರೀಡಾಂಗಣ ನಿರ್ಮಾಣ-ಎಂ.ಗಫೂರ್ ಉಡುಪಿ-ಶಿವಾಸ್ ಫುಟ್ಬಾಲ್ ಕ್ಲಬ್ ಇವರ ವತಿಯಿಂದ ಅಂಡರ್ 21 ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾಟದ ಉದ್ಘಾಟನಾ ಸಮಾರಂಭ ಸಿಟಿ ಅರೆನಾ...

ಮಂಗಳಾಪುರ ಟ್ರೋಫಿ: ಮೇ 9–10ರಂದು ರೋಚಕ ಪಂದ್ಯಗಳ ಕಾದಾಟ 

ಮಂಗಳಾಪುರ ಟ್ರೋಫಿ: ಮೇ 9–10ರಂದು ರೋಚಕ ಪಂದ್ಯಗಳ ಕಾದಾಟ  ಮಂಗಳೂರು: ಮಂಗಳೂರು ನಗರದಲ್ಲಿ ಜಿಎಸ್‌ಬಿ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಭರ್ಜರಿ ಕ್ರೀಡಾ ಹಬ್ಬವಾಗಿ **ಮಂಗಳಾಪುರ ಟ್ರೋಫಿ 2026**ಕ್ಕೆ ಕೌಂಟ್‌ಡೌನ್...

ಅಂಬಾಗಿಲು ಜಿಎಸ್‌ಬಿ ಕ್ರಿಕೆಟ್ ಟೂರ್ನಿ:  ವಿಹಾನ್ ಫೈಟರ್ಸ್ ಚಾಂಪಿಯನ್

ಅಂಬಾಗಿಲು ಜಿಎಸ್‌ಬಿ ಕ್ರಿಕೆಟ್ ಟೂರ್ನಿ:  ವಿಹಾನ್ ಫೈಟರ್ಸ್ ಚಾಂಪಿಯನ್ ಅಂಬಾಗಿಲು: ಅಂಬಾಗಿಲು ಎಆರ್ ಫ್ರೆಂಡ್ಸ್ (AR Friends) ವತಿಯಿಂದ ಜಿಎಸ್‌ಬಿ ಟ್ರೋಫಿ ಅಂಬಾಗಿಲು 2026 ಕ್ರಿಕೆಟ್ ಟೂರ್ನಿಯನ್ನು ಇಂದು...

ಅಕ್ಷಯ ಟಿ 20 ಕಪ್-2026 ಪಂದ್ಯಾಟಕ್ಕೆ ಅದ್ಧೂರಿ ಚಾಲನೆ

  ಅಕ್ಷಯ ಟಿ 20 ಕಪ್-2026 ಪಂದ್ಯಾಟಕ್ಕೆ ಅದ್ಧೂರಿ ಚಾಲನೆ ಅಕ್ಷಯ ಕ್ರಿಕೆಟ್ ಅಕಾಡೆಮಿ ಉಡುಪಿ ವತಿಯಿಂದ, ಉಡುಪಿ ಕ್ರಿಕೆಟ್ ಅಸೋಸಿಯೇಷನ್ ಉಡುಪಿ ಹಾಗೂ ಸನ್‌ರೈಸ್ ಕ್ರಿಕೆಟ್ ಅಕಾಡೆಮಿ...
- Advertisement -spot_imgspot_img

ಉಡುಪಿ ಜಿಲ್ಲಾಮಟ್ಟದ ಅಂಡರ್-15 ಲೆದರ್ ಬಾಲ್ ಕ್ರಿಕೆಟ್ ಟೂರ್ನಿ – 2026

ಉಡುಪಿ ಜಿಲ್ಲಾಮಟ್ಟದ ಅಂಡರ್-15 ಲೆದರ್ ಬಾಲ್ ಕ್ರಿಕೆಟ್ ಟೂರ್ನಿ – 2026 ಉಡುಪಿ: ಅಕ್ಷಯ ಕ್ರಿಕೆಟ್ ಅಕಾಡೆಮಿ, ಉಡುಪಿ ಮತ್ತು ಸನ್‌ರೈಸ್ ಕ್ರಿಕೆಟ್ ಅಕಾಡೆಮಿ, ರಂಗನಪಾಲ್ಕೆ ಇವರ...

ಗುರುಗಣೇಶ್ ನೇಜಾರು ಫ್ರೆಂಡ್ಶಿಫ್ ಟ್ರೋಫಿ-2026 ಚಾಂಪಿಯನ್ಸ್

ಗುರುಗಣೇಶ್ ನೇಜಾರು ಫ್ರೆಂಡ್ಶಿಫ್ ಟ್ರೋಫಿ-2026 ಚಾಂಪಿಯನ್ಸ್ ಕುಂದಾಪುರ-ಇಲ್ಲಿನ ಫ್ರೆಂಡ್ಸ್ ಕೆದೂರು ಮೊತ್ತ ಮೊದಲ ಬಾರಿಗೆ ಆಯೋಜಿಸಿದ 60 ಗಜಗಳ ಮುಕ್ತ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾಟ ಫ್ರೆಂಡ್ಶಿಫ್ ಟ್ರೋಫಿ-2026...

Must read

- Advertisement -spot_imgspot_img

You might also likeRELATED
Recommended to you