Categories
Uncategorized

ಉಡುಪಿ-ಸಾಗರ್ ಚಾಂಪಿಯನ್ಸ್ ಟ್ರೋಫಿ-2021 ಮಾರ್ಚ್ 13 ಮತ್ತು 14 ರಂದು.

ಸಾಗರ್ ಸ್ಪೋರ್ಟ್ಸ್ ಕ್ಲಬ್(ರಿ)
ಕುಕ್ಕಿಕಟ್ಟೆ ಇವರ ಆಶ್ರಯದಲ್ಲಿ,ರಂಜಿತ್ ಶೆಟ್ಟಿ ಅಂಬಲಪಾಡಿ ಇವರ ಗೌರವ ಉಪಸ್ಥಿಯಲ್ಲಿ,ಎ.ಕೆ.ಸ್ಪೋರ್ಟ್ಸ್ ನ ಮಾಜಿ ಆಟಗಾರ ಸಾಗರ್ ವಿಶ್ವ ಹಾಗೂ ಸಾಗರ್ ಪ್ರವೀಣ್ ಇವರ ಸಾರಥ್ಯದಲ್ಲಿ ಮಾರ್ಚ್ 13 ಮತ್ತು 14 ರಂದು ಉಡುಪಿಯ ಬೀಡಿನಗುಡ್ಡೆ ಮೈದಾನದಲ್ಲಿ “ಸಾಗರ್ ಚಾಂಪಿಯನ್ಸ್ ಟ್ರೋಫಿ-2021” ಪಂದ್ಯಾವಳಿ ಆಯೋಜಿಸಲಾಗಿದೆ.
ರಾಜ್ಯ ಮಟ್ಟದಲ್ಲಿ ಉಡುಪಿ,ದ.ಕ ಜಿಲ್ಲೆಯ ತಂಡಗಳ ಗಣನೀಯ ಇಳಿಕೆಯ ಪ್ರಮಾಣ ಮನಗಂಡು, ಉಡುಪಿ,ಕುಂದಾಪುರ,ಮಂಗಳೂರು ಪರಿಸರದ ಸ್ಥಳೀಯ ಆಟಗಾರರನ್ನು ರಾಜ್ಯ,ರಾಷ್ಟ್ರಮಟ್ಟಕ್ಕೆ ಪರಿಚಯಿಸುವ ಸಲುವಾಗಿ,ಸಾಗರ್ ಸ್ಪೋರ್ಟ್ಸ್ ಕ್ಲಬ್(ರಿ)ವಿಶಿಷ್ಟ,ವಿನೂತನ ಪ್ರಯತ್ನಕ್ಕೆ ಕೈ ಹಾಕಿದೆ.
ದ.ಕ ಮತ್ತು ಉಡುಪಿ ಜಿಲ್ಲೆಯ ಆಟಗಾರರಿಗೆ ಸೀಮಿತವಾಗಿರುವ
ಈ ಪಂದ್ಯಾಟದಲ್ಲಿ ಹೊರಹೊಮ್ಮಿದ ಯುವ ಪ್ರತಿಭೆಗಳನ್ನು ಒಗ್ಗೂಡಿಸುವ ಘನ ಉದ್ದೇಶ ಈ ಪಂದ್ಯಾಕೂಟದ್ದಾಗಿದೆ.
ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ನಡೆಯಲಿರುವ ಸಾಗರ್ ಚಾಂಪಿಯನ್ಸ್ ಟ್ರೋಫಿ ಪಂದ್ಯಾಕೂಟದ
ಪ್ರಥಮ‌ ಪ್ರಶಸ್ತಿ ವಿಜೇತ ತಂಡ 1,00,001 ನಗದು,ರನ್ನರ್ ಅಪ್,
50,005 ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಾಗರ್ ವಿಶ್ವ-9844612725,ಸಾಗರ್ ಪ್ರವೀಣ್-9886324431,ಪ್ರಜ್ವಲ್-99019435220 ಈ ಮೊಬೈಲ್ ನಂಬರ್ ಗಳನ್ನು ಸಂಪರ್ಕಿಸಬಹುದಾಗಿದೆ.

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

13 − 7 =