Categories
ಕ್ರಿಕೆಟ್

ಬೆಂಗಳೂರು-ರಾಜಾ ಸಾಲಿಗ್ರಾಮ ನಾಯಕನ ಜವಾಬ್ದಾರಿಯುತ ಆಟ-ಮಟ್ಕಲ್ ಗೆಲುವಿನ ಓಟ

ಐತಿಹಾಸಿಕ ಕರ್ನಾಟಕ ಟೆನಿಸ್ಬಾಲ್ ಕ್ರಿಕೆಟ್ ಪ್ರೀಮಿಯರ್ ಲೀಗ್-2022 ರ ಮೂರನೇ ಪಂದ್ಯದಲ್ಲಿ ಮಟ್ಕಲ್ ತುಮಕೂರು,ತ್ರಿಶೂಲ್ ಸೇನಾ ವಿರುದ್ಧ  ಗೆಲುವು ಸಾಧಿಸಿದೆ.
ತ್ರಿಶೂಲ್ ಸೇನಾ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದು ಕೊಂಡಿತ್ತು.ಮಟ್ಕಲ್ ತಂಡದ ಪರವಾಗಿ ಆರಂಭಿಕ‌ ಆಟಗಾರನಾಗಿ ಕಣಕ್ಕಿಳಿದ ನಾಯಕ ರಾಜಾ ಸಾಲಿಗ್ರಾಮ ಬಿರುಸಿನ 34 ರನ್(29 ಎಸೆತ) ಸಿಡಿಸಿ,ಎದುರಾಳಿ ತಂಡಕ್ಕೆ 8 ಓವರ್ ಗಳಲ್ಲಿ 61 ರನ್ ಗಳ ಗುರಿ ನೀಡಿತ್ತು.
ಇದಕ್ಕುತ್ತರವಾಗಿ ತ್ರಿಶೂಲ್ ಸೇನಾ ಮಡಿಕೇರಿ ರೋಹಿತ್ ಗಿಲ್ಲಿ 16 ರನ್,ಆಲಿ 11 ರನ್ ಗಳಿಸಿ,ತೀವ್ರ ಪ್ರತಿರೋಧದ ಹೋರಾಟ ನೀಡಿದರೂ,ರಕ್ಷಿತ್ ನಂದಳಿಕೆ 2 ಓವರ್ ಗಳಲ್ಲಿ 13 ರನ್ ಗಳಿಗೆ  ತ್ರಿಶೂಲ್ ಸೇನಾದ 3 ವಿಕೆಟ್ ಉರುಳಿಸಿ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ್ದರು.
ತನ್ನ ಬ್ಯಾಟ್ ನಿಂದ ಅತ್ಯಮೂಲ್ಯ 34 ರನ್ ಸಿಡಿಸಿದ ರಾಜಾ ಸಾಲಿಗ್ರಾಮ ಅರ್ಹವಾಗಿ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದುಕೊಂಡರು.
Categories
ಕ್ರಿಕೆಟ್

ದಮಾಮ್ ನಲ್ಲಿ ರಾಜಾ ಕಮಾಲ್-ಗುಕಾ ದಮಾಮ್ ಎಸ್.ಎ.ಎಫ್ ಕ್ರಿಕೆಟ್ ಬ್ಲಾಸ್ಟ್ ಚಾಂಪಿಯನ್ಸ್

ದಮಾಮ್ ನಲ್ಲಿ ರಾಜಾ ಕಮಾಲ್-ಗುಕಾ ದಮಾಮ್
ಎಸ್.ಎ.ಎಫ್ ಕ್ರಿಕೆಟ್ ಬ್ಲಾಸ್ಟ್ ಚಾಂಪಿಯನ್ಸ್

ದಮಾಮ್ ನ ಗುಕಾ ಸ್ಟೇಡಿಯಂ ನಲ್ಲಿ ನಡೆದ ಎಸ್.ಎ.ಎಫ್ ಕ್ರಿಕೆಟ್ ಬ್ಲಾಸ್ಟ್ 2020 ಪಂದ್ಯಾವಳಿಯಲ್ಲಿ ರಾಜಾ ಸಾಲಿಗ್ರಾಮ ಸರ್ವಾಂಗೀಣ ಪ್ರದರ್ಶನದ ನೆರವಿನಿಂದ
ಗುಕಾ ದಮಾಮ್ ತಂಡ ಚಾಂಪಿಯನ್‌ ಪಟ್ಟ ಅಲಂಕರಿಸಿತು.

16 ಬಲಿಷ್ಠ ತಂಡಗಳು ಭಾಗವಹಿಸಿದ ಈ ಟೂರ್ನಿಯ ಪ್ರಥಮ‌ ಲೀಗ್ ಪಂದ್ಯದಲ್ಲಿ ಬಿರುಸಿನ
ಅರ್ಧ ಶತಕ 53 ರನ್ ಗಳಿಸಿ,
ಗಳಿಸಿ ಪಂದ್ಯಶ್ರೇಷ್ಟ ಪ್ರಶಸ್ತಿ ರಾಜಾ ಪಡೆದಿದ್ದರು.


ಸೆಮಿಫೈನಲ್ ನಲ್ಲಿಎದುರಾಳಿಗಳು 8 ಓವರ್ ಗಳಲ್ಲಿ 125 ರನ್ ಗಳ‌ ಗುರಿಯನ್ನು ನೀಡಿತ್ತು.ಚೇಸಿಂಗ್ ವೇಳೆ ಗುಕಾ ದಮಾಮ್ ತಂಡ
2 ಓವರ್ ಗಳಲ್ಲಿ 23 ರನ್ ಗಳಿಸಿ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.ಈ ಸಂದರ್ಭ ತಂಡವನ್ನು ಆಧರಿಸಿದ ರಾಜಾ 27 ಎಸೆತಗಳಲ್ಲಿ ಭರ್ಜರಿ ಸಿಕ್ಸ್,ಬೌಂಡರಿಗಳ ಸಹಿತ 95 ರನ್ ಹಾಗೂ 1 ಓವರ್ ನಲ್ಲಿ 9 ರನ್ ನೀಡಿ 2 ವಿಕೆಟ್ ಉರುಳಿಸಿ ಅರ್ಹವಾಗಿ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದಿದ್ದರು.

ಫೈನಲ್ ನಲ್ಲಿ ದಮಾಮ್ ಸಿ.ಸಿ ತಂಡ ನೀಡಿದ 91 ರನ್ ಗುರಿಯ ಅನಾಯಾಸವಾಗಿ ಚೇಸ್ ಮಾಡಿ ಗುಕಾ ದಮಾಮ್ ಚಾಂಪಿಯನ್ ಪಟ್ಟ ಅಲಂಕರಿಸಿತು.

ಟೂರ್ನಿಯ ಬೆಸ್ಟ್ ಬ್ಯಾಟ್ಸ್‌ಮನ್,ಸರಣಿ‌‌ ಶ್ರೇಷ್ಟ ಪ್ರಶಸ್ತಿ ರಾಜಾ ಸಾಲಿಗ್ರಾಮ ಪಾಲಾದರೆ,ಬೆಸ್ಟ್ ಬೌಲರ್ ಚಿಕ್ಕಿ ಹಾಗೂ ಫೈನಲ್ ನ ಪಂದ್ಯಶ್ರೇಷ್ಟ ಪ್ರಶಸ್ತಿ ಫವಾದ್ ಪಡೆದರು.
‌‌‌ ಆರ್.ಕೆ.ಆಚಾರ್ಯ ಕೋಟ.