Categories
ಕ್ರಿಕೆಟ್

ಬೆಂಗಳೂರು-ರಾಜಾ ಸಾಲಿಗ್ರಾಮ ನಾಯಕನ ಜವಾಬ್ದಾರಿಯುತ ಆಟ-ಮಟ್ಕಲ್ ಗೆಲುವಿನ ಓಟ

ಐತಿಹಾಸಿಕ ಕರ್ನಾಟಕ ಟೆನಿಸ್ಬಾಲ್ ಕ್ರಿಕೆಟ್ ಪ್ರೀಮಿಯರ್ ಲೀಗ್-2022 ರ ಮೂರನೇ ಪಂದ್ಯದಲ್ಲಿ ಮಟ್ಕಲ್ ತುಮಕೂರು,ತ್ರಿಶೂಲ್ ಸೇನಾ ವಿರುದ್ಧ  ಗೆಲುವು ಸಾಧಿಸಿದೆ.
ತ್ರಿಶೂಲ್ ಸೇನಾ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದು ಕೊಂಡಿತ್ತು.ಮಟ್ಕಲ್ ತಂಡದ ಪರವಾಗಿ ಆರಂಭಿಕ‌ ಆಟಗಾರನಾಗಿ ಕಣಕ್ಕಿಳಿದ ನಾಯಕ ರಾಜಾ ಸಾಲಿಗ್ರಾಮ ಬಿರುಸಿನ 34 ರನ್(29 ಎಸೆತ) ಸಿಡಿಸಿ,ಎದುರಾಳಿ ತಂಡಕ್ಕೆ 8 ಓವರ್ ಗಳಲ್ಲಿ 61 ರನ್ ಗಳ ಗುರಿ ನೀಡಿತ್ತು.
ಇದಕ್ಕುತ್ತರವಾಗಿ ತ್ರಿಶೂಲ್ ಸೇನಾ ಮಡಿಕೇರಿ ರೋಹಿತ್ ಗಿಲ್ಲಿ 16 ರನ್,ಆಲಿ 11 ರನ್ ಗಳಿಸಿ,ತೀವ್ರ ಪ್ರತಿರೋಧದ ಹೋರಾಟ ನೀಡಿದರೂ,ರಕ್ಷಿತ್ ನಂದಳಿಕೆ 2 ಓವರ್ ಗಳಲ್ಲಿ 13 ರನ್ ಗಳಿಗೆ  ತ್ರಿಶೂಲ್ ಸೇನಾದ 3 ವಿಕೆಟ್ ಉರುಳಿಸಿ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ್ದರು.
ತನ್ನ ಬ್ಯಾಟ್ ನಿಂದ ಅತ್ಯಮೂಲ್ಯ 34 ರನ್ ಸಿಡಿಸಿದ ರಾಜಾ ಸಾಲಿಗ್ರಾಮ ಅರ್ಹವಾಗಿ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದುಕೊಂಡರು.

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

seventeen + two =