16.5 C
London
Sunday, May 19, 2024
Homeಕ್ರಿಕೆಟ್ಸೈ ಬಾಯ್ಸ್ ಮಡಿಲಿಗೆ ಕೋಲಾರ ಪ್ರೀಮಿಯರ್‌ ಲೀಗ್ ಪ್ರಶಸ್ತಿ.

ಸೈ ಬಾಯ್ಸ್ ಮಡಿಲಿಗೆ ಕೋಲಾರ ಪ್ರೀಮಿಯರ್‌ ಲೀಗ್ ಪ್ರಶಸ್ತಿ.

Date:

Related stories

ನಿನ್ನ ಟೈಮ್ ಬಂದೇ ಬರುವುದು, ಹೀಗೇ ಆಡುತ್ತಿರು ಕರುಣ್..!

1996ರಲ್ಲಿ ಅರ್ಜುನ ರಣತುಂಗ ನಾಯಕತ್ವದ ಶ್ರೀಲಂಕಾ ತಂಡ ಏಕದಿನ ವಿಶ್ವಕಪ್ ಗೆದ್ದಾಗ...

ದುಡ್ಡಿನ ಮದದಲ್ಲಿ ಕೊಬ್ಬಿರುವ ಈ business tycoonಗಳಿಗೆ ದೇಶದ ಕ್ರಿಕೆಟ್ ಹೀರೊಗಳ ಮೇಲೆ ಗೌರವ ಇರಲು ಹೇಗೆ ಸಾಧ್ಯ..?

17 ವರ್ಷಗಳ ಐಪಿಎಲ್ ಚರಿತ್ರೆಯಲ್ಲಿ ಸಾವಿರಕ್ಕೂ ಹೆಚ್ಚು ಪಂದ್ಯಗಳು ನಡೆದಿವೆ. ಆ...

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...
spot_imgspot_img

ಕೋಲಾರ ಅಟ್ಯಾಕರ್ಸ್ ತಂಡದ ವತಿಯಿಂದ ಕಳೆದ ವಾರ ಕೋಲಾರದ ಸರ್.ಎಮ್‌‌.ವಿಶ್ವೇಶ್ವರಯ್ಯ ಸ್ಟೇಡಿಯಂ ನಲ್ಲಿ ನಡೆದ ಹಗಲಿನ 3 ದಿನಗಳ ಎರಡನೇ ಆವೃತ್ತಿಯ “ಕೋಲಾರ ಪ್ರೀಮಿಯರ್‌ ಲೀಗ್-2020” ಪ್ರಶಸ್ತಿಯನ್ನು ಸೈ ಬಾಯ್ಸ್ ಜಯಿಸಿದೆ.

ಕೋಲಾರ ಪರಿಸರದ 16 ಫ್ರಾಂಚೈಸಿಗಳು ಭಾಗವಹಿಸಿದ್ದ ಈ ಪಂದ್ಯಾವಳಿಯ ಲೀಗ್ ಹಂತದ ಹೋರಾಟದ ಬಳಿಕ,
ಸೆಮಿಫೈನಲ್ ನಲ್ಲಿ ಸೈ ಬಾಯ್ಸ್ ವಿಲಾಶ್ ಕ್ರಿಕೆಟರ್ಸ್ ನ್ನು ಹಾಗೂ ಜೆ.ಬಿ.ಅವೆಂಜರ್ಸ್ ಫ್ರೆಂಡ್ಸ್ ಇಲೆವೆನ್ ತಂಡವನ್ನು ಸೋಲಿಸಿ‌ ಫೈನಲ್ ಗೆ ಭಡ್ತಿ ಪಡೆದಿತ್ತು.

ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಜೆ‌.ಬಿ.ಅವೆಂಜರ್ಸ್ 6 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 46 ರನ್ ಗಳಿಸಿತ್ತು.ಚೇಸಿಂಗ್ ನಡೆಸಿದ ಸೈ ಬಾಯ್ಸ್ ನ ಅರುಣ್ 26,ಶಂಕರ್ 11 ರನ್ ನೆರವಿನಿಂದ ಕೊನೆಯ ಓವರ್ ನಲ್ಲಿ ಗೆಲುವು ಸಾಧಿಸಿತು.

ಪ್ರಥಮ ಪ್ರಶಸ್ತಿ ವಿಜೇತ ಸೈ ಬಾಯ್ಸ್
1 ಲಕ್ಷ ನಗದು,ರನ್ನರ್ಸ್ ಜೆ.ಬಿ.ಅವೆಂಜರ್ಸ್ 50 ಸಾವಿರ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆದುಕೊಂಡರು.

ಸೈ ಬಾಯ್ಸ್ ನ ಅರುಣ್ ಕುಮಾರ್ ಫೈನಲ್ ನ ಪಂದ್ಯಶ್ರೇಷ್ಟ,
ಹರಿ‌ ಸರಣಿ ಶ್ರೇಷ್ಟ,ಶ್ರೀನಾಥ್ ಜಾನಿ ಬೆಸ್ಟ್ ಬ್ಯಾಟ್ಸ್‌ಮನ್, ಶಿವು ಜಾನ್ ಬೆಸ್ಟ್ ಫೀಲ್ಡರ್, ವಿನೋದ್ ಬೆಸ್ಟ್ ಬೌಲರ್,ಪಂದ್ಯಾವಳಿಯ ಶಿಸ್ತಿನ ತಂಡ ಪ್ರಶಸ್ತಿಯನ್ನು ವಿಲಾಸ್ ಕ್ರಿಕೆಟರ್ಸ್ ಪಡೆಯಿತು.

ಸಮಾರೋಪ ಸಮಾರೋಪ ಸಮಾರಂಭದಲ್ಲಿ ಜೆ.ಡಿ.ಎಸ್ ನ ಯುವ ಮುಖಂಡ ಸಮೃದ್ಧಿ ಮಂಜುನಾಥ್ ಮಾತನಾಡಿ
“ಕ್ರೀಡಾ ಪಟುಗಳು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡಾ ಸ್ಪೂರ್ತಿಯನ್ನು ಮೆರೆಯಬೇಕೆಂದು ಅಭಿಪ್ರಾಯ ಪಟ್ಟರು.

ಈ ಸಂದರ್ಭ ಅಟ್ಯಾಕರ್ಸ್ ತಂಡದ ನಾಯಕ ಎಲ್.ನಿರಂಜನ್,M.K.S ಗ್ರೂಪ್ ನ ಮಾಲೀಕ ನದೀಮ್ ಅಖ್ತರ್,SAS ಶಾಮೀರ್,
ನಂದೀಶ್,ಮುದುವಾಡಿ ವೇಣು,ಶಿವಕುಮಾರ್,ಜಗನ್ನಾಥ್,ಸಾಗರ್,ಸೂರತ್,ಕಿರಣ್,ಬಾಲನ್,ಅಕಾಲೆ ಮೋನಿಕ್ ದೊರೆ,ಹರಿ,ತಮಟೆ ರಾಮಣ್ಣ ಇನ್ನಿತರ ಕ್ರೀಡಾಪಟುಗಳು ಉಪಸ್ಥಿತರಿದ್ದರು.

ಕೆ.ಪಿ.ಎಲ್ ನ ಆಕ್ಷನ್ ಪ್ರಕ್ರಿಯೆಯನ್ನು ಹಿರಿಯ ವೀಕ್ಷಕ ವಿವರಣೆಕಾರ ಕೋಟ ಶಿವನಾರಾಯಣ ಐತಾಳ್
ಕಳೆದ ತಿಂಗಳು ನಡೆಸಿದ್ದು,
M.Sports ಪಂದ್ಯಾವಳಿಯ ನೇರ ಪ್ರಸಾರವನ್ನು ಬಿತ್ತರಿಸಿದರೆ,ಪ್ರಸಿದ್ಧ ವೀಕ್ಷಕ ವಿವರಣೆಕಾರ ಪ್ರಶಾಂತ್ ಅಂಬಲಪಾಡಿ ಹಾಗೂ ಡ್ಯಾನ್ಸಿಂಗ್ ಅಂಪಾಯರ್ ಮದನ್ ಮಡಿಕೇರಿ ಪಂದ್ಯಾವಳಿಯ ಮೆರುಗನ್ನು ಹೆಚ್ಚಿಸಿದರು.
ಆರ್.ಕೆ‌.ಆಚಾರ್ಯ ಕೋಟ.

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

4 × three =