ಕ್ರಿಕೆಟ್ಶಿಖರ್ ಧವನ್ ಕ್ರಿಕೆಟ್ ಜೀವನ ಅಂತ್ಯಕ್ಕೆ ಪತ್ನಿಯ ಮಾನಸಿಕ ದೌರ್ಜನ್ಯ ಕಾರಣವೇ...???

ಶಿಖರ್ ಧವನ್ ಕ್ರಿಕೆಟ್ ಜೀವನ ಅಂತ್ಯಕ್ಕೆ ಪತ್ನಿಯ ಮಾನಸಿಕ ದೌರ್ಜನ್ಯ ಕಾರಣವೇ…???

-

- Advertisment -spot_img

ಭಾರತ ಕ್ರಿಕೆಟ್ ತಂಡದ ಅತ್ಯುತ್ತಮ ಆರಂಭಿಕರಲ್ಲಿ ಒಬ್ಬರಾದ ಶಿಖರ್ ಧವನ್ ಅವರು ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಒಂದು ಕಾಲದಲ್ಲಿ ಶಿಖರ್ ಧವನ್ ಐಸಿಸಿ ಏಕದಿನ ಸರಣಿಯಲ್ಲಿ ಅತ್ಯಂತ ಶ್ರೇಷ್ಠ ಬ್ಯಾಟ್ಸ್‌ಮನ್ ಆಗಿದ್ದರು. 38ರ ಹರೆಯದ ಶಿಖರ್ ಧವನ್ ಅವರ ನಿವೃತ್ತಿ ಘೋಷಣೆ ಆಘಾತ ತಂದಿಲ್ಲವಾದರೂ, ಅವರ ಕ್ರಿಕೆಟ್ ವೃತ್ತಿಜೀವನ ಅಂತ್ಯಗೊಳ್ಳಲು ಕೌಟುಂಬಿಕ ಸಮಸ್ಯೆಗಳೇ ಕಾರಣ ಎಂದು ಹೇಳಲಾಗುತ್ತಿದೆ.

ಪತ್ನಿಯ ಕ್ರೌರ್ಯದಿಂದ ಮಾನಸಿಕವಾಗಿ ಬೇಸತ್ತ ಶಿಖರ್ ಧವನ್ ಮತ್ತೆ ಕ್ರಿಕೆಟ್ ನಲ್ಲಿ ತನ್ನ ಛಾಪನ್ನು ತೋರಿಸುವಲ್ಲಿ ವಿಫಲರಾದರು. ಹೀಗಾಗಿ ಭಾರತದ ಸ್ಟಾರ್ ಓಪನರ್ ಶಿಖರ್ ಧವನ್ (ಗಬ್ಬರ್) ಅಂತರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

*ಶಿಖರ್ ಧವನ್ ಅವರ ಕಣ್ಣೀರ ಕಥೆ ಇಲ್ಲಿದೆ.*

ಶಿಖರ್ ಧವನ್ 2012 ರಲ್ಲಿ ಭಾರತೀಯ ಮೂಲದ ಆಸ್ಟ್ರೇಲಿಯಾದ ಪ್ರಜೆ ಆಯೇಶಾ ಅವರನ್ನು ವಿವಾಹವಾದರು. ಆಯೇಶಾ ಬಾಕ್ಸರ್ ಆಗಿದ್ದಳು. ಶಿಖರ್ ಧವನ್ ಮತ್ತು ಆಯೇಶಾ ನಡುವೆ 10 ವರ್ಷಗಳ ಅಂತರವಿತ್ತು. ಆದರೂ ಶಿಖರ್ ಧವನ್ ಆಯೇಶಾಳನ್ನು ಪ್ರೀತಿಸಿ ಮದುವೆಯಾದರು. ಮೊದಲ ಪತಿಯಿಂದ ವಿಚ್ಛೇದನ ಪಡೆದ ನಂತರ ಆಯೇಶಾ ಧವನ್ ಅವರನ್ನು ವಿವಾಹವಾದರು. ಅವರ ಮೊದಲ ಮದುವೆಯಿಂದ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು.ಇದೆಲ್ಲ ಗೊತ್ತಿದ್ದೇ ಧವನ್ ಅವರನ್ನು ಮದುವೆಯಾದರು.

ಅಲ್ಲದೆ, ಧವನ್ – ಆಯೇಷಾಗೆ ಸೊರೊವರ್ ಎಂಬ ಮಗ ಹುಟ್ಟಿದನು. ಆಯೇಷಾ ಆಸ್ಟ್ರೇಲಿಯಾದ ಪ್ರಜೆಯಾದ ಕಾರಣ ಭಾರತಕ್ಕೆ ಬರುವ ಬದಲು ತನ್ನ ಇಬ್ಬರು ಹೆಣ್ಣುಮಕ್ಕಳು ಮತ್ತು ಧವನ್ ಪುತ್ರನೊಂದಿಗೆ ಆಸ್ಟ್ರೇಲಿಯಾದಲ್ಲಿಯೇ ಉಳಿದುಕೊಂಡಿದ್ದರು.

ಮದುವೆಗೂ ಮುನ್ನ ಆಯೇಷಾ ದುಡಿದು ಹಣ ಸಂಪಾದಿಸುತ್ತಿದ್ದಳು. ಆದರೆ, ಮದುವೆಯ ನಂತರ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಆಯಿಷಾ ತನ್ನ ಖರ್ಚಿಗೆ ಹಣ ಕಳುಹಿಸುವಂತೆ ಧವನ್ ಗೆ ಕೇಳುತ್ತಿದ್ದಳು. ಧವನ್ ತನ್ನ ಮಗ ಮತ್ತು ಆಯೇಷಾಗೆ ಮಾತ್ರವಲ್ಲದೆ ತನ್ನ ಇಬ್ಬರು ಹೆಣ್ಣು ಮಕ್ಕಳಿಗಾಗಿಯೂ ಖರ್ಚು ಮಾಡುತ್ತಿದ್ದನು. ಅವರ ವಿದ್ಯಾಭ್ಯಾಸದ ವೆಚ್ಚವನ್ನೂ ಅವರು ಸ್ವೀಕರಿಸಿದರು. ಇದರಲ್ಲಿ ಗಮನಾರ್ಹ ಅಂಶವೆಂದರೆ ಆಯೇಷಾಳ ಮೊದಲ ಪತಿ ತನ್ನ ಹೆಣ್ಣು ಮಕ್ಕಳಿಗೆ ಪ್ರತಿ ತಿಂಗಳು ಹಣ ಕಳುಹಿಸುತ್ತಿದ್ದ. ಇಷ್ಟು ಸಾಲದು ಎಂಬಂತೆ ಆಯೇಷಾ ಕೂಡ ಅದೇ ಖರ್ಚಿಗೆ ಧವನ್ ಬಳಿ ಹಣ ಪಡೆಯುತ್ತಿದ್ದಳು.

ಮದುವೆಯಾದ 8 ವರ್ಷಗಳಲ್ಲಿ ಶಿಖರ್ ಧವನ್ ಅವರು ಸುಮಾರು 13 ಕೋಟಿ ಪಾವತಿಸಿದ್ದರು, ಅದನ್ನು ಹೊರತುಪಡಿಸಿ, ಅವರ ವಿದೇಶ ಪ್ರವಾಸ, ಮಕ್ಕಳ ಶಿಕ್ಷಣ ವೆಚ್ಚ, ಹೋಟೆಲ್ ವಾಸ್ತವ್ಯದ ವೆಚ್ಚ, ಕ್ರೆಡಿಟ್ ಕಾರ್ಡ್ ಬಿಲ್‌ಗಳಿಗೆ ಪ್ರತ್ಯೇಕವಾಗಿ ಪಾವತಿಸಿದ್ದಾರೆ. ಶಿಖರ್ ಧವನ್ ಆಸ್ಟ್ರೇಲಿಯಾದಲ್ಲಿ ಮೂರು ಆಸ್ತಿಗಳನ್ನು ಖರೀದಿಸಿದ್ದರು. ಅದರಲ್ಲಿ ಶೇ 99ರಷ್ಟು ಭಾಗವನ್ನು ತನ್ನ ಹೆಸರಿಗೆ ಪುನಃ ಬರೆಯುವಂತೆ ಆಯೇಷಾ ಕೇಳುತ್ತಿದ್ದಳು. ಆಯೇಷಾ ಅವರಲ್ಲಿ ಈಗಾಗಲೇ ಆ ಆಸ್ತಿಯಲ್ಲಿ ಪಾಲು ಇತ್ತು ಇದೆ. ಆದರೂ ಹೆಚ್ಚಿನ ಪಾಲು ಕೇಳುತ್ತಿದ್ದರು.

ಬಳಿಕ ಆಯೇಷಾ ಆಸ್ಟ್ರೇಲಿಯಾದಲ್ಲಿ ಆಸ್ತಿಯೊಂದನ್ನು ಮಾರಿ ಅದರಲ್ಲಿ ಸಾಕಷ್ಟು ಹಣ ಸಂಪಾದಿಸಿದ್ದರು. ಆದರೆ, ಧವನ್ ತನಗೆ ಮತ್ತು ಮಕ್ಕಳ ಖರ್ಚಿಗೆ ಹಣ ಕಳುಹಿಸಲು ನಿರಾಕರಿಸುತ್ತಿದ್ದಾರೆ ಎಂದು ಆಯೇಷಾ ಬಿಸಿಸಿಐ ಅಧಿಕಾರಿಗಳು ಹಾಗೂ ಭಾರತದ ಕೆಲವು ಉನ್ನತ ಮಟ್ಟದ ಸರ್ಕಾರಿ ಅಧಿಕಾರಿಗಳಿಗೆ ಸಂದೇಶ ರವಾನಿಸಿದ್ದರು.

ಶಿಖರ್ ದವನ್ ತಂದೆ ಆಸ್ಪತ್ರೆಯಲ್ಲಿದ್ದಾಗಲೂ ಆತನೊಂದಿಗೆ ಆಯೇಷಾ ಜಗಳವಾಡುತ್ತಿದ್ದಳು ಎನ್ನಲಾಗಿದೆ. ಧವನ್ ಇಂತಹ ಅನೇಕ ದೌರ್ಜನ್ಯಗಳನ್ನು ಎದುರಿಸಿದರು.ಈ ವಿಷಯವನ್ನು ಮತ್ತಷ್ಟು ಎಳೆದು ತರಲು ಬಯಸದ ಧವನ್, ತನ್ನ ಮಗನನ್ನು ಮಾತ್ರ ತನ್ನೊಂದಿಗೆ ಕಳುಹಿಸುವಂತೆ ಕೇಳಿಕೊಂಡಿದ್ದಾನೆ. ಆದರೆ ಆಯಿಷಾ ಅದಕ್ಕೆ ಒಪ್ಪಲಿಲ್ಲ. ಈ ಹಂತದಲ್ಲಿ ಅವರು ವಿಚ್ಛೇದನಕ್ಕೆ ನಿರ್ಧರಿಸಿದರು. ಕೊನೆಗೂ ಪತ್ನಿಯ ಕ್ರೌರ್ಯದಿಂದ ಧವನ್ ಗೆ ವಿಚ್ಛೇದನ ನೀಡಲು ಕೋರ್ಟ್ ನಿರ್ಧರಿಸಿತು.

ಭಾರತ ತಂಡದಲ್ಲಿ ಸರಿಯಾದ ಅವಕಾಶ ಸಿಗದಿದ್ದರೂ ಶಿಖರ್ ಧವನ್ ಐಪಿಎಲ್ ಹಾಗೂ ಸ್ಥಳೀಯ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆದರೆ ಅವರ ಸ್ವಂತ ಜೀವನದಲ್ಲಿ ಹಿನ್ನಡೆಗಳು ಮತ್ತು ವಿವಾದಗಳು ಶಿಖರ್ ಧವನ್‌ಗೆ ಮಾನಸಿಕ ಕುಸಿತವಾಗಿ ಕಂಡುಬರುತ್ತವೆ. ಅದು ಅವರ ಕ್ರಿಕೆಟ್ ಜೀವನವನ್ನೇ ಅಂತ್ಯಗೊಳಿಸಿದೆ.

LEAVE A REPLY

Please enter your comment!
Please enter your name here

4 + five =

Latest news

ಶಾಂಭವಿ ಟ್ರೋಫಿ 2026:ಚಾಂತಾರು  ಗ್ಲೋಬಲ್ ಕ್ರೀಡಾಂಗಣದಲ್ಲಿ ಬ್ರಹ್ಮಾವರ ವಲಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್

ಶಾಂಭವಿ ಟ್ರೋಫಿ 2026:ಚಾಂತಾರು ಗ್ಲೋಬಲ್ ಕ್ರೀಡಾಂಗಣದಲ್ಲಿ ಬ್ರಹ್ಮಾವರ ವಲಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಚಾಂತಾರು: ಚಾಂತಾರು ಗ್ರಾಮದಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬದ ವಾತಾವರಣ ಸೃಷ್ಟಿಸುವ ಉದ್ದೇಶದಿಂದ **ಶಾಂಭವಿ...

Retro Bet Online Casino: Quick Wins for the Busy Player

Retro Bet has carved out a niche for those who crave instant gratification and fast-paced gaming. If you’re someone...

Spinch Casino: Quick Spin Thrills für Fans des schnellen Spiels

1. Quick Burst Gaming: Warum kurze Sessions wichtig sindWenn die Uhr runterzählt, steigt der Adrenalinspiegel. Spieler, die kurze, hochintensive...

LevelUp Casino: Schnelle Gewinne und rasantes Action für den modernen Spieler

In der heutigen schnelllebigen Welt ist ein Casino, das Ihre Zeit respektiert, ein echtes Juwel. LevelUp Casino hat sich...
- Advertisement -spot_imgspot_img

BildBet Casino: Fast‑Track Slots für schnelle Gewinne

Wenn Sie unterwegs sind—zwischen Meetings, beim Zugfahren oder einfach während einer Mittagspause—bietet BildBet eine Möglichkeit, das Casino-Feeling zu erleben,...

ಕರೂಣ್ ನಾಯರ್ ಗೆ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಾಯಕತ್ವ

ಕರೂಣ್ ನಾಯರ್ ಗೆ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಾಯಕತ್ವ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಸೀಸನ್-5ಕ್ಕೆ ಸಜ್ಜಾದ ಫ್ರಾಂಚೈಸಿ; ತಂಡದ ಜೆರ್ಸಿ, ಗೀತೆ ಹಾಗೂ ನಾಯಕತ್ವ...

Must read

- Advertisement -spot_imgspot_img

You might also likeRELATED
Recommended to you