ಕ್ರಿಕೆಟ್ದುಬೈನಲ್ಲಿ ಜನಮನ ಸೆಳೆಯುತ್ತಿರುವ ರಾಹುಲ್ ದ್ರಾವಿಡ್ ಕಪ್

ದುಬೈನಲ್ಲಿ ಜನಮನ ಸೆಳೆಯುತ್ತಿರುವ ರಾಹುಲ್ ದ್ರಾವಿಡ್ ಕಪ್

-

- Advertisment -spot_img

ದುಬೈನಲ್ಲಿ ಜನಮನ ಸೆಳೆಯುತ್ತಿರುವ ರಾಹುಲ್ ದ್ರಾವಿಡ್ ಕಪ್

ಅರಬ್ ಸಂಯುಕ್ತ ರಾಷ್ಟ್ರದಲ್ಲಿ ನೆಲೆಸಿರುವ ಉಡುಪಿ ಸೂರಾಲು ಮೂಲದ ವಿಠಲ ರಿಶಾನ ನಾಯಕರು ರಾಹುಲ್ ದ್ರಾವಿಡ್ ಮೇಲಿನ ವಿಶೇಷ ಅಭಿಮಾನದೊಂದಿಗೆ ದುಬೈನಲ್ಲಿ ಆಯೋಜಿಸುತ್ತಿರುವ ಮಿಸ್ಟರ್ ಕ್ರಿಕೆಟ ರಾಹುಲ್ ದ್ರಾವಿಡ್ ಕಪ್ ಪಂದ್ಯಾಟದ ಎರಡನೇ ಸುತ್ತಿನ ಪಂದ್ಯಗಳು ರೋಚಕವಾಗಿ ಜರಗಿತು.

ಮೊದಲ ಪಂದ್ಯದಲ್ಲಿ ಅನುಭವೀ ಟೆಕ್ನೋ ಟೈಟಾನ್ಸ್ ತಂಡವು ದುಬೈನ ಜೆಡ್ಡಾಫ್ನ ಕರಾವಳಿಫ್ರೆಂಡ್ಸ್ ವಿರುದ್ಧ ಆರು ವಿಕೆಟ್ ಗಳ ಭರ್ಜರಿ ಜಯ ಗಳಿಸಿತು.ಕರಾವಳಿಫ್ರೆಂಡ್ಸ್ ತಂಡವು ಮೊದಲು ಬ್ಯಾಟ್ ಮಾಡಿ ಹದಿನೈದು ಓವರಗಳಲ್ಲಿ 112 ರನ್ ಗಳಿಸಿದರೆ, ಇದಕ್ಕುತ್ತರವಾಗಿ ಬಲಿಷ್ಠ ಟೆಕ್ನೋಟೈಟಾನ್ಸ್ ತಂಡವು 7.3ಓವರಗಳಲ್ಲಿ ನಾಲಕ್ಕು ವಿಕೆಟ್ ಕಳೆದುಕೊಂಡು ಅತಿವೇಗದಲ್ಲಿ 118 ರನ್ ಗಳಿಸಿ ವಿಜಯ ಸಾಧಿಸಿತು. ಟೆಕ್ನೋಟೈಟಾನ್ಸ್ ತಂಡದ ಉಡುಪಿ ಹೊಸಂಗಡಿ ಮೂಲದ ಅಲ್ಫಾಜ್ ಅಪ್ಪಿ 21 ಚೆಂಡುಗಳಲ್ಲಿ 12 ಸಿಕ್ಸರ್ ಒಂದು ಬೌಂಡರಿ ಸಹಿತ ಅಜೇಯ 79ರನ್ ಸಿಡಿಸಿ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದರು.

ಎರಡನೇಯ ಪಂದ್ಯದಲ್ಲಿ ಬ್ಲೂಮಾಸ್ಟರ್ಸ್ ತಂಡವು ಗಲ್ಫ್ ಗೆಳೆಯರ ಕ್ರಿಕೆಟ್ ಬಳಗದ ವಿರುದ್ಧ 23 ರನ್ನುಗಳ ಜಯ ಸಾಧಿಸಿತು.ಮೊದಲು ಬ್ಯಾಟ್ ಮಾಡಿದ ಬ್ಲೂ ಮಾಸ್ಟರ್ಸ್ ತಂಡವು 127ರನ್ ಗಳಿಸಿದರೆ ಇದನ್ನು ಬೆಂಬತ್ತಿದ ಗಲ್ಫ್ ಗೆಳೆಯರ ಬಳಗ 13 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು 104 ರನ್ ಗಳಿಸಿತು.ಬ್ಲೂ ಮಾಸ್ಟರ್ಸ್ ತಂಡದ ಬಚಿ ಬಜ್ಪೆ ಎರಡು ಅಮೂಲ್ಯ ವಿಕೆಟ್ ಹಾಗೂ ಬ್ಯಾಟಿಂಗನಲ್ಲಿ 13 ರನ್ ಗಳಿಸಿ ಪಂದ್ಯಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.


ಮೂರನೇ ಪಂದ್ಯದಲ್ಲಿ ಗೋಲ್ಡನ್ ಸಿಟಿ ಬಾಯ್ಸ್ ತಂಡವು ಅಜ್ಮಾನಿನ ಆಲ್ಫಾ xl ಕ್ರಿಕೆಟ್ ಕ್ಲಬ್ ವಿರುದ್ಧ 15 ಓವರಗಳಲ್ಲಿ ಆರು ವಿಕೆಟ್ ಕಳೆದುಕೊಂಡು 235 ರನ್ನುಗಳ ಬೃಹತ್ ಮೊತ್ತ ಪೇರಿಸಿತು. ಬೆಟ್ಟದಂತ ರನ್ನಿನ ಈ ಸವಾಲನ್ನು ಸ್ಪೂರ್ತಿಯಿಂದ ಸ್ವೀಕರಿಸಿ ಬೆಂಬತ್ತಿದ ಅಜ್ಮಾನಿನ ಆಲ್ಫಾ xl ಕ್ರಿಕೆಟ್ ಕ್ಲಬ್ ಅಂತಿಮವಾಗಿ 15 ಓವರ್ ಗಳಲ್ಲಿ 231 ರನ್ ಸೇರಿಸಿ ಕೂದಲೆಳೆಯ ಅಂತರದಲ್ಲಿ ಕೇವಲ 4 ರನ್ ಗಳಿಂದ ಹಿಂದುಳಿದು ಸೋಲೊಪ್ಪಿಕೊಂಡಿತು.41 ಚೆಂಡುಗಳಲ್ಲಿ 11ಸಿಕ್ಸರ್,8 ಬೌಂಡರಿಗಳೊಂದಿಗೆ 114ಗಳ ಮಿಂಚಿನ ಶತಕ ಸಿಡಿಸಿದ ಗೋಲ್ಡನ್ ಸಿಟಿಬಾಯ್ಸ್ ತಂಡದ ದಿಲಶದ್ ಪಂದ್ಯಶ್ರೇಷ್ಠ ವ್ಯಕ್ತಿಯಾಗಿ ಆಯ್ಕೆಯಾದರು.

ಸಂಯುಕ್ತ ಅರಬ್ ರಾಷ್ಟ್ರದಲ್ಲಿ ನೆಲೆಸಿರುವ ನೂರಾರು ಕ್ರಿಕೆಟ್ ಪ್ರತಿಭೆಗಳ ಪ್ರಕಾಶನಕ್ಕೆ ಆಸರೆಯಾಗಿರುವ ಈ ಬೃಹತ್ ಕ್ರಿಕೆಟ್ ಪಂದ್ಯಾಕೂಟವು ವಿಠಲ್ ರೀಶಾನ ನಾಯಕ್ ಸಾರಥ್ಯದಲ್ಲಿ ನೆರವೇರುತ್ತಿದ್ದು ಪ್ರತಿಯೊಂದು ಪಂದ್ಯವೂ ಭಾರೀ ಜಿದ್ದಾಜಿದ್ದಿನಿಂದ ಸಾಗುತ್ತಿದೆ.ಹೀಗಾಗಿ ದುಬೈನಲ್ಲಿ ನೆಲೆಸಿರುವ ಕ್ರಿಕೆಟ್ ಪ್ರೇಮಿಗಳಿಗೆ ಈ ಸ್ಪರ್ಧಾಕೂಟವು ಪ್ರಮುಖ ಆಕರ್ಷಣೆಯಾಗಿ ಮೂಡಿಬಂದಿದೆ.ಮುಂದಿನ ಭಾನುವಾರ ಮೂರನೇ ಸುತ್ತಿನ ಪಂದ್ಯಾಟವು ಜರಗಲಿದೆ.

ಪಿ‌.ಲಾತವ್ಯ ಆಚಾರ್ಯ ಉಡುಪಿ

LEAVE A REPLY

Please enter your comment!
Please enter your name here

6 + eleven =

Latest news

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ ಸಿರ್ಸಿಯ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ Shri Marikamba Trophy ಓಪನ್ ಹಾರ್ಡ್ ಟೆನಿಸ್ ಕ್ರಿಕೆಟ್...

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ!

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ! ಹೆಜಮಾಡಿ ಸಮೀಪದ ಶಾನುಭಾಗ...

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ ಉಡುಪಿ, ಏಪ್ರಿಲ್ 5, 2026: ಪರಿಸರ ಸಂರಕ್ಷಣೆಗೆ ಹೊಸ ದಿಕ್ಕು ತೋರಿಸುವ ವಿಶಿಷ್ಟ ಪ್ರಯತ್ನವಾಗಿ, ಕ್ರಿಕೆಟ್ ದಂತಕಥೆ...

ಅಮ್ಗೆಲೆ ಅಭರಣ್ GPL ಉತ್ಸವ – 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ

ಅಮ್ಗೆಲೆ ಅಭರಣ್ GPL– 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ ಜಿಎಸ್‌ಬಿ ಕ್ರೀಡಾಭಿಮಾನಿಗಳು ಆತುರದಿಂದ ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. *ಅಮ್ಗೆಲೆ ಅಭರಣ್ GPL...
- Advertisement -spot_imgspot_img

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ ರೈಲ್ವೇಸ್ ಪರವಾಗಿ ರಣಜಿ ಟ್ರೋಫಿಯಲ್ಲಿ ಪ್ರತಿನಿಧಿಸಿದ್ದ ಮಾಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ಅವರು ಹೃದಯಾಘಾತದಿಂದ ಮುಂಬೈನ ಮುಲುಂಡ್‌ನಲ್ಲಿರುವ...

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು ಫ್ರೆಂಡ್ಸ್ ಅಳಿಯೂರು ವತಿಯಿಂದ ಮೊದಲ ಬಾರಿಗೆ ಅಳಿಯೂರು ಪ್ರೀಮಿಯರ್ ಲೀಗ್ (APL-2026) – ಸೀಸನ್ 1 ಆಯೋಜಿಸಲಾಗಿದೆ....

Must read

- Advertisement -spot_imgspot_img

You might also likeRELATED
Recommended to you