10.6 C
London
Thursday, March 28, 2024
Homeಕ್ರಿಕೆಟ್ಕೆ.ಎಸ್.ಸಿ.ಎ 3 ನೇ ಡಿವಿಜನ್ : ಆಕರ್ಷಕ ಶತಕ ಸಿಡಿಸಿದ ನಿತಿನ್.ಜಿ.ಮೂಲ್ಕಿ

ಕೆ.ಎಸ್.ಸಿ.ಎ 3 ನೇ ಡಿವಿಜನ್ : ಆಕರ್ಷಕ ಶತಕ ಸಿಡಿಸಿದ ನಿತಿನ್.ಜಿ.ಮೂಲ್ಕಿ

Date:

Related stories

ಕರ್ನಾಟಕದ ಮೊದಲ ರಣಜಿ ಟ್ರೋಫಿ ಗೆಲುವಿಗೆ 50 ವರ್ಷ..

50 ವರ್ಷಗಳ ಹಿಂದೆ ಚರಿತ್ರೆ ಸೃಷ್ಠಿಸಿದ್ದ ಎರಾಪಳ್ಳಿ ಪ್ರಸನ್ನ & ಟೀಮ್..! 1958ರಿಂದ...

ಫ್ರೆಂಡ್ಸ್ ಕಪ್-ಸೋತ ತಂಡಗಳಿಗೂ ಇಲ್ಲಿದೆ ಆಶಾದಾಯಕ ಅಂಶ-ಆರಂಭದಲ್ಲಿ ಪಂದ್ಯ ಸೋತರೂ ಪ್ರಶಸ್ತಿ ಗೆಲ್ಲುವ ಅವಕಾಶ…!!!

ಬೆಂಗಳೂರು-ಫ್ರೆಂಡ್ಸ್ ಕಪ್ 2ನೇ ಆವೃತ್ತಿಯ ಕ್ರಿಕೆಟ್​ ​ಹಬ್ಬಕ್ಕೆ ಕ್ಷಣಗಣನೆ ಶುರುವಾಗಿದೆ. ಪೀಣ್ಯ...

ರಾಜ್ಯದ ಅತ್ಯಂತ ಜನಪ್ರಿಯ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಫ್ರೆಂಡ್ಸ್ ಕಪ್ 2024 ಗೆ ಫಿಧಾ ಆಗಲಿದೆ ಕ್ರಿಕೆಟ್ ಲೋಕ

ಟೆನಿಸ್ ಬಾಲ್ ಕ್ರಿಕೆಟ್ ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯ ಕ್ರೀಡೆಗಳಲ್ಲಿ ಒಂದಾಗಿದೆ, ಮತ್ತು ...
spot_imgspot_img

ಬೆಂಗಳೂರಿನ ರೇವೋ ಯೂನಿವರ್ಸಿಟಿ ಅಂಗಣದಲ್ಲಿ ” ನಸ್ಸೂರ್ ಸ್ಮಾರಕ‌ ಟ್ರೋಫಿ”ಗಾಗಿ ನಡೆಯುತ್ತಿರುವ  ಕೆ.ಎಸ್.ಸಿ.ಎ 3 ನೇ ಡಿವಿಜನ್ ಪಂದ್ಯಾಕೂಟದಲ್ಲಿ B.E.L ಕಾಲನಿ ರಿಕ್ರಿಯೇಶನ್ ಕ್ಲಬ್ ವಿರುದ್ದ 83 ಎಸೆತಗಳಲ್ಲಿ 14 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಬಿರುಸಿನ ಶತಕ 106 ರನ್ ಗಳಿಸುವ ಮೂಲಕ ತಾನಾಡಿದ ತಂಡ ವಿಶ್ವೇಶ್ವರಪುರಂ ಕ್ರಿಕೆಟ್ ಕ್ಲಬ್ ತಂಡಕ್ಕೆ 215 ರನ್ ಅಂತರದ ದಾಖಲೆಯ ಗೆಲುವನ್ನು ತಂದಿತ್ತಿದ್ದಾರೆ.

ಕರ್ನಾಟಕ ರಾಜ್ಯ ಟೆನ್ನಿಸ್ ಕ್ರಿಕೆಟ್ ಇತಿಹಾಸದ ಆದರ್ಶ ಕಪ್ತಾನ ಶರತ್ ಶೆಟ್ಟಿ ಪಡುಬಿದ್ರಿ ನೇತೃತ್ವದ ಪ್ರತಿಷ್ಠಿತ ತಂಡ “ಪಡುಬಿದ್ರಿ ಫ್ರೆಂಡ್ಸ್” ತಂಡದ ಮೂಲಕ ತನ್ನ ಕ್ರಿಕೆಟ್ ಜೀವನ ಪ್ರಾರಂಭಿಸಿದ್ದ ಇವರು,ಕ್ರಿಕೆಟ್ ಜೀವನದುದ್ದಕ್ಕೂ ರಾಜ್ಯದ ಅತ್ಯಂತ ಶಿಸ್ತುಬದ್ಧ ಆಟಗಾರನಾಗಿ ಗುರುತಿಸಿಕೊಂಡಿದ್ದು ನಿತಿನ್.ಜಿ‌.ಮೂಲ್ಕಿ ಯವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ.

ಟೆನ್ನಿಸ್ ಕ್ರಿಕೆಟ್ ನಿಂದ ಪ್ರಾರಂಭವಾದ ಇವರ ಕೀರ್ತಿ ಅಂತರಾಷ್ಟ್ರೀಯ ಮಟ್ಟದವರೆಗೂ ವ್ಯಾಪಿಸಿದೆ. ಯು.ಎ.ಇ ಯ ಅಂತರಾಷ್ಟ್ರೀಯ ತಂಡದಲ್ಲಿ ವಿಶ್ವಕಪ್‌ ಅರ್ಹತಾ ಸುತ್ತಿನ ಪಂದ್ಯಗಳನ್ನು ಆಡಿ ಗಮನಾರ್ಹ ನಿರ್ವಹಣೆ ತೋರಿದ್ದರು.

ರಾಜ್ಯದ ಪ್ರತಿಷ್ಠಿತ ಕೆ.ಪಿ.ಎಲ್ ಪಂದ್ಯಾವಳಿಗಳಲ್ಲಿ ಮಂಗಳೂರು ಯುನೈಟೆಡ್,ಬೆಳಗಾವಿ ಪ್ಯಾಂಥರ್ಸ್ ಹಾಗೂ ಬಿಜಾಪುರ ಬುಲ್ಸ್ ನ ಪರವಾಗಿ‌ ಆಡಿದ ಅನುಭವ ಹೊಂದಿದ್ದಾರೆ.

M.P.L ನ ಈ ಬಾರಿಯ ಆವೃತ್ತಿಯಲ್ಲಿ ಕಾರ್ಕಳ ಗ್ಲಾಡಿಯೇಟರ್ಸ್ ಪರವಾಗಿ ಆಡಿ ಸರ್ವಾಂಗೀಣ ಪ್ರದರ್ಶನ ತೋರಿ ಸರಣಿ ಶ್ರೇಷ್ಠ ಪ್ರಶಸ್ತಿಯಾಗಿ “ರೆನಿಗೇಡ್ ಕಮಾಂಡೋ 300 ಸಿ.ಸಿ” ದುಬಾರಿ ದ್ವಿಚಕ್ರ ವಾಹನವನ್ನು ಪಡೆದಿದ್ದು,ತಂಡಕ್ಕೆ ಚಾಂಪಿಯನ್ ಪಟ್ಟ ತೊಡಿಸುವಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದ್ದರು.

(ಮುಂದಿನ ದಿನಗಳಲ್ಲಿ “ಸ್ಪೋರ್ಟ್ಸ್ ಕನ್ನಡ” ವೆಬ್ ಸೈಟ್ ನಲ್ಲಿ  ನಿತಿನ್.ಜಿ‌.ಮೂಲ್ಕಿ ಯವರ ಕ್ರೀಡಾ ಜೀವನದ ಸಾಧನೆಗಳನ್ನು ಬರೆಯಲಿದ್ದೇನೆ).

ಆರ್.ಕೆ.ಆಚಾರ್ಯ ಕೋಟ

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Subscribe

- Never miss a story with notifications

- Gain full access to our premium content

- Browse free from up to 5 devices at once

Latest stories

LEAVE A REPLY

Please enter your comment!
Please enter your name here

one × five =