ಕ್ರಿಕೆಟ್ಮಂಗಳಾಪುರ ಟ್ರೋಫಿ 2023: ಹರಾಜಿಗೂ ಮುನ್ನ ಎಲ್ಲಾ 10 ಫ್ರಾಂಚೈಸಿ ಬಿಡುಗಡೆ...

ಮಂಗಳಾಪುರ ಟ್ರೋಫಿ 2023: ಹರಾಜಿಗೂ ಮುನ್ನ ಎಲ್ಲಾ 10 ಫ್ರಾಂಚೈಸಿ ಬಿಡುಗಡೆ ಮಾಡಿದ ಐಕಾನ್ ಆಟಗಾರರ ಪಟ್ಟಿ ಇಲ್ಲಿದೆ

-

- Advertisment -spot_img
ಮಂಗಳಾಪುರ ಟ್ರೋಫಿ ಫ್ರಾಂಚೈಸಿಗಳು ಅಧಿಕೃತವಾಗಿ ಐಕಾನ್ ಆಟಗಾರರನ್ನು ಬಿಡುಗಡೆ ಮಾಡಿದ ಬಗ್ಗೆ ಮಂಗಳಾಪುರ ಕ್ರಿಕೆಟರ್ಸ್ ಮಾಹಿತಿ ಹೊರಹಾಕಿದೆ.
ಮಂಗಳಾಪುರ ಟ್ರೋಫಿ ಪ್ರೀಮಿಯರ್ ಲೀಗ್ ಟೂರ್ನಿ 2023ಕ್ಕೆ 10  ಫ್ರಾಂಚೈಸಿಗಳು ಭರ್ಜರಿ ಸಿದ್ಧತೆ ಶುರುಮಾಡಿಕೊಂಡಿವೆ. ಇದೇ ಅಕ್ಟೋಬರ್ 28-29 ರಂದು ಮಂಗಳೂರಿನ ಉರ್ವಾ ಮೈದಾನದಲ್ಲಿ ಜಿ.ಎಸ್. ಬಿ   ಪಂದ್ಯಾವಳಿ ಏರ್ಪಡಿಸಲಾಗಿದ್ದು ಇದಕ್ಕೂ ಮುನ್ನ ಟೀಮ್ ಮಂಗಳಾಪುರ  ಎಲ್ಲಾ ತಂಡಗಳಿಗೆ ತಮಗೆ ಅಗತ್ಯವಿರುವ  ಐಕಾನ್ ಆಟಗಾರರನ್ನು ಬಿಡುಗಡೆ ಮಾಡಲು ಹೇಳಿತ್ತು. ಮುಂದಿನ ದಿನಗಳಲ್ಲಿ ಎಲ್ಲಾ ತಂಡಗಳ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದ್ದು ಇನ್ನು ಕೆಲವೇ ದಿನಗಳಲ್ಲಿ ಎಲ್ಲಾ ತಂಡಗಳ ಸಂಪೂರ್ಣ ಚಿತ್ರಣ ಸಿಗಲಿದೆ. ಯಾವ ಫ್ರಾಂಚೈಸಿ ಯಾವ ಆಟಗಾರರನ್ನು ಐಕಾನ್ ಪ್ಲೇಯರ್ ಆಗಿ ಆಯ್ಕೆ ಮಾಡಿದೆ ಎಂಬ ಸುದ್ದಿ ಮೂಲಗಳಿಂದ ತಿಳಿದುಬಂದಿದೆ.
ಮೂಲಗಳ ಪ್ರಕಾರ ಮಂಜುಳೇಶ ಕ್ರಿಕೆಟರ್ಸ್ ತನ್ನ ತಂಡದಲ್ಲಿ ಭರ್ಜರಿ ಹೊಡೆತಗಾರ  ರಜತ್ ಶೆಣೈ ಐಕಾನ್ ಆಟಗಾರನನ್ನಾಗಿ ಬಿಡುಗಡೆ ಮಾಡಿದೆ ಎಂದು ವರದಿ ಆಗಿದೆ. ಮಂಜುಳೇಶ ಕ್ರಿಕೆಟರ್ಸ್ ನಲ್ಲಿ ಪ್ರಸಾದ್ ಪ್ರಭು ತಂಡದ ಮಾಲೀಕರಾಗಿ, ಎಂ. ನಾರಾಯಣ ನಾಯಕ್ ಅವರನ್ನು ಸಹ ಮಾಲೀಕರಾಗಿ ಕೈ ಹಿಡಿದಿದೆ.
ಡೆಡ್ಲಿ ಪ್ಯಾಂಥರ್ಸ್ (ರಿ) ತಂಡ ಹೊಡೆಬಡಿಯ ದಾಂಡಿಗ ರಾಕೇಶ್ ಕಾಮತ್ ರನ್ನು ಐಕಾನ್ ಆಟಗಾರನನ್ನಾಗಿ  ಬಿಡುಗಡೆ ಮಾಡಿದೆ. ಇದರಲ್ಲಿ ಮಾಲೀಕರಾಗಿ ಎಂ. ಸಂದೇಶ್ ಶೆಣೈ ಕೂಡ ಇರುವುದು ಅಚ್ಚರಿಯೇನಲ್ಲ.
ರೈಸಿಂಗ್ ಸ್ಟಾರ್ಸ್ ಮಂಗಳೂರು ತಂಡ ಅಚ್ಚರಿ ಎಂಬಂತೆ ಎಡಗೈ  ಆಟಗಾರ ಪ್ರಜ್ವಲ್ ಶೆಣೈ ಯನ್ನು ತಂಡಕ್ಕೆ ಕೈ ಹಿಡಿಯಲು ಸಜ್ಜಾಗಿದ್ದಾರೆ ಎಂದು ವರದಿಯಾಗಿದೆ. ಎಂ. ದಿನೇಶ್ ಪೈ, ಎಂ. ಸುಧೀರ್ ಪೈ , ಹಾಗೂ ಎಂ ಕಿರಣ್ ಪೈ ಅವರನ್ನು ತಂಡದ ಮಾಲೀಕರಾಗಿ ಉಳಿಸಿಕೊಂಡಿದೆಯಂತೆ.
ಇತ್ತ ಅಜಯ್ ಕಾಮತ್ ಮಾಲಕತ್ವದ ಜಿ.ಸ್.ಬಿ  ಗರುಡಾಸ್  ತಂಡ ವಿಜಯ್ ಕಾಮತ್ ರನ್ನು ಐಕಾನ್ ಪ್ಲೇಯರ್ ಆಗಿ  ಹಿಡಿದಿದೆ. ಅಂತೆಯೆ ಸೂರಜ್ ಭಟ್ ಕೋ ಓನರ್ ಆಗಿದ್ದಾರೆ.
ಇತ್ತ ಸಪ್ತಮಿ ವಾರಿಯರ್ಸ್ ಆಯ್ಕೆ ಮಾಡಿದ ಐಕಾನ್ ಆಟಗಾರ ಭರ್ಜರಿ ಹೊಡೆತಗಳನ್ನು ನೀಡಬಲ್ಲ ಎಡಗೈ ದಾಂಡಿಗ ವಿಘ್ನೇಶ್ ಭಟ್ ಕೋಟೇಶ್ವರ. ಮಂಜುನಾಥ್ ಆಚಾರ್ಯ ತಂಡದ ಮಾಲೀಕರು  ಹಾಗೂ ಮುರಳಿ ನಾಯಕ್ ರನ್ನು ಕೋ ಓನರ್ ಆಗಿ  ರಿಲೀಸ್ ಮಾಡಿದೆ.
TC ಸ್ಕಾರ್ಚರ್ಸ್ ತಂಡ ಮಾಲಿಂಗ ಎಂದು  ವ್ಯಾಪಕವಾಗಿ ಪರಿಗಣಿಸಲ್ಪಟ್ಟ ಲಕ್ಷ್ಮೀಶ ಬಾಳಿಗ  ಅವರನ್ನು ತಂಡದ ಐಕಾನ್ ಆಟಗಾರನನ್ನಾಗಿ  ಆಯ್ಕೆ  ಮಾಡುವ ಯೋಜನೆ ಹಾಕಿಕೊಂಡಿದೆ ಎನ್ನಲಾಗಿದೆ. ಉಳಿದಂತೆ ಸುಜಿತ್ ಬಾಳಿಗ ತಂಡದ ಮಾಲೀಕರಾದರೆ, ಆದಿತ್ಯ ಭಂಡಾರಿ, ಆದಿತ್ಯ ಭಟ್ ಸಹ ಮಾಲೀಕರಾಗಿ ತಂಡದಲ್ಲಿ ಇರಲಿದ್ದಾರೆ.
ಕೊಡಿಯಾಲ್ ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್   ಹಾರ್ಡ್ ಹಿಟ್ಟರ್  ಪುಂಡಲೀಕ ಪೈ  ಅವರನ್ನು ಟ್ರೇಡಿಂಗ್ ಮೂಲಕ ಐಕಾನ್ ಪ್ಲೇಯರ್ ಆಗಿ ತನ್ನ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇವರನ್ನು ಖರೀದಿಸಲು ಬೇರೆ ಬೇರೆ ತಂಡಗಳು ಮುಂದೆ ಬಂದವು. ಆದರೆ ಅಂತಿಮವಾಗಿ ಪುಂಡಲೀಕ ಪೈ ಕೆ ಯು ಎಸ್ ಸಿ ಪಾಲಾಗಿದ್ದಾರೆ. ಇವರ ಜೊತೆಗೆ ಕ್ರಿಕೆಟ್  ಪ್ರೋತ್ಸಾಹಕ ಕೊಂಚಾಡಿ ನರಸಿಂಹ ಶೆಣೈ ಮತ್ತು ನಾಗೇಶ್ ಶೆಣೈ ತಂಡದ ಮಾಲೀಕರುಗಳಾಗಿ ಮತ್ತು ಮನೋಜ್ ಮಲ್ಯ ಕೂಡ ಸಹ ಮಾಲೀಕರಾಗಿ ಸೇರಿಕೊಂಡಿದ್ದಾರೆ.
ಆಶ್ರಯ ಯುನೈಟೆಡ್ ತಂಡ ಆಲ್ ರೌಂಡ್ ಆಟಗಾರ ಸುರೇಂದ್ರ ಪೈ (ಸೂರಿ ಸಾಸ್ತಾನ ) ಅವರನ್ನು ತಂಡದಲ್ಲಿ ಐಕಾನ್ ಪ್ಲೇಯರ್ ಆಗಿ  ಕೈಹಿಡಿಯುವ ತೀರ್ಮಾನ ಮಾಡಿಕೊಂಡಿದೆಯಂತೆ. ರಮೇಶ್ ಹೆಗ್ಡೆ ಟೀಮ್ ಓನರ್ ಮತ್ತು ಅಭಿಷೇಕ್ ಶೆಣೈ  ಕೋ ಓನರ್ ಆಗಿದ್ದಾರೆ.
ಕಾರ್ತಿಕ್ XI ಅವರನ್ನು  ಯುವ ಸವ್ಯಸಾಚಿ ಗೌತಮ್ ಪೈ  ಅವರನ್ನು ಐಕಾನ್ ಆಟಗಾರನಾಗಿ  ತನ್ನಲ್ಲಿ ಉಳಿಸಿಕೊಂಡಿದೆ. ಇವರ ಜೊತೆಗೆ ಕವಿತಾ ಮಲ್ಯ ಅವರನ್ನು ಓನರ್ ಆಗಿ ಹಾಗೂ ವಿನಾಯಕ ಮಹಾಲೆ ಸಹ ಮಾಲೀಕರಾಗಿ ಕಾರ್ತಿಕ್ XI ರಿಲೀಸ್ ಮಾಡಿದೆ.
ಆರ್. ಕೆ ಸ್ಟ್ರೈಕರ್ಸ್ ತಂಡ , ಐಕಾನ್ ಆಟಗಾರನಾಗಿ ಎಂ ರಾಧಾ ಕೃಷ್ಣ ಅವರನ್ನು ರಿಲೀಸ್ ಮಾಡಲಿದೆ. ಎಂ ರಾಮನಾಥ ಶೆಣೈ ಮಾಲೀಕರಾಗಿ ತಂಡದಲ್ಲಿ ಇರಲಿದ್ದಾರೆ. ಗುರುರಾಜ್ ಪೈ ಮತ್ತು ಪ್ರಮೋದ್ ಶೆಣೈ ತಂಡದ ಸಹ ಮಾಲೀಕರುಗಳು.
ಸುರೇಶ್ ಭಟ್ ಮುಲ್ಕಿ
ಸ್ಫೋರ್ಟ್ಸ್ ಕನ್ನಡ ಪ್ರತಿನಿಧಿ
*****ಸ್ಪೋರ್ಟ್ಸ್ ಕನ್ನಡ ವೆಬ್‌ಸೈಟ ನ್ನು ಅನುಸರಿಸಿ ಮತ್ತು ಲೈವ್ ಸ್ಟ್ರೀಮಿಂಗ್ ಗಾಗಿ 6363022576 ಅಥವಾ  9141867683 ನ್ನು ಸಂಪರ್ಕಿಸಿ*****

LEAVE A REPLY

Please enter your comment!
Please enter your name here

ten + two =

Latest news

ಬೈಂದೂರಿನಲ್ಲಿ “ವಿಕ್ರಂ ಟ್ರೋಫಿ–2026” ಅಂಡರ್-23 ಟಿ-20 ಕ್ರಿಕೆಟ್ ಟೂರ್ನಿಗೆ ಭರ್ಜರಿ ಸಿದ್ಧತೆ

ಬೈಂದೂರಿನಲ್ಲಿ “ವಿಕ್ರಂ ಟ್ರೋಫಿ–2026” ಅಂಡರ್-23 ಟಿ-20 ಕ್ರಿಕೆಟ್ ಟೂರ್ನಿಗೆ ಸಿದ್ಧತೆ ಬೈಂದೂರು: ಯುವ ಕ್ರಿಕೆಟ್ ಪ್ರತಿಭೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ವಿಕ್ರಂ ಕ್ರಿಕೆಟ್ ಕ್ಲಬ್ ಬೈಂದೂರು ವತಿಯಿಂದ,...

ಉರ್ವಾ ಮೈದಾನದಲ್ಲಿ ಮಂಗಳಾಪುರ ಟ್ರೋಫಿ ಸಂಭ್ರಮ – ಕೊಂಕಣ್ ಎಕ್ಸ್‌ಪ್ರೆಸ್ ಚಾಂಪಿಯನ್

ಉರ್ವಾ ಮೈದಾನದಲ್ಲಿ ಮಂಗಳಾಪುರ ಟ್ರೋಫಿ ಸಂಭ್ರಮ – ಕೊಂಕಣ್ ಎಕ್ಸ್‌ಪ್ರೆಸ್ ಚಾಂಪಿಯನ್ ಮಂಗಳೂರು ಉರ್ವಾ ಮೈದಾನದಲ್ಲಿ ಎರಡು ದಿನಗಳ ಕಾಲ ಹೊನಲು ಬೆಳಕಿನಲ್ಲಿ ನಡೆದ “ಮಂಗಳಾಪುರ ಟ್ರೋಫಿ...

ಹೊಸಂಗಡಿಯಲ್ಲಿ ಕುಂಬ್ರಿ ಪ್ರೀಮಿಯರ್ ಲೀಗ್ – 2026 ‘HPL-2K26’ ಕ್ರಿಕೆಟ್ ಸಂಭ್ರಮ

ಹೊಸಂಗಡಿಯಲ್ಲಿ ಕುಂಬ್ರಿ ಪ್ರೀಮಿಯರ್ ಲೀಗ್ – 2026 'HPL-2K26’ ಕ್ರಿಕೆಟ್ ಸಂಭ್ರಮ ಫ್ರೆಂಡ್ಸ್ ಹೊಸಂಗಡಿ ವತಿಯಿಂದ ಮೇ 9 ಮತ್ತು 10 ರಂದು ಹೊಸಂಗಡಿಯ ಅಂಬೇಡ್ಕರ್ ಕ್ರೀಡಾಂಗಣದಲ್ಲಿ...

ಮಾರುತಿ ಆಶ್ರಯ ಹಸ್ತಾಂತರ ಕಾರ್ಯಕ್ರಮ: ಮಾನವೀಯ ಸೇವೆಯ ಉದಾತ್ತ ಉದಾಹರಣೆ

ಮಾರುತಿ ಆಶ್ರಯ ಹಸ್ತಾಂತರ ಕಾರ್ಯಕ್ರಮ: ಮಾನವೀಯ ಸೇವೆಯ ಉದಾತ್ತ ಉದಾಹರಣೆ ಉಳ್ಳಾಲ, ಮೇ 5: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾರುತಿ ಜನಸೇವಾ ಸಂಘ (ರಿ) ಹಾಗೂ...
- Advertisement -spot_imgspot_img

ಎಸ್‌ವಿಎಸ್ ಮೈದಾನದಲ್ಲಿ ಚಾರಿಟಿ ಕ್ರಿಕೆಟ್: ವಿಜೇತರಿಂದ ದೇಣಿಗೆಯ ಮಹತ್ವದ ಹೆಜ್ಜೆ

  ಎಸ್‌ವಿಎಸ್ ಮೈದಾನದಲ್ಲಿ ಚಾರಿಟಿ ಕ್ರಿಕೆಟ್: ವಿಜೇತರಿಂದ ದೇಣಿಗೆಯ ಮಹತ್ವದ ಹೆಜ್ಜೆ ಬಂಟ್ವಾಳ: ಅರ್ಜುನ್ ಭಂಡಾರ್ಕರ್ ಅವರ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ (ರಿ) ವತಿಯಿಂದ ಆಶಕ್ತ ಕುಟುಂಬಗಳಿಗೆ...

ಕೌಡೂರು ಮೈದಾನದಲ್ಲಿ ಉಡುಪಿ ಅಂಡರ್-15 ಟಿ-20 ಕ್ರಿಕೆಟ್ ಟೂರ್ನಿ: ಅಕ್ಷಯ ಕ್ರಿಕೆಟ್ ಅಕಾಡೆಮಿ ಚಾಂಪಿಯನ್

ಕೌಡೂರು ಮೈದಾನದಲ್ಲಿ ಉಡುಪಿ ಅಂಡರ್-15 ಟಿ-20 ಕ್ರಿಕೆಟ್ ಟೂರ್ನಿ: ಅಕ್ಷಯ ಕ್ರಿಕೆಟ್ ಅಕಾಡೆಮಿ ಚಾಂಪಿಯನ್ ಮಟ್ಟು ಅಸೋಸಿಯೇಟ್ಸ್, ಉಡುಪಿ, ಇವರ ಪ್ರಾಯೋಜಕತ್ವದಲ್ಲಿ, ಅಕ್ಷಯ ಕ್ರಿಕೆಟ್ ಅಕಾಡೆಮಿ ಉಡುಪಿ...

Must read

- Advertisement -spot_imgspot_img

You might also likeRELATED
Recommended to you