Categories
ಕ್ರಿಕೆಟ್

ಕುಟೀರ ಟ್ರೋಫಿ-2020 ಗಿಳಿಯಾರು ಹೊನಲು ಬೆಳಕಿನ ಲೀಗ್ ಮಾದರಿ ಕ್ರಿಕೆಟ್ ಪಂದ್ಯಾವಳಿ.

ಕುಟೀರ ಟ್ರೋಫಿ-2020 ಗಿಳಿಯಾರು
ಹೊನಲು ಬೆಳಕಿನ ಲೀಗ್ ಮಾದರಿ
ಕ್ರಿಕೆಟ್ ಪಂದ್ಯಾವಳಿ.

ಬೆಂಗಳೂರಿನ ಹೋಟೆಲ್ ಉದ್ಯಮಿ ಅಭಿಜಿತ್ ಹೆಗ್ಡೆ ಹಾಗೂ ಫ್ರೆಂಡ್ಸ್ ಗಿಳಿಯಾರಿನ ಯುವ ಕ್ರಿಕೆಟಿಗ ಅಮರ್ ಶೆಟ್ಟಿ ಹಾಗೂ ಫೆಂಡ್ಸ್ ಗಿಳಿಯಾರು ತಂಡದ ಸಾರಥ್ಯದಲ್ಲಿ ಲೀಗ್ ಮಾದರಿಯ 40 ಗಜಗಳ ಹೊನಲು ಬೆಳಕಿನ ಪಂದ್ಯಾಕೂಟ
“ಕುಟೀರ ಟ್ರೋಫಿ-2020”
ಜನವರಿ 11 ಮತ್ತು 12 ರಂದು 2 ದಿನಗಳ ಕಾಲ ಮೂಡುಗಿಳಿಯಾರು ಶಾಲಾ ವಠಾರದಲ್ಲಿ ನಡೆಯಲಿದೆ.

ಈ ಪಂದ್ಯಾವಳಿಯಲ್ಲಿ
ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದ್ದು,ವಲಯ ಮಟ್ಟದ ತಂಡಗಳು ಪರಸ್ಪರ ಸೆಣಸಾಡಲಿದೆ.
ಈ ಪಂದ್ಯಾವಳಿಯ ವಿಜೇತ ತಂಡ 33,333 ನಗದು,ರನ್ನರ್ಸ್ ತಂಡ 22,222 ನಗದು ಸಹಿತ ಶಾಶ್ವತ ಫಲಕಗಳನ್ನು ನೀಡಲಾಗುತ್ತಿದೆ.
ಸರಣಿ ಶ್ರೇಷ್ಠ ಪ್ರಶಸ್ತಿ ರೂಪದಲ್ಲಿ ಮೊಬೈಲ್ ಫೋನ್ ಹಾಗೂ ಇನ್ನಿತರ
ವೈಯಕ್ತಿಕ ಶ್ರೇಷ್ಠ ನಿರ್ವಹಣೆ ತೋರಿದ ಆಟಗಾರರಿಗೆ ಆಕರ್ಷಕ ಬಹುಮಾನಗಳನ್ನು ನೀಡಿ ಪುರಸ್ಕರಿಸಲಾಗುತ್ತಿದೆ.

ಶನಿವಾರ ಸಂಜೆ ನಡೆಯುವ ಕಾರ್ಯಕ್ರಮಕ್ಕೆ ಗಣ್ಯಾತಿಗಣ್ಯರು‌ ಆಗಮಿಸಲಿದ್ದು,ಈ ಸಂದರ್ಭ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಗಿಳಿಯಾರು ಫ್ರೆಂಡ್ಸ್ ಹಮ್ಮಿಕೊಂಡಿದ್ದಾರೆ.

ಆರ್.ಕೆ.ಆಚಾರ್ಯ ಕೋಟ…

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

6 + nineteen =