Home ಕ್ರಿಕೆಟ್ ಮಂಗಳೂರು-ಕಿನ್ನಿಗೋಳಿ ಪ್ರೀಮಿಯರ್‌ ಲೀಗ್-2022-ಟ್ರೋಫಿ ಅನಾವರಣ ಮತ್ತು ಸನ್ಮಾನ

ಮಂಗಳೂರು-ಕಿನ್ನಿಗೋಳಿ ಪ್ರೀಮಿಯರ್‌ ಲೀಗ್-2022-ಟ್ರೋಫಿ ಅನಾವರಣ ಮತ್ತು ಸನ್ಮಾನ

ಮಂಗಳೂರು-ಕಿನ್ನಿಗೋಳಿ ಪ್ರೀಮಿಯರ್‌ ಲೀಗ್-2022-ಟ್ರೋಫಿ ಅನಾವರಣ ಮತ್ತು ಸನ್ಮಾನ
ಕಿನ್ನಿಗೋಳಿ ಫ್ರೆಂಡ್ಸ್ ಕ್ರಿಕೆಟರ್ಸ್ ಇವರ ಆಶ್ರಯದಲ್ಲಿ ಕಿನ್ನಿಗೋಳಿ ಪ್ರೀಮಿಯರ್‌ ಲೀಗ್ ಸೀಸನ್-3 ಪಂದ್ಯಾವಳಿ ಫೆಬ್ರವರಿ 5 ಮತ್ತು 6 ರಂದು ಐಕಳದ ಶಕ್ತಿಕಲ್ಯಾಣಿ ಮೈದಾನದಲ್ಲಿ ಆಯೋಜಿಸಲಾಗಿದೆ.
*ಟ್ರೋಫಿ ಅನಾವರಣ ಮತ್ತು ಸನ್ಮಾನ ಕಾರ್ಯಕ್ರಮ*
ಜನವರಿ 31 ರಂದು ಕಿನ್ನಿಗೋಳಿಯ ಸ್ವಾಗತ್ ಸಭಾಭವನದಲ್ಲಿ ಟ್ರೋಫಿ ಅನಾವರಣ ಮತ್ತು ರಾಜ್ಯ ಮಟ್ಟದಲ್ಲಿ ಮಿಂಚಿದ ವೀರಕೇಸರಿ ಸುರತ್ಕಲ್ ತಂಡದ ಮಾಜಿ ಆಟಗಾರ ಮತ್ತು ತರಬೇತುದಾರರಾದ ಸುರೇಂದ್ರ ಪೂಜಾರಿಯವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಿ.ಪಂ.ಉಪಾಧ್ಯಕ್ಷೆ ಕಸ್ತೂರಿ ಪಂಜ
“ಆಧುನಿಕತೆಯ ಧಾವಂತಕ್ಕೆ ಯುವಜನತೆ ಮೊಬೈಲ್ ಮೊದಲಾದವುಗಳಿಗೆ ಮಾರು ಹೋಗದೆ ಕ್ರೀಡೆಯ ಬಗ್ಗೆ ಆಸಕ್ತಿ ವಹಿಸಬೇಕು,ಉತ್ತಮ ಆರೋಗ್ಯಕ್ಕೆ ಕ್ರೀಡೆ ಮುಖ್ಯವಾಗಿದೆ” ಎಂದು ಹೇಳಿದರು.
ಈ ಸಂದರ್ಭ ಜಿ.ಪಂ.ಮಾಜಿ ಸದಸ್ಯ ಈಶ್ವರ್ ಕಟೀಲು,ಪ್ರಮೋದ್ ಕುಮಾರ್,ಅನಂತ ಪದ್ಮನಾಭ ರಾವ್,ಪ್ರವೀಣ್ ಕಿನ್ನಿಗೋಳಿ ಉಪಸ್ಥಿತರಿದ್ದರು. ಶ್ರೀಶ ಸರಾಫ್ ಐಕಳ ಸನ್ಮಾನ ಪತ್ರ ವಾಚಿಸಿದರೆ,ಕೇಶವ ಕರ್ಕೇರ ವಂದಿಸಿದರು,ನಿತೇಶ್ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.
ಪಂದ್ಯಾಕೂಟಕ್ಕೆ ಅಂತರಾಷ್ಟ್ರೀಯ ಆಟಗಾರರು,ಚಿತ್ರ ತಾರೆಯರು,ವಿವಿಧ ಕ್ಷೇತ್ರಗಳ ಸಾಧಕರು ಶುಭಾಶಯ ಕೋರಿದ್ದಾರೆ.

LEAVE A REPLY

Please enter your comment!
Please enter your name here

five × 2 =

ಮಂಗಳೂರು-ಕಿನ್ನಿಗೋಳಿ ಪ್ರೀಮಿಯರ್‌ ಲೀಗ್-2022-ಟ್ರೋಫಿ ಅನಾವರಣ ಮತ್ತು ಸನ್ಮಾನ

ಕಿನ್ನಿಗೋಳಿ ಫ್ರೆಂಡ್ಸ್ ಕ್ರಿಕೆಟರ್ಸ್ ಇವರ ಆಶ್ರಯದಲ್ಲಿ ಕಿನ್ನಿಗೋಳಿ ಪ್ರೀಮಿಯರ್‌ ಲೀಗ್ ಸೀಸನ್-3 ಪಂದ್ಯಾವಳಿ ಫೆಬ್ರವರಿ 5 ಮತ್ತು 6 ರಂದು ಐಕಳದ ಶಕ್ತಿಕಲ್ಯಾಣಿ ಮೈದಾನದಲ್ಲಿ ಆಯೋಜಿಸಲಾಗಿದೆ. *ಟ್ರೋಫಿ ಅನಾವರಣ ಮತ್ತು ಸನ್ಮಾನ ಕಾರ್ಯಕ್ರಮ* ಜನವರಿ 31 ರಂದು ಕಿನ್ನಿಗೋಳಿಯ ಸ್ವಾಗತ್ ಸಭಾಭವನದಲ್ಲಿ ಟ್ರೋಫಿ ಅನಾವರಣ ಮತ್ತು ರಾಜ್ಯ ಮಟ್ಟದಲ್ಲಿ ಮಿಂಚಿದ ವೀರಕೇಸರಿ ಸುರತ್ಕಲ್ ತಂಡದ ಮಾಜಿ ಆಟಗಾರ ಮತ್ತು ತರಬೇತುದಾರರಾದ ಸುರೇಂದ್ರ ಪೂಜಾರಿಯವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಿ.ಪಂ.ಉಪಾಧ್ಯಕ್ಷೆ ಕಸ್ತೂರಿ ಪಂಜ "ಆಧುನಿಕತೆಯ ಧಾವಂತಕ್ಕೆ ಯುವಜನತೆ ಮೊಬೈಲ್ ಮೊದಲಾದವುಗಳಿಗೆ ಮಾರು ಹೋಗದೆ ಕ್ರೀಡೆಯ ಬಗ್ಗೆ ಆಸಕ್ತಿ ವಹಿಸಬೇಕು,ಉತ್ತಮ ಆರೋಗ್ಯಕ್ಕೆ ಕ್ರೀಡೆ ಮುಖ್ಯವಾಗಿದೆ" ಎಂದು ಹೇಳಿದರು. ಈ ಸಂದರ್ಭ ಜಿ.ಪಂ.ಮಾಜಿ ಸದಸ್ಯ ಈಶ್ವರ್ ಕಟೀಲು,ಪ್ರಮೋದ್ ಕುಮಾರ್,ಅನಂತ ಪದ್ಮನಾಭ ರಾವ್,ಪ್ರವೀಣ್ ಕಿನ್ನಿಗೋಳಿ ಉಪಸ್ಥಿತರಿದ್ದರು. ಶ್ರೀಶ ಸರಾಫ್ ಐಕಳ ಸನ್ಮಾನ ಪತ್ರ ವಾಚಿಸಿದರೆ,ಕೇಶವ ಕರ್ಕೇರ ವಂದಿಸಿದರು,ನಿತೇಶ್ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು. ಪಂದ್ಯಾಕೂಟಕ್ಕೆ ಅಂತರಾಷ್ಟ್ರೀಯ ಆಟಗಾರರು,ಚಿತ್ರ ತಾರೆಯರು,ವಿವಿಧ ಕ್ಷೇತ್ರಗಳ ಸಾಧಕರು ಶುಭಾಶಯ

Send this to a friend