
ಭಾರತ ಪ್ಲೇಯಿಂಗ್ ಇಲೆವೆನ್: ರಿಂಕು-ಹಾರ್ದಿಕ್ ಔಟ್.. ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿರುವ ನಾಲ್ಕನೇ ಟಿ20 ಅಂತಿಮ ತಂಡ!
ಭಾರತ ಉತ್ತಮ ಚೇತರಿಕೆ ಕಂಡಿದೆ. ಎರಡನೇ ಟಿ20ಯಲ್ಲಿ ಸೋತ ಟೀಂ ಇಂಡಿಯಾ ಮೂರನೇ ಟಿ20ಯಲ್ಲಿ ಗೆಲುವು ಸಾಧಿಸಿದೆ. ಆತಿಥೇಯರು ದಕ್ಷಿಣ ಆಫ್ರಿಕಾವನ್ನು 11 ರನ್ಗಳಿಂದ ಸೋಲಿಸಿ ನಾಲ್ಕು ಪಂದ್ಯಗಳ T20I ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದ್ದಾರೆ. ಸೆಂಚುರಿಯನ್ ಮೈದಾನದಲ್ಲಿ ನಡೆಯಲಿರುವ ಅಂತಿಮ ಟಿ20ಯಲ್ಲೂ ಇದೇ ವೇಗವನ್ನು ಮುಂದುವರಿಸಿ ಸರಣಿ ಕೈವಶ ಮಾಡಿಕೊಳ್ಳುವ ಸಂಕಲ್ಪ ಸೂರ್ಯಸೇನೆಗಿದೆ. ಪಂದ್ಯ ಶುಕ್ರವಾರ ರಾತ್ರಿ 8.30 ಕ್ಕೆ ಆರಂಭವಾಗಲಿದೆ.
ಆದರೆ, ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಅಂತಿಮ ಭಾರತ ತಂಡದಲ್ಲಿ ಎರಡು ಬದಲಾವಣೆ ಮಾಡುವ ನಿರೀಕ್ಷೆಯಲ್ಲಿದೆ. ಗೆಲುವಿನ ಸಂಯೋಜನೆಯನ್ನು ಬದಲಾಯಿಸುವ ಅಗತ್ಯವಿಲ್ಲದಿದ್ದರೂ, ಸರಣಿಯ ಕೊನೆಯ ಪಂದ್ಯದಲ್ಲಿ ಯುವ ಕ್ರಿಕೆಟಿಗರಿಗೆ ಅವಕಾಶ ನೀಡುವ ಯೋಜನೆಯಾಗಿದೆ. ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ಫಿನಿಶರ್ ರಿಂಕು ಸಿಂಗ್ ಅವರಿಗೆ ವಿಶ್ರಾಂತಿ ನೀಡಲಾಗಿದೆಯಂತೆ. ಮೇಲಾಗಿ ಕಳೆದ ಮೂರು ಪಂದ್ಯಗಳಲ್ಲಿ ರಿಂಕು ಸಿಂಗ್ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ.

ಮೊದಲ ಪಂದ್ಯದಲ್ಲಿ ಮಾತ್ರ ಎರಡಂಕಿ ಗಳಿಸಿದ್ದರು. ರಿಂಕು ಕಳೆದ ಪಂದ್ಯಗಳಲ್ಲಿ ಕ್ರಮವಾಗಿ 11, 9 ಮತ್ತು 8 ರನ್ ಗಳಿಸಿದ್ದರು. ಮತ್ತೊಂದೆಡೆ, ಹಾರ್ದಿಕ್ ಬ್ಯಾಟ್ನಲ್ಲಿ, ಬೌಲಿಂಗ್ ನಲ್ಲೂ ನಿರಾಶೆಗೊಳಿಸಿದ್ದಾರೆ. ಈ ಹಿನ್ನಲೆಯಲ್ಲಿ ರಿಂಕು ಬದಲಿಗೆ ಜಿತೇಶ್ ಶರ್ಮಾ ಹಾಗೂ ಹಾರ್ದಿಕ್ ಪಾಂಡ್ಯ ಬದಲಿಗೆ ಯಶ್ ದಯಾಳ್ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯನ್ನು ಮ್ಯಾನೇಜ್ಮೆಂಟ್ ಹೊಂದಿದೆ.





