Categories
ಕ್ರಿಕೆಟ್

ಈಗಲ್ಸ್ ಕುಂಭಾಶಿ ತಂಡಕ್ಕೆ ಕುಟೀರ ಟ್ರೋಫಿ-2020

ಗಿಳಿಯಾರಿನ ಯುವ ಕ್ರಿಕೆಟಿಗ ಅಮರ್ ಶೆಟ್ಟಿ ಫ್ರೆಂಡ್ಸ್ ಗಿಳಿಯಾರು ಹಾಗೂ ಫೆಂಡ್ಸ್ ಗಿಳಿಯಾರು ತಂಡದ ಸಾರಥ್ಯದಲ್ಲಿ ಲೀಗ್ ಮಾದರಿಯ ಆಯಾಯ ವಲಯದ ಆಟಗಾರರನ್ನೊಳಗೊಂಡ ಜಿಲ್ಲಾ ಮಟ್ಟದ 40 ಗಜಗಳ
ಹೊನಲು ಬೆಳಕಿನ ಪಂದ್ಯಾಕೂಟ
“ಕುಟೀರ ಟ್ರೋಫಿ-2020” ಯನ್ನು
ಈಗಲ್ಸ್ ಕುಂಭಾಶಿ ಜಯಿಸಿದೆ

ಈ ಪಂದ್ಯಾವಳಿಯಲ್ಲಿ
ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು ವಲಯ ಮಟ್ಟದ 38 ತಂಡಗಳು ಪರಸ್ಪರ ಸೆಣಸಾಡಿದ್ದವು.
ಅಂತಿಮವಾಗಿ ಫೈನಲ್ ನಲ್ಲಿ
ಈಗಲ್ಸ್ ಕುಂಭಾಶಿ ,ಸಿ.ಪಿ.ಸಿ ಸಾಸ್ತಾನ ತಂಡವನ್ನು ಸೋಲಿಸಿ‌ ಪ್ರಥಮ‌ ಪ್ರಶಸ್ತಿ ಪಡೆಯಿತು.

ಪ್ರಥಮ ಪ್ರಶಸ್ತಿ ವಿಜೇತ ತಂಡ ಈಗಲ್ಸ್ 33,333 ನಗದು,ರನ್ನರ್ಸ್ ಸಿ.ಪಿ.ಸಿ ಸಾಸ್ತಾನ ತಂಡ 22,222 ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಿತು.

ಈಗಲ್ಸ್ ಕುಂಭಾಶಿಯ ಸುಧಾಕರ
ಸರಣಿ ಶ್ರೇಷ್ಠ ಪ್ರಶಸ್ತಿ ರೂಪದಲ್ಲಿ ಮೊಬೈಲ್ ಫೋನ್ ಪಡೆದರೆ,
ಫೈನಲ್ ನ ಪಂದ್ಯಶ್ರೇಷ್ಟ ಹಾಗೂ
ಬೆಸ್ಟ್ ಬ್ಯಾಟ್ಸ್‌ಮನ್ ಅಶ್ವಿನ್ ಕುಂಭಾಶಿ,ಬೆಸ್ಟ್ ಬೌಲರ್ ಸೂರಿ ಸಾಸ್ತಾನ ಹಾಗೂ ವಿಶೇಷವಾಗಿ ಕೊಡಮಾಡಿದ ಅತ್ಯಂತ ಶಿಸ್ತಿನ ತಂಡ ಪ್ರಶಸ್ತಿಯನ್ನು ಜ್ವಾಲಿ ಮೂಡುಗೋಪಾಡಿ ಪಾತ್ರವಾಯಿತು.

ಗಿಳಿಯಾರು ಅಂಗನವಾಡಿ ದತ್ತುನಿಧಿ ಪ್ರಯುಕ್ತ ನಡೆದಿದ್ದ
ಪಂದ್ಯಾವಳಿಯನ್ನು ಕೋಟ ಪೋಲಿಸ್ ವೃತ್ತ ನಿರೀಕ್ಷಕ ನಿತ್ಯಾನಂದ ಗೌಡ ಉದ್ಘಾಟಿಸಿದ್ದರು.
ಈ ಸಂದರ್ಭ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆದಿತ್ತು.ವಲಯ ಮಟ್ಟದ ಪಂದ್ಯಾವಳಿಗಳು ಇತ್ತೀಚೆಗೆ ಹೆಚ್ಚಾಗಿ ನಡೆಯುತ್ತಿದ್ದು,ವಲಸೆ ಹೋಗುತ್ತಿರುವ ಆಟಗಾರರು ತಮ್ಮೂರಿನ ತಂಡವನ್ನು ಮತ್ತೆ ಕೂಡಿಕೊಂಡು ಸ್ಥಳೀಯ ತಂಡಗಳು,ಗ್ರಾಮೀಣ ಮಟ್ಟದ ಪ್ರತಿಭೆಗಳ ಅನಾವರಣ ನಿಟ್ಟಿನಲ್ಲಿ ಗಿಳಿಯಾರು ಫ್ರೆಂಡ್ಸ್ ಕೈಗೊಂಡಿದ್ದ
ಕುಟೀರ ಟ್ರೋಫಿ ಅಪಾರ ಕ್ರೀಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.
ಆರ್.ಕೆ.ಆಚಾರ್ಯ ಕೋಟ…

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

17 − 15 =