15.6 C
London
Tuesday, May 14, 2024
Homeಕ್ರಿಕೆಟ್ಈಗಲ್ಸ್ ಕುಂಭಾಶಿ ತಂಡಕ್ಕೆ  "ಫ್ರೆಂಡ್ಸ್ ಟ್ರೋಫಿ-2020".

ಈಗಲ್ಸ್ ಕುಂಭಾಶಿ ತಂಡಕ್ಕೆ  “ಫ್ರೆಂಡ್ಸ್ ಟ್ರೋಫಿ-2020”.

Date:

Related stories

ನಿನ್ನ ಟೈಮ್ ಬಂದೇ ಬರುವುದು, ಹೀಗೇ ಆಡುತ್ತಿರು ಕರುಣ್..!

1996ರಲ್ಲಿ ಅರ್ಜುನ ರಣತುಂಗ ನಾಯಕತ್ವದ ಶ್ರೀಲಂಕಾ ತಂಡ ಏಕದಿನ ವಿಶ್ವಕಪ್ ಗೆದ್ದಾಗ...

ದುಡ್ಡಿನ ಮದದಲ್ಲಿ ಕೊಬ್ಬಿರುವ ಈ business tycoonಗಳಿಗೆ ದೇಶದ ಕ್ರಿಕೆಟ್ ಹೀರೊಗಳ ಮೇಲೆ ಗೌರವ ಇರಲು ಹೇಗೆ ಸಾಧ್ಯ..?

17 ವರ್ಷಗಳ ಐಪಿಎಲ್ ಚರಿತ್ರೆಯಲ್ಲಿ ಸಾವಿರಕ್ಕೂ ಹೆಚ್ಚು ಪಂದ್ಯಗಳು ನಡೆದಿವೆ. ಆ...

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...
spot_imgspot_img
ಈಗಲ್ಸ್ ಕುಂಭಾಶಿ ತಂಡಕ್ಕೆ
“ಫ್ರೆಂಡ್ಸ್ ಟ್ರೋಫಿ-2020”.
ಗ್ರಾಮೀಣ ಮಟ್ಟದ ಯುವ ಪ್ರತಿಭೆಗಳ ಅನ್ವೇಷಣೆ,ವಲಯ ಮಟ್ಟದ ತಂಡಗಳ ಬಲವರ್ಧನೆ ಸದುದ್ದೇಶದಿಂದ,
ನ್ಯೂ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ ಕೋಟೇಶ್ವರ ಆಯೋಜಿಸಿದ್ದ 40 ಗಜಗಳ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ “ಫ್ರೆಂಡ್ಸ್ ಟ್ರೋಫಿಯನ್ನು ಈಗಲ್ಸ್ ಕುಂಭಾಶಿ ತಂಡ ಗೆದ್ದುಕೊಂಡಿತು.
ಆಯಾಯ ವಲಯದ 36 ತಂಡಗಳು ಭಾಗವಹಿಸಿದ್ದ ಈ ಟೂರ್ನಿಯ ಲೀಗ್ ಹಂತದ ಹೋರಾಟದ ಬಳಿಕ
ಉಪಾಂತ್ಯ ಪಂದ್ಯಗಳಲ್ಲಿ
ನಾಗಬನ ಚಾಲೆಂಜರ್ಸ್ ಬೀಜಾಡಿ,
ಮಿತ್ರವೃಂದ ಗೋಪಾಡಿ
ತಂಡವನ್ನು ಹಾಗೂ ಈಗಲ್ಸ್ ,ಚಾಲೆಂಜ್ ಕುಂದಾಪುರವನ್ನು ಸೋಲಿಸಿ ಫೈನಲ್ ಗೆ ಭಡ್ತಿ ಪಡೆದಿದ್ದರು.
ಫೈನಲ್ ನಲ್ಲಿ ಈಗಲ್ಸ್ ತಂಡ ನಾಗಬನ ಚಾಲೆಂಜರ್ಸ್ ತಂಡವನ್ನು ಸೋಲಿಸಿದರು.
ವಿಜೇತ ಈಗಲ್ಸ್ ಕುಂಭಾಶಿ
30,030 ರೂ ನಗದು,ದ್ವಿತೀಯ ಸ್ಥಾನಿ ನಾಗಬನ ಚಾಲೆಂಜರ್ಸ್ 20,020 ರೂ ನಗದು ಜೊತೆಯಾಗಿ ಆಕರ್ಷಕ ಟ್ರೋಫಿಗಳನ್ನು ಪಡೆದರೆ.
ಟೂರ್ನಿಯ ಬೆಸ್ಟ್ ಬ್ಯಾಟ್ಸ್‌ಮನ್
ಗಣೇಶ್ ಬೀಜಾಡಿ,ಬೆಸ್ಟ್ ಬೌಲರ್ ಮಹೇಶ್ ಬೀಜಾಡಿ,ಬೆಸ್ಟ್ ಫೀಲ್ಡರ್ ರಿತೇಶ್ ಗೋಪಾಡಿ,ಬೆಸ್ಟ್ ಕೀಪರ್ ರಂಜನ್ ಉಡುಪ ಕೋಟೇಶ್ವರ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಈಗಲ್ಸ್ ನ ಸುಧಾಕರ್ ಕುಂಭಾಶಿ ಪಡೆದುಕೊಂಡರು.
ಶನಿವಾರ ನಡೆದಿದ್ದ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಲಕ್ಷ್ಮೀ ಮಂಜು ಬಿಲ್ಲವ,ಶ್ರೀಲತಾ ಸುರೇಶ್ ಶೆಟ್ಟಿ, ಗ್ರಾ.ಪ.ಕೋಟೇಶ್ವರದ ಅಧ್ಯಕ್ಷರು ಶ್ರೀಮತಿ ಶಾಂತ ಗೋಪಾಲಕೃಷ್ಣ ,ಕ.ಪ.ಸ್ಕೂಲ್ ಕೋಟೇಶ್ವರದ ಶಿಕ್ಷಕಿ ಶ್ರೀಮತಿ ಲತಾ ಶೇಟ್,ರಘುರಾಮ್ ಉಡುಪ ಹಾಗೂ ಸ್ಪೋರ್ಟ್ಸ್ ಕನ್ನಡ ಸಂಚಾಲಕರು ಕೋಟ ರಾಮಕೃಷ್ಣ ಆಚಾರ್ಯ ಭಾಗವಹಿಸಿದ್ದರು.
ಸಮಾರೋಪ ಸಮಾರಂಭದಲ್ಲಿ
ಕೋಟೇಶ್ವರ ಗ್ರಾಮ ಪಂಚಾಯತ್ ಸದಸ್ಯರಾದ ಸತೀಶ್ ಮಠದಬೆಟ್ಟು,ಸುಧಾಕರ್ ಪೈಂಟರ್,ರಾಕೇಶ್ ಮೂಡುಗೋಪಾಡಿ,ಟೂರ್ನಿಯ ಪ್ರಮುಖ ರೂವಾರಿಗಳಾದ ರಾಜೇಶ್ ಪ್ರಭು,ಪುರುಷೋತ್ತಮ ಕಾಮತ್,ನಯಾಝ್ ಸರ್ದಾರ್ ಹಾಗೂ ನ್ಯೂ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು.
        ಆರ್.ಕೆ.ಆಚಾರ್ಯ ಕೋಟ…
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

fifteen + 9 =