6.3 C
London
Tuesday, April 23, 2024
Homeಕ್ರಿಕೆಟ್ಪ್ರಸಾದ್ "ಕ್ಲಾಸಿಕ್"ಶೋ-ರಾಕರ್ಸ್ " ವಿಷ್ಣು ಕಪ್-2020" ಚಾಂಪಿಯನ್ಸ್.

ಪ್ರಸಾದ್ “ಕ್ಲಾಸಿಕ್”ಶೋ-ರಾಕರ್ಸ್ ” ವಿಷ್ಣು ಕಪ್-2020″ ಚಾಂಪಿಯನ್ಸ್.

Date:

Related stories

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...

ಇಂತಹ ಒಬ್ಬ ಆಟಗಾರನನ್ನು RCB ತಯಾರು ಮಾಡಿದೆಯೇ..?

ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ.. ಆದರೆ ಅವರೆಲ್ಲಾ ಐಪಿಎಲ್’ನಲ್ಲಿ...

RCB ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ..!

ನಾಲ್ಕೇ ನಾಲ್ಕು ದಿನಗಳ ಹಿಂದೆ..  4 ಓವರ್’ಗಳಲ್ಲಿ 23 ರನ್, ಒಂದು...
spot_imgspot_img

 

ಕ್ಲಾಸಿಕ್ ಕ್ರಿಕೆಟರ್ಸ್ ಬೆಂಗಳೂರು ಇವರ ಆಶ್ರಯದಲ್ಲಿ,ವಿಲ್ಲೋ ಪವರ್ ಕ್ರಿಕೆಟ್ ಅಕಾಡೆಮಿ ಇವರ ಸಹಭಾಗಿತ್ವದಲ್ಲಿ ಮಾರ್ಚ್ 7,8 ರಂದು ಬೆಂಗಳೂರಿನ ಆರ್‌.ಟಿ.ನಗರ ಎಚ್.ಎಮ್.ಟಿ‌ ಅಂಗಣದಲ್ಲಿ ನಡೆದ
ವಿಷ್ಣು ಕಪ್-2020 ಪ್ರಶಸ್ತಿಯನ್ನು ಬೆಂಗಳೂರಿನ ಬಲಿಷ್ಠ ರಾಕರ್ಸ್ ತಂಡ ಗೆದ್ದುಕೊಂಡಿತು.

ರಾಜ್ಯದ ಪ್ರತಿಷ್ಟಿತ ತಂಡಗಳು ಭಾಗವಹಿಸಿದ್ದ ಈ ಟೂರ್ನಿಯ ಸೆಮಿಫೈನಲ್ಸ್ ನಲ್ಲಿ
ರಾಕರ್ಸ್ ತಂಡ ನ್ಯಾಶ್ ಬೆಂಗಳೂರು ನ್ನು ಹಾಗೂ ಎಮ್.ಬಿ.ಸಿ.ಸಿ ತಂಡ ಕ್ಲಾಸಿಕ್ ಕ್ರಿಕೆಟರ್ಸ್ ತಂಡವನ್ನು ಸೋಲಿಸಿ ಫೈನಲ್ ಗೆ ಭಡ್ತಿ ಪಡೆದಿತ್ತು.

ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಎಮ್.ಬಿ.ಸಿ.ಸಿ ಯ ದಾಂಡಿಗರು,ರಾಕರ್ಸ್ ನ‌ ಪ್ರಸಾದ್,ಮದನ್ ಹಾಗೂ ಅಭಿ‌ ವೇಗದ ದಾಳಿಗೆ ರನ್ ಗಳಿಸಲು ಪರದಾಡಿ ಕೇವಲ 17 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನೊಪ್ಪಿಸಿತ್ತು.

ಸುಲಭದ ಗುರಿಯನ್ನು ಬೆಂಬತ್ತಿದ ರಾಕರ್ಸ್ ನವೀನ್ 15 ರನ್ ಗಳ ನೆರವಿನಿಂದ 3.3 ಓವರ್ ಗಳಲ್ಲಿ ಗೆಲುವನ್ನು ಸಾಧಿಸಿತ್ತು.

ಪ್ರಥಮ ಪ್ರಶಸ್ತಿ ರೂಪದಲ್ಲಿ
ರಾಕರ್ಸ್ ತಂಡ 1,11,111 ರೂ,ದ್ವಿತೀಯ ಸ್ಥಾನಿ ಎಮ್.ಬಿ.ಸಿ.ಸಿ
55,555 ರೂ ಹಾಗೂ ತೃತೀಯ ಹಾಗೂ ಚತುರ್ಥ ಸ್ಥಾನಿ ತಂಡ ತಲಾ 5,555 ನಗದು ಪುರಸ್ಕಾರಗಳನ್ನು ಹಾಗೂ ಆಕರ್ಷಕ ಟ್ರೋಫಿಗಳನ್ನು
ಪಡೆದರು.

ಪ್ರಸಾದ್ “ಕ್ಲಾಸಿಕ್ ಶೋ”
ಫ್ರೆಂಡ್ಸ್ ಬೆಂಗಳೂರು ತಂಡದ ಬೌಲಿಂಗ್ ಅಸ್ತ್ರ ಕುಂದಾಪುರ ಮೂಲದ ವೇಗಿ ಪ್ರಸಾದ್ ನೇರಳೆಕಟ್ಟೆಯವರನ್ನು,
ರಾಕರ್ಸ್ ತಂಡದ ಯುವ ಕಪ್ತಾನ ಮದನ್ ಮತ್ತು ಚಾಣಾಕ್ಷ ಕ್ರಿಕೆಟಿಗ ನವೀನ್ ಲೆಕ್ಕಾಚಾರದ ಪ್ರಕಾರ,
ಆರಂಭಿಕ ಆಟಗಾರನಾಗಿ ಕಣಕ್ಕಿಳಿಸಿ ಯಶಸ್ಸನ್ನು ಪಡೆದಿದ್ದರು.
ಲೀಗ್ ಹಾಗೂ ನಿರ್ಣಾಯಕ ಹಂತದ ಪಂದ್ಯಗಳಲ್ಲಿ ಅತ್ಯುತ್ತಮ ಬ್ಯಾಟಿಂಗ್ ನಡೆಸಿ ತಂಡವನ್ನು ಆಧರಿಸಿ, ಅತ್ಯಧಿಕ ವಿಕೆಟ್ ಗಳಿಸಿದ ಎಸೆತಗಾರನಾಗಿ ಹೊರಹೊಮ್ಮಿ
ಬೆಸ್ಟ್ ಬೌಲರ್,ಫೈನಲ್ ನ ಪಂದ್ಯಶ್ರೇಷ್ಟ ಹಾಗೂ ಅರ್ಹವಾಗಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ತನ್ನದಾಗಿಸಿಕೊಂಡರು.
ಸರಣಿಯ ಅತ್ಯುತ್ತಮ ದಾಂಡಿಗ ಪ್ರಶಸ್ತಿ‌ ಕ್ಲಾಸಿಕ್ ಕ್ರಿಕೆಟರ್ಸ್ ನ ಅಮಿತ್ ಪಾಲಾಯಿತು.

ಸಮಾರೋಪ ಸಮಾರಂಭದಲ್ಲಿ ಮಾಜಿ ಸಚಿವರು ಹಾಗೂ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ನಗರ ಪಾಲಿಕೆ ಸದಸ್ಯರು ಶ್ರೀ ಆನಂದ್,ಸಮಾಜ ಸೇವಕರು ಶ್ರೀ ವಿಜಯ್ ಕುಮಾರ್,ಉಡುಪಿ ಉಪಹಾರ್ ಮಾಲೀಕರಾದ ಶ್ರೀ ಗೋಪಾಲ ಶೆಟ್ಟಿ,ಮಾಜಿ ಎ.ಸಿ.ಪಿ ಶ್ರೀ ನಾಗರಾಜ್,ವಿಲ್ಲೋ ಪವರ್ ಅಕಾಡೆಮಿಯ ರೂವಾರಿ ಗಳಾದ
ಶ್ರೀ ಗೋಪಿ ಮತ್ತು ಶ್ರೀ ಆನಂದ್ ಇನ್ನಿತರ ಗಣ್ಯರು ಹಾಗೂ ಕ್ಲಾಸಿಕ್ ಕ್ರಿಕೆಟರ್ಸ್ ನ‌ ಸದಸ್ಯರು ಉಪಸ್ಥಿತರಿದ್ದರು.

ಮೊಹಮ್ಮದ್ ಯಾಸೀನ್ ಮಾಲೀಕತ್ವದ Y.Sports ಪಂದ್ಯಾವಳಿಯ ನೇರ ಪ್ರಸಾರವನ್ನು ಬಿತ್ತರಿಸಿದರೆ,ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ರೂಪದಲ್ಲಿ,
ಕೊಪ್ಪದ ಅಫ್ಜಲ್ ವೀಕ್ಷಕ ವಿವರಣೆಯಲ್ಲಿ‌ ಸಹಕರಿಸಿದ್ದರು.

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

14 + 5 =