ಕ್ರಿಕೆಟ್ಅರಸೀಕೆರೆಯಲ್ಲಿ ಚವನ್ ಸು‌ನಾಮಿ-ಜಾನ್ಸನ್ ರಿಯಲ್ ಫೈಟರ್ಸ್ ಗೆ "ಚಮಕ್" ಇನಾಮು.

ಅರಸೀಕೆರೆಯಲ್ಲಿ ಚವನ್ ಸು‌ನಾಮಿ-ಜಾನ್ಸನ್ ರಿಯಲ್ ಫೈಟರ್ಸ್ ಗೆ “ಚಮಕ್” ಇನಾಮು.

-

- Advertisment -spot_img
ಚಮಕ್ ಕ್ರಿಕೆಟರ್ಸ್ ಅರಸೀಕೆರೆ ಇವರ ಆಶ್ರಯದಲ್ಲಿ ಕ್ರೀಡಾ ಪ್ರೋತ್ಸಾಹಕರು,ಸಲೀನ ಟ್ರಾನ್ಸ್‌ಪೋರ್ಟ್‌ ನ ಮಾಲೀಕರಾದ ಸಲ್ಲವುದ್ದೀನ್ ಸಲ್ಮಾನ್ ಇವರ ದಕ್ಷ ಸಾರಥ್ಯದಲ್ಲಿ,ಹೆಚ್.ರಿಯಾಜ್ ಅಹಮ್ಮದ್,ಶ್ರೀಧರ್ ಹಾಗೂ ವೆಂಕಟೇಶ್ ಇವರ ಸ್ಮರಣಾರ್ಥವಾಗಿ ಅರಸೀಕೆರೆಯ ರೈಲ್ವೇ ಮೈದಾನದಲ್ಲಿ ಆಯೋಜಿಸಲಾಗಿದ್ದ,ಪ್ರತಿಷ್ಟಿತ  ಚಮಕ್ ಕಪ್-2021 ಉಡುಪಿಯ ಜಾನ್ಸನ್ ರಿಯಲ್ ಫೈಟರ್ಸ್ ತಂಡ ಜಯಿಸಿದೆ.
ರಾಜ್ಯದ ಬಲಿಷ್ಠ ತಂಡಗಳು ಭಾಗವಹಿಸಿದ್ದ ಈ ಟೂರ್ನಮೆಂಟ್ ನ ಲೀಗ್ ಹಂತದ ರೋಚಕ ಹಣಾಹಣಿಗಳ ಬಳಿಕ,
ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಫ್ರೆಂಡ್ಸ್ ಬೆಂಗಳೂರು ತಂಡ 6.3 ಓವರ್ ಗಳಲ್ಲಿ 31 ರನ್ ಗಳಿಗೆ ಸರ್ವಪತನ ಕಂಡಿತ್ತು.ಸುಲಭದ ಗುರಿಯನ್ನು ಬೆನ್ನಟ್ಟಿದ ಜಾನ್ಸನ್ ರಿಯಲ್ ಫೈಟರ್ಸ್ ನ ಆಟಗಾರರು 5.5 ಓವರ್ ಗಳಲ್ಲಿ ಗುರಿ ಮುಟ್ಟಿತ್ತು.
ಪ್ರಥಮ ಪ್ರಶಸ್ತಿ ರೂಪದಲ್ಲಿ ಜಾನ್ಸನ್ ರಿಯಲ್ ಫೈಟರ್ಸ್ ತಂಡ 2 ಲಕ್ಷ,ದ್ವಿತೀಯ ಸ್ಥಾನಿ ಫ್ರೆಂಡ್ಸ್ ಬೆಂಗಳೂರು 1 ಲಕ್ಷ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆದರು.
ವೈಯಕ್ತಿಕ ಪ್ರಶಸ್ತಿ ರೂಪದಲ್ಲಿ ಬೆಸ್ಟ್ ಬ್ಯಾಟ್ಸ್‌ಮನ್‌ ಹರಿ,ಬೆಸ್ಟ್ ಬೌಲರ್ ವಿಮಲ್,ಬೆಸ್ಟ್ ಕೀಪರ್ ರಾಜಾ ಸಾಲಿಗ್ರಾಮ ಹಾಗೂ ಸರಣಿಯುದ್ದಕ್ಕೂ ಬ್ಯಾಟಿಂಗ್ ವಿಭಾಗದಲ್ಲಿ ಮಿಂಚಿದ ಕಿಝರ್ ಹಾಗೂ ಬೌಲಿಂಗ್ ನಲ್ಲಿ ಶ್ರೇಷ್ಟ ನಿರ್ವಹಣೆ ನೀಡಿದ ಚವನ್ ಸಾಲಿಗ್ರಾಮ ಸರಣಿಶ್ರೇಷ್ಟ ಪ್ರಶಸ್ತಿರೂಪದಲ್ಲಿ ದ್ವಿಚಕ್ರ ವಾಹನ ತಮ್ಮದಾಗಿಸಿಕೊಂಡರು.
ಅತ್ಯಂತ ಶಿಸ್ತುಬದ್ಧ ಹಾಗೂ ವ್ಯವಸ್ಥಿತವಾಗಿ ನಡೆದ ಈ ಪಂದ್ಯಾವಳಿಗೆ ಭಾರತ ಅಂತರಾಷ್ಟ್ರೀಯ ತಂಡದ ಮಾಜಿ ಕಪ್ತಾನ‌ ಅಜರುದ್ದೀನ್ ಸಹಿತ ಅನೇಗ ಗಣ್ಯರು ಭಾಗವಹಿಸಿದ್ದರು.
ಸಮಾರೋಪ ಸಮಾರಂಭದಲ್ಲಿ‌
ಶಾಸಕರಾದ ಕೆ‌.ಎಂ.ಶಿವಲಿಂಗೇ ಗೌಡ,ಉದ್ಯಮಿ ಹಾಗೂ ಟೂರ್ನಮೆಂಟ್ ನ ಮುಖ್ಯ ರೂವಾರಿ ಸಲಾವುದ್ದೀನ್ ಸಲ್ಮಾನ್ ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಿಸಿದರು.‌ನಟಿ ಪೂಜಾ ಮಿಹಿಂಡಾ,ಉದ್ಯಮಿ ಕಮ್ರಾನ್ ಫಾಸಿಲ್,ಎ.ಇ‌.ಇ.ನಟೇಶ್,
ಗುತ್ತಿಗೆದಾರರಾದ ಗಂಗಾಧರ್,ಕೃಷ್ಣ,ಸುಬ್ರಹ್ಮಣ್ಯ ಬಾಬು,ಕುಮಾರ್,ಸುರೇಶ್,ಮಂಜುನಾಥ್ ಹಾಗೂ ತಂಡದ ಸದಸ್ಯರು ಉಪಸ್ಥಿತರಿದ್ದರು.
M.Sports ನೇರ ಪ್ರಸಾರವನ್ನು ಬಿತ್ತರಿಸಿದರೆ,ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಕಾರ್ಯ ನಿರ್ವಹಿಸಿತ್ತು.ವೀಕ್ಷಕ ವಿವರಣೆ ವಿಭಾಗದಲ್ಲಿ ಶಿವನಾರಾಯಣ್ ಐತಾಳ್ ಕೋಟ,ಪ್ರಶಾಂತ್ ಅಂಬಲಪಾಡಿ ಹಾಗೂ ವಿನಯ್ ಉದ್ಯಾವರ ಸಹಕರಿಸಿದರೆ,ಡ್ಯಾನ್ಸಿಂಗ್ ಅಂಪಾಯರ್ ಮದನ್ ಮಡಿಕೇರಿ ಪ್ರೇಕ್ಷಕರನ್ನು ರಂಜಿಸಿದ್ದರು.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

20 + eight =

Latest news

ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿಧನ: ರಾಜಕೀಯದ ಜೊತೆಗೆ ಕ್ರೀಡಾ ಕ್ಷೇತ್ರಕ್ಕೂ ಅನನ್ಯ ಕೊಡುಗೆ

  ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿಧನ: ರಾಜಕೀಯದ ಜೊತೆಗೆ ಕ್ರೀಡಾ ಕ್ಷೇತ್ರಕ್ಕೂ ಅನನ್ಯ ಕೊಡುಗೆ ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಹಾಗೂ ಅಖಿಲ ಭಾರತ...

ಕ್ರೀಡಾ ಕ್ಷೇತ್ರಕ್ಕೆ ಶಿವನಾರಾಯಣ ಐತಾಳ್ ಕೋಟ ಕೊಡುಗೆ ಅಪಾರ-ಡಾ.ಕೃಷ್ಣಪ್ರಸಾದ್.ಕೆ

ಕ್ರೀಡಾ ಕ್ಷೇತ್ರಕ್ಕೆ ಶಿವನಾರಾಯಣ ಐತಾಳ್ ಕೋಟ ಕೊಡುಗೆ ಅಪಾರ-ಡಾ.ಕೃಷ್ಣಪ್ರಸಾದ್.ಕೆ ಶಿವ ಬಿಗ್ ಬ್ಯಾಶ್ ಲೀಗ್ ಗೆ ಅದ್ಧೂರಿಯ ಚಾಲನೆ ಕೋಟ-ಶಿವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಕೋಟ ಸಾಲಿಗ್ರಾಮ...

ಬೀಜಾಯ್ಸ್ ಗ್ರೂಪ್ ಆಯೋಜನೆಯಲ್ಲಿ ಬಿಸಿಸಿ ಚಾಂಪಿಯನ್ಸ್ ಕಪ್–2025

ಬೀಜಾಯ್ಸ್ ಗ್ರೂಪ್ ಆಯೋಜನೆಯಲ್ಲಿ ಬಿಸಿಸಿ ಚಾಂಪಿಯನ್ಸ್ ಕಪ್–2025 ಶಾರ್ಜಾದಲ್ಲಿ ಕಾರ್ಪೊರೇಟ್ ಕ್ರಿಕೆಟ್‌ಗೆ ಭರ್ಜರಿ ವೇದಿಕೆ ಬೀಜಾಯ್ಸ್ ಗ್ರೂಪ್ ಆಫ್ ಕಂಪನೀಸ್‌ಗಳ ಆಯೋಜನೆಯಲ್ಲಿ ಬಿಸಿಸಿ ಚಾಂಪಿಯನ್ಸ್ ಕಪ್–2025 ಕ್ರಿಕೆಟ್ ಟೂರ್ನಮೆಂಟ್...

ಭಾರತದ ‘ಬಿಗ್ ಗೇಮ್ ಪ್ಲೇಯರ್’ ಯುವರಾಜ್ ಸಿಂಗ್

ಭಾರತದ ‘ಬಿಗ್ ಗೇಮ್ ಪ್ಲೇಯರ್’ ಯುವರಾಜ್ ಸಿಂಗ್ ಭಾರತೀಯ ಕ್ರಿಕೆಟ್‌ನ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ಯುವರಾಜ್ ಸಿಂಗ್, ದೊಡ್ಡ ವೇದಿಕೆಗಳಲ್ಲಿ ತಂಡಕ್ಕೆ ಜಯ ತಂದುಕೊಡುವ ಶಕ್ತಿಶಾಲಿ ಪ್ರದರ್ಶನಗಳಿಂದ...
- Advertisement -spot_imgspot_img

ಹೊನಲುಬೆಳಕಿನ ರಾಜ್ಯಮಟ್ಟದ ‘K.M.S CUP ಸೀಸನ್–2’ ವಾಲಿಬಾಲ್ ಟೂರ್ನಿ ಡಿಸೆಂಬರ್ 29–30ರಂದು

ಹೊನಲುಬೆಳಕಿನ ರಾಜ್ಯಮಟ್ಟದ ‘K.M.S CUP ಸೀಸನ್–2’ ವಾಲಿಬಾಲ್ ಟೂರ್ನಿ ಡಿಸೆಂಬರ್ 29–30ರಂದು ಯಲಹಂಕ ತಾಲ್ಲೂಕಿನ ಕುದುರೆಗೆರೆ ಪ್ರದೇಶದಲ್ಲಿ ಕೆ.ಎಂ.ಶ್ರೀನಿವಾಸ್ ರವರ ಸ್ಮರಣಾರ್ಥ ಹಾಗೂ ಕೆ.ಎಂ. ಸುಬ್ರಮಣಿ ರವರ...

ಶಿವ ಬಿಗ್ ಬ್ಯಾಷ್ 2025: ಕೋಟ ಸಾಲಿಗ್ರಾಮದಲ್ಲಿ ಡಿಸೆಂಬರ್ 13-14ರಂದು

ಶಿವ ಬಿಗ್ ಬ್ಯಾಷ್ 2025: ಕೋಟ ಸಾಲಿಗ್ರಾಮದಲ್ಲಿ ಡಿಸೆಂಬರ್ 13-14ರಂದು ಶಿವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆ, ಕೋಟ ಸಾಲಿಗ್ರಾಮದ ಆಯೋಜನೆಯಲ್ಲಿ ನಡೆಯುವ ಪ್ರತಿಷ್ಠಿತ ಶಿವ ಬಿಗ್...

Must read

- Advertisement -spot_imgspot_img

You might also likeRELATED
Recommended to you