7.1 C
London
Tuesday, April 23, 2024
Homeಕ್ರಿಕೆಟ್ಅರಸೀಕೆರೆಯಲ್ಲಿ ಚವನ್ ಸು‌ನಾಮಿ-ಜಾನ್ಸನ್ ರಿಯಲ್ ಫೈಟರ್ಸ್ ಗೆ "ಚಮಕ್" ಇನಾಮು.

ಅರಸೀಕೆರೆಯಲ್ಲಿ ಚವನ್ ಸು‌ನಾಮಿ-ಜಾನ್ಸನ್ ರಿಯಲ್ ಫೈಟರ್ಸ್ ಗೆ “ಚಮಕ್” ಇನಾಮು.

Date:

Related stories

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...

ಇಂತಹ ಒಬ್ಬ ಆಟಗಾರನನ್ನು RCB ತಯಾರು ಮಾಡಿದೆಯೇ..?

ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ.. ಆದರೆ ಅವರೆಲ್ಲಾ ಐಪಿಎಲ್’ನಲ್ಲಿ...

RCB ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ..!

ನಾಲ್ಕೇ ನಾಲ್ಕು ದಿನಗಳ ಹಿಂದೆ..  4 ಓವರ್’ಗಳಲ್ಲಿ 23 ರನ್, ಒಂದು...
spot_imgspot_img
ಚಮಕ್ ಕ್ರಿಕೆಟರ್ಸ್ ಅರಸೀಕೆರೆ ಇವರ ಆಶ್ರಯದಲ್ಲಿ ಕ್ರೀಡಾ ಪ್ರೋತ್ಸಾಹಕರು,ಸಲೀನ ಟ್ರಾನ್ಸ್‌ಪೋರ್ಟ್‌ ನ ಮಾಲೀಕರಾದ ಸಲ್ಲವುದ್ದೀನ್ ಸಲ್ಮಾನ್ ಇವರ ದಕ್ಷ ಸಾರಥ್ಯದಲ್ಲಿ,ಹೆಚ್.ರಿಯಾಜ್ ಅಹಮ್ಮದ್,ಶ್ರೀಧರ್ ಹಾಗೂ ವೆಂಕಟೇಶ್ ಇವರ ಸ್ಮರಣಾರ್ಥವಾಗಿ ಅರಸೀಕೆರೆಯ ರೈಲ್ವೇ ಮೈದಾನದಲ್ಲಿ ಆಯೋಜಿಸಲಾಗಿದ್ದ,ಪ್ರತಿಷ್ಟಿತ  ಚಮಕ್ ಕಪ್-2021 ಉಡುಪಿಯ ಜಾನ್ಸನ್ ರಿಯಲ್ ಫೈಟರ್ಸ್ ತಂಡ ಜಯಿಸಿದೆ.
ರಾಜ್ಯದ ಬಲಿಷ್ಠ ತಂಡಗಳು ಭಾಗವಹಿಸಿದ್ದ ಈ ಟೂರ್ನಮೆಂಟ್ ನ ಲೀಗ್ ಹಂತದ ರೋಚಕ ಹಣಾಹಣಿಗಳ ಬಳಿಕ,
ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಫ್ರೆಂಡ್ಸ್ ಬೆಂಗಳೂರು ತಂಡ 6.3 ಓವರ್ ಗಳಲ್ಲಿ 31 ರನ್ ಗಳಿಗೆ ಸರ್ವಪತನ ಕಂಡಿತ್ತು.ಸುಲಭದ ಗುರಿಯನ್ನು ಬೆನ್ನಟ್ಟಿದ ಜಾನ್ಸನ್ ರಿಯಲ್ ಫೈಟರ್ಸ್ ನ ಆಟಗಾರರು 5.5 ಓವರ್ ಗಳಲ್ಲಿ ಗುರಿ ಮುಟ್ಟಿತ್ತು.
ಪ್ರಥಮ ಪ್ರಶಸ್ತಿ ರೂಪದಲ್ಲಿ ಜಾನ್ಸನ್ ರಿಯಲ್ ಫೈಟರ್ಸ್ ತಂಡ 2 ಲಕ್ಷ,ದ್ವಿತೀಯ ಸ್ಥಾನಿ ಫ್ರೆಂಡ್ಸ್ ಬೆಂಗಳೂರು 1 ಲಕ್ಷ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆದರು.
ವೈಯಕ್ತಿಕ ಪ್ರಶಸ್ತಿ ರೂಪದಲ್ಲಿ ಬೆಸ್ಟ್ ಬ್ಯಾಟ್ಸ್‌ಮನ್‌ ಹರಿ,ಬೆಸ್ಟ್ ಬೌಲರ್ ವಿಮಲ್,ಬೆಸ್ಟ್ ಕೀಪರ್ ರಾಜಾ ಸಾಲಿಗ್ರಾಮ ಹಾಗೂ ಸರಣಿಯುದ್ದಕ್ಕೂ ಬ್ಯಾಟಿಂಗ್ ವಿಭಾಗದಲ್ಲಿ ಮಿಂಚಿದ ಕಿಝರ್ ಹಾಗೂ ಬೌಲಿಂಗ್ ನಲ್ಲಿ ಶ್ರೇಷ್ಟ ನಿರ್ವಹಣೆ ನೀಡಿದ ಚವನ್ ಸಾಲಿಗ್ರಾಮ ಸರಣಿಶ್ರೇಷ್ಟ ಪ್ರಶಸ್ತಿರೂಪದಲ್ಲಿ ದ್ವಿಚಕ್ರ ವಾಹನ ತಮ್ಮದಾಗಿಸಿಕೊಂಡರು.
ಅತ್ಯಂತ ಶಿಸ್ತುಬದ್ಧ ಹಾಗೂ ವ್ಯವಸ್ಥಿತವಾಗಿ ನಡೆದ ಈ ಪಂದ್ಯಾವಳಿಗೆ ಭಾರತ ಅಂತರಾಷ್ಟ್ರೀಯ ತಂಡದ ಮಾಜಿ ಕಪ್ತಾನ‌ ಅಜರುದ್ದೀನ್ ಸಹಿತ ಅನೇಗ ಗಣ್ಯರು ಭಾಗವಹಿಸಿದ್ದರು.
ಸಮಾರೋಪ ಸಮಾರಂಭದಲ್ಲಿ‌
ಶಾಸಕರಾದ ಕೆ‌.ಎಂ.ಶಿವಲಿಂಗೇ ಗೌಡ,ಉದ್ಯಮಿ ಹಾಗೂ ಟೂರ್ನಮೆಂಟ್ ನ ಮುಖ್ಯ ರೂವಾರಿ ಸಲಾವುದ್ದೀನ್ ಸಲ್ಮಾನ್ ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಿಸಿದರು.‌ನಟಿ ಪೂಜಾ ಮಿಹಿಂಡಾ,ಉದ್ಯಮಿ ಕಮ್ರಾನ್ ಫಾಸಿಲ್,ಎ.ಇ‌.ಇ.ನಟೇಶ್,
ಗುತ್ತಿಗೆದಾರರಾದ ಗಂಗಾಧರ್,ಕೃಷ್ಣ,ಸುಬ್ರಹ್ಮಣ್ಯ ಬಾಬು,ಕುಮಾರ್,ಸುರೇಶ್,ಮಂಜುನಾಥ್ ಹಾಗೂ ತಂಡದ ಸದಸ್ಯರು ಉಪಸ್ಥಿತರಿದ್ದರು.
M.Sports ನೇರ ಪ್ರಸಾರವನ್ನು ಬಿತ್ತರಿಸಿದರೆ,ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಕಾರ್ಯ ನಿರ್ವಹಿಸಿತ್ತು.ವೀಕ್ಷಕ ವಿವರಣೆ ವಿಭಾಗದಲ್ಲಿ ಶಿವನಾರಾಯಣ್ ಐತಾಳ್ ಕೋಟ,ಪ್ರಶಾಂತ್ ಅಂಬಲಪಾಡಿ ಹಾಗೂ ವಿನಯ್ ಉದ್ಯಾವರ ಸಹಕರಿಸಿದರೆ,ಡ್ಯಾನ್ಸಿಂಗ್ ಅಂಪಾಯರ್ ಮದನ್ ಮಡಿಕೇರಿ ಪ್ರೇಕ್ಷಕರನ್ನು ರಂಜಿಸಿದ್ದರು.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

19 − 19 =