Categories
ಕ್ರಿಕೆಟ್

ಬೈಂದೂರು ಟ್ರೋಫಿ-2022 ರಾಜ್ಯ ಮಟ್ಟದ 60 ಗಜಗಳ ಟೆನಿಸ್‌ಬಾಲ್ ಕ್ರಿಕೆಟ್ ಪಂದ್ಯಾಟ

ಬೈಂದೂರು ಸ್ಪೋರ್ಟ್ಸ್ ಕ್ಲಬ್(ರಿ) ಬೈಂದೂರು ಇವರ ಆಶ್ರಯದಲ್ಲಿ  ಡಿಸೆಂಬರ್ 23,24 ಮತ್ತು 25 ರಂದು ರಾಜ್ಯಮಟ್ಟದ 60 ಗಜಗಳ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾಟ “ಬೈಂದೂರು ಟ್ರೋಫಿ-2022” ಆಯೋಜಿಸಲಾಗಿದೆ.
ಡಿಸೆಂಬರ್ ದಿನಾಂಕ 23 ರಿಂದ 24 ಮಧ್ಯಾಹ್ನದ ವರೆಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಆಟಗಾರರಿಗೆ(ಹೊರಗಿನ ತಾಲೂಕಿನವರಿಗೆ ಆಡಲು ಅವಕಾಶವಿರುವುದಿಲ್ಲ) ಮತ್ತು 24 ಮಧ್ಯಾಹ್ನದ ನಂತರ ರಾಜ್ಯಮಟ್ಟದ ತಂಡಗಳಿಗೆ ಅವಕಾಶ ವಿರುತ್ತದೆ.
ಒಟ್ಟು 25 ತಂಡಗಳಿಗೆ ಭಾಗವಹಿಸಲು ಅವಕಾಶವಿದ್ದು,ಪ್ರವೇಶ ಶುಲ್ಕ 15,000 ಹಾಗೂ ಪ್ರಥಮ ಬಹುಮಾನ 1,50,006 ರೂ ನಗದು,
ದ್ವಿತೀಯ ಬಹುಮಾನ 75,006 ರೂ ನಗದು ಬಹುಮಾನ ಸಹಿತ ಆಕರ್ಷಕ ಟ್ರೋಫಿ ಒಳಗೊಂಡಿದೆ.ವೈಯಕ್ತಿಕ ಶ್ರೇಷ್ಠ ನಿರ್ವಹಣೆ
ಪ್ರದರ್ಶಿಸಿದ ಆಟಗಾರರು ವಿಶೇಷ ಬಹುಮಾನಗಳನ್ನು ಪಡೆಯಲಿದ್ದಾರೆ.
M.Sports ಯೂ ಟ್ಯೂಬ್ ಚಾನೆಲ್ ನಲ್ಲಿ ಪಂದ್ಯಾಟದ ನೇರ ಪ್ರಸಾರ ಬಿತ್ತರಗೊಳ್ಳಲಿದೆ.
*ವಿ.ಸೂ-ಭಾಗವಹಿಸುವ 25 ತಂಡಗಳನ್ನು ಚೀಟಿ ಮುಖಾಂತರ ಆಯ್ಕೆ ಮಾಡಿ,ಒಂದು ತಂಡವನ್ನು ಉಚಿತ ಪ್ರವೇಶ ಶುಲ್ಕ ಮೂಲಕ ಆಡಿಸಲಾಗುತ್ತದೆ.*
ತಂಡಗಳ ನೋಂದಣಿಗೆ ಡಿಸೆಂಬರ್ 10 ಕೊನೆಯ ದಿನವಾಗಿದ್ದು,ಹೆಚ್ಚಿನ ಮಾಹಿತಿಗಾಗಿ,ಕಿರಣ್ ಬೈಂದೂರು-7829915202,
ರಾಜೇಶ್ ಆಚಾರ್ಯ-9916440337,
ಗುಂಡ ಬೈಂದೂರು -9632472867,ನಿತಿನ್ ಬೈಂದೂರು-8197415541 ಈ ಮೊಬೈಲ್ ನಂಬರ್ ಗಳನ್ನು ಸಂಪರ್ಕಿಸಬಹುದು.

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

1 × 3 =