Categories
ಕ್ರಿಕೆಟ್

ಮಾಸ್ಟರ್ ಟ್ರೋಫಿ-2021 ಗೆದ್ದು, ಚೊಚ್ಚಲ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಅವಿಘ್ನ ಸೃಷ್ಟಿ ಬೆಂಗಳೂರು.

ಬೆಂಗಳೂರಿನ ಯುವ ಕ್ರಿಕೆಟಿಗರಾದ ಕಾಶಿ ಹಾಗೂ ನಾಗ ಇವರ ಸಾರಥ್ಯದಲ್ಲಿ,
ಬೆಂಗಳೂರು ತುಮಕೂರು ರಸ್ತೆ ಹನುಮಂತೇಗೌಡನ ಪಾಳ್ಯದ ಲೋಬೋ ಮೈದಾನದಲ್ಲಿ ನಡೆದ ರಾಜ್ಯ ಮಟ್ಟದ ಪಂದ್ಯಾಕೂಟ “ಮಾಸ್ಟರ್ ಟ್ರೋಫಿ”ಯನ್ನು ಅವಿಘ್ನ ಸೃಷ್ಟಿ ಬೆಂಗಳೂರು ತಂಡ ಗೆದ್ದು ಕೊಂಡಿದೆ.
ಅವಿಘ್ನ ಸೃಷ್ಟಿ ಬೆಂಗಳೂರು ತಂಡದ ಆಟಗಾರರ ಸಂಘಟಿತ ಹೋರಾಟದ ಫಲವಾಗಿ ಫೈನಲ್ ನಲ್ಲಿ ಎಸ್.ಎಲ್.ವಿ ಬೆಂಗಳೂರು ತಂಡವನ್ನು ಸೋಲಿಸಿ ಆಕರ್ಷಕ ಮಾಸ್ಟರ್ ಟ್ರೋಫಿ-2021 ಸಹಿತ 50ಸಹಸ್ರ ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿತು. ದ್ವಿತೀಯ ಸ್ಥಾನ ಎಸ್.ಎಲ್.ವಿ ತಂಡ 25 ಸಹಸ್ರ ನಗದು ಸಹಿತ ಆಕರ್ಷಕ ಟ್ರೋಫಿ ಪಡೆದುಕೊಂಡರು.
ಟೂರ್ನಮೆಂಟ್ ನ ಬೆಸ್ಟ್ ಬ್ಯಾಟ್ಸ್‌ಮನ್‌ ಪ್ರಶಸ್ತಿ ಎಸ್.ಎಲ್.ವಿ ತಂಡದ ಕೆಂಚ ಪಾಲಾದರೆ,ಬೆಸ್ಟ್ ಬೌಲರ್  ಅವಿಘ್ನ ಸೃಷ್ಟಿಯ ವಿಶ್ವಾಸ್ ಹಾಗೂ ಪಂದ್ಯಾಟದುದ್ದಕ್ಕೂ ಶ್ರೇಷ್ಠ ನಿರ್ವಹಣೆ ನೀಡಿದ ಅವಿಘ್ನ ಸೃಷ್ಟಿ ತಂಡದ ಆದರ್ಶ್ ಸರಣಿ ಶ್ರೇಷ್ಟ ಗೌರವಕ್ಕೆ ಪಾತ್ರರಾದರು…
                ಕೆ.ಆರ್.ಕೆ.ಆಚಾರ್ಯ

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

four × 3 =