7.1 C
London
Tuesday, April 23, 2024
Homeಕ್ರಿಕೆಟ್ಪಿಎಂ ನಿಧಿಗೆ 50,000 ಡಾಲರ್ ದೇಣಿಗೆ ನೀಡಿದ ಆಸ್ಟ್ರೇಲಿಯಾ ಸ್ಟಾರ್ ಕ್ರಿಕೆಟಿಗ " ಪ್ಯಾಟ್ ಕಮಿನ್ಸ್...

ಪಿಎಂ ನಿಧಿಗೆ 50,000 ಡಾಲರ್ ದೇಣಿಗೆ ನೀಡಿದ ಆಸ್ಟ್ರೇಲಿಯಾ ಸ್ಟಾರ್ ಕ್ರಿಕೆಟಿಗ ” ಪ್ಯಾಟ್ ಕಮಿನ್ಸ್ “

Date:

Related stories

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...

ಇಂತಹ ಒಬ್ಬ ಆಟಗಾರನನ್ನು RCB ತಯಾರು ಮಾಡಿದೆಯೇ..?

ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ.. ಆದರೆ ಅವರೆಲ್ಲಾ ಐಪಿಎಲ್’ನಲ್ಲಿ...

RCB ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ..!

ನಾಲ್ಕೇ ನಾಲ್ಕು ದಿನಗಳ ಹಿಂದೆ..  4 ಓವರ್’ಗಳಲ್ಲಿ 23 ರನ್, ಒಂದು...
spot_imgspot_img
ನವದೆಹಲಿ: ಆಸ್ಟ್ರೇಲಿಯಾದ ಬೌಲರ್ ಪ್ಯಾಟ್ ಕಮಿನ್ಸ್ ‘ಪಿಎಂ ನಿಧಿಗೆ  ಬರೋಬ್ಬರಿ 50,000 ಡಾಲರ್ (37,35,640 ರೂ.) ದೇಣಿಗೆ ನೀಡಿದ್ದಾರೆ. ಭಾರತದಲ್ಲಿ ಕೋವಿಡ್-19 ಪ್ರಕರಣಗಳು ದಿನೆ ದಿನೆ ಹೆಚ್ಚುತ್ತಿದ್ದು, ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ ಎದುರಾಗಿದೆ ಈ ಹಿನ್ನೆಲೆಯಲ್ಲಿ ಸಾಕಷ್ಟು ಮಂದಿ ಕೊರೊನಾ ಸೋಂಕಿತರು ಬಲಿಯಾಗಿದ್ದಾರೆ. ಇದನ್ನು ಗಮನಿಸಿದ ಕಮಿನ್ಸ್ ನೆರವಿಗೆ ಮುಂದಾಗಿದ್ದಾರೆ.
ಟ್ವೀಟ್‌ ಮೂಲಕ ಸ್ವತಃ ಪ್ಯಾಟ್ ಕಮಿನ್ಸ್ ಈ ಸಂಗತಿಯನ್ನು ಹೇಳಿಕೊಂಡಿದ್ದಾರೆ. ಆಮ್ಲಜನಕದ ಸಿಲಿಂಡರ್‌ಗಳ ಕೊರತೆ ಎದುರಿಸುತ್ತಿರುವ ಭಾರತದ ಆಸ್ಪತ್ರೆಗಳಿಗೆ ಆಮ್ಲಜನಕದ ಸಿಲಿಂಡರ್‌ಗಳನ್ನು ಖರೀದಿಸಲು ಕಮಿನ್ಸ್ ಸಹಾಯಹಸ್ತ ಚಾಚಿರುವುದು ತುಂಬಾ ಸಂತೋಷದ ವಿಷಯ,  ಸದ್ಯ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕಮಿನ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಟ್ವೀಟ್ ಮಾಡಿರುವ ಕಮಿನ್ಸ್, ‘ನಾವು  ಪ್ರೀತಿಸುವ ದೇಶಗಳಲ್ಲಿ ಭಾರತವೂ ಒಂದು. ನಾನು ಎಲ್ಲೂ ನೋಡಿರದ  ವಿಶಾಲ ಹೃದಯದ ಪ್ರೀತಿ ನನಗೆ ಭಾರತದಲ್ಲಿ ಸಿಕ್ಕಿದೆ, ಇಂತಹ ಹೃದಯವಂತ  ಮನಸ್ಸಿನ ಜನ ಇಲ್ಲಿದ್ದಾರೆ. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಇಲ್ಲಿನ ಜನ ತೊಂದರೆ ಅನುಭವಿಸುತ್ತಿರುವುದನ್ನು ನೋಡುದಾಗ ನನಗೆ ತುಂಬಾ ನೋವಾಗಿದೆ ಎಂದು ಬರೆದುಕೊಂಡಿದ್ದಾರೆ.
ಟ್ವೀಟ್‌ನ ಮುಂದಿನ ಸಾಲುಗಳಲ್ಲಿ, ನಾನು ಒಬ್ಬ ಆಟಗಾರನಾಗಿ ಐಪಿಎಲ್‌ನಲ್ಲಿ ಕೋಟ್ಯಾಂತರ ಮಂದಿಯನ್ನು ತಲುಪಲು ಇರುವ ಅವಕಾಶವನ್ನು ನಾನು ಬಳಸಿಕೊಳ್ಳಲಿದ್ದೇನೆ. ನಾನು ಪಿಎಂ ನಿಧಿಗೆ ದೇಣಿಗೆ ನೀಡಿದ್ದೇನೆ. ನನ್ನ ಇತರ ಐಪಿಎಲ್ ಆಟಗಾರರಿಗೂ ನಾನು ದೇಣಿಗೆ ನೀಡಲು ಬೆಂಬಲ ನೀಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಯೊಬ್ಬರು ತಲೆಬಾಗಲೆ ಬೇಕು.
ಭಾರತ ದೇಶದಲ್ಲಿ ಕ್ರಿಕೆಟ್ ಅತಿ ಶ್ರೀಮಂತಿಕೆಯ ಆಟವಾಗಿದೆ ದಿನ ಬೇಳಗಾಗುವುದರಲ್ಲಿ ಅದೆಷ್ಟೋ ಮಂದಿ ಕ್ರಿಕೆಟಿಗರು ಶ್ರೀಮಂತರಾಗಿದ್ದಾರೆ ಇನ್ನೂ ಸಾಕಷ್ಟು ಮಂದಿ ಭಾರತದ ಸ್ಟಾರ್ ಕ್ರಿಕೆಟಿಗರು ಕೋಟಿಗಟ್ಟಲೆ ಹಣ ಮಾಡಿಕೊಂಡಿದ್ದಾರೆ ಇವರಲ್ಲಿ ಬೆರಳೆಣಿಕೆಯ ಕೇಲವರು ಸಮಾಜ ಸೇವೆಗೆ, ಕೊರೊನಾ ಸೊಂಕಿತರ ನೆರವಿಗೆ ಸಹಾಯ ಹಸ್ತ ಚಾಚಿದ್ದಾರೆ ಅದರೆ ಇವರಲ್ಲಿ ಕೇಲವರು ಕೋಟಿ ಕೋಟಿ ಸಂಪಾದಿಸಿದರು ಮಾನವೀಯತೆಯನ್ನು ಮರೆತು ತಮ್ಮ ಐಶಾರಾಮಿ ಬದುಕಿನಲ್ಲೆ ಕಳೆದು ಹೋಗಿದ್ದಾರೆ ಅದೇ ದುರಂತ…. ಅದೇನೆ ಇರಲಿ ಭಾರತಿಯ ಅಭಿಮಾನಿಗಳ ಪ್ರೀತಿಗೆ ಬೆಲೆಕೊಟ್ಟು ಕೊರೊನಾ ಸೋಂಕಿತರ ನೆರವಿಗೆ ನಿಂತ ಆಸ್ಟ್ರೇಲಿಯಾದ ಸ್ಟಾರ್ ಕ್ರಿಕೆಟಿಗ  “ಪ್ಯಾಟ್ ಕಮಿನ್ಸ್ ” ಗೆ ಪ್ರತಿಯೊಬ್ಬ ಭಾರತಿಯನ ಪರವಾಗಿ ದೊಡ್ಡದೊಂದು ಸಲಾಮ್
ಸುಧೀರ್ ವಿಧಾತ
ಸುಧೀರ್ ವಿಧಾತ
*- ಸುಧೀರ್ ವಿಧಾತ, ಭಾರತ್ ಕ್ರಿಕೆಟರ್ಸ್, ಶಿವಮೊಗ್ಗ*

Latest stories

LEAVE A REPLY

Please enter your comment!
Please enter your name here

4 − 2 =