ಕ್ರಿಕೆಟ್ಕರ್ನಾಟಕದ ಪಾಕೆಟ್ ಡೈನಮೈಟ್, ಆರ್‌ಸಿಬಿಗೆ ಬೇಡವಾದ ಆಟಗಾರ, ಮಹಾರಾಜ ಟ್ರೋಫಿಯಲ್ಲಿ ಆರ್ಭಟ...!!!

ಕರ್ನಾಟಕದ ಪಾಕೆಟ್ ಡೈನಮೈಟ್, ಆರ್‌ಸಿಬಿಗೆ ಬೇಡವಾದ ಆಟಗಾರ, ಮಹಾರಾಜ ಟ್ರೋಫಿಯಲ್ಲಿ ಆರ್ಭಟ…!!!

-

- Advertisment -spot_img

ಅಭಿನವ್ ಮನೋಹರ್. ಕರ್ನಾಟಕದ ವಿಸ್ಫೋಟಕ ದಾಂಡಿಗ. ಮೈದಾನಕ್ಕಿಳಿದರೆ ಸಿಕ್ಸರ್’ಗಳ ಸುರಿಮಳೆಗೈಯುವ ಪವರ್ ಹಿಟ್ಟರ್.

ಮಹಾರಾಜ ಟ್ರೋಫಿ ಕ್ರಿಕೆಟ್ ಟೂರ್ನಿ ಅಭಿನವ್ ಮನೋಹರ್ ಅವರ ಆರ್ಭಟಕ್ಕೆ ಸಾಕ್ಷಿಯಾಗುತ್ತಿದೆ. ಶಿವಮೊಗ್ಗ ಲಯನ್ಸ್ ತಂಡದ ಪರ ಆರ್ಭಟಿಸುತ್ತಿರುವ 30 ವರ್ಷದ ಅಭಿನವ್ ಮನೋಹರ್ ಈ ಬಾರಿ ಆಡಿರುವ ಮೊದಲ ಪಂದ್ಯಗಳಲ್ಲಿ ಬಾರಿಸಿರುವ ಸಿಕ್ಸರ್’ಗಳ ಸಂಖ್ಯೆ ಬರೋಬ್ಬರಿ 31.

ಟೂರ್ನಿಯಲ್ಲಿ ಗಳಿಸಿರುವ 329 ರನ್’ಗಳ ಪೈಕಿ 186 ರನ್’ಗಳು ಸಿಕ್ಸರ್’ಗಳ ಮೂಲಕವೇ ಬಂದಿರುವುದು ವಿಶೇಷ. ವಿಧ್ವಂಸಕ ಬ್ಯಾಟಿಂಗ್ ಫಾರ್ಮ್’ನಲ್ಲಿರುವ ಬಲಗೈ ಬ್ಯಾಟರ್ ಅಭಿನವ್ ಮನೋಹರ್ 188ರ ಸ್ಟ್ರೈಕ್’ರೇಟ್’ನಲ್ಲಿ ಬ್ಯಾಟ್ ಬೀಸುತ್ತಿದ್ದು, 31 ಸಿಕ್ಸರ್’ಗಳ ಜೊತೆ 8 ಬೌಂಡರಿಗಳನ್ನು ಬಾರಿಸಿದ್ದಾರೆ. ಶನಿವಾರ ನಡೆದ ಹುಬ್ಬಳ್ಳಿ ಟೈಗರ್ಸ್ ವಿರುದ್ಧದ ಪಂದ್ಯದಲ್ಲಿ ಅಕ್ಷರಶಃ ಅಬ್ಬರಿಸಿದ್ದ ಅಭಿನವ್ ಮನೋಹರ್ ಕೇವಲ 27 ಎಸೆತಗಳಲ್ಲಿ 9 ಸಿಡಿಲ ಸಿಕ್ಸರ್’ಗಳ ನೆರವಿನಿಂದ ಸಿಡಿಲಬ್ಬರದ 70 ರನ್ ಸಿಡಿಸಿ, ಟೂರ್ನಿಯಲ್ಲಿ ಶಿವಮೊಗ್ಗ ಲಯನ್ಸ್ ತಂಡಕ್ಕೆ ಮೊದಲ ಗೆಲುವು ತಂದು ಕೊಟ್ಟಿದ್ದರು. ಮೊದಲ ಆರೂ ಪಂದ್ಯಗಳನ್ನು ಸೋತಿದ್ದ ಶಿವಮೊಗ್ಗ ತಂಡ, 7ನೇ ಪಂದ್ಯದಲ್ಲಿ ಗೆಲುವು ಸಾಧಿಸಿದೆ.

ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಅಭಿನವ್ ಮನೋಹರ್ ಅಬ್ಬರ:
Vs ಮೈಸೂರು ವಾರಿಯರ್ಸ್: 52* ರನ್, 29 ಎಸೆತ; 2 ಸಿಕ್ಸರ್
Vs ಮಂಗಳೂರು ಡ್ರಾಗನ್ಸ್: 84* ರನ್, 34 ಎಸೆತ; 9 ಸಿಕ್ಸರ್
Vs ಬೆಂಗಳೂರು ಬ್ಲಾಸ್ಟರ್ಸ್: 5 ರನ್, 8 ಎಸೆತ
Vs ಹುಬ್ಬಳ್ಳಿ ಟೈಗರ್ಸ್: 17 ರನ್, 12 ಎಸೆತ; 2 ಸಿಕ್ಸರ್
Vs ಗುಲ್ಬರ್ಗ ಮಿಸ್ಟಿಕ್ಸ್: 55 ರನ್, 36 ಎಸೆತ; 5 ಸಿಕ್ಸರ್
Vs ಮೈಸೂರು ವಾರಿಯರ್ಸ್: 46 ರನ್, 29 ಎಸೆತ; 4 ಸಿಕ್ಸರ್
Vs ಹುಬ್ಬಳ್ಳಿ ಟೈಗರ್ಸ್: 70 ರನ್, 27 ಎಸೆತ; 9 ಸಿಕ್ಸರ್

30 ವರ್ಷದ ಅಭಿನವ್ ಮನೋಹರ್ ಐಪಿಎಲ್’ನಲ್ಲಿ ಗುಜರಾತ್ ಟೈಟನ್ಸ್ ಪರ ಆಡಿದ್ದರು. ಈ ಬಾರಿಯ ಮಹಾರಾಜ ಟ್ರೋಫಿಯಲ್ಲಿ ಅಭಿನವ್ ಅಬ್ಬರವನ್ನು ನೋಡಿದರೆ, ಐಪಿಎಲ್ ಮೆಗಾ ಹರಾಜಿನಲ್ಲಿ ಬೇಡಿಕೆ ಹೆಚ್ಚಾಗುವ ಸಾಧ್ಯತೆಯಿದೆ. ಆದರೆ ಕರ್ನಾಟಕದ ಆಟಗಾರರನ್ನು ನಿರಂತರವಾಗಿ ಕಡೆಗಣಿಸುತ್ತಾ ಬಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಅಭಿನವ್ ಮನೋಹರ್ ಅವರನ್ನು ಖರೀದಿಸಿಲಿದೆಯೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

LEAVE A REPLY

Please enter your comment!
Please enter your name here

10 − one =

Latest news

ಆರ್‌ಸಿಬಿ ಮಾಲೀಕತ್ವದ ಬದಲಾವಣೆ: ಬೆಂಗಳೂರಿನ ಉದ್ಯಮಿಗಳ ಹೊಸ ಅಧ್ಯಾಯ?

ಆರ್‌ಸಿಬಿ ಮಾಲೀಕತ್ವದ ಬದಲಾವಣೆ: ಬೆಂಗಳೂರಿನ ಉದ್ಯಮಿಗಳ ಹೊಸ ಅಧ್ಯಾಯ? ಐಪಿಎಲ್‌ನ ಅತ್ಯಂತ ಜನಪ್ರಿಯ ಮತ್ತು ವ್ಯಾಪಾರಿಕವಾಗಿ ಯಶಸ್ವಿಯಾದ ಫ್ರಾಂಚೈಸಿಗಳಲ್ಲಿ ಒಂದಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹೊಸ...

10 ಮಂದಿ ಹುಡುಗರ ಮಧ್ಯೆ ಒಬ್ಬಳು ಹೆಣ್ಣು ಹುಲಿ.. ಅವಳು ಬಂಗಾಳದ ಬಂಗಾರ..!

10 ಮಂದಿ ಹುಡುಗರ ಮಧ್ಯೆ ಒಬ್ಬಳು ಹೆಣ್ಣು ಹುಲಿ.. ಅವಳು ಬಂಗಾಳದ ಬಂಗಾರ..! ಪಶ್ಚಿಮ ಬಂಗಾಳದಲ್ಲಿ ಕ್ರಿಕೆಟ್ ಎಂದಾಕ್ಷಣ ಕಿವಿಗಪ್ಪಳಿಸುವ ಮೊದಲ ಹೆಸರು ‘ದಾದಾ’.. ಬಂಗಾಳದ ಮನೆ...

ಬ್ರಹ್ಮಾವರದ ಹೆಮ್ಮೆ – ವಿಶ್ವವಿಜೇತ ಜೆಮೀಮಾ ರೊಡ್ರಿಗಸ್ ಅವರ ಕೋಚ್ ಪ್ರಶಾಂತ್ ಶೆಟ್ಟಿ

ಬ್ರಹ್ಮಾವರದ ಹೆಮ್ಮೆ – ವಿಶ್ವವಿಜೇತ ಜೆಮೀಮಾ ರೊಡ್ರಿಗಸ್ ಅವರ ಕೋಚ್ ಪ್ರಶಾಂತ್ ಶೆಟ್ಟಿ ಇತ್ತೀಚೆಗೆ ನಡೆದ ಮಹಿಳೆಯರ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಪ್ರತಿಭಾವಂತ ಕ್ರಿಕೆಟರ್ ಜೆಮೀಮಾ...

ಲಾರೆನ್ಸ್ ಸಲ್ದಾನ: ಕೌಡೂರಿನ ಕ್ರೀಡೆ ಮತ್ತು ಕಲೆಗೆ ಹೊಸ ಉಸಿರು

  ಲಾರೆನ್ಸ್ ಸಲ್ದಾನ: ಕೌಡೂರಿನ ಕ್ರೀಡೆ ಮತ್ತು ಕಲೆಗೆ ಹೊಸ ಉಸಿರು ಇತ್ತೀಚೆಗೆ ನಡೆದ ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಭಾರತದ ಪ್ರತಿಭಾವಂತ ಬ್ಯಾಟ್ಸ್‌ವುಮನ್ ಜೆಮೀಮಾ ರೊಡ್ರಿಗಸ್ ಮಿಂಚಿ...
- Advertisement -spot_imgspot_img

ಬಂಟ್ವಾಳದಲ್ಲಿ ‘ಟೀಮ್ ಬ್ರದರ್ಸ್ ಬರೆಕ್ಕಾಡ್ ಸೀಸನ್–2’ ಕ್ರಿಕೆಟ್

ಬಂಟ್ವಾಳದಲ್ಲಿ ‘ಟೀಮ್ ಬ್ರದರ್ಸ್ ಬರೆಕ್ಕಾಡ್ ಸೀಸನ್–2’ ಕ್ರಿಕೆಟ್ “ಟೀಮ್ ಬ್ರದರ್ಸ್ ಬರೆಕ್ಕಾಡ್ ಸೀಸನ್ –2” ಕ್ರಿಕೆಟ್ ಟೂರ್ನಮೆಂಟ್ ಡಿಸೆಂಬರ್ 27 ಮತ್ತು 28ರಂದು ಬಂಟ್ವಾಳ ಮೈದಾನದಲ್ಲಿ ಜರುಗಲಿದೆ. ‘ಟೀಮ್ ಬ್ರದರ್ಸ್ ವತಿಯಿಂದ ಆಯೋಜಿಸಲಾದ...

ಜೈ ಭೀಮ್ ಟ್ರೋಫಿ – 2025: ಹೊಳೆನರಸೀಪುರದಲ್ಲಿ “ಫ್ರೆಂಡ್ಸ್ ಬೆಂಗಳೂರು” ತಂಡದ ವಿಜಯ ಕಿರೀಟ!

ಜೈ ಭೀಮ್ ಟ್ರೋಫಿ – 2025: ಹೊಳೆನರಸೀಪುರದಲ್ಲಿ “ಫ್ರೆಂಡ್ಸ್ ಬೆಂಗಳೂರು” ತಂಡದ ವಿಜಯ ಕಿರೀಟ! ಹೊಳೆನರಸೀಪುರದಲ್ಲಿ ನಡೆದ ಜೈ ಭೀಮ್ ಟ್ರೋಫಿ 2025 ಕ್ರಿಕೆಟ್ ಟೂರ್ನಿಯಲ್ಲಿ,...

Must read

- Advertisement -spot_imgspot_img

You might also likeRELATED
Recommended to you