16.4 C
London
Monday, May 13, 2024
Homeಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್ದುಬೈ: ನ. 12 ರಂದು ಅದ್ದೂರಿಯ ಯುನೈಟೆಡ್ ಕಾಪು ಟ್ರೋಫಿ ಸೀಸನ್ 4 ಕ್ರಿಕೆಟ್ ಟೂರ್ನಿ

ದುಬೈ: ನ. 12 ರಂದು ಅದ್ದೂರಿಯ ಯುನೈಟೆಡ್ ಕಾಪು ಟ್ರೋಫಿ ಸೀಸನ್ 4 ಕ್ರಿಕೆಟ್ ಟೂರ್ನಿ

Date:

Related stories

ನಿನ್ನ ಟೈಮ್ ಬಂದೇ ಬರುವುದು, ಹೀಗೇ ಆಡುತ್ತಿರು ಕರುಣ್..!

1996ರಲ್ಲಿ ಅರ್ಜುನ ರಣತುಂಗ ನಾಯಕತ್ವದ ಶ್ರೀಲಂಕಾ ತಂಡ ಏಕದಿನ ವಿಶ್ವಕಪ್ ಗೆದ್ದಾಗ...

ದುಡ್ಡಿನ ಮದದಲ್ಲಿ ಕೊಬ್ಬಿರುವ ಈ business tycoonಗಳಿಗೆ ದೇಶದ ಕ್ರಿಕೆಟ್ ಹೀರೊಗಳ ಮೇಲೆ ಗೌರವ ಇರಲು ಹೇಗೆ ಸಾಧ್ಯ..?

17 ವರ್ಷಗಳ ಐಪಿಎಲ್ ಚರಿತ್ರೆಯಲ್ಲಿ ಸಾವಿರಕ್ಕೂ ಹೆಚ್ಚು ಪಂದ್ಯಗಳು ನಡೆದಿವೆ. ಆ...

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...
spot_imgspot_img
ದುಬೈ-ಉಡುಪಿ, ದಕ್ಷಿಣ ಕನ್ನಡ ಮೂಲದ ಕ್ರೀಡಾ ಪ್ರೋತ್ಸಾಹಕರಾದ ಫೈಜಲ್ ಕಾಪು, ಆದಿಲ್ ಮುಲ್ಲಾ, ಶಾಫಿ,ಆಶಿಕ್ ಬೆಳಪು,  ಶಕೀರ್ ವಿಟ್ಲ ಇವರೆಲ್ಲರ ಸಂಯೋಜನೆಯಲ್ಲಿ ಸಮಾಜದಲ್ಲಿ “ಶಾಂತಿ-ಸೌಹಾರ್ದತೆಗಾಗಿ ಕ್ರಿಕೆಟ್”
ಅಭಿಯಾನದೊಂದಿಗೆ ಯಶಸ್ವಿ ಸತತ 4 ನೇ ಬಾರಿಗೆ  ಅದ್ಧೂರಿಯ “ಯುನೈಟೆಡ್ ಕಾಪು ಟ್ರೋಫಿ ಸೀಸನ್ 4” ಕ್ರಿಕೆಟ್ ಟೂರ್ನಿ ಯನ್ನು ಕರ್ನಾಟಕ ಮೂಲದ ತಂಡಗಳಿಗೆ ನವೆಂಬರ್ 12,2023 ರಂದು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅಜ್ಮಾನ್‌ ಓವಲ್ ನ ಹುಲ್ಲು ಹಾಸಿನ ಮೈದಾನ ಮತ್ತು  MCC2 ಕ್ರಿಕೆಟ್ ಮೈದಾನ ದಲ್ಲಿ ಆಯೋಜಿಸಲಿದೆ.
ದಿನದ ಪಂದ್ಯಾವಳಿಯು ಲೀಗ್ ಮತ್ತು ನಾಕೌಟ್ ಪಂದ್ಯಗಳನ್ನು ಒಳಗೊಂಡಿರುತ್ತದೆ. ಪ್ರತಿಷ್ಠಿತ
ಟ್ರೋಫಿಗಾಗಿ ಉಡುಪಿ ಫ್ರೆಂಡ್ಸ್, ಬ್ಲೂ ಫೋರ್ಸ್,ಕರಾವಳಿ ಆಟೋ ವರ್ಕ್ ಶಾಪ್,ಕಟೀಲ್ ಫ್ರೆಂಡ್ಸ್,ಕರ್ಮಾರ್ ಡಿ.ಜೆ ಚಾಲೆಂಜರ್ಸ್,ದುಬೈ ಬ್ರದರ್ಸ್,ಟೀಮ್ ಎಲಿಗೆಂಟ್ ಮತ್ತು ವಿದ್ವಾರ್ ಬಾಯ್ಸ್ ಈ ಎಂಟು ತಂಡಗಳ ಕದನವನ್ನು ಈ ಟೂರ್ನಮೆಂಟ್ನಲ್ಲಿ ವೀಕ್ಷಿಸಬಹುದು
ಯುನೈಟೆಡ್ ಕಾಪು ಟ್ರೋಫಿಯ ಪ್ರಶಸ್ತಿಯ ಒಟ್ಟು ಮೊತ್ತ AED 10000 ಮೌಲ್ಯದ್ದಾಗಿದ್ದು,
ಪಂದ್ಯಾವಳಿಯ ವಿಜೇತರು AED 5005 ಮತ್ತು ಟ್ರೋಫಿಯನ್ನು ಪಡೆಯಲಿದೆ. ರನ್ನರ್ಸ್ ಅಪ್  2505 AED ಮತ್ತು ಟ್ರೋಫಿಯನ್ನು ಪಡೆಯುತ್ತದೆ.
ಮ್ಯಾನ್ ಆಫ್ ದಿ ಮ್ಯಾಚ್, ಮ್ಯಾನ್ ಆಫ್ ದಿ ಸೀರೀಸ್, ಬೆಸ್ಟ್ ಬೌಲರ್ ಮತ್ತು ಬೆಸ್ಟ್ ಬ್ಯಾಟರ್ ಗಳಿಗೆ ಕೂಡಾ ಬಹುಮಾನವೂ ಇರುತ್ತದೆ.
 ಶೃಂಗೇರಿಯ ಪ್ರಸಿದ್ಧ ವೆರಿಕೋಸ್ ವೈನ್ ತಜ್ಞ ವೈದ್ಯರಾದ ವಾಸುದೇವ ಉರಾಳ ಇವರ “ಡಾ.ಉರಾಳ್ಸ್ ವೆರಿಕೋಸ್ ವೈನ್ಸ್ ಆಯುರ್ವೇದ ಕೇರ್” ಪಂದ್ಯಾವಳಿಯ ಮುಖ್ಯ ಪ್ರಾಯೋಜಕರಾಗಿರುತ್ತಾರೆ.ಡಾ.ವಾಸುದೇವ್ ಉರಾಳರು ಮೊತ್ತ ಮೊದಲ ಬಾರಿಗೆ ಪಂದ್ಯಾವಳಿಯ ಮುಖ್ಯ ಅತಿಥಿಯಾಗಿ ಭಾಗವಹಿಸಲು ದುಬೈಗೆ ಆಗಮಿಸಲಿದ್ದಾರೆ.
ಜೊತೆಯಲ್ಲಿ ಅತಿಥಿ ವೆಜಿಟೇರಿಯನ್ ರೆಸ್ಟೋರೆಂಟ್, ದುಬೈ ಸಹ ಪ್ರಾಯೋಜಕರಾಗಿರುತ್ತಾರೆ.
ಪಂದ್ಯಾವಳಿಯ ಇತರ ವಿವರಗಳಿಗಾಗಿ +971 50 628 8509  ,  + 971 52 799 9564 ಅಥವಾ + 971 52 829 1122  ಅನ್ನು ಸಂಪರ್ಕಿಸಬಹುದು.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

two × 1 =