ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್ದುಬೈ: ನ. 12 ರಂದು ಅದ್ದೂರಿಯ ಯುನೈಟೆಡ್ ಕಾಪು ಟ್ರೋಫಿ ಸೀಸನ್...

ದುಬೈ: ನ. 12 ರಂದು ಅದ್ದೂರಿಯ ಯುನೈಟೆಡ್ ಕಾಪು ಟ್ರೋಫಿ ಸೀಸನ್ 4 ಕ್ರಿಕೆಟ್ ಟೂರ್ನಿ

-

- Advertisment -spot_img
ದುಬೈ-ಉಡುಪಿ, ದಕ್ಷಿಣ ಕನ್ನಡ ಮೂಲದ ಕ್ರೀಡಾ ಪ್ರೋತ್ಸಾಹಕರಾದ ಫೈಜಲ್ ಕಾಪು, ಆದಿಲ್ ಮುಲ್ಲಾ, ಶಾಫಿ,ಆಶಿಕ್ ಬೆಳಪು,  ಶಕೀರ್ ವಿಟ್ಲ ಇವರೆಲ್ಲರ ಸಂಯೋಜನೆಯಲ್ಲಿ ಸಮಾಜದಲ್ಲಿ “ಶಾಂತಿ-ಸೌಹಾರ್ದತೆಗಾಗಿ ಕ್ರಿಕೆಟ್”
ಅಭಿಯಾನದೊಂದಿಗೆ ಯಶಸ್ವಿ ಸತತ 4 ನೇ ಬಾರಿಗೆ  ಅದ್ಧೂರಿಯ “ಯುನೈಟೆಡ್ ಕಾಪು ಟ್ರೋಫಿ ಸೀಸನ್ 4” ಕ್ರಿಕೆಟ್ ಟೂರ್ನಿ ಯನ್ನು ಕರ್ನಾಟಕ ಮೂಲದ ತಂಡಗಳಿಗೆ ನವೆಂಬರ್ 12,2023 ರಂದು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅಜ್ಮಾನ್‌ ಓವಲ್ ನ ಹುಲ್ಲು ಹಾಸಿನ ಮೈದಾನ ಮತ್ತು  MCC2 ಕ್ರಿಕೆಟ್ ಮೈದಾನ ದಲ್ಲಿ ಆಯೋಜಿಸಲಿದೆ.
ದಿನದ ಪಂದ್ಯಾವಳಿಯು ಲೀಗ್ ಮತ್ತು ನಾಕೌಟ್ ಪಂದ್ಯಗಳನ್ನು ಒಳಗೊಂಡಿರುತ್ತದೆ. ಪ್ರತಿಷ್ಠಿತ
ಟ್ರೋಫಿಗಾಗಿ ಉಡುಪಿ ಫ್ರೆಂಡ್ಸ್, ಬ್ಲೂ ಫೋರ್ಸ್,ಕರಾವಳಿ ಆಟೋ ವರ್ಕ್ ಶಾಪ್,ಕಟೀಲ್ ಫ್ರೆಂಡ್ಸ್,ಕರ್ಮಾರ್ ಡಿ.ಜೆ ಚಾಲೆಂಜರ್ಸ್,ದುಬೈ ಬ್ರದರ್ಸ್,ಟೀಮ್ ಎಲಿಗೆಂಟ್ ಮತ್ತು ವಿದ್ವಾರ್ ಬಾಯ್ಸ್ ಈ ಎಂಟು ತಂಡಗಳ ಕದನವನ್ನು ಈ ಟೂರ್ನಮೆಂಟ್ನಲ್ಲಿ ವೀಕ್ಷಿಸಬಹುದು
ಯುನೈಟೆಡ್ ಕಾಪು ಟ್ರೋಫಿಯ ಪ್ರಶಸ್ತಿಯ ಒಟ್ಟು ಮೊತ್ತ AED 10000 ಮೌಲ್ಯದ್ದಾಗಿದ್ದು,
ಪಂದ್ಯಾವಳಿಯ ವಿಜೇತರು AED 5005 ಮತ್ತು ಟ್ರೋಫಿಯನ್ನು ಪಡೆಯಲಿದೆ. ರನ್ನರ್ಸ್ ಅಪ್  2505 AED ಮತ್ತು ಟ್ರೋಫಿಯನ್ನು ಪಡೆಯುತ್ತದೆ.
ಮ್ಯಾನ್ ಆಫ್ ದಿ ಮ್ಯಾಚ್, ಮ್ಯಾನ್ ಆಫ್ ದಿ ಸೀರೀಸ್, ಬೆಸ್ಟ್ ಬೌಲರ್ ಮತ್ತು ಬೆಸ್ಟ್ ಬ್ಯಾಟರ್ ಗಳಿಗೆ ಕೂಡಾ ಬಹುಮಾನವೂ ಇರುತ್ತದೆ.
 ಶೃಂಗೇರಿಯ ಪ್ರಸಿದ್ಧ ವೆರಿಕೋಸ್ ವೈನ್ ತಜ್ಞ ವೈದ್ಯರಾದ ವಾಸುದೇವ ಉರಾಳ ಇವರ “ಡಾ.ಉರಾಳ್ಸ್ ವೆರಿಕೋಸ್ ವೈನ್ಸ್ ಆಯುರ್ವೇದ ಕೇರ್” ಪಂದ್ಯಾವಳಿಯ ಮುಖ್ಯ ಪ್ರಾಯೋಜಕರಾಗಿರುತ್ತಾರೆ.ಡಾ.ವಾಸುದೇವ್ ಉರಾಳರು ಮೊತ್ತ ಮೊದಲ ಬಾರಿಗೆ ಪಂದ್ಯಾವಳಿಯ ಮುಖ್ಯ ಅತಿಥಿಯಾಗಿ ಭಾಗವಹಿಸಲು ದುಬೈಗೆ ಆಗಮಿಸಲಿದ್ದಾರೆ.
ಜೊತೆಯಲ್ಲಿ ಅತಿಥಿ ವೆಜಿಟೇರಿಯನ್ ರೆಸ್ಟೋರೆಂಟ್, ದುಬೈ ಸಹ ಪ್ರಾಯೋಜಕರಾಗಿರುತ್ತಾರೆ.
ಪಂದ್ಯಾವಳಿಯ ಇತರ ವಿವರಗಳಿಗಾಗಿ +971 50 628 8509  ,  + 971 52 799 9564 ಅಥವಾ + 971 52 829 1122  ಅನ್ನು ಸಂಪರ್ಕಿಸಬಹುದು.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

sixteen + 1 =

Latest news

ಗುರುಗಣೇಶ್ ನೇಜಾರು ಫ್ರೆಂಡ್ಶಿಫ್ ಟ್ರೋಫಿ-2026 ಚಾಂಪಿಯನ್ಸ್

ಗುರುಗಣೇಶ್ ನೇಜಾರು ಫ್ರೆಂಡ್ಶಿಫ್ ಟ್ರೋಫಿ-2026 ಚಾಂಪಿಯನ್ಸ್ ಕುಂದಾಪುರ-ಇಲ್ಲಿನ ಫ್ರೆಂಡ್ಸ್ ಕೆದೂರು ಮೊತ್ತ ಮೊದಲ ಬಾರಿಗೆ ಆಯೋಜಿಸಿದ 60 ಗಜಗಳ ಮುಕ್ತ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾಟ ಫ್ರೆಂಡ್ಶಿಫ್ ಟ್ರೋಫಿ-2026...

ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿ ಸಂಘ (ರಿ) ಮತ್ತು ಜಿಲ್ಲಾ ಘಟಕ ಶಿವಮೊಗ್ಗ ವತಿಯಿಂದ ರಾಜ್ಯಮಟ್ಟದ ಕ್ರೀಡಾಕೂಟ 2026

ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿ ಸಂಘ (ರಿ) ಮತ್ತು ಜಿಲ್ಲಾ ಘಟಕ ಶಿವಮೊಗ್ಗ ವತಿಯಿಂದ ರಾಜ್ಯಮಟ್ಟದ ಕ್ರೀಡಾಕೂಟ 2026 ಕಂದಾಯ ಇಲಾಖೆ ಕರ್ನಾಟಕ ರಾಜ್ಯ ಗ್ರಾಮ...

ಮಣಿಪಾಲದಲ್ಲಿ ಅಂಡರ್-21 ಫ್ಲಡ್‌ಲೈಟ್ ಫುಟ್‌ಬಾಲ್ ಟೂರ್ನಿ – CHIVAS ಕಪ್ 2026

ಮಣಿಪಾಲದಲ್ಲಿ ಅಂಡರ್-21 ಫ್ಲಡ್‌ಲೈಟ್ ಫುಟ್‌ಬಾಲ್ ಟೂರ್ನಿ – CHIVAS CUP 2026 CHIVAS ಎಫ್‌ಸಿ ವತಿಯಿಂದ ಅಂಡರ್-21 ಫ್ಲಡ್‌ಲೈಟ್ ಟರ್ಫ್ ಲೀಗ್ ಟೂರ್ನಮೆಂಟ್ “CHIVAS ಕಪ್ 2026”...

ಸುರತ್ಕಲ್‌ನಲ್ಲಿ ಮತ್ತೆ ಕ್ರಿಕೆಟ್ ಸಂಭ್ರಮ – ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್-5

ಸುರತ್ಕಲ್‌ನಲ್ಲಿ ಮತ್ತೆ ಕ್ರಿಕೆಟ್ ಸಂಭ್ರಮ – ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್-5 ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ (ರಿ.) ಹಾಗೂ ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್...
- Advertisement -spot_imgspot_img

ಆಜ್ಮಾ ಟ್ರೋಫಿ – 2026 ಕ್ರಿಕೆಟ್ ಟೂರ್ನಿಗೆ ಭರ್ಜರಿ ಸಿದ್ಧತೆ

ಆಜ್ಮಾಟ್ರೋಫಿ – 2026 ಕ್ರಿಕೆಟ್ ಟೂರ್ನಿಗೆ ಭರ್ಜರಿ ಸಿದ್ಧತೆ ಪ್ರೆಂಡ್ಸ್ ನೇಜಾರ್ ಮತ್ತು ಇಸಾಕ್ ನೇಜಾರ್ ಇವರ ನೇತೃತ್ವದಲ್ಲಿ ನಡೆಯಲಿರುವ **ಆಜ್ಮಾ ಟ್ರೋಫಿ – 2026**...

ತೆಂಕಪೇಟೆ ಫ್ರೆಂಡ್ಸ್ ಉಡುಪಿ ಚಾಂಪಿಯನ್ – ಎಂಜಾಯ್ ಪ್ರೀಮಿಯರ್ ಲೀಗ್ 2026 ಯಶಸ್ವಿ ಸಮಾಪ್ತಿ

ತೆಂಕಪೇಟೆ ಫ್ರೆಂಡ್ಸ್ ಉಡುಪಿ ಚಾಂಪಿಯನ್ – ಎಂಜಾಯ್ ಪ್ರೀಮಿಯರ್ ಲೀಗ್ 2026 ಯಶಸ್ವಿ ಸಮಾಪ್ತಿ ಮಂಗಳೂರು: ಎಂಜಾಯ್ ಟೈಟನ್ಸ್ ಯುನೈಟೆಡ್ ಆಯೋಜಿಸಿದ್ದ ಜಿಎಸ್‌ಬಿ ಸಮುದಾಯದ ಪ್ರತಿಷ್ಠಿತ “ಎಂಜಾಯ್...

Must read

- Advertisement -spot_imgspot_img

You might also likeRELATED
Recommended to you