16.4 C
London
Tuesday, May 14, 2024
Homeಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್ಜುಲೈ 7 ಅನ್ನೋ ದಿನ ವರದಾನಯಾಯಿತೇ ಸ್ಪೋರ್ಟ್ಸ್ ಕನ್ನಡಕ್ಕೆ!!!

ಜುಲೈ 7 ಅನ್ನೋ ದಿನ ವರದಾನಯಾಯಿತೇ ಸ್ಪೋರ್ಟ್ಸ್ ಕನ್ನಡಕ್ಕೆ!!!

Date:

Related stories

ನಿನ್ನ ಟೈಮ್ ಬಂದೇ ಬರುವುದು, ಹೀಗೇ ಆಡುತ್ತಿರು ಕರುಣ್..!

1996ರಲ್ಲಿ ಅರ್ಜುನ ರಣತುಂಗ ನಾಯಕತ್ವದ ಶ್ರೀಲಂಕಾ ತಂಡ ಏಕದಿನ ವಿಶ್ವಕಪ್ ಗೆದ್ದಾಗ...

ದುಡ್ಡಿನ ಮದದಲ್ಲಿ ಕೊಬ್ಬಿರುವ ಈ business tycoonಗಳಿಗೆ ದೇಶದ ಕ್ರಿಕೆಟ್ ಹೀರೊಗಳ ಮೇಲೆ ಗೌರವ ಇರಲು ಹೇಗೆ ಸಾಧ್ಯ..?

17 ವರ್ಷಗಳ ಐಪಿಎಲ್ ಚರಿತ್ರೆಯಲ್ಲಿ ಸಾವಿರಕ್ಕೂ ಹೆಚ್ಚು ಪಂದ್ಯಗಳು ನಡೆದಿವೆ. ಆ...

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...
spot_imgspot_img
ಕೋಟ ರಾಮಕೃಷ್ಣ ಆಚಾರ್ಯ ಎನ್ನುವ ವ್ಯಕ್ತಿ ಕೇವಲ ಕ್ರೀಡಾ ಪ್ರೇಮಿಯಲ್ಲ. ರಾಜ್ಯ ಟೆನಿಸ್ ಬಾಲ್ ಕ್ರಿಕೆಟ್ ವೈಭವೀಕರಣದಲ್ಲಿ ಕೋಟ ರಾಮಕೃಷ್ಣ ಆಚಾರ್ಯ  ಒಂದು ದೊಡ್ಡ ವಿಶ್ವವಿದ್ಯಾಲಯ.
ಯಾರು ಏನೇ ಹೇಳಲಿ ಕ್ರಿಕೆಟ್‌ ಹಾಗೂ ಕ್ರೀಡಾ ಲೋಕ ನೋಡಿದ ಅಪ್ರತಿಮ ಬರಹಗಾರ ಕೆ. ಆರ್.ಕೆ.  ಇವರ ಸ್ಪೋರ್ಟ್ಸ್ ಕನ್ನಡದ ಲೇಖನಗಳನ್ನು ಓದುವುದೆಂದರೆ ಅದೇನೋ ಮನಸ್ಸಿಗೆ ಖುಷಿ.
ಜೂಲೈ 7 ಅನ್ನೋದು ಬಹುಶಃ ಕೋಟ ರಾಮಕೃಷ್ಣ ಆಚಾರ್ಯರಿಗೆ  ಹೇಳಿ ಮಾಡಿಸಿದ ದಿನ. ವಿಶ್ವ ಕ್ರಿಕೆಟ್‌ ಕಂಡ ಮಹಾನ್‌ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಹುಟ್ಟಿದ ದಿನವದು. ಅದೇನೋ ಕಾಕತಾಳೀಯ.  ಜುಲೈ 7, 2019 ರ ವಿಶೇಷ ದಿನದಂದು ಕೆ. ಆರ್.ಕೆ. ಸಾರಥ್ಯದ ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ಲೋಕಾರ್ಪಣೆಗೊಂಡಿತು. ಕ್ರೀಡೆಯ ಮೇಲೆ ತನಗೆ ಇರುವ ಪ್ರೀತಿಯನ್ನು ಸ್ಪೋರ್ಟ್ಸ್ ಕನ್ನಡ ಸಾಮಾಜಿಕ ಮಾಧ್ಯಮದ ಮೂಲಕ ಹಂಚಿಕೊಳ್ಳಲು ಪ್ರಯತ್ನಿಸಿ ಅದರಲ್ಲಿ ಯಶಸ್ವಿಯಾದರು. ಸ್ಪೋರ್ಟ್ಸ್ ಕನ್ನಡದ ಪ್ರಾಮುಖ್ಯತೆಯು ಮತ್ತಷ್ಟು ಬೆಳೆಯುತ್ತಲೇ ಇತ್ತು.
ಇದು ಎಷ್ಟರಮಟ್ಟಿಗೆ ಬೆಳೆಯಿತೆಂದರೆ, ಕೆಲವರಿಗಂತೂ ಇವರ ಪೋಸ್ಟ್ ಗಳನ್ನೂ ನೋಡದೆ ಇದ್ದರೆ ಅದೇನೋ ಮನಸ್ಸಿಗೆ ಅಸಮಾಧಾನ.  ಇದಾದ ಬಳಿಕ  ಈಗ ಮತ್ತೊಮ್ಮೆ  ಜುಲೈ 7, 2023 ರ ಶ್ರೇಷ್ಠ ದಿನದಂದು ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಚಾನೆಲ್ ಪ್ರಾರಂಭವಾಗಲಿದೆ. ಮತ್ತೆ ಅದೇ ಜೂಲೈ 7 ಎಂಬ ಈ  ಶುಭ ದಿನಾಂಕವು ಸ್ಪೋರ್ಟ್ಸ್ ಕನ್ನಡದ ಪಯಣದಲ್ಲಿ ಉಡುಗೊರೆಯಾಗಿ ಪ್ರಮುಖ ಪಾತ್ರವನ್ನು ವಹಿಸಲಿದೆ.
ಕ್ರೀಡೆಯ ಮೇಲೆ  ಡಿಜಿಟಲ್ ಮಾಧ್ಯಮದ ಪ್ರಭಾವ ಹೆಚ್ಚುತ್ತಿರುವ ಕಾರಣ ಹೊಸತೊಂದು ಅಭಿಯಾನವನ್ನು ಸ್ಪೋರ್ಟ್ಸ್ ಕನ್ನಡ ಆರಂಭಿಸುತ್ತಿದೆ. ಸ್ಪೋರ್ಟ್ಸ್ ಕನ್ನಡ ಮತ್ತು ಸ್ಟಾರ್ ವರ್ಟೆಕ್ಸ್  ಕಂಪನಿ ಪರಸ್ಪರ ಕೈಜೋಡಿಸಿವೆ. ಬಹುತೇಕ  ಕ್ರೀಡೆಯನ್ನು ದೊಡ್ಡದಾಗಿಸುವ ಗುರಿಯನ್ನು ಇವರುಗಳು ಹೊಂದಿದ್ದಾರೆ. ಕ್ರೀಡಾ ಮಹತ್ವಾಕಾಂಕ್ಷೆ ಉತ್ತೇಜಿಸಲು  ಸ್ಪೋರ್ಟ್ಸ್ ಕನ್ನಡ  ಪರಿಪೂರ್ಣ ವೇದಿಕೆಯಾಗಲು ಹೊರಟಿದೆ.
ಇನ್ನೇನು ಶುಕ್ತವಾರ ಜುಲೈ  7, 2023 ರ ಶುಭ ಮುಹೂರ್ತದಲ್ಲಿ ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಚಾನೆಲ್  ಬಿಡುಗಡೆಯಾಗಲಿದೆ. ಜುಲೈ 7 ಎಂಬ ದಿನ ಸ್ಪೋರ್ಟ್ಸ್ ಕನ್ನಡಕ್ಕೆ ಮತ್ತೆ ಅದೃಷ್ಟದ ದಿನವಾಗಲಿ ಹಾಗೂ ಈ  ಚಾನೆಲ್‌ ಗೆಲ್ಲಲಿ.
ಪ್ರಶಂಸೆ ಹಾಗು ಅಭಿನಂದನೆಗಳೊಂದಿಗೆ,
ಸುರೇಶ್ ಭಟ್ ಮೂಲ್ಕಿ
ಸ್ಪೋರ್ಟ್ಸ್ ಕನ್ನಡದ ಅಭಿಮಾನಿ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

20 − 8 =