18.1 C
London
Tuesday, April 30, 2024
Homeಕ್ರಿಕೆಟ್ದೇಶೀಯ ಟೆನಿಸ್ಬಾಲ್ ಕ್ರಿಕೆಟ್ ಇತಿಹಾಸದಲ್ಲೇ ದಾಖಲೆ ಸೃಷ್ಟಿಸಿದ ಫ್ರೆಂಡ್ಸ್ ಬೆಂಗಳೂರು ಕಪ್ ಯಾರ ಮಡಿಲಿಗೆ!!!

ದೇಶೀಯ ಟೆನಿಸ್ಬಾಲ್ ಕ್ರಿಕೆಟ್ ಇತಿಹಾಸದಲ್ಲೇ ದಾಖಲೆ ಸೃಷ್ಟಿಸಿದ ಫ್ರೆಂಡ್ಸ್ ಬೆಂಗಳೂರು ಕಪ್ ಯಾರ ಮಡಿಲಿಗೆ!!!

Date:

Related stories

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...

ಇಂತಹ ಒಬ್ಬ ಆಟಗಾರನನ್ನು RCB ತಯಾರು ಮಾಡಿದೆಯೇ..?

ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ.. ಆದರೆ ಅವರೆಲ್ಲಾ ಐಪಿಎಲ್’ನಲ್ಲಿ...

RCB ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ..!

ನಾಲ್ಕೇ ನಾಲ್ಕು ದಿನಗಳ ಹಿಂದೆ..  4 ಓವರ್’ಗಳಲ್ಲಿ 23 ರನ್, ಒಂದು...
spot_imgspot_img
ಬೆಂಗಳೂರು-ದೇಶೀಯ ಟೆನಿಸ್ಬಾಲ್ ಕ್ರಿಕೆಟ್ ಇತಿಹಾಸದಲ್ಲೇ ದಾಖಲೆ ನಿರ್ಮಿಸಿದ “ಫ್ರೆಂಡ್ಸ್ ಬೆಂಗಳೂರು ಕಪ್-2023” ಪಂದ್ಯಾಟದ ಕ್ವಾರ್ಟರ್ ಫೈನಲ್  ಹಂತಕ್ಕೆ ಬಲಿಷ್ಠ ತಂಡಗಳು ಪ್ರವೇಶಿಸಿದೆ.
ಶನಿವಾರ ರಾತ್ರಿ ಅನ್ಪ್ರೆಡಿಕ್ಟೇಬಲ್ ತಂಡವನ್ನು ಮಣಿಸಿದ ನ್ಯಾಶ್ ಬೆಂಗಳೂರು ಇಂದು ಮೊದಲ ಕ್ವಾರ್ಟರ್ ಫೈನಲ್ ನಲ್ಲಿ ಡ್ರೀಮ್ ಇಲೆವೆನ್ ಚೆನ್ನೈ ತಂಡವನ್ನು ಎದುರಿಸಲಿದೆ.
ಕರಾವಳಿಯ ಪ್ರತಿಭಾನ್ವಿತ ಯುವ ಆಟಗಾರರ ಸಮತೋಲಿತ ರಿಯಲ್ ಫೈಟರ್ಸ್ ತಂಡ ದ್ವಿತೀಯ ಕ್ವಾರ್ಟರ್ ಫೈನಲ್ ನಲ್ಲಿ ಕಾಮಾಕ್ಷಿ ರಾಹುಲ್ ಇಲೆವೆನ್ ತಂಡವನ್ನು ಎದುರಿಸಲಿದೆ.
ಶನಿವಾರ ರಾತ್ರಿ ಕುಮ್ಮಳ್ಳಿ ಪಠಾಣ್ ಇಲೆವೆನ್ ಛತ್ತೀಸ್ಗಢ ತಂಡಕ್ಕೆ ಆಘಾತಕಾರಿ ಸೋಲುಣಿಸಿದ ರಂಗ ಇಲೆವೆನ್ ಮೂರನೇ ಕ್ವಾರ್ಟರ್ ಫೈನಲ್ ನಲ್ಲಿ ಸಿಡಿಲಬ್ಬರದ ಹೊಡೆತಗಳ ಬ್ಯಾಟರ್ ಪಡೆ ಹೊಂದಿದ ಮೈಟಿ ಬೆಂಗಳೂರನ್ನು ಎದುರಿಸಲಿದೆ.
ಶನಿವಾರ ಜಾನ್ಸನ್ ಕುಂದಾಪುರ ತಂಡದ ವಿರುದ್ಧ ಎರಡೆರಡು ಸೂಪರ್ ಓವರ್ ಬಳಿಕ ಗೆದ್ದ ಜೈ ಕರ್ನಾಟಕ ಬೆಂಗಳೂರು ಇಂದು ನಾಲ್ಕನೇ ಕ್ವಾರ್ಟರ್ ಫೈನಲ್ ನಲ್ಲಿ,ಮೊನಚಾದ ಬೌಲಿಂಗ್ ಮತ್ತು ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ಸೂಪರ್ ಫ್ಯಾಷನ್ ಶ್ರೀಲಂಕಾ ವನ್ನು ಎದುರಿಸಲಿದೆ.
ಫ್ರೆಂಡ್ಸ್ ಬೆಂಗಳೂರು ಕಪ್ ಮೊದಲ ದಿನದಿಂದ ಇಂದಿನವರೆಗೂ ಎಲ್ಲಾ 49 ತಂಡಗಳು ಸಮಯಕ್ಕೆ ಸರಿಯಾಗಿ ತಮ್ಮ‌ ಪಂದ್ಯಗಳನ್ನಾಡಿದ್ದು,ಅತ್ಯಂತ ಶಿಸ್ತುಬದ್ಧವಾಗಿ ಪಂದ್ಯಾಟ ಸಾಗಿದ್ದು,ಎಲ್ಲಾ ತಂಡಗಳ ಸಹಕಾರಕ್ಕೆ ಟೂರ್ನಮೆಂಟ್ ನ ಪ್ರಮುಖ ನ ರೂವಾರಿ ರೇಣು ಗೌಡರು ಕೃತಜ್ಞತೆ ಸಲ್ಲಿಸಿದ್ದಾರೆ.
ಮಧ್ಯಾಹ್ನದ ಬಿರು ಬಿಸಿಲು,ರಾತ್ರಿಯ ಚುಮು ಚುಮು ಚಳಿಯನ್ನು ಲೆಕ್ಕಿಸಿದೆ,ಸಹಸ್ರಾರು ಪ್ರೇಕ್ಷಕರು ದಿನದ ಮೊದಲ ಪಂದ್ಯದಿಂದ ಕೊನೆಯ ಕ್ಷಣದ ವರೆಗೂ ಕದಲದೇ ಪಂದ್ಯಾಟ ವೀಕ್ಷಿಸುತ್ತಿದ್ದಾರೆ.ಎಸ್.ಆರ್.ಬಿ ಸ್ಪೋರ್ಟ್ಸ್ ಯೂ ಟ್ಯೂಬ್ ಚಾನೆಲ್ ಮೂಲಕ ಲಕ್ಷಾಂತರ ಮಂದಿ ಮನೆಯಲ್ಲೇ ಕುಳಿತು ಪಂದ್ಯಾಟದ ಸವಿಯನ್ನು‌ ಸವಿಯುತ್ತಿದ್ದಾರೆ.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

11 − 8 =