20.8 C
London
Sunday, May 19, 2024
Homeಕ್ರಿಕೆಟ್44+ ಹಿರಿಯ ಆಟಗಾರರ ಅಪರೂಪದ ಸಮಾಗಮ- ಸೃಷ್ಟಿ ಸೀನಿಯರ್ಸ್ ಕಪ್-2022 ನವೆಂಬರ್ 18,19 ಮತ್ತು 20...

44+ ಹಿರಿಯ ಆಟಗಾರರ ಅಪರೂಪದ ಸಮಾಗಮ- ಸೃಷ್ಟಿ ಸೀನಿಯರ್ಸ್ ಕಪ್-2022 ನವೆಂಬರ್ 18,19 ಮತ್ತು 20 ರಂದು

Date:

Related stories

ನಿನ್ನ ಟೈಮ್ ಬಂದೇ ಬರುವುದು, ಹೀಗೇ ಆಡುತ್ತಿರು ಕರುಣ್..!

1996ರಲ್ಲಿ ಅರ್ಜುನ ರಣತುಂಗ ನಾಯಕತ್ವದ ಶ್ರೀಲಂಕಾ ತಂಡ ಏಕದಿನ ವಿಶ್ವಕಪ್ ಗೆದ್ದಾಗ...

ದುಡ್ಡಿನ ಮದದಲ್ಲಿ ಕೊಬ್ಬಿರುವ ಈ business tycoonಗಳಿಗೆ ದೇಶದ ಕ್ರಿಕೆಟ್ ಹೀರೊಗಳ ಮೇಲೆ ಗೌರವ ಇರಲು ಹೇಗೆ ಸಾಧ್ಯ..?

17 ವರ್ಷಗಳ ಐಪಿಎಲ್ ಚರಿತ್ರೆಯಲ್ಲಿ ಸಾವಿರಕ್ಕೂ ಹೆಚ್ಚು ಪಂದ್ಯಗಳು ನಡೆದಿವೆ. ಆ...

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...
spot_imgspot_img
ಬೆಂಗಳೂರು-ಅವಿಘ್ನ ಸೃಷ್ಟಿ ಬೆಂಗಳೂರು ತಂಡದ ಆಶ್ರಯದಲ್ಲಿ ಅಕ್ಟೋಬರ್ ನಲ್ಲಿ ಆಯೋಜಿಸಲಾಗಿದ್ದ
44+ ಸೃಷ್ಟಿ ಸೀನಿಯರ್ಸ್ ಕಪ್ ಮಳೆಯಿಂದಾಗಿ ಮುಂದೂಲ್ಪಟ್ಟಿತ್ತು.ಇದೀಗ ಇಂದಿನಿಂದ ನವೆಂಬರ್ 18,19 ಮತ್ತು 20 ರಂದು ಬೆಂಗಳೂರಿನ ಮಾಕಳಿ ಸೃಷ್ಟಿ ಹುಲ್ಲುಹಾಸಿನ ಮೈದಾನದಲ್ಲಿ ಹೊನಲು ಬೆಳಕಿನಡಿಯಲ್ಲಿ ಮುಂದುವರಿಯಲಿದೆ.
 ಅಕ್ಟೋಬರ್ 12 ರಂದು ನಡೆದ ಮೊದಲ ದಿನದ ಪಂದ್ಯಗಳಲ್ಲಿ ಸೃಷ್ಟಿ ಬೆಂಗಳೂರು ತಂಡ ತಾನಾಡಿದ ಎರಡೂ ಪಂದ್ಯವನ್ನು ಜಯಿಸಿ ಕ್ವಾಲಿಫೈಯರ್ ಹಂತ ಪ್ರವೇಶಿಸಿದೆ‌.ಫ್ಯೂಚುರಾ ಇಲೆವೆನ್ ಒಂದು ಪಂದ್ಯವನ್ನು ಜಯಿಸಿ ಕ್ವಾಲಿಫೈಯರ್ ಪ್ರವೇಶ ಪಡೆದಿದೆ.
*ಮುಂದಿನ ಪಂದ್ಯಗಳ ಸಮಗ್ರ ವಿವರ*
ಬಿ ಗ್ರೂಪ್ ನಲ್ಲಿ ಆನಂದ್ ಇಲೆವೆನ್,ರಂಗ ಇಲೆವೆನ್,
ಆರ್.ಡಿ ಇಲೆವೆನ್, ಗುರುಬ್ರಹ್ಮ ಬೆಂಗಳೂರು ತಂಡಗಳ ನಡುವಿನ ಪಂದ್ಯಗಳು ನವೆಂಬರ್ 18 ರಂದು ನಡೆಯಲಿದೆ.
ಸಿ ಗ್ರೂಪ್ ನಲ್ಲಿ ಜೈ ಕರ್ನಾಟಕ ಬೆಂಗಳೂರು,ನಾಗಾ ಇಲೆವೆನ್ ಕೆ.ಆರ್.ಪುರಂ,ಜನಪ್ರಿಯ ಬೆಂಗಳೂರು ಮತ್ತು ವೈ.ಬಿ.ಸಿ ದಾಸರಹಳ್ಳಿ ತಂಡಗಳ ನಡುವಿನ ಪಂದ್ಯಗಳು ನವೆಂಬರ್ 19 ರಂದು ನಡೆಯಲಿದೆ.
ಡಿ ಗ್ರೂಪ್ ನಲ್ಲಿ ಐಡಿಯಲ್ ಶಿವಮೊಗ್ಗ,ಚಮಕ್ ಬೆಂಗಳೂರು,ಶ್ರೀ ಬೆಂಗಳೂರು ಮತ್ತು ಫ್ರೆಂಡ್ಸ್ ಬೆಂಗಳೂರು ತಂಡಗಳ ನಡುವಿನ ಪಂದ್ಯಗಳು ಹಾಗೂ ನಿರ್ಣಾಯಕ ಹಂತದ ಪಂದ್ಯಗಳು ನವೆಂಬರ್ 20  ರವಿವಾರದಂದು ನಡೆಯಲಿದೆ.
ಡಿಸೆಂಬರ್ 31-1978 ಒಳಗಡೆ ಜನಿಸಿದ ಆಟಗಾರರಿಗೆ ಮಾತ್ರ ಆಡಲು ಅವಕಾಶವಿದ್ದು,16 ತಂಡಗಳು ಭಾಗವಹಿಸುತ್ತಿದೆ.ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ಸಾಗಲಿರುವ ಈ ಪಂದ್ಯಾವಳಿಯ ಪ್ರಥಮ ಬಹುಮಾನ 50 ಸಾವಿರ,ದ್ವಿತೀಯ 25 ಸಾವಿರ,ತೃತೀಯ 15 ಸಾವಿರ ಮತ್ತು ಚತುರ್ಥ 10 ಸಾವಿರ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.
M.Sports ಯೂ ಟ್ಯೂಬ್ ಚಾನೆಲ್ ನಲ್ಲಿ ಪಂದ್ಯಾಟದ ನೇರ ಪ್ರಸಾರ ಬಿತ್ತರಗೊಳ್ಳಲಿದೆ.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

one × five =