
ವಿಜಯ್ ಹಜಾರೆ ಟ್ರೋಫಿ ನಾಕೌಟ್ ಪಂದ್ಯಗಳಿಗೆ ಕರ್ನಾಟಕಕ್ಕೆ ಆನೆಬಲ
ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯ ನಾಕೌಟ್ ಪಂದ್ಯಗಳಿಗೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದ್ದು, ಭಾರತ ತಂಡದಿಂದ ವಾಪಸ್ಸಾಗಿರುವ ವೇಗಿ ಪ್ರಸಿದ್ಧ್ ಕೃಷ್ಣ ಮತ್ತು ಎಡಗೈ ದಾಂಡಿಗ ದೇವದತ್ತ್ ಪಡಿಕ್ಕಲ್ ರಾಜ್ಯ ತಂಡಕ್ಕೆ ಮರಳಿದ್ದಾರೆ. ಪ್ರಸಿದ್ಧ್ ಕೃಷ್ಣ ಮತ್ತು ಪಡಿಕ್ಕಲ್ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನಾಡಿದ ಭಾರತ ತಂಡದಲ್ಲಿದ್ದರು.

ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯ ನಾಕೌಟ್ ಪಂದ್ಯಗಳು ಗುಜರಾತ್’ನ ವಡೋದರಲ್ಲಿ ಜನವರಿ 11ರಿಂದ 18ರವರೆಗೆ ನಡೆಯಲಿವೆ. ಜನವರಿ 11ರಂದು ನಡೆಯುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ನಾಯಕತ್ವದ ಕರ್ನಾಟಕ ತಂಡ ಬರೋಡ ತಂಡವನ್ನು ಎದುರಿಸಲಿದೆ.

ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಪ್ರಸಕ್ತ ಸಾಲಿನ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ 7 ಪಂದ್ಯಗಳಿಂದ 4 ಶತಕಗಳು ಹಾಗೂ ಒಂದು ಅರ್ಧಶತಕ ಸಹಿತ 614 ರನ್ ಗಳಿಸಿ ಅಮೋಘ ಫಾರ್ಮ್’ನಲ್ಲಿದ್ದಾರೆ. ವಿದರ್ಭ ತಂಡದ ಸಾರಥ್ಯ ವಹಿಸಿರುವ ಕರ್ನಾಟಕದ ಕರುಣ್ ನಾಯರ್ 5 ಇನ್ನಿಂಗ್ಸ್’ಗಳಿಂದ 4 ಶತಕಗಳ ಸಹಿತ 542 ರನ್ ಕಲೆ ಹಾಕಿದ್ದಾರೆ.
ವಿಜಯ್ ಹಜಾರೆ ನಾಕೌಟ್ ಪಂದ್ಯಗಳಿಗೆ ಕರ್ನಾಟಕ ತಂಡ
1. ಮಯಾಂಕ್ ಅಗರ್ವಾಲ್ (ನಾಯಕ)
2. ದೇವದತ್ತ್ ಪಡಿಕ್ಕಲ್
3. ನಿಕಿನ್ ಜೋಸ್
4. ಅನೀಶ್ ಕೆ.ವಿ
5. ಸ್ಮರಣ್ ಆರ್.
6. ಶ್ರೀಜಿತ್ ಕೆಎಲ್ (ವಿಕೆಟ್ ಕೀಪರ್)
7. ಅಭಿನವ್ ಮನೋಹರ್
8. ಶ್ರೇಯಸ್ ಗೋಪಾಲ್ (ಉಪವಾಯಕ)
9. ಹಾರ್ದಿಕ್ ರಾಜ್
10. ಪ್ರಸಿದ್ಧ್ ಕೃಷ್ಣ
11. ವಿ.ಕೌಶಿಕ್
12. ವಿದ್ಯಾಧರ್ ಪಾಟೀಲ್
13. ಅಭಿಲಾಷ್ ಶೆಟ್ಟಿ
14. ಪ್ರವೀಣ್ ದುಬೆ
15. ಲವನೀತ್ ಸಿಸೋಡಿಯಾ (ವಿಕೆಟ್ ಕೀಪರ್)
16. ಯಶೋವರ್ಧನ್ ಪರಂತಪ್




