12.6 C
London
Saturday, May 18, 2024
Homeಕ್ರಿಕೆಟ್ವೆಂಕಟರಮಣ ಟ್ರೋಫಿ-2020 ಸ್ವರ್ಣ ಖಚಿತ ಟ್ರೋಫಿ-ಶಿಸ್ತುಬದ್ಧ ಪಂದ್ಯಾವಳಿ

ವೆಂಕಟರಮಣ ಟ್ರೋಫಿ-2020 ಸ್ವರ್ಣ ಖಚಿತ ಟ್ರೋಫಿ-ಶಿಸ್ತುಬದ್ಧ ಪಂದ್ಯಾವಳಿ

Date:

Related stories

ನಿನ್ನ ಟೈಮ್ ಬಂದೇ ಬರುವುದು, ಹೀಗೇ ಆಡುತ್ತಿರು ಕರುಣ್..!

1996ರಲ್ಲಿ ಅರ್ಜುನ ರಣತುಂಗ ನಾಯಕತ್ವದ ಶ್ರೀಲಂಕಾ ತಂಡ ಏಕದಿನ ವಿಶ್ವಕಪ್ ಗೆದ್ದಾಗ...

ದುಡ್ಡಿನ ಮದದಲ್ಲಿ ಕೊಬ್ಬಿರುವ ಈ business tycoonಗಳಿಗೆ ದೇಶದ ಕ್ರಿಕೆಟ್ ಹೀರೊಗಳ ಮೇಲೆ ಗೌರವ ಇರಲು ಹೇಗೆ ಸಾಧ್ಯ..?

17 ವರ್ಷಗಳ ಐಪಿಎಲ್ ಚರಿತ್ರೆಯಲ್ಲಿ ಸಾವಿರಕ್ಕೂ ಹೆಚ್ಚು ಪಂದ್ಯಗಳು ನಡೆದಿವೆ. ಆ...

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...
spot_imgspot_img

“ವೆಂಕಟರಮಣ ಟ್ರೋಫಿ-2020
ಸ್ವರ್ಣ ಖಚಿತ ಟ್ರೋಫಿ-ಶಿಸ್ತುಬದ್ಧ ಪಂದ್ಯಾವಳಿ” ಜನವರಿ 3,4 ಹಾಗೂ 5 ರಂದು…

ಮೂರು ದಶಕಗಳಿಂದ ಸತತ ಸಾಮಾಜಿಕ,ಧಾರ್ಮಿಕ,ಶೈಕ್ಷಣಿಕ ಹಾಗೂ ಸಾಂಸ್ಕೃತಿಕ
ಕಾರ್ಯಗಳಲ್ಲಿ ಮಾತ್ರವಲ್ಲದೇ,ಆದರ್ಶ ನಾಯಕ ಪ್ರವೀಣ್‌ ಪಿತ್ರೋಡಿ ನಾಯಕತ್ವದಲ್ಲಿ ಕ್ರೀಡಾ ಲೋಕದಲ್ಲಿ ಅತ್ಯಂತ ಶಿಸ್ತುಬದ್ಧವಾಗಿ ತೊಡಗಿಸಿಕೊಂಡು
15 ಬಾರಿ ರಾಜ್ಯದ ಶಿಸ್ತಿನ ತಂಡ ಪ್ರಶಸ್ತಿ ಪಡೆದು ಇತಿಹಾಸ ಬರೆದ ಸಂಸ್ಥೆ “ವೆಂಕಟರಮಣ ಸ್ಪೋರ್ಟ್ಸ್&ಕಲ್ಚರಲ್ ಕ್ಲಬ್” ಪಿತ್ರೋಡಿ.

ಟೆನ್ನಿಸ್ ಕ್ರಿಕೆಟ್ ವಿನೂತನ ಪ್ರಯೋಗಗಳನ್ನು ನಡೆಸಿ,ಯಶಸ್ಸು ಕಂಡ ವೆಂಕಟರಮಣ ಸಂಸ್ಥೆ
ಈ ಬಾರಿ ರಾಜ್ಯ ಮಟ್ಟವಲ್ಲದೇ,ಜಿಲ್ಲಾ ಹಾಗೂ ಗ್ರಾಮೀಣ ಮಟ್ಟದ ಪ್ರತಿಭೆಗಳಿಗೂ ಸಮಾನ‌ ಅವಕಾಶ ಕಲ್ಪಿಸಿದ್ದು, ಜನವರಿ 3,4 ಹಾಗೂ 5 ಜನವರಿಯಂದು ಉದ್ಯಾವರ ಗ್ರಾಮ ಪಂಚಾಯತ್ ಮೈದಾನದಲ್ಲಿ
ಸತತ ಮೂರು ದಿನಗಳ ಕಾಲ ಹಗಲಿನಲ್ಲಿ ರಾಜ್ಯ ಮಟ್ಟದ “ವೆಂಕಟರಮಣ ಟ್ರೋಫಿ-2020” ಪಂದ್ಯಾವಳಿಯನ್ನು ಆಯೋಜಿಸಿದೆ.

ಈಗಾಗಲೇ 24 ತಂಡಗಳು ಪ್ರವೇಶಾತಿ ನೋಂದಾಯಿಸಿಕೊಂಡಿದ್ದು,
3 ಶುಕ್ರವಾರದಂದು ಗ್ರಾಮೀಣ ತಂಡಗಳು ಸ್ಪರ್ಧಿಸಿದರೆ,4 ರಂದು ಜಿಲ್ಲಾ ಮಟ್ಟದ ತಂಡಗಳು ಹಾಗೂ 5 ರವಿವಾರದಂದು ರಾಜ್ಯದ ಪ್ರತಿಷ್ಟಿತ ತಂಡಗಳು ಸೆಣಸಾಡಲಿದೆ.

ಸ್ವರ್ಣ ಖಚಿತ ಮಿನುಗುವ ಟ್ರೋಫಿಯೊಂದಿಗೆ ನಗದು ಬಹುಮಾನಗಳು.

ಪ್ರಥಮ‌ ಸ್ಥಾನಿ ತಂಡಕ್ಕೆ 1 ಲಕ್ಷ ನಗದು ಹಾಗೂ ದ್ವಿತೀಯ ಸ್ಥಾನಿ‌ ತಂಡಕ್ಕೆ 50 ಸಾವಿರ ನಗದು ಸಹಿತ,2017 ರ ಪಂದ್ಯಾವಳಿಯಲ್ಲಿ ಬೆಳ್ಳಿಯ ಟ್ರೋಫಿ ನೋಡಿ ದಾಖಲೆ ಬರೆದಿದ್ದ ಸಂಸ್ಥೆ,ಈ ಬಾರಿ
ಟೆನ್ನಿಸ್ ಬಾಲ್ ಇತಿಹಾಸದಲ್ಲಿಯೇ
ಇದೇ ಮೊದಲ ಬಾರಿಗೆ ವಿಶೇಷವಾಗಿ ವಿನ್ಯಾಸಗೊಳಿಸಲಾದ
ಸ್ವರ್ಣ ಖಚಿತ ಮಿನುಗುವ ಟ್ರೋಫಿಯನ್ನು ನೀಡಿ ವಿನೂತನ ಮೈಲಿಗಲ್ಲನ್ನು ಸ್ಥಾಪಿಸಲಿದೆ.
ಪಂದ್ಯಾವಳಿಯ ನೇರ ಪ್ರಸಾರವನ್ನು
ವೆಂಕಟರಮಣ ಸಂಸ್ಥೆಯ ಸದಸ್ಯರೇ ಖುದ್ದಾಗಿ ಪ್ರಪ್ರಥಮ ಬಾರಿಗೆ ಪ್ರಾಯೋಗಿಕವಾಗಿ ಯೂ ಟ್ಯೂಬ್
ಚಾನೆಲ್ ನಲ್ಲಿ ವೀಕ್ಷಿಸುವ ಸೌಲಭ್ಯವನ್ನು ಕಲ್ಪಿಸಿದ್ದಾರೆ.

ಶಿಸ್ತಿಗಾಗಿ ಕ್ರಿಕೆಟ್,ಸಮಾಜಕ್ಕಾಗಿ ತಂಡ

ಶಿಸ್ತಿಗಾಗಿ ಕ್ರಿಕೆಟ್, ಸಮಾಜಕ್ಕಾಗಿ ತಂಡ ಧ್ಯೇಯೋದ್ಧೇಶದಡಿ ಪಂದ್ಯಾವಳಿ ನಡೆಯಲಿದ್ದು,ವೆಂಕಟರಮಣ ಸಂಸ್ಥೆ
ಮಧ್ಯಮುಕ್ತ ಕ್ರಿಕೆಟ್ ಹಾಗೂ ಸಮಯಕ್ಕೆ ಹೆಚ್ಚಿನ‌ ಆದ್ಯತೆ ನೀಡುತ್ತಾ ಬಂದಿದ್ದು,
ಪ್ರತಿ ಪಂದ್ಯಕ್ಕೂ
ಡೋಪಿಂಗ್ ಟೆಸ್ಟ್ ನಡೆಸಲಿದ್ದು, ಯಾವುದೇ ಆಟಗಾರ ಮಧ್ಯ,ಮಾದಕ ದ್ರವ್ಯ ಸೇವಿಸಿದ್ದು ಕಂಡು ಬಂದಲ್ಲಿ ಟೂರ್ನಿಯಿಂದ ಹೊರಗಿರಿಸಲಾಗುತ್ತದೆ.ಭಾಗವಹಿಸುವ ತಂಡಗಳು ಪಂದ್ಯ ಪ್ರಾರಭವಾಗುವ 15 ನಿಮಿಷ ಮುಂಚಿತವಾಗಿ ಉಪಸ್ಥಿತಿ ತೋರ್ಪಡಿಸಬೇಕಾಗಿದೆ.
ಸಮಾರೋಪ ಸಮಾರಂಭದಲ್ಲಿ ಮಾದಕ ದ್ರವ್ಯ ನಿಷೇಧ ದ ಬಗ್ಗೆ ವಿಶೇಷ ಕಾರ್ಯಕ್ರಮ,ವಿವಿಧ ಕ್ಷೇತ್ರಗಳ‌ ಸಾಧಕರಿಗೆ ಸನ್ಮಾನ,ವಿ.ಎಸ್.ಸಿ ಬ್ಲಡ್ ಫಾರ್ ಲೈಫ್ ಸಂಸ್ಥೆಯ ರಕ್ತದಾನಿ ಸದಸ್ಯರುಗಳಿಗೆ ಹಾಗೂ ಉದ್ಯಾವರ ಕ್ರಿಕೆಟ್ ಪ್ರತಿಷ್ಟೆಯನ್ನು ಉಳಿಸಿದ ಹೆಮ್ಮೆಯ ತಂಡಗಳಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಲಿದೆ.ಉಡುಪಿ ಟೈಮ್ಸ್ ಹಾಗೂ ಸ್ಪೋರ್ಟ್ಸ್‌ ಕನ್ನಡ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಕಾರ್ಯ ನಿರ್ವಹಿಸಲಿದೆಯೆಂದು
ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಆರ್.ಕೆ.ಆಚಾರ್ಯ ಕೋಟ…

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

twelve − 12 =