ಸ್ಪೋರ್ಟ್ಸ್ಟೊರ್ಪೆಡೋಸ್ ಬ್ಯಾಡ್ಮಿಂಟನ್ ಮಹಾಸಂಗ್ರಾಮ: ಕುಂದಾಪುರ ಫೂಟ್ ವರ್ಕರ್ಸ್ ಪ್ರಥಮ, ಟೊರ್ಪೆಡೋಸ್ ...

ಟೊರ್ಪೆಡೋಸ್ ಬ್ಯಾಡ್ಮಿಂಟನ್ ಮಹಾಸಂಗ್ರಾಮ: ಕುಂದಾಪುರ ಫೂಟ್ ವರ್ಕರ್ಸ್ ಪ್ರಥಮ, ಟೊರ್ಪೆಡೋಸ್ ಟೈಟನ್ಸ್ ದ್ವಿತೀಯ

-

- Advertisment -spot_img
ಕ್ರೀಡಾಕ್ಷೇತ್ರದಲ್ಲಿ ಹೊಸತನದೊಂದಿಗೆ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸುತ್ತಿರುವ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನವೆಂಬರ್ 13 ಹಾಗೂ 14 ರಂದು ರಾಜ್ಯ,ರಾಷ್ಟ್ರ ಮಟ್ಟದಲ್ಲಿ ಮಿಂಚಿದ ಶಟ್ಲರ್ಸ್ಗಳನ್ನೊಳಗೊಂಡ ಟೊರ್ಪೆಡೋಸ್ ಬ್ಯಾಡ್ಮಿಂಟನ್ ಪಂದ್ಯಾಟವನ್ನು ಮಂಗಳೂರಿನ ಯು.ಎಸ್.ಮಲ್ಯ ಒಳಾಂಗಣ ಸ್ಟೇಡಿಯಂನಲ್ಲಿ ಆಯೋಜಿಸಿತ್ತು.
ಸ್ಪರ್ಧೆಯಲ್ಲಿ  ಒಟ್ಟು 12 ತಂಡಗಳು ಭಾಗವಹಿಸಿ ಪ್ರಸಿದ್ಧ ಉದ್ಯಮಿಗಳು, ಕ್ರೀಡಾ ಪ್ರೋತ್ಸಾಹಕರು ತಂಡದ ಮಾಲಕತ್ವವನ್ನು ವಹಿಸಿಕೊಂಡಿದ್ದರು.ಪ್ರತಿ ತಂಡದಲ್ಲಿ 18 ಜನ ಆಟಗಾರರಿದ್ದು ಅದರಲ್ಲಿ ನಾಲ್ಕು ಮಹಿಳಾ ಆಟಗಾರರಿಗೆ ಅವಕಾಶ ಕಲ್ಪಿಸಲಾಗಿತ್ತು.ಈ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ರಾಜ್ಯ, ರಾಷ್ಟ್ರ ಮಟ್ಟದ ಆಟಗಾರರು  ಸೇರಿದಂತೆ ಒಟ್ಟು 250ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿ ಈ ಕ್ರೀಡಾ ಸಂಗ್ರಾಮ ಹೊಸ  ಸಂಚಲನವನ್ನೇ ಸೃಷ್ಟಿಸಿತು.
ಈ ಬ್ಯಾಡ್ಮಿಂಟನ್ ಸ್ಪರ್ಧೆ ಬೇರೆ ಬೇರೆ ವಿಭಾಗಗಳಲ್ಲಿ ನಡೆದಿದ್ದು 11 ರಿಂದ 19 ವರ್ಷ ವಯೋಮಿತಿಯ ಬಾಲಕರು, 19ರಿಂದ 30 ವರ್ಷದವರ ಪುರುಷರು, 30ರಿಂದ 40 ವರ್ಷ ವಯೋಮಿತಿಯ ಪುರುಷರು ,ನಲವತ್ತರಿಂದ ಐವತ್ತು ವರ್ಷ ವಯೋಮಿತಿಯ ಪುರುಷರು ,50 ವರ್ಷ ಮೇಲ್ಪಟ್ಟ ಪುರುಷರು ಹಾಗೂ ಮಹಿಳೆಯರ ವಿಭಾಗದಲ್ಲಿಯೂ ಒಟ್ಟು ನಾಲ್ಕು ಪ್ರತ್ಯೇಕವಾಗಿ ಸ್ಪರ್ಧೆ ಆಯೋಜಿಸಿತ್ತು.13ರಂದು 12 ತಂಡಗಳಲ್ಲಿ 108 ಲೀಗ್ ಪಂದ್ಯಾಟವನ್ನು ನಡೆಸಿ 4 ತಂಡಗಳು ಅಂಕಪಟ್ಟಿಯಿಂದ ಹೊರಗುಳಿಯಿತು.ನವೆಂಬರ್ 14 ರಂದು ಕ್ವಾರ್ಟರ್ ಫೈನಲ್ ಹಣಾಹಣಿಯು 8 ತಂಡಗಳ ನಡುವೆ ನಡೆದು 4 ತಂಡಗಳು ಸೆಮಿ ಫೈನಲ್ ಹಂತವನ್ನು ಪ್ರವೇಶಿಸಿತು.
ಅತ್ಯುತ್ತಮ ಆಟಗಾರರಾಗಿ ವಿನ್ನರ್ಸ್ ಪಟ್ಟ ಹಾಗೂ ಎರಡು ಲಕ್ಷ ನಗದು ಬಹುಮಾನವನ್ನು ಮುಡಿಗೇರಿಸಿಕೊಂಡ ಡಾ. ಸಂದೀಪ್. ಜಿ ಮಾಲಕತ್ವದ ಕುಂದಾಪುರ ಫೂಟ್ ವರ್ಕರ್ಸ್ ತಂಡದ ಆಟಗಾರರಾದ ಗ್ಲ್ಯಾನಿಶ್ ಪಿಂಟೋ,ಗಗನ್ ದೀಪ್, ಯಶಸ್ ಗೌಡ, ಸಾಗರ್ ಜೈನ್, ಮನೋಜ್ ಶೆಣೈ, ಅಜಯ್ ಶೆಟ್ಟಿ, ರಾಯ್ ಪಿ.ಜೆ, ಶಮೀರ್, ರಾಜೇಶ್ ನಾಯರ್, ಪ್ರಕಾಶ್ ರಾವ್, ನೂರ್ ಹುಸೈನ್, ಕ್ಷಿತಿಜ್, ದೀಪಕ್ ,ಆಶ್ರಯ್.ಜಿ,
ಮೇಘನಾ ಅಮೀನ್,ಸ್ಪಂದನ.
ವಿ,ಪ್ರಿಯಾ ನಾಯಕ್,ಅನೀಶ್. ಎಚ್ ದೇವಾಡಿಗ ಮಿಂಚಿದ್ದರು.
ರನ್ನರ್ಸ್ ಟ್ರೋಫಿ ಹಾಗೂ ಒಂದು ಲಕ್ಷ ನಗದು ಬಹುಮಾನವನ್ನು ಪಡೆದುಕೊಂಡ ಗೌತಮ್ ಶೆಟ್ಟಿ ಮಾಲಕತ್ವದ ಟೊರ್ಪೆಡೋಸ್ ಟೈಟನ್ಸ್ ತಂಡದಲ್ಲಿ ಶಮಂತ್ ರಾವ್,ಅನಿರುಧ್ ಭಟ್,ಮಹೇಶ್ ಎಂ, ಆದರ್ಶ್ ಸಂಜೀವ್.ಪಿ,ಧಿರೇಶ್,ಪುನೀತ್,ರೇಣುಕಾ ಪ್ರಸಾದ್,ಅನಂತ್ ರಾಮದಾಸ್ ಪೈ,ಅರುಣ್,ಅಶೋಕ್ ಕುಮಾರ್,ರವಿ ಕುಮಾರ್,ಜೀವನ್,ಶ್ರೇಯಸ್.ವಿ, ಪ್ರಚಿತಾ.ಪಿ,ಆತ್ರೀಯಾ.ಎಸ್.ಪ್ರಭು,ರಶ್ಮಿ ಶೆಟ್,ನಾಗಮಣಿ.ಎಂ.ಜಿ ಸೆಣಸಾಡಿದ್ದರು.
ಫೈನಲ್ ಸುತ್ತಿಗೆ ಪ್ರವೇಶಿಸಲಾಗದಿದ್ದರೂ ತಮ್ಮ ಅತ್ಯುತ್ತಮ ಕ್ರೀಡಾ ಪ್ರದರ್ಶನವನ್ನಿತ್ತು ದೇವೇಂದ್ರ ಶೆಟ್ಟಿ ನಾಯಕತ್ವದ  ಮಂಗಳೂರು ಸ್ಟೋಕರ್ಸ್ ತಂಡದ ಆಟಗಾರರಾದ ಸಚಿನ್ ಜೈಸನ್,ಆರುಷ್ ಪತ್ರಾವೋ,ವರುಣ್ ಗೌಡ,ವಿಶಾಲ್ ನಾಯ್ಕ್,ರಿಯಾಝ್ ಅಹ್ಮದ್,ಅಶ್ರಫ್,ತಸ್ಲೀಮ್,ರವೀಶ್ ಕುಮಾರ್,ದಿನೇಶ್ ಆಚಾರ್ಯ,ಪ್ರವೀಣ್ ಕುಮಾರ್.ಎಂ,ರಫೀಕ್, ಸಹರ್ಷ್.ಎಸ್ ಪ್ರಭು,ಮಹನ್,ನಿಧಿಶ್ರೀ,ಧನಲಕ್ಷ್ಮೀ,ಕವಿತಾ ಕಂಬರ್,ವಿಜೇತ.ಕೆ ಹಾಗೂ ಗಣೇಶ್ ಕಾಮತ್ ನಾಯಕತ್ವದ ಸ್ಪೋರ್ಟ್ಸ್ ಡೆನ್ ಸ್ಮ್ಯಶರ್ಸ್  ತಂಡದ ಆಟಗಾರರಾದ ಅಬಿ ಅಮುದಾನ್,ನೌಶಾದ್ ಅಬ್ದುಲ್ಲ, ಸಾಯಿಕುಮಾರ್,ಒಮರ್,ರಯೀಝ್,ರೋಹಿತ್ ಎಂ.ಕೆ,ಮಹೇಶ್ ಪ್ರಭು,ಪ್ರದೀಪ್ ಭಟ್,ಕುಮಾರ್ ದೇವಾಡಿಗ, ಅಯುಬ್ ಸಿ.ಕೆ,ಹರೀಶ್.ಬಿ.ಎ,ತುಷಾರ್, ತನ್ಮಯ್ ಪ್ರಭು,ಅಂಜಲಿ ದಿಲಿಷ್, ಕಶ್ವಿ,ಅದಿತಿ, ಚಂಚಲಾಕ್ಷಿ ಸೆಮಿ ಫೈನಲ್ ಹಂತದವರೆಗೂ ತಲುಪಿ ತಮ್ಮ ಆತ್ಯದ್ಭುತ ಆಟದಿಂದ ಪ್ರೇಕ್ಷಕರ ಮೆಚ್ಚುಗೆ ಪಡೆದರು.
ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ  ಸವ್ಯಸಾಚಿ ತಂಡದ ಮಾಲಕರಾದ ವಿಜಯ್ ಹೆಗ್ಡೆ,ರೂಪೇಶ್ ಶೆಟ್ಟಿ,ಝರಾ ರಾಯಲ್ಸ್ ತಂಡದ ಹಾಗೂ ಅಲುಮಝೈನ್ ಗ್ರೂಪ್ಸ್ ನ  ಮುಖ್ಯಸ್ಥರಾದ ಜಹೀರ್ ಝಕ್ರೀಯಾ, ಝರಾ ಕನ್ವೆನ್ಷನ್ ಸೆಂಟರ್ ನ ಮುಖ್ಯಸ್ಥರಾದ ಅಬೂಬಕ್ಕರ್,ಜಿ.ಡಿ ಗ್ರೂಪ್ಸ್ ನ ರೋಷನ್,ಸದಾನಂದ ನಾವಡ,ಈ ಪಂದ್ಯಾವಳಿಯ ಸಂಯೋಜಕರಾದ ಗಣೇಶ್. ವಿ ಕಾಮತ್,ತಾಂತ್ರಿಕ ಮುಖ್ಯಸ್ಥರಾದ ರಿಯಾಝ್ ಅಹಮ್ಮದ್,ಕುಳಾಯಿ ಫೌಂಡೇಶನ್ ನ ಮುಖ್ಯಸ್ಥರಾದ ಪ್ರತಿಭಾ ಕುಳಾಯಿ,ಟೊರ್ಪೆಡೋಸ್  ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾದ ಗೌತಮ್ ಶೆಟ್ಟಿ ಉಪಸ್ಥಿತಿ ವಹಿಸಿದ್ದರು.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

14 + fifteen =

Latest news

ಶ್ರೀ ಜಲವಿನಾಯಕ ಟ್ರೋಫಿ 2026: ಕ್ರಿಕೆಟ್ ಪಂದ್ಯಾವಳಿಗೆ ಸಜ್ಜಾದ ಹುಣಸವಳ್ಳಿ

ಶ್ರೀ ಜಲವಿನಾಯಕ ಟ್ರೋಫಿ 2026: ಕ್ರಿಕೆಟ್ ಪಂದ್ಯಾವಳಿಗೆ ಸಜ್ಜಾದ ಹುಣಸವಳ್ಳಿ ಹುಣಸವಳ್ಳಿ ಹಾಗೂ ಕುರುವಳ್ಳಿ ಪೋಸ್ಟ್, ತೀರ್ಥಹಳ್ಳಿ ತಾಲೂಕು ಕ್ರೀಡಾಭಿಮಾನಿಗಳಿಗೆ ಸಂತಸದ ಸುದ್ದಿ. ಆಗುಂಬೆ ಮತ್ತು ಮುತ್ತೂರು...

ಭಾರತೀಯ ತಂಡದಲ್ಲಿ ಸ್ಥಾನಕ್ಕಾಗಿ ಹೋರಾಡಿ ಹೀರೋ ಆದ ಸಂಜು ಸ್ಯಾಮ್ಸನ್ ಕಥೆ

  ಭಾರತೀಯ ತಂಡದಲ್ಲಿ ಸ್ಥಾನಕ್ಕಾಗಿ ಹೋರಾಡಿ ಹೀರೋ ಆದ ಸಂಜು ಸ್ಯಾಮ್ಸನ್ ಕಥೆ ಕ್ರಿಕೆಟ್ ಜೀವನದಲ್ಲಿ ಕೆಲ ಕ್ಷಣಗಳು ಆಟಗಾರನ ಜೀವನವನ್ನೇ ಬದಲಾಯಿಸುತ್ತವೆ. ಆ ಕ್ಷಣಗಳು ನೋವು,...

ಭಾರತ ವಿಶ್ವ ಚಾಂಪಿಯನ್: ಟಿ20 ವಿಶ್ವಕಪ್ ಮತ್ತೆ ಭಾರತಕ್ಕೇ!

  ಭಾರತ ವಿಶ್ವ ಚಾಂಪಿಯನ್: ಟಿ20 ವಿಶ್ವಕಪ್ ಮತ್ತೆ ಭಾರತಕ್ಕೇ! ಟೀಮ್ ಇಂಡಿಯಾ ಇತಿಹಾಸ ಸೃಷ್ಟಿಸಿದೆ. ಹಾಲಿ ಚಾಂಪಿಯನ್ ಆಗಿ ಟಿ20 ವಿಶ್ವಕಪ್ ಉಳಿಸಿಕೊಳ್ಳುವುದರ ಜೊತೆಗೆ, ತವರು ನೆಲದಲ್ಲಿ...

ಭಾರತಕ್ಕೆ ಮೂರನೇ ಟಿ20 ವಿಶ್ವಕಪ್ ಕಿರೀಟ – ಐತಿಹಾಸಿಕ ಸಾಧನೆ

ಭಾರತಕ್ಕೆ ಮೂರನೇ ಟಿ20 ವಿಶ್ವಕಪ್ ಕಿರೀಟ – ಐತಿಹಾಸಿಕ ಸಾಧನೆ ಕ್ರಿಕೆಟ್ ಲೋಕದಲ್ಲಿ ಮತ್ತೊಮ್ಮೆ ಇತಿಹಾಸ ನಿರ್ಮಿಸಿದ Team India ತಂಡವು ಟಿ20 ವಿಶ್ವಕಪ್‌ನಲ್ಲಿ ತನ್ನ ಪ್ರಭಾವವನ್ನು...
- Advertisement -spot_imgspot_img

NIPM ಕ್ರಿಕೆಟ್ ಎಕ್ಸ್‌ಪ್ಲೋಶನ್ ಕಾರ್ಪೊರೇಟ್ ಟೂರ್ನಮೆಂಟ್ 2026: NMPA ಚಾಂಪಿಯನ್

NIPM ಕ್ರಿಕೆಟ್ ಎಕ್ಸ್‌ಪ್ಲೋಶನ್ ಕಾರ್ಪೊರೇಟ್ ಟೂರ್ನಮೆಂಟ್ 2026: NMPA ಚಾಂಪಿಯನ್ **New Mangalore Port Authority (ಎನ್‌ಎಂಪಿಎ)** ತಂಡವು **NIPM Cricket Explosion Corporate Cricket Tournament...

ಮಂಗಳೂರಿನಲ್ಲಿ ಕಾರ್ಪೊರೇಟ್ ಕ್ರಿಕೆಟ್ ಹಬ್ಬಕ್ಕೆ ಚಾಲನೆ; NIPM ಮಂಗಳೂರು ಚಾಪ್ಟರ್‌ನಿಂದ “ಕ್ರಿಕೆಟ್ ಎಕ್ಸ್‌ಪ್ಲೋಷನ್” ಟೂರ್ನಿ

ಮಂಗಳೂರಿನಲ್ಲಿ ಕಾರ್ಪೊರೇಟ್ ಕ್ರಿಕೆಟ್ ಹಬ್ಬಕ್ಕೆ ಚಾಲನೆ NIPM ಮಂಗಳೂರು ಚಾಪ್ಟರ್‌ನಿಂದ “ಕ್ರಿಕೆಟ್ ಎಕ್ಸ್‌ಪ್ಲೋಷನ್” ಟೂರ್ನಿ ಮಂಗಳೂರು: ಮಾನವ ಸಂಪನ್ಮೂಲ ಕ್ಷೇತ್ರದ ಪ್ರಮುಖ ಸಂಘಟನೆಯಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪರ್ಸನಲ್ ಮ್ಯಾನೇಜ್‌ಮೆಂಟ್ (NIPM)...

Must read

- Advertisement -spot_imgspot_img

You might also likeRELATED
Recommended to you