ಕ್ರಿಕೆಟ್ಬದುಕು ಕೊಡುವ ಅಚ್ಚರಿಗಳಿಗೆ ಸಾಕ್ಷಿ ಈ ಇಬ್ಬರು ಜೊತೆಗಾರರು..!

ಬದುಕು ಕೊಡುವ ಅಚ್ಚರಿಗಳಿಗೆ ಸಾಕ್ಷಿ ಈ ಇಬ್ಬರು ಜೊತೆಗಾರರು..!

-

- Advertisment -spot_img

ಬದುಕು ಕೊಡುವ ಅಚ್ಚರಿಗಳಿಗೆ ಸಾಕ್ಷಿ ಈ ಇಬ್ಬರು ಜೊತೆಗಾರರು..!

ಅದೊಂದು ಸಿಂಹದಮರಿ ಸೈನ್ಯ.. ಅದಕ್ಕೊಬ್ಬ ನಾಯಕ.. ಅವನು ಕಿಡಿ ಕಿಚ್ಚು.. ಅವನ ತಂಡ ಅವನ ಹಾಗೆಯೇ ಬೆಂಕಿ.

ಆ ಸಿಂಹದಮರಿ ಸೈನ್ಯ ಮಲೇಷ್ಯಾದಲ್ಲಿ ಯುದ್ಧ ಗೆದ್ದಿತ್ತು ಆ ದಿನ.. ಇನ್ನೇನು ಗೆಲುವಿನ ಬಾಗಿಲು ಮುಚ್ಚಿತೆನ್ನುವಷ್ಟರಲ್ಲಿ ಆ ಬಾಗಿಲನ್ನು ಒದ್ದು, ಸೋಲಿನ ಚಕ್ರವ್ಯೂಹವನ್ನು ಭೇದಿಸಿ ವಿಜೃಂಭಿಸಿತ್ತು ಆ ಯುವಸೈನ್ಯ.

ಅಂದ ಹಾಗೆ, ಇದು 2008ರ ಅಂಡರ್-19 ವಿಶ್ವಕಪ್ ವಿಜಯದ ಕಥೆ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ಕಿರಿಯರ ವಿಶ್ವಕಪ್ ಗೆದ್ದು ಬೀಗಿದ ಕಥೆ.

ಆ ತಂಡಲ್ಲಿದ್ದವರ ಪೈಕಿ ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜ ದಿಗ್ಗಜರ ಸಾಲು ಸೇರಿದರೆ, ಉಳಿದವರದ್ದು ಒಂದೊಂದು ಕಥೆ.

ಈ ಕಥೆಯ ಕಥಾನಾಯಕ ಒಬ್ಬನಲ್ಲ, ಇಬ್ಬರು. ಒಬ್ಬ ಅಜಿತೇಶ್ ಅರ್ಗಲ್, ಇನ್ನೊಬ್ಬ ತನ್ನಯ್ ಶ್ರೀವಾತ್ಸವ್.
ಇಬ್ಬರೂ ಆ ಅಂಡರ್-19 ವಿಶ್ವಕಪ್ ಫೈನಲ್ ಹೀರೋಗಳು.
ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ 5 ಓವರ್’ಗಳಲ್ಲಿ ಕೇವಲ 7 ರನ್ನಿತ್ತು 2 ವಿಕೆಟ್ ಪಡೆದು ಭಾರತ ಚಾಂಪಿಯನ್ ಆಗಲು ಕಾರಣರಾದವರಲ್ಲಿ ಒಬ್ಬ ಅಜಿತೇಶ್. ಅದೇ ಪಂದ್ಯದಲ್ಲಿ ಭಾರತ ಪರ ಟಾಪ್ ಸ್ಕೋರರ್ ಆಗಿದ್ದವನು (46 ರನ್) ತನ್ಮಯ್ ಶ್ರೀವಾತ್ಸವ್.

ಅಜಿತೇಶ್ ಅರ್ಗಲ್ ಮಧ್ಯಪ್ರದೇಶದ ಬಲಗೈ ಮಧ್ಯಮ ವೇಗದ ಬೌಲರ್.. ಅಂದು ಅಂಡರ್-19 ವಿಶ್ವಕಪ್ ಗೆದ್ದ ತಂಡದ ನಾಯಕ ವಿರಾಟ್ ಕೊಹ್ಲಿ ಆಧುನಿಕ ಕ್ರಿಕೆಟ್ ದಿಗ್ಗಜನೆನಿಸಿಕೊಂಡಿದ್ದಾನೆ. ರವೀಂದ್ರ ಜಡೇಜ ವಿಶ್ವಶ್ರೇಷ್ಠ ಆಲ್ರೌಂಡರ್.. ಮನೀಶ್ ಪಾಂಡೆ ಭಾರತ ಪರ ಮಿಂಚಿ ಮರೆಯಾಗಿದ್ದಾನೆ.. ಈ ಹುಡುಗರದ್ದು ಬೇರೆಯೇ ಕಥೆ. ಭಾರತ ಪರ ಆಡುವ ಕನಸು ನನಸಾಗಲಿಲ್ಲ. ಕ್ರಿಕೆಟ್ ಬಿಟ್ಟು ಇನ್ಕಮ್ ಟ್ಯಾಕ್ಸ್ ಇನ್ಸ್’ಪೆಕ್ಟರ್ ಆಗಿದ್ದ ಅಜಿತೇಶ್, ಈಗ ಕ್ರಿಕೆಟ್ ಅಂಪೈರ್.

ಉತ್ತರ ಪ್ರದೇಶದ ಕಾನ್ಪುರದವನಾದ ತನ್ಮಯ್ ಶ್ರೀವಾತ್ಸವ್ ಕೂಡ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿ ಅಂಪೈರಿಂಗ್ ವೃತ್ತಿಗೆ ಕಾಲಿಟ್ಟಿದ್ದಾನೆ. ವಿಶೇಷವೆಂದರೆ ಅಂಡರ್-19 ವಿಶ್ವಕಪ್ ಹೀರೋಗಳಿಬ್ಬರೂ ದೇಶೀಯ ಕ್ರಿಕೆಟ್’ನ ಒಂದೇ ಪಂದ್ಯದಲ್ಲಿ ಅಂಪೈರಿಗಳಾಗಿ ಮೈದಾನದಲ್ಲಿ ಕಾಣಿಸಿಕೊಂಡಿದ್ದಾರೆ. ಬದುಕು ಕೊಡುವ ಅಚ್ಚರಿಗಳೇ ಹೀಗೆ.

LEAVE A REPLY

Please enter your comment!
Please enter your name here

12 − 4 =

Latest news

ಆರ್‌ಸಿಬಿ ಮಾಲೀಕತ್ವದ ಬದಲಾವಣೆ: ಬೆಂಗಳೂರಿನ ಉದ್ಯಮಿಗಳ ಹೊಸ ಅಧ್ಯಾಯ?

ಆರ್‌ಸಿಬಿ ಮಾಲೀಕತ್ವದ ಬದಲಾವಣೆ: ಬೆಂಗಳೂರಿನ ಉದ್ಯಮಿಗಳ ಹೊಸ ಅಧ್ಯಾಯ? ಐಪಿಎಲ್‌ನ ಅತ್ಯಂತ ಜನಪ್ರಿಯ ಮತ್ತು ವ್ಯಾಪಾರಿಕವಾಗಿ ಯಶಸ್ವಿಯಾದ ಫ್ರಾಂಚೈಸಿಗಳಲ್ಲಿ ಒಂದಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹೊಸ...

10 ಮಂದಿ ಹುಡುಗರ ಮಧ್ಯೆ ಒಬ್ಬಳು ಹೆಣ್ಣು ಹುಲಿ.. ಅವಳು ಬಂಗಾಳದ ಬಂಗಾರ..!

10 ಮಂದಿ ಹುಡುಗರ ಮಧ್ಯೆ ಒಬ್ಬಳು ಹೆಣ್ಣು ಹುಲಿ.. ಅವಳು ಬಂಗಾಳದ ಬಂಗಾರ..! ಪಶ್ಚಿಮ ಬಂಗಾಳದಲ್ಲಿ ಕ್ರಿಕೆಟ್ ಎಂದಾಕ್ಷಣ ಕಿವಿಗಪ್ಪಳಿಸುವ ಮೊದಲ ಹೆಸರು ‘ದಾದಾ’.. ಬಂಗಾಳದ ಮನೆ...

ಬ್ರಹ್ಮಾವರದ ಹೆಮ್ಮೆ – ವಿಶ್ವವಿಜೇತ ಜೆಮೀಮಾ ರೊಡ್ರಿಗಸ್ ಅವರ ಕೋಚ್ ಪ್ರಶಾಂತ್ ಶೆಟ್ಟಿ

ಬ್ರಹ್ಮಾವರದ ಹೆಮ್ಮೆ – ವಿಶ್ವವಿಜೇತ ಜೆಮೀಮಾ ರೊಡ್ರಿಗಸ್ ಅವರ ಕೋಚ್ ಪ್ರಶಾಂತ್ ಶೆಟ್ಟಿ ಇತ್ತೀಚೆಗೆ ನಡೆದ ಮಹಿಳೆಯರ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಪ್ರತಿಭಾವಂತ ಕ್ರಿಕೆಟರ್ ಜೆಮೀಮಾ...

ಲಾರೆನ್ಸ್ ಸಲ್ದಾನ: ಕೌಡೂರಿನ ಕ್ರೀಡೆ ಮತ್ತು ಕಲೆಗೆ ಹೊಸ ಉಸಿರು

  ಲಾರೆನ್ಸ್ ಸಲ್ದಾನ: ಕೌಡೂರಿನ ಕ್ರೀಡೆ ಮತ್ತು ಕಲೆಗೆ ಹೊಸ ಉಸಿರು ಇತ್ತೀಚೆಗೆ ನಡೆದ ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಭಾರತದ ಪ್ರತಿಭಾವಂತ ಬ್ಯಾಟ್ಸ್‌ವುಮನ್ ಜೆಮೀಮಾ ರೊಡ್ರಿಗಸ್ ಮಿಂಚಿ...
- Advertisement -spot_imgspot_img

ಬಂಟ್ವಾಳದಲ್ಲಿ ‘ಟೀಮ್ ಬ್ರದರ್ಸ್ ಬರೆಕ್ಕಾಡ್ ಸೀಸನ್–2’ ಕ್ರಿಕೆಟ್

ಬಂಟ್ವಾಳದಲ್ಲಿ ‘ಟೀಮ್ ಬ್ರದರ್ಸ್ ಬರೆಕ್ಕಾಡ್ ಸೀಸನ್–2’ ಕ್ರಿಕೆಟ್ “ಟೀಮ್ ಬ್ರದರ್ಸ್ ಬರೆಕ್ಕಾಡ್ ಸೀಸನ್ –2” ಕ್ರಿಕೆಟ್ ಟೂರ್ನಮೆಂಟ್ ಡಿಸೆಂಬರ್ 27 ಮತ್ತು 28ರಂದು ಬಂಟ್ವಾಳ ಮೈದಾನದಲ್ಲಿ ಜರುಗಲಿದೆ. ‘ಟೀಮ್ ಬ್ರದರ್ಸ್ ವತಿಯಿಂದ ಆಯೋಜಿಸಲಾದ...

ಜೈ ಭೀಮ್ ಟ್ರೋಫಿ – 2025: ಹೊಳೆನರಸೀಪುರದಲ್ಲಿ “ಫ್ರೆಂಡ್ಸ್ ಬೆಂಗಳೂರು” ತಂಡದ ವಿಜಯ ಕಿರೀಟ!

ಜೈ ಭೀಮ್ ಟ್ರೋಫಿ – 2025: ಹೊಳೆನರಸೀಪುರದಲ್ಲಿ “ಫ್ರೆಂಡ್ಸ್ ಬೆಂಗಳೂರು” ತಂಡದ ವಿಜಯ ಕಿರೀಟ! ಹೊಳೆನರಸೀಪುರದಲ್ಲಿ ನಡೆದ ಜೈ ಭೀಮ್ ಟ್ರೋಫಿ 2025 ಕ್ರಿಕೆಟ್ ಟೂರ್ನಿಯಲ್ಲಿ,...

Must read

- Advertisement -spot_imgspot_img

You might also likeRELATED
Recommended to you