ಕ್ರಿಕೆಟ್ಬದುಕು ಕೊಡುವ ಅಚ್ಚರಿಗಳಿಗೆ ಸಾಕ್ಷಿ ಈ ಇಬ್ಬರು ಜೊತೆಗಾರರು..!

ಬದುಕು ಕೊಡುವ ಅಚ್ಚರಿಗಳಿಗೆ ಸಾಕ್ಷಿ ಈ ಇಬ್ಬರು ಜೊತೆಗಾರರು..!

-

- Advertisment -spot_img

ಬದುಕು ಕೊಡುವ ಅಚ್ಚರಿಗಳಿಗೆ ಸಾಕ್ಷಿ ಈ ಇಬ್ಬರು ಜೊತೆಗಾರರು..!

ಅದೊಂದು ಸಿಂಹದಮರಿ ಸೈನ್ಯ.. ಅದಕ್ಕೊಬ್ಬ ನಾಯಕ.. ಅವನು ಕಿಡಿ ಕಿಚ್ಚು.. ಅವನ ತಂಡ ಅವನ ಹಾಗೆಯೇ ಬೆಂಕಿ.

ಆ ಸಿಂಹದಮರಿ ಸೈನ್ಯ ಮಲೇಷ್ಯಾದಲ್ಲಿ ಯುದ್ಧ ಗೆದ್ದಿತ್ತು ಆ ದಿನ.. ಇನ್ನೇನು ಗೆಲುವಿನ ಬಾಗಿಲು ಮುಚ್ಚಿತೆನ್ನುವಷ್ಟರಲ್ಲಿ ಆ ಬಾಗಿಲನ್ನು ಒದ್ದು, ಸೋಲಿನ ಚಕ್ರವ್ಯೂಹವನ್ನು ಭೇದಿಸಿ ವಿಜೃಂಭಿಸಿತ್ತು ಆ ಯುವಸೈನ್ಯ.

ಅಂದ ಹಾಗೆ, ಇದು 2008ರ ಅಂಡರ್-19 ವಿಶ್ವಕಪ್ ವಿಜಯದ ಕಥೆ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ಕಿರಿಯರ ವಿಶ್ವಕಪ್ ಗೆದ್ದು ಬೀಗಿದ ಕಥೆ.

ಆ ತಂಡಲ್ಲಿದ್ದವರ ಪೈಕಿ ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜ ದಿಗ್ಗಜರ ಸಾಲು ಸೇರಿದರೆ, ಉಳಿದವರದ್ದು ಒಂದೊಂದು ಕಥೆ.

ಈ ಕಥೆಯ ಕಥಾನಾಯಕ ಒಬ್ಬನಲ್ಲ, ಇಬ್ಬರು. ಒಬ್ಬ ಅಜಿತೇಶ್ ಅರ್ಗಲ್, ಇನ್ನೊಬ್ಬ ತನ್ನಯ್ ಶ್ರೀವಾತ್ಸವ್.
ಇಬ್ಬರೂ ಆ ಅಂಡರ್-19 ವಿಶ್ವಕಪ್ ಫೈನಲ್ ಹೀರೋಗಳು.
ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ 5 ಓವರ್’ಗಳಲ್ಲಿ ಕೇವಲ 7 ರನ್ನಿತ್ತು 2 ವಿಕೆಟ್ ಪಡೆದು ಭಾರತ ಚಾಂಪಿಯನ್ ಆಗಲು ಕಾರಣರಾದವರಲ್ಲಿ ಒಬ್ಬ ಅಜಿತೇಶ್. ಅದೇ ಪಂದ್ಯದಲ್ಲಿ ಭಾರತ ಪರ ಟಾಪ್ ಸ್ಕೋರರ್ ಆಗಿದ್ದವನು (46 ರನ್) ತನ್ಮಯ್ ಶ್ರೀವಾತ್ಸವ್.

ಅಜಿತೇಶ್ ಅರ್ಗಲ್ ಮಧ್ಯಪ್ರದೇಶದ ಬಲಗೈ ಮಧ್ಯಮ ವೇಗದ ಬೌಲರ್.. ಅಂದು ಅಂಡರ್-19 ವಿಶ್ವಕಪ್ ಗೆದ್ದ ತಂಡದ ನಾಯಕ ವಿರಾಟ್ ಕೊಹ್ಲಿ ಆಧುನಿಕ ಕ್ರಿಕೆಟ್ ದಿಗ್ಗಜನೆನಿಸಿಕೊಂಡಿದ್ದಾನೆ. ರವೀಂದ್ರ ಜಡೇಜ ವಿಶ್ವಶ್ರೇಷ್ಠ ಆಲ್ರೌಂಡರ್.. ಮನೀಶ್ ಪಾಂಡೆ ಭಾರತ ಪರ ಮಿಂಚಿ ಮರೆಯಾಗಿದ್ದಾನೆ.. ಈ ಹುಡುಗರದ್ದು ಬೇರೆಯೇ ಕಥೆ. ಭಾರತ ಪರ ಆಡುವ ಕನಸು ನನಸಾಗಲಿಲ್ಲ. ಕ್ರಿಕೆಟ್ ಬಿಟ್ಟು ಇನ್ಕಮ್ ಟ್ಯಾಕ್ಸ್ ಇನ್ಸ್’ಪೆಕ್ಟರ್ ಆಗಿದ್ದ ಅಜಿತೇಶ್, ಈಗ ಕ್ರಿಕೆಟ್ ಅಂಪೈರ್.

ಉತ್ತರ ಪ್ರದೇಶದ ಕಾನ್ಪುರದವನಾದ ತನ್ಮಯ್ ಶ್ರೀವಾತ್ಸವ್ ಕೂಡ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿ ಅಂಪೈರಿಂಗ್ ವೃತ್ತಿಗೆ ಕಾಲಿಟ್ಟಿದ್ದಾನೆ. ವಿಶೇಷವೆಂದರೆ ಅಂಡರ್-19 ವಿಶ್ವಕಪ್ ಹೀರೋಗಳಿಬ್ಬರೂ ದೇಶೀಯ ಕ್ರಿಕೆಟ್’ನ ಒಂದೇ ಪಂದ್ಯದಲ್ಲಿ ಅಂಪೈರಿಗಳಾಗಿ ಮೈದಾನದಲ್ಲಿ ಕಾಣಿಸಿಕೊಂಡಿದ್ದಾರೆ. ಬದುಕು ಕೊಡುವ ಅಚ್ಚರಿಗಳೇ ಹೀಗೆ.

LEAVE A REPLY

Please enter your comment!
Please enter your name here

three × three =

Latest news

Spinsy Casino – Quick Spins & Fast Wins

Hai mai desiderato un'esperienza di casinò che ti dia un'esplosione di emozioni in pochi minuti? Spinsy Casino offre proprio...

Legiano Casino: Ekspresowe emocje z Quick Spin dla graczy mobilnych

Legiano Casino wypracowało niszę dla graczy, którzy pragną adrenaliny w krótkim czasie gry. Niezależnie od tego, czy masz przerwę...

ಉರ್ವಾ ಮೈದಾನದಲ್ಲಿ ಡಿಸೆಂಬರ್ 5 ಮತ್ತು 6 ರಂದು ಪ್ಯಾಂಥರ್ಸ್ ಸೂಪರ್ ಲೀಗ್ 2026

ಉರ್ವಾ ಮೈದಾನದಲ್ಲಿ ಡಿಸೆಂಬರ್ 5 ಮತ್ತು 6 ರಂದು ಪ್ಯಾಂಥರ್ಸ್ ಸೂಪರ್ ಲೀಗ್ 2026 ಮಂಗಳೂರು: ಜಿಎಸ್‌ಬಿ ಸಮುದಾಯದ ಕ್ರಿಕೆಟ್ ಪ್ರತಿಭೆಗಳಿಗೆ ವೇದಿಕೆಯಾಗಿರುವ ಪ್ರತಿಷ್ಠಿತ **ಪ್ಯಾಂಥರ್ಸ್ ಸೂಪರ್...

ಟೀಕೆಗೆ ಬ್ಯಾಟ್‌ನಲ್ಲೇ ಉತ್ತರ: ಫೈನಲ್‌ನಲ್ಲಿ ಮಿಂಚಿದ ವೈಭವ್ ಸೂರ್ಯವಂಶಿ

ಟೀಕೆಗೆ ಬ್ಯಾಟ್‌ನಲ್ಲೇ ಉತ್ತರ: ಫೈನಲ್‌ನಲ್ಲಿ ಮಿಂಚಿದ ವೈಭವ್ ಸೂರ್ಯವಂಶಿ ಕೇವಲ 29 ಎಸೆತಗಳಲ್ಲಿ 96 ರನ್: ವೈಭವ್ ಸೂರ್ಯವಂಶಿಯ ಸ್ಫೋಟಕ ಪ್ರತಿಭೆಗೆ ಕ್ರಿಕೆಟ್ ಲೋಕ ಫಿದಾ 15 ವರ್ಷದ...
- Advertisement -spot_imgspot_img

ಬೆಳಪು ಸ್ಪೋರ್ಟ್ಸ್ ಕ್ಲಬ್ (ರಿ.) ಬೆಳಪು, 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ 2026

ಬೆಳಪು ಸ್ಪೋರ್ಟ್ಸ್ ಕ್ಲಬ್ (ರಿ.) ಬೆಳಪು, 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ 2026 ಭಾರತ ಸರ್ಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ ಮೇರಾ ಯುವ ಭಾರತ್, ಉಡುಪಿ...

ಶಾಂಭವಿ ಟ್ರೋಫಿ 2026:ಚಾಂತಾರು  ಗ್ಲೋಬಲ್ ಕ್ರೀಡಾಂಗಣದಲ್ಲಿ ಬ್ರಹ್ಮಾವರ ವಲಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್

ಶಾಂಭವಿ ಟ್ರೋಫಿ 2026:ಚಾಂತಾರು ಗ್ಲೋಬಲ್ ಕ್ರೀಡಾಂಗಣದಲ್ಲಿ ಬ್ರಹ್ಮಾವರ ವಲಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಚಾಂತಾರು: ಚಾಂತಾರು ಗ್ರಾಮದಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬದ ವಾತಾವರಣ ಸೃಷ್ಟಿಸುವ ಉದ್ದೇಶದಿಂದ **ಶಾಂಭವಿ...

Must read

- Advertisement -spot_imgspot_img

You might also likeRELATED
Recommended to you