ಕ್ರಿಕೆಟ್ದುಬೈಯಲ್ಲಿ ಕನ್ನಡ ತಂಡಗಳ ಕ್ರಿಕೆಟ್ ಹಬ್ಬ ಬಂದೇಬಿಡ್ತು.. ಕೇವಲ ಎರಡು ದಿನ...

ದುಬೈಯಲ್ಲಿ ಕನ್ನಡ ತಂಡಗಳ ಕ್ರಿಕೆಟ್ ಹಬ್ಬ ಬಂದೇಬಿಡ್ತು.. ಕೇವಲ ಎರಡು ದಿನ ಮಾತ್ರ ಬಾಕಿ

-

- Advertisment -spot_img

ದುಬೈಯಲ್ಲಿ ಕನ್ನಡ ತಂಡಗಳ ಕ್ರಿಕೆಟ್ ಹಬ್ಬ ಬಂದೇಬಿಡ್ತು.. ಕೇವಲ ಎರಡು ದಿನ ಮಾತ್ರ ಬಾಕಿ

ಪ್ರತಿಯೊಂದು ಕ್ರಿಕೆಟ್ ತಂಡಗಳಿಗೆ ಕರುನಾಡಿನ ಪ್ರಮುಖ 16 ಸುಂದರ ಕ್ಷೇತ್ರಗಳ ಹೆಸರನ್ನಿತ್ತು ಆಯೋಜನೆಗೊಂಡಿರುವ 16 ತಂಡಗಳ ವಿನೂತನ ಕರ್ನಾಟಕ ಕ್ರಿಕೆಟ್ ಲೀಗ್ ಸೀಸನ್-2(KCL) ಪಂದ್ಯಾವಳಿಯು ಇನ್ನು ಎರಡೇ ದಿನದಲ್ಲಿ ಆರಂಭವಾಗಲಿದೆ. ನವೆಂಬರ್ 22,23ರಂದು ಶಾರ್ಜಾ ಬಿಜೋಯ್ಸ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ಕನ್ನಡ ತಂಡಗಳ ಕ್ರಿಕೆಟ್ ಜಾತ್ರೆ ಸಂಪನ್ನಗೊಳ್ಳಲಿದೆ.

ಕಳೆದ ಭಾರಿ ಜರಗಿದ ಈ ಪಂದ್ಯಾವಳಿಯು ಭಾರೀ ಜನಮನ್ನಣೆ ಗಳಿಸಿದ್ದು ವಿದ್ವಾರ್ ಬಾಯ್ಸ್ ಮಂಗಳೂರು ಮ್ಯಾಜಿಶಿಯನ್ಸ್ ತಂಡವು ವಿಠಲ್ ರಿಶಾನ್ ನಾಯಕ್ ಅವರ ಮಾರ್ಗದರ್ಶನದಲ್ಲಿ ಚಾಂಪಿಯನ್ ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಂಡಿತ್ತು.

ಈ ಭಾರಿಯ ಪ್ರಮುಖ ತಂಡಗಳು

1)ಗಲ್ಫ್ ಗೆಳೆಯರು ಮೈಸೂರ್ ಮಹಾರಾಜಾಸ್,
2)ವಿದ್ವಾರ ಬಾಯ್ಸ್ ಮಂಗ್ಳೂರು ಮಜಿಶಿಯನ್ಸ್,
3)ರಾಯಲ್ ಎಂಟ್ರಿ ಟೂರ್ಸ್ ಉಡುಪಿ ಲಯನ್ಸ್
4)ತುಳುನಾಡು ವಾರಿಯರ್ಸ್
5)ಶಿವಮೊಗ್ಗ ಸ್ಟ್ರೈಕರ್ಸ್
6)ಅಲ್ಟಸೆಕ್ಯೂರ್ ಬೆಂಗಳೂರು ಬ್ಲಾಸ್ಟರ್ಸ್,
7)ಕಟೀಲ್ ಫ್ರೆಂಡ್ಸ್ ಕಟೀಲ್ ಲೆಜೆಂಡ್ಸ್
8)ಎಂ ಎಂ ಲಾಂಡ್ರಿ ಕುಂದಾಪುರ ಕೈಟ್ಸ್
9)ಡಿಜೆಎಸ್ ನವೀನ್ xll ಕುಡ್ಲ ಕಿಂಗ್ಸ್
10)IXE ಯಂಗ್ ಸ್ಟಾರ್ಸ್ ಕಾಪು ಹೀರೋಸ್
11)D-O-D ಬಂಡೀಪುರ ಟೈಗರ್ಸ್
12)ಟೀಮ್ ಎಲಿಗೆಂಟ್ ಮೂಡುಬಿದ್ರೆ
13)ಡೆಲ್ಟಾಹೋಮ್ ಲೋನ್ಸ್ ಕೆ.ಜಿ.ಎಫ್ ಜಾಗ್ವಾರ್ಸ್
14)ಹಾಸನ ರಾಯಲ್ಸ್
15)ದುಬೈ ಒಕ್ಕಲಿಗ ಸಂಘ. ಮಲ್ನಾಡ್ ಚಾಲೆಂಜರ್ಸ್
16)ಮಣಿಪಾಲ ಮೇವರಿಕ್ಸ್

ಹೀಗೆ ಕನ್ನಡನಾಡಿನ 16 ಬೇರೆಬೇರೆ ಪ್ರದೇಶಗಳ ನಾಮಧೇಯದೊಂದಿಗೆ ತಂಡಗಳನ್ನು ಆಯ್ದು ಪಂದ್ಯಗಳನ್ನು ಜರುಗಿಸಲಾಗುತ್ತದೆ.

ವಿಜೇತರಿಗೆ ಆಕರ್ಷಕ ನಗದು ಬಹುಮಾನ,ಪಾರಿತೋಷಕ ಹಾಗೂ ಇನ್ನಿತರ ಅನೇಕ ಕೊಡುಗೆಗಳು ಲಭಿಸಲಿದೆ.

ಸಂಯುಕ್ತ ಅರಬ್ ರಾಷ್ಟ್ರದಲ್ಲಿ ಜರಗುವ ಈ ಪ್ರತಿಷ್ಠಿತ ಕ್ರಿಕೆಟ್ ಪಂದ್ಯಾವಳಿಯು ನವೆಂಬರ್ 22 ಶನಿವಾರ ಅಪರಾಹ್ನ ಶುಭಾರಂಭ ಗೊಳ್ಳಲಿದೆ.ತದನಂತರ ಪಂದ್ಯವು ಶನಿವಾರ ನಡುರಾತ್ರಿಯವರೆಗೆ ಸಾಗಲಿದೆ.ಮರುದಿನ ಮುಂಜಾನೆ ಒಂಬತ್ತರಿಂದ ರಾತ್ರಿ ಒಂಬತ್ತರವರೆಗೆ ನಿರಂತರವಾಗಿ ಮುಂದುವರಿಯುತ್ತದೆ. ಪಂದ್ಯಾವಳಿಯು ಮುಕ್ತಾಯವಾಗುತ್ತಿದ್ದಂತೆ ಪ್ರಶಸ್ತಿ ಪ್ರದಾನ ಸಮಾರಂಭ ಆ ಕೂಡಲೇ ನೆರವೇರುತ್ತದೆ.

ಈ ಪಂದ್ಯಾವಳಿಯು ಕನ್ನಡ ತಂಡಗಳ ನಡುವೆ ಜರಗುವ ಕೇವಲ ಕ್ರಿಕೆಟ್ ಆಟದ ಸ್ಪರ್ಧೆಯಾಗದೆ ಗಲ್ಫ್ ರಾಷ್ಟ್ರದೆಲ್ಲೆಡೆ ಹರಡಿಕೊಂಡಿರುವ ಕನ್ನಡನಾಡಿನ ವಿವಿಧ ಜಿಲ್ಲೆಗಳ ಕನ್ನಡಿಗರನ್ನು ಒಂದೆಡೆ ಸೇರಿಸಿ ನೆರವೇರುವ ಅಪರೂಪದ ಭಾವನಾತ್ಮಕ ಸಮಾರಂಭವೂ ಆಗಿದೆ.

ಒಂದು ರೀತಿಯಲ್ಲಿ ಕನ್ನಡಹಬ್ಬದ ವಾತಾವರಣವನ್ನು ಸೃಷ್ಟಿಸುವ ಈ ಪಂದ್ಯಾವಳಿಯು ದುಬೈನಲ್ಲಿ ಭಾರೀ ಸದ್ದು ಮಾಡುತ್ತಿದೆ.

ಕಳೆದ ಭಾರಿಯ ಚಾಂಪಿಯನ್ ವಿದ್ವಾರ್ಸ್ ಬಾಯ್ಸ್ ಮಂಗಳೂರು ಮಜಿಷಿಯನ್ ಸೇರಿದಂತೆ ಬಹುತೇಕ ಪ್ರಸಿದ್ಧ ಕನ್ನಡ ನಾಡಿನ ತಂಡಗಳು ಈಗಾಗಲೇ ಕ್ರಿಕೆಟ್ ಅಂಗಣಕ್ಕಿಳಿದು ಅಭ್ಯಾಸದಲ್ಲಿ ನಿರತವಾಗಿದೆ.

ದುಬೈನಲ್ಲಿ ನೆಲೆಸಿರುವ ಸ್ಪೋರ್ಟ್ಸ್ ಕನ್ನಡ ಕನ್ನಡವಾಹಿನಿಯ ಮಧ್ಯಪ್ರಾಚ್ಯದ ಸಂಯೋಜಕ ವಿಠಲ್ ರಿಶಾನ್ ನಾಯಕ್ ಈಗಾಗಲೇ ಸಂಯುಕ್ತ ಅರಬ್ ರಾಷ್ಟ್ರದೆಲ್ಲೆಡೆ ಈ ಪಂದ್ಯದ ಕುರಿತಾಗಿ ವಿಶೇಷ ವರದಿಯನ್ನು ಗಲ್ಫ್ ರಾಷ್ಟ್ರದ ಬಹುತೇಕ ಕನ್ನಡ ಕ್ರಿಕೆಟ್ ತಂಡಗಳಿಗೆ ಹರಿಸಿದ್ದಾರೆ.ಹೀಗಾಗಿ ಇನ್ನಷ್ಟು ಸ್ಪರ್ಧಾತ್ಮಕ ಪೈಪೋಟಿಯು ಈ ಭಾರಿಯ ಪಂದ್ಯಾವಳಿಯಲ್ಲಿ ಹೊರಹೊಮ್ಮಲಿದೆ ಎನ್ನುವುದು ದುಬೈ ಕ್ರಿಕೆಟ್ ಪ್ರಿಯರ ಅಭಿಮತ.ಏನೇ ಇರಲಿ ಕ್ರಿಕೆಟ್ ಆಟದಲ್ಲೂ ದುಬೈ ಕನ್ನಡಿಗರ ಕನ್ನಡನಾಡಿನ ವಿಶಿಷ್ಟ ಪ್ರೇಮ ನಿಜವಾಗ್ಲೂ ಅಭಿನಂದನೀಯ.

ಎಲ್ಲೇ ಇರಿ.ಹೇಗಾದರೂ ಇರಿ.ಅಪರೂಪದ ಈ ಕನ್ನಡ ಕ್ರಿಕೆಟ್ ಹಬ್ಬವನ್ನು ನೋಡಲು ಮರೆಯದೆ ಬನ್ನಿ.

ಕ್ರೀಡೆಗಳು ಮನುಕುಲದ ಪ್ರಗತಿಗೆ ಸದಾ ಬೆಳಕಾಗಿರಲಿ.

ಬರೆಹ:ಪಿ.ಲಾತವ್ಯ ಆಚಾರ್ಯ ಉಡುಪಿ

LEAVE A REPLY

Please enter your comment!
Please enter your name here

eleven + 15 =

Latest news

ಗೊರವನಹಳ್ಳಿ ಪ್ರೀಮಿಯರ್ ಲೀಗ್ (GPL) – ಡಾ|| ಎಚ್ಎಸ್ ಪ್ರಸನ್ನ ಕುಮಾರ್ ಸ್ವಾಮೀಜಿ ಕಪ್ ಕ್ರಿಕೆಟ್

ಗೊರವನಹಳ್ಳಿ ಪ್ರೀಮಿಯರ್ ಲೀಗ್ (GPL) – ಡಾ|| ಎಚ್ಎಸ್ ಪ್ರಸನ್ನ ಕುಮಾರ್ ಸ್ವಾಮೀಜಿ ಕಪ್ ಕ್ರಿಕೆಟ್ ಗೊರವನಹಳ್ಳಿ ಪ್ರೀಮಿಯರ್ ಲೀಗ್ (GPL) –  ಡಾ|| ಎಚ್ಎಸ್...

ಜಿಎಸ್‌ಬಿ ಕ್ರಿಕೆಟ್ ಲೋಕದ ಮಹಾಸಂಗ್ರಾಮಕ್ಕೆ ದಿನಾಂಕ ನಿಗದಿ: ಡಿಸೆಂಬರ್ 5 ಮತ್ತು 6ರಂದು ನಡೆಯಲಿದೆ BPPL ಸೀಸನ್-3

ಜಿಎಸ್‌ಬಿ ಕ್ರಿಕೆಟ್ ಲೋಕದ ಮಹಾಸಂಗ್ರಾಮಕ್ಕೆ ದಿನಾಂಕ ನಿಗದಿ: ಡಿಸೆಂಬರ್ 5 ಮತ್ತು 6ರಂದು ನಡೆಯಲಿದೆ BPPL ಸೀಸನ್-3 ಕರ್ನಾಟಕದ ಜಿಎಸ್‌ಬಿ ಕ್ರಿಕೆಟ್ ವಲಯದಲ್ಲಿ ಅತ್ಯಂತ ನಿರೀಕ್ಷಿತ...

ಕ್ರೀಡಾಭಿಮಾನಿಗಳು, ಆಟಗಾರರು ಹಾಗೂ ಆಯೋಜಕರಿಗೆ ಮತ್ತು ಅಭಿಮಾನಿಗಳಿಗೆ ಸ್ಪೋರ್ಟ್ಸ್ ಕನ್ನಡದ ಹೃತ್ಪೂರ್ವಕ ಕೃತಜ್ಞತೆ

ಕ್ರೀಡಾಭಿಮಾನಿಗಳು, ಆಟಗಾರರು ಹಾಗೂ ಆಯೋಜಕರಿಗೆ ಮತ್ತು ಅಭಿಮಾನಿಗಳಿಗೆ ಸ್ಪೋರ್ಟ್ಸ್ ಕನ್ನಡದ ಹೃತ್ಪೂರ್ವಕ ಕೃತಜ್ಞತೆ ಕರಾವಳಿ ಭಾಗದ ಗ್ರಾಮೀಣ ಕ್ರಿಕೆಟ್‌ಗೆ ಹೊಸ ಆಯಾಮ ನೀಡಿರುವ ಸ್ಪೋರ್ಟ್ಸ್ ಕನ್ನಡ, ಮತ್ತೊಂದು...

ಕಟ್ಟೆ ಫ್ರೆಂಡ್ಸ್ ಕಾಳಾವರ-ಬ್ಲೂ ಬರ್ಡ್ಸ್ ನಾಗಾರ್ಜುನ ಬುಕ್ಕಿಗುಡ್ಡೆ ತಂಡಗಳಿಗೆ ಉಚಿತ ಪ್ರವೇಶ ಘೋಷಣೆ…!!!

ಕಟ್ಟೆ ಫ್ರೆಂಡ್ಸ್ ಕಾಳಾವರ-ಬ್ಲೂ ಬರ್ಡ್ಸ್ ನಾಗಾರ್ಜುನ ಬುಕ್ಕಿಗುಡ್ಡೆ ತಂಡಗಳಿಗೆ ಉಚಿತ ಪ್ರವೇಶ ಘೋಷಣೆ...!!! ನೊಂದ ಜೀವಗಳಿಗೆ ಆಸರೆಯಾದ ಕಟ್ಟೆ ಫ್ರೆಂಡ್ಸ್ ಕಾಳಾವರ ಮತ್ತು ಬ್ಲೂ ಬರ್ಡ್ಸ್ ನಾಗಾರ್ಜುನ...
- Advertisement -spot_imgspot_img

ಮಾನವೀಯತೆಯ ಮೆರಗು: ಬಹುಮಾನ ಮೊತ್ತವನ್ನೆಲ್ಲಾ ಗಾಯಾಳು ಕ್ರಿಕೆಟಿಗನ ಚಿಕಿತ್ಸೆಗೆ ನೀಡಿದ ಕಟ್ಟೆ ಫ್ರೆಂಡ್ಸ್ ಕಾಳಾವರ ತಂಡ

  ಮಾನವೀಯತೆಯ ಮೆರಗು: ಬಹುಮಾನ ಮೊತ್ತವನ್ನೆಲ್ಲಾ ಗಾಯಾಳು ಕ್ರಿಕೆಟಿಗನ ಚಿಕಿತ್ಸೆಗೆ ನೀಡಿದ ಕಟ್ಟೆ ಫ್ರೆಂಡ್ಸ್ ಕಾಳಾವರ ತಂಡ ಉಡುಪಿ: ಕ್ರೀಡಾ ಕ್ಷೇತ್ರದಲ್ಲಿ ಕ್ರಿಕೆಟ್ ಆಟಗಾರನ ಸಂಕಷ್ಟಕ್ಕೆ ಸ್ಪಂದಿಸಿ ಮಾನವೀಯತೆಯ...

ವಿದ್ಯಾಬೆಳಕು ಕಾರ್ಯಕ್ರಮ; ಜೂನ್ 7ರಂದು ಪಿತ್ರೋಡಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ

ವಿದ್ಯಾಬೆಳಕು ಕಾರ್ಯಕ್ರಮ; ಜೂನ್ 7ರಂದು ಪಿತ್ರೋಡಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಉಡುಪಿ: ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವೆಂಕಟರಮಣ ಸ್ಪೋರ್ಟ್ಸ್ ಅಂಡ್ ಕಲ್ಚರಲ್...

Must read

- Advertisement -spot_imgspot_img

You might also likeRELATED
Recommended to you