9 C
London
Wednesday, April 17, 2024
Homeಕ್ರಿಕೆಟ್ಸುಧಿತಿ ಫ್ರೆಂಡ್ಸ್ ತಂಡಕ್ಕೆ ಬೀಜಾಡಿ ಟ್ರೋಫಿ-2019

ಸುಧಿತಿ ಫ್ರೆಂಡ್ಸ್ ತಂಡಕ್ಕೆ ಬೀಜಾಡಿ ಟ್ರೋಫಿ-2019

Date:

Related stories

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...

ಇಂತಹ ಒಬ್ಬ ಆಟಗಾರನನ್ನು RCB ತಯಾರು ಮಾಡಿದೆಯೇ..?

ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ.. ಆದರೆ ಅವರೆಲ್ಲಾ ಐಪಿಎಲ್’ನಲ್ಲಿ...

RCB ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ..!

ನಾಲ್ಕೇ ನಾಲ್ಕು ದಿನಗಳ ಹಿಂದೆ..  4 ಓವರ್’ಗಳಲ್ಲಿ 23 ರನ್, ಒಂದು...

RCB ಯನ್ನು ಸುಟ್ಟು ಹಾಕಿದ ಮಯಾಂಕ್ ಯಾದವ್ ಅವರ ವೇಗ

RCB ವಿರುದ್ಧ 3/14 ರ ಅದ್ಭುತ ಬೌಲಿಂಗ್ ಅಂಕಿಅಂಶಗಳಿಗಾಗಿ  ಮಯಾಂಕ್ ಯಾದವ್...
spot_imgspot_img
ಗೆಳೆಯರ ಬಳಗ ಬೀಜಾಡಿ ತಂಡ ಕಳೆದ ಶನಿವಾರ ಹಾಗೂ ರವಿವಾರದಂದು ಬೀಜಾಡಿ ಪಡುಶಾಲೆಯಲ್ಲಿ ಏರ್ಪಡಿಸಿದ್ದ 40 ಗಜಗಳ ಹೊನಲು ಬೆಳಕಿನ ಪಂದ್ಯಾಕೂಟವನ್ನು ಸುಧಿತಿ ಫ್ರೆಂಡ್ಸ್ ಕುಂಭಾಶಿ ಜಯಿಸಿದೆ.

   

ಶನಿವಾರದಂದು ಸ್ಥಳೀಯ ಆಟಗಾರರನ್ನೊಳಗೊಂಡ 6 ಫ್ರಾಂಚೈಸಿಗಳು, ರವಿವಾರದಂದು ಆಯಾಯ ಊರಿನ ತಂಡಗಳು ಸೆಣಸಾಡಿದ್ದವು. ಲೀಗ್ ಹಂತದ ಹೋರಾಟದ ಬಳಿಕ ಸೆಮಿಫೈನಲ್ ಪ್ರವೇಶಿಸಿದ್ದ ಪ್ಯಾಂಥರ್ಸ್ ಬೀಜಾಡಿ, ಬೀಜಾಡಿ ಬುಲ್ಸ್ ತಂಡವನ್ನು ಸೋಲಿಸಿದರೆ,ಸುಧಿತಿ ಫ್ರೆಂಡ್ಸ್ ,ಗುತ್ತು ಫ್ರೆಂಡ್ಸ್ ಬಲ್ಲಕುಂಜೆ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದ್ದವು. ಅಂತಿಮವಾಗಿ ಕುಂಭಾಶಿಯ ತಂಡ ಬಲ್ಲಕುಂಜೆ ತಂಡವನ್ನು ಸೋಲಿಸಿ ಪ್ರಥಮ ಪ್ರಶಸ್ತಿ ಪಡೆಯಿತು. ವಿಶೇಷವಾಗಿ ನೀಡಲಾದ ಶಿಸ್ತಿನ ತಂಡ ಪ್ರಶಸ್ತಿಯನ್ನು ಗುರುಶ್ರೀ ಗುಂಡಿ ಬೈಲ್ ಹಾಗೂ ಕುಟೀರ ಫ್ರೆಂಡ್ಸ್ ಗಿಳಿಯಾರು ತಂಡ ಪಡೆದುಕೊಂಡಿತು.

ವೈಯಕ್ತಿಕ ಪ್ರಶಸ್ತಿಗಳನ್ನು  ಕ್ರಮವಾಗಿ, ಫೈನಲ್ ಪಂದ್ಯದ ಪಂದ್ಯಶ್ರೇಷ್ಟ ಸುಧಿತಿ ಫ್ರೆಂಡ್ಸ್ ನ ಪವನ್, ಎಮರ್ಜಿಂಗ್ ಪ್ಲೇಯರ್ ಬ್ಲಾಕ್ ಟೈಗರ್ ನ ಶ್ರೇಯಸ್,ಬೆಸ್ಟ್ ಫೀಲ್ಡರ್ ಚವನ್ ಕುಂಜಿಗುಡಿ,ಬೆಸ್ಟ್ ಕೀಪರ್ ಶ್ರೀಧರ್ ಬೀಜಾಡಿ ಪ್ಯಾಂಥರ್ಸ್, ಬೆಸ್ಟ್ ಬೌಲರ್ ಸುಧಾಕರ್ ಸುಧಿತಿ ಫ್ರೆಂಡ್ಸ್, ಬೆಸ್ಟ್ ಬ್ಯಾಟ್ಸ್‌ಮನ್ ಸಂದೇಶ್ ಬೀಜಾಡಿ ಬುಲ್ಸ್,ಸರಣಿ ಶ್ರೇಷ್ಠ ಅಶ್ವಿನ್ ಸುಧಿತಿ ಫ್ರೆಂಡ್ಸ್ ಪಡೆದುಕೊಂಡರು.

ವಿಜೇತ ತಂಡ‌ 25,555 ನಗದು,ದ್ವಿತೀಯ ಸ್ಥಾನಿ ತಂಡ 15,555 ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಿತು.

ಶಿಸ್ತು ಹಾಗೂ ಸಮಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ ಈ ಪಂದ್ಯಾಕೂಟ ಸಮಾಜದ ಅಶಕ್ತರಿಗೆ ಸಹಾಯ ಹಾಗೂ ಗ್ರಾಮೀಣ ಮಟ್ಟದ ಆಟಗಾರರ ಪ್ರತಿಭೆಗಳ ಅನಾವರಣದ ಸದುದ್ದೇಶದಿಂದ ಏರ್ಪಡಿಸಲಾಗಿತ್ತು.

ಸಮಾರೋಪ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಗಣೇಶ್ ಮಾಸ್ಟರ್,ಸಿರಾಜ್ ರಿಧಾ ಅಮೀನ್,ರಾಜೇಶ್ ಪೂಜಾರಿ,ಸುಭಾಷ್ ಕಾಂಚನ್,ಗೆಳೆಯರ ಬಳಗದ ಅಧ್ಯಕ್ಷ ಅಶೋಕ್ ಪೂಜಾರಿ, ಉಪಾಧ್ಯಕ್ಷ ಗಣೇಶ್ ಅಕ್ಷಾಂತರಿಯ, ಮೀನುಗಾರಿಕಾ ಸೊಸೈಟಿ ಉಪಾಧ್ಯಕ್ಷ ನಾಗೇಶ್ ಆಟೋ, ಪಂದ್ಯಾಕೂಟದ ಮುಖ್ಯ ರೂವಾರಿ ಚಾಲೆಂಜ್ ಗಣೇಶ್ ಹಾಗೂ ಸಚಿನ್.ಎಸ್.ಕುಂದರ್
ಉಪಸ್ಥಿತರಿದ್ದರು.

ಆರ್.ಕೆ.ಆಚಾರ್ಯ ಕೋಟ

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

1 × 5 =