ಕ್ರಿಕೆಟ್ಸಾವನ್ನು ಗೆದ್ದು ಬಂದ ಶಿವ-GAME INSIGHT ಕಾರ್ಯಕ್ರಮದಲ್ಲಿ ಶಿವ ಭಾವುಕ...!!!

ಸಾವನ್ನು ಗೆದ್ದು ಬಂದ ಶಿವ-GAME INSIGHT ಕಾರ್ಯಕ್ರಮದಲ್ಲಿ ಶಿವ ಭಾವುಕ…!!!

-

- Advertisment -spot_img

ಸಾವನ್ನು ಗೆದ್ದು ಬಂದ ಶಿವ-GAME INSIGHT ಕಾರ್ಯಕ್ರಮದಲ್ಲಿ ಶಿವ ಭಾವುಕ…!!!

35 ವರ್ಷದ ಕಾಮೆಂಟ್ರಿ ಸಾಧನೆಗೆ ಕ್ರಿಕೆಟ್ ಟೂರ್ನಿ

ಸ್ಪೋರ್ಟ್ಸ್ ಕನ್ನಡ ಗೇಮ್ ಇನ್ಸೈಟ್ ಕಾರ್ಯಕ್ರಮದಲ್ಲಿ ಅಚ್ಚರಿಯ ಸಂಗತಿಯೊಂದು ಬಹಿರಂಗವಾಗಿದೆ. ಜನಪ್ರಿಯ ಕನ್ನಡ ಕ್ರಿಕೆಟ್ ಕಾಮೆಂಟೇಟರ್ ಶಿವನಾರಾಯಣ ಐತಾಳ್, ತಮ್ಮ ಬದುಕಿನ ಗಂಭೀರ ಹಂತವನ್ನು ಎದುರಿಸಿ, ಸಾವನ್ನೇ ಗೆದ್ದು ಬಂದ ಕಥೆಯನ್ನು ಹಂಚಿಕೊಂಡಿದ್ದಾರೆ.

ಕೆಲ ವರ್ಷಗಳ ಹಿಂದೆ ತೀವ್ರ ಆರೋಗ್ಯ ಸಮಸ್ಯೆಯಿಂದ ಹಾಸಿಗೆ ಹಿಡಿದಿದ್ದ ಶಿವನಾರಾಯಣ ಐತಾಳ್, ವೈದ್ಯರು ಜೀವದಾಸೆ ಕಡಿಮೆ ಎಂದು ಹೇಳಿದ ಸಂದರ್ಭದಲ್ಲೂ ಹೋರಾಟ ಬಿಡದೆ ಬದುಕನ್ನು ಮತ್ತೆ ಗೆದ್ದರು. 2024 ಜುಲೈನಲ್ಲಿ ಗಂಭೀರ ಚಿಕನ್ ಫಾಕ್ಸ್ ಇನ್ಫೆಕ್ಷನ್ ಮತ್ತು ಫ್ರಾಂಕ್ ರಿಯಾಸಿಸ್ ಸಮಸ್ಯೆಯಿಂದ ತೀವ್ರವಾಗಿ ಅಸ್ವಸ್ಥರಾದ ಅವರು, ಪ್ಲೇಟ್‌ಲೆಟ್ ಪ್ರಮಾಣವು ತೀವ್ರವಾಗಿ ಇಳಿದಿತ್ತು ಮತ್ತು ಶುಗರ್ ಮಟ್ಟವು 400ಕ್ಕಿಂತ ಹೆಚ್ಚಾಗಿತ್ತು. ಈ ಕಾರಣದಿಂದ ಅವರು 12 ದಿನಗಳ ಕಾಲ ಆಸ್ಪತ್ರೆಗೆ ದಾಖಲಾಗಿ, ಅದರಲ್ಲಿ 4 ದಿನ ಕೋಮಾ ಸ್ಥಿತಿಯಲ್ಲಿ ಇದ್ದರು. ವೈದ್ಯರು ಜೀವದಾಸೆ ಕಡಿಮೆ ಎಂದಿದ್ದರೂ, ಶಿವನಾರಾಯಣ ಅಸಾಧಾರಣ ಹೋರಾಟ ನಡೆಸಿ ಬದುಕಿಗೆ ಮರಳಿದರು.ಆ ಅನುಭವವೇ ಅವರಿಗೆ ಮತ್ತಷ್ಟು ಶಕ್ತಿ ನೀಡಿದ್ದು, ಕ್ರಿಕೆಟ್ ಕಾಮೆಂಟ್ರಿಯ ಮೂಲಕ ಅಭಿಮಾನಿಗಳಿಗೆ ಹರ್ಷ, ಉತ್ಸಾಹ ಮತ್ತು ಪ್ರೇರಣೆ ನೀಡುವ ಕೆಲಸವನ್ನು ಮುಂದುವರಿಸಲು ಕಾರಣವಾಯಿತು.

ಈ ವರ್ಷ, ತಮ್ಮ 35 ವರ್ಷದ ಯಶಸ್ವಿ ಕಾಮೆಂಟ್ರಿ ಪಯಣವನ್ನು ಸಂಭ್ರಮಿಸಲು ಅವರು ವಿಶೇಷ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸುತ್ತಿದ್ದಾರೆ. ಶೀಘ್ರದಲ್ಲೇ ನಡೆಯಲಿರುವ ಈ ಟೂರ್ನಿಯಲ್ಲಿ ಕರಾವಳಿ ಹಾಗೂ ಕರ್ನಾಟಕದ ಹಲವು ಪ್ರಮುಖ ತಂಡಗಳು ಭಾಗವಹಿಸಲಿದ್ದು, ಇದು ಕೇವಲ ಕ್ರಿಕೆಟ್ ಹಬ್ಬವಷ್ಟೇ ಅಲ್ಲ, ಶಿವನಾರಾಯಣ ಅವರ ಬದುಕಿನ ಹೋರಾಟಕ್ಕೆ ಸಮರ್ಪಣೆ ಆಗಿದೆ.

“ಈ ಟೂರ್ನಿ ನನಗೆ ಕೇವಲ ಆಟವಲ್ಲ, ಬದುಕಿನ ಜಯವನ್ನು ಆಚರಿಸುವ ಕ್ಷಣ. ನನ್ನ ಅಭಿಮಾನಿಗಳು, ಸ್ನೇಹಿತರು ಹಾಗೂ ಕ್ರಿಕೆಟ್ ಸಮುದಾಯ ನನಗೆ ಕೊಟ್ಟ ಬೆಂಬಲಕ್ಕೆ ಇದು ನನ್ನ ಉತ್ತರ,” ಎಂದು ಭಾವುಕರಾದ ಶಿವನಾರಾಯಣ ಹೇಳಿದರು

LEAVE A REPLY

Please enter your comment!
Please enter your name here

twenty − four =

Latest news

ಜಿಎಸ್‌ಬಿ ಕ್ರಿಕೆಟ್ ಲೋಕದ ಮಹಾಸಂಗ್ರಾಮಕ್ಕೆ ದಿನಾಂಕ ನಿಗದಿ: ಡಿಸೆಂಬರ್ 5 ಮತ್ತು 6ರಂದು ನಡೆಯಲಿದೆ BPPL ಸೀಸನ್-3

ಜಿಎಸ್‌ಬಿ ಕ್ರಿಕೆಟ್ ಲೋಕದ ಮಹಾಸಂಗ್ರಾಮಕ್ಕೆ ದಿನಾಂಕ ನಿಗದಿ: ಡಿಸೆಂಬರ್ 5 ಮತ್ತು 6ರಂದು ನಡೆಯಲಿದೆ BPPL ಸೀಸನ್-3 ಕರ್ನಾಟಕದ ಜಿಎಸ್‌ಬಿ ಕ್ರಿಕೆಟ್ ವಲಯದಲ್ಲಿ ಅತ್ಯಂತ ನಿರೀಕ್ಷಿತ...

ಕ್ರೀಡಾಭಿಮಾನಿಗಳು, ಆಟಗಾರರು ಹಾಗೂ ಆಯೋಜಕರಿಗೆ ಮತ್ತು ಅಭಿಮಾನಿಗಳಿಗೆ ಸ್ಪೋರ್ಟ್ಸ್ ಕನ್ನಡದ ಹೃತ್ಪೂರ್ವಕ ಕೃತಜ್ಞತೆ

ಕ್ರೀಡಾಭಿಮಾನಿಗಳು, ಆಟಗಾರರು ಹಾಗೂ ಆಯೋಜಕರಿಗೆ ಮತ್ತು ಅಭಿಮಾನಿಗಳಿಗೆ ಸ್ಪೋರ್ಟ್ಸ್ ಕನ್ನಡದ ಹೃತ್ಪೂರ್ವಕ ಕೃತಜ್ಞತೆ ಕರಾವಳಿ ಭಾಗದ ಗ್ರಾಮೀಣ ಕ್ರಿಕೆಟ್‌ಗೆ ಹೊಸ ಆಯಾಮ ನೀಡಿರುವ ಸ್ಪೋರ್ಟ್ಸ್ ಕನ್ನಡ, ಮತ್ತೊಂದು...

ಕಟ್ಟೆ ಫ್ರೆಂಡ್ಸ್ ಕಾಳಾವರ-ಬ್ಲೂ ಬರ್ಡ್ಸ್ ನಾಗಾರ್ಜುನ ಬುಕ್ಕಿಗುಡ್ಡೆ ತಂಡಗಳಿಗೆ ಉಚಿತ ಪ್ರವೇಶ ಘೋಷಣೆ…!!!

ಕಟ್ಟೆ ಫ್ರೆಂಡ್ಸ್ ಕಾಳಾವರ-ಬ್ಲೂ ಬರ್ಡ್ಸ್ ನಾಗಾರ್ಜುನ ಬುಕ್ಕಿಗುಡ್ಡೆ ತಂಡಗಳಿಗೆ ಉಚಿತ ಪ್ರವೇಶ ಘೋಷಣೆ...!!! ನೊಂದ ಜೀವಗಳಿಗೆ ಆಸರೆಯಾದ ಕಟ್ಟೆ ಫ್ರೆಂಡ್ಸ್ ಕಾಳಾವರ ಮತ್ತು ಬ್ಲೂ ಬರ್ಡ್ಸ್ ನಾಗಾರ್ಜುನ...

ಮಾನವೀಯತೆಯ ಮೆರಗು: ಬಹುಮಾನ ಮೊತ್ತವನ್ನೆಲ್ಲಾ ಗಾಯಾಳು ಕ್ರಿಕೆಟಿಗನ ಚಿಕಿತ್ಸೆಗೆ ನೀಡಿದ ಕಟ್ಟೆ ಫ್ರೆಂಡ್ಸ್ ಕಾಳಾವರ ತಂಡ

  ಮಾನವೀಯತೆಯ ಮೆರಗು: ಬಹುಮಾನ ಮೊತ್ತವನ್ನೆಲ್ಲಾ ಗಾಯಾಳು ಕ್ರಿಕೆಟಿಗನ ಚಿಕಿತ್ಸೆಗೆ ನೀಡಿದ ಕಟ್ಟೆ ಫ್ರೆಂಡ್ಸ್ ಕಾಳಾವರ ತಂಡ ಉಡುಪಿ: ಕ್ರೀಡಾ ಕ್ಷೇತ್ರದಲ್ಲಿ ಕ್ರಿಕೆಟ್ ಆಟಗಾರನ ಸಂಕಷ್ಟಕ್ಕೆ ಸ್ಪಂದಿಸಿ ಮಾನವೀಯತೆಯ...
- Advertisement -spot_imgspot_img

ವಿದ್ಯಾಬೆಳಕು ಕಾರ್ಯಕ್ರಮ; ಜೂನ್ 7ರಂದು ಪಿತ್ರೋಡಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ

ವಿದ್ಯಾಬೆಳಕು ಕಾರ್ಯಕ್ರಮ; ಜೂನ್ 7ರಂದು ಪಿತ್ರೋಡಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಉಡುಪಿ: ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವೆಂಕಟರಮಣ ಸ್ಪೋರ್ಟ್ಸ್ ಅಂಡ್ ಕಲ್ಚರಲ್...

ಚಿತ್ರದುರ್ಗದಲ್ಲಿ ವಿಶ್ವಕರ್ಮ ಪ್ರೀಮಿಯರ್ ಲೀಗ್-2026: ₹2 ಲಕ್ಷ ಪ್ರಥಮ ಬಹುಮಾನ, ಸರಣಿ ಶ್ರೇಷ್ಠ ವಿಜೇತರಿಗೆ ಹೋಂಡಾ ಶೈನ್ ಬೈಕ್

ಚಿತ್ರದುರ್ಗದಲ್ಲಿ ವಿಶ್ವಕರ್ಮ ಪ್ರೀಮಿಯರ್ ಲೀಗ್-2026: ₹2 ಲಕ್ಷ ಪ್ರಥಮ ಬಹುಮಾನ, ಸರಣಿ ಶ್ರೇಷ್ಠ ವಿಜೇತರಿಗೆ ಹೋಂಡಾ ಶೈನ್ ಬೈಕ್ ಚಿತ್ರದುರ್ಗ:  ವಿಶ್ವಕರ್ಮ ಸಮುದಾಯದ ಯುವಕರ ಕ್ರೀಡಾ ಪ್ರತಿಭೆಯನ್ನು...

Must read

- Advertisement -spot_imgspot_img

You might also likeRELATED
Recommended to you