Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್

ಶಿವಮೊಗ್ಗ-ತನ್ವಿ ಕ್ರಿಕೆಟರ್ಸ್ ಇಂದಾವರ ಇವರ ಆಶ್ರಯದಲ್ಲಿ ಮಹಾಲಕ್ಷ್ಮಿ ಕಪ್-2021

ತನ್ವಿ ಕ್ರಿಕೆಟರ್ಸ್ ಇಂದಾವರ ಹಲವಾರು ಪಂದ್ಯಾಕೂಟಗಳನ್ನು ಆಯೋಜಿಸಿದ ಹಾಗೂ ವಿವಿಧೆಡೆ ಪ್ರಶಸ್ತಿ ಜಯಿಸಿದ ಸಂಸ್ಥೆ.ಈ ಸಂಸ್ಥೆ ಡಿಸೆಂಬರ್ 4 ಮತ್ತು 5 ರಂದು ತೀರ್ಥಹಳ್ಳಿ ಇಂದಾವರ ಮಹಾಲಕ್ಷ್ಮಿ ಕ್ರೀಡಾಂಗಣದಲ್ಲಿ 2 ನೇ ವರ್ಷದ ಟೆನಿಸ್ಬಾಲ್ ಸೂಪರ್ 8 ಕ್ರಿಕೆಟ್ ಪಂದ್ಯಾವಳಿ “ಮಹಾಲಕ್ಷ್ಮಿ ಕಪ್-2021” ಆಯೋಜಿಸಿದ್ದಾರೆ.
ಒಟ್ಟು 24 ತಂಡಗಳು ಭಾಗವಹಿಸಲಿದ್ದು ಪ್ರಥಮ ಪ್ರಶಸ್ತಿ ಪಡೆವ ತಂಡ 20,000 ನಗದು,ದ್ವಿತೀಯ ಸ್ಥಾನಿ10,000 ಹಾಗೂ ತೃತೀಯ ಸ್ಥಾನಿ ನಗದು ಬಹುಮಾನದೊಂದಿಗೆ ಆಕರ್ಷಕ ಪಾರಿತೋಷಕಗಳನ್ನು ಪಡೆಯಲಿದ್ದು,ವೈಯಕ್ತಿಕ ಶ್ರೇಷ್ಠ ನಿರ್ವಹಣೆ ನೀಡಿದ ಆಟಗಾರರಿಗೆ ವಿಶೇಷ ಆಕರ್ಷಕ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.
ನಿಯಮಗಳು
1-ಪ್ರತಿ ಪಂದ್ಯ 5 ಓವರ್ ಗಳಿಗೆ ಸೀಮಿತವಾಗಿರುತ್ತದೆ.
2-ರಾಡಿ ಎಸೆತಕ್ಕೆ ಅವಕಾಶ ಇರುವುದಿಲ್ಲ.
3-ಡಿಸೆಂಬರ್ 4 ರಂದು ತೀರ್ಥಹಳ್ಳಿ(ತಾ)ಗ್ರಾಮ ಪಂಚಾಯತಿಯ 12 ತಂಡಗಳಿಗೆ ಮಾತ್ರ ಅವಕಾಶ
4-ಡಿಸೆಂಬರ್ 5 ರಂದು ಅಂತರ್ ಜಿಲ್ಲಾಮಟ್ಟದ 12 ತಂಡಗಳಿಗೆ ಮಾತ್ರ ಅವಕಾಶ
5-ಒಂದು ತಂಡದಲ್ಲಿ 9 ಜನ ಆಟಗಾರರಿಗೆ ಅವಕಾಶ ಇರುತ್ತದೆ.
6- ತಂಡಗಳ ನೋಂದಣಿಗೆ 15/11/2021 ಕೊನೆಯ ದಿನಾಂಕವಾಗಿರುತ್ತದೆ.
7-ಪಂದ್ಯವು ಟೈಸ್ ಹಾಕಿ ಆಡಿಸಲಾಗುತ್ತದೆ.
8-ಈ ಪಂದ್ಯಾವಳಿಯಲ್ಲಿ 6+4 ಲೆಗ್ ಬೈಸ್ ಒಳಗೊಂಡಿರುತ್ತದೆ.
9-ಆಟಗಾರರಿಗೆ ಭೋಜನದ ವ್ಯವಸ್ಥೆ ಕಲ್ಪಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ 7348891952,9148274414,7676854730 ನಂಬರ್ ಗಳನ್ನು ಸಂಪರ್ಕಿಸಬಹುದು.

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

18 − seven =