Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್

ದುಬೈ-ಯಶಸ್ವಿ ದ್ವಿತೀಯ ಬಾರಿಗೆ ಕರ್ನಾಟಕದ ಆಟಗಾರರಿಗಾಗಿ ಯುನೈಟೆಡ್ ಕಾಪು ಟ್ರೋಫಿ-2021

ಕಾಪು ಪರಿಸರದ ಆಟಗಾರರು ಪ್ರಸ್ತುತ ದುಬೈನಲ್ಲಿ ಉದ್ಯೋಗದಲ್ಲಿರುವ ಫೈಜಲ್ ಕಾಪು,ಶಫಿ, ಆದಿಲ್,ಶಾಕಿರ್ ಹಾಗೂ ಆಶಿಕ್ ಸ್ನೇಹಿತರೆಲ್ಲರ ಒಗ್ಗೂಡುವಿಕೆಯ ಯುನೈಟೆಡ್ ಕಾಪು ತಂಡ 2 ನೇ ಬಾರಿಗೆ ಯುನೈಟೆಡ್ ಕಾಪು ಟ್ರೋಫಿ-2021 ಪಂದ್ಯಾವಳಿಯನ್ನು ಆಯೋಜಿಸಿದ್ದಾರೆ.
ದಿನಾಂಕ 26-11-2021 ಶುಕ್ರವಾರದಂದು ದುಬೈ ನ ಅಜ್ಮನ್ ಓವಲ್ ಕ್ರೀಡಾಂಗಣದಲ್ಲಿ,ಹೊನಲು ಬೆಳಕಿನಲ್ಲಿ,ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ನಡೆಯಲಿರುವ ಈ ಪಂದ್ಯಾಕೂಟದಲ್ಲಿ ಕರ್ನಾಟಕದ ಆಟಗಾರರಿಂದ ಕೂಡಿದ 8 ಪ್ರತಿಷ್ಠಿತ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿದೆ.
ಭಾಗವಹಿಸುವ 8 ತಂಡಗಳು
1-ಟೀಮ್ ಎಕ್ಸ್ಪರ್ಟ್ ದಾಫ್ಜಾ
2-ಬ್ಲೂ ಫೋರ್ಸ್
3-ಟೀಮ್ ಎಲಿಗೆಂಟ್
4-ಕೆ.ಎಫ್.ಸಿ
5-ದುಬೈ ಲೆಜೆಂಡ್ಸ್
6-ಟಿ.ಸಿ.ಎ
7-ಮಂಗಳೂರು ವಾರಿಯರ್ಸ್‌
8-ಯು.ಟಿ.ಎಸ್.ಕಟೀಲ್ ಫ್ರೆಂಡ್ಸ್
ಟೂರ್ನಮೆಂಟ್ ನ ಪ್ರಥಮ ಪ್ರಶಸ್ತಿ ವಿಜೇತ ತಂಡ 5005 ದಿರ್ಹಮ್ಸ್,ದ್ವಿತೀಯ ಪ್ರಶಸ್ತಿ 2505 ದಿರ್ಹಮ್ಸ್ ಸಹಿತ ಆಕರ್ಷಕ ಪಾರಿತೋಷಕಗಳನ್ನು ಪಡೆಯಲಿದ್ದಾರೆ.
ನಿನ್ನೆ ನಡೆದ ಟ್ರೋಫಿ ಅನಾವರಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ತಾಜಾಮುಲ್,ಸುನಿಲ್ ಶೆಟ್ಟಿ ಹಾಗೂ ಸಂಘಟಕರು,ಭಾಗವಹಿಸುವ ತಂಡಗಳ ಮಾಲೀಕರು ಉಪಸ್ಥಿತರಿದ್ದರು.ಕ್ಲೇವನ್ ಕಾರ್ಯಕ್ರಮ ನಿರೂಪಿಸಿದರು.

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

1 + 5 =