ಕ್ರಿಕೆಟ್ಬಾಂಗ್ಲಾ ವಿರುದ್ದ ಸ್ಕಾಟ್ಲೆಂಡ್ಗೆ ರೋಚಕ ಜಯ

ಬಾಂಗ್ಲಾ ವಿರುದ್ದ ಸ್ಕಾಟ್ಲೆಂಡ್ಗೆ ರೋಚಕ ಜಯ

-

- Advertisment -spot_img
ದುಬೈ ಅ 18 : ಕ್ರಿಸ್ಸ್ ಗ್ರೇವೆಸ್ ಅವರ ಆಲ್ರೌಂಡ್ ಆಟದಿಂದ ಮಿಂಚಿದ ಸ್ಕಾಟ್ಲೆಂಡ್ ತಂಡ ಬಾಂಗ್ಲಾದೇಶ ವಿರುದ್ದ 6 ರನ್ಗಳ ರೋಚಕ ಜಯ ದಾಖಲಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಸ್ಕಾಟ್ಲೆಂಡ್ ತಂಡ, ಸ್ಪಿನ್ನರ್ಗಳಾದ ಶಕಿಬ್ ಅಲ್ ಹಸನ್ (17ಕ್ಕೆ 2) ಮತ್ತು ಮೆಹ್ದಿ ಹಸನ್ (19ಕ್ಕೆ 3) ಅವರ ಶಿಸ್ತಿನ ದಾಳೆ ಎದುರು 140/9 ರನ್ಗಳ ಸವಾಲಿನ ಮೊತ್ತ ಮಾತ್ರ ದಾಖಲಿಸಲು ಶಕ್ತವಾಯಿತು
ಒಂದು ಹಂತದಲ್ಲಿ 52 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಒತ್ತಡದಲ್ಲಿದ್ದ ಸ್ಕಾಟ್ಲೆಂಡ್ ತಂಡಕ್ಕೆ ಆಸರೆಯಾಗಿ ನಿಂತ ಕ್ರಿಸ್ ಗ್ರೇವೆಸ್, ಕೇವಲ 28 ಎಸೆತಗಳಲ್ಲಿ 4 ಫೋರ್ ಮತ್ತು 2 ಸಿಕ್ಸರ್ ನೆರವಿನಿಂದ ಬಿರುಸಿನ 45 ರನ್ಗಳಿಸಿದರು ಇವರಿಗೆ ಜೆತೆಯಾಗಿ ನಿಂತಮಾರ್ಕ್ ವ್ಯಾಟ್ 22 ರನ್ಗಳಿಸಿ ತಂಡವನ್ನು 120ರ ಗಡಿ ದಾಟಿಸುವಲ್ಲಿ ಸಫಲರಾದರು.
140 ರನ್ಗಳ ಸಾಧರಣ ಮೊತ್ತದ ಗುರಿ ಬೆನ್ನತ್ತದ ಬಾಂಗ್ಲಾ ಸೌಮ್ಯ ಸರ್ಕಾರ್ ಮತ್ತು ಲಿಟನ್ ದಾಸ್ (5) ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಒಳಗಾಯಿತು. ನಂತರ ಬಂದ ಶಕಿಬ್ ಅಲ್ ಹಸನ್ (28 ಎಸೆತಗಳಲ್ಲಿ 20 ರನ್) ಮತ್ತು ಮುಷ್ಫಿಕರ್ ರಹೀಮ್ (36 ಎಸೆತಗಳಲ್ಲಿ 38 ರನ್) ಗಳಿಸಿ ಫೆವಿಲಿಯನ್ ಹಾದಿ ಹಿಡಿದರು. ಅಂತಿಮವಾಗಿ ನಾಯಕ ಮಹ್ಮೂದುಲ್ಲ (23), ಆಫಿಫ್ ಹುಸೇನ್ (18) ಮತ್ತು ಮೆಹ್ದಿ ಹಸನ್ (15*) ಹೋರಾಟ ನಡೆಸಿದರೂ ಕೂಡ ನಿಗದಿತ 20 ಓವರ್ಗಳಲ್ಲಿ 7 ವಿಕಟ್ ಕಳೆದುಕೊಂಡು 134 ರನ್ ಮಾತ್ರ ಕಲೆಹಾಕಿ 6 ರನ್ಗಳಿಂದ ಸೋಲನುಭವಿಸಿತು.
ಈ ಪಂದ್ಯದಲ್ಲಿ ಆಕರ್ಷಕವಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶಿಸಿದ ಕ್ರಿಸ್ ಗ್ರೇವೆಸ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

one × 4 =

Latest news

ಶ್ರೀ ಜಲವಿನಾಯಕ ಟ್ರೋಫಿ 2026: ಕ್ರಿಕೆಟ್ ಪಂದ್ಯಾವಳಿಗೆ ಸಜ್ಜಾದ ಹುಣಸವಳ್ಳಿ

ಶ್ರೀ ಜಲವಿನಾಯಕ ಟ್ರೋಫಿ 2026: ಕ್ರಿಕೆಟ್ ಪಂದ್ಯಾವಳಿಗೆ ಸಜ್ಜಾದ ಹುಣಸವಳ್ಳಿ ಹುಣಸವಳ್ಳಿ ಹಾಗೂ ಕುರುವಳ್ಳಿ ಪೋಸ್ಟ್, ತೀರ್ಥಹಳ್ಳಿ ತಾಲೂಕು ಕ್ರೀಡಾಭಿಮಾನಿಗಳಿಗೆ ಸಂತಸದ ಸುದ್ದಿ. ಆಗುಂಬೆ ಮತ್ತು ಮುತ್ತೂರು...

ಭಾರತೀಯ ತಂಡದಲ್ಲಿ ಸ್ಥಾನಕ್ಕಾಗಿ ಹೋರಾಡಿ ಹೀರೋ ಆದ ಸಂಜು ಸ್ಯಾಮ್ಸನ್ ಕಥೆ

  ಭಾರತೀಯ ತಂಡದಲ್ಲಿ ಸ್ಥಾನಕ್ಕಾಗಿ ಹೋರಾಡಿ ಹೀರೋ ಆದ ಸಂಜು ಸ್ಯಾಮ್ಸನ್ ಕಥೆ ಕ್ರಿಕೆಟ್ ಜೀವನದಲ್ಲಿ ಕೆಲ ಕ್ಷಣಗಳು ಆಟಗಾರನ ಜೀವನವನ್ನೇ ಬದಲಾಯಿಸುತ್ತವೆ. ಆ ಕ್ಷಣಗಳು ನೋವು,...

ಭಾರತ ವಿಶ್ವ ಚಾಂಪಿಯನ್: ಟಿ20 ವಿಶ್ವಕಪ್ ಮತ್ತೆ ಭಾರತಕ್ಕೇ!

  ಭಾರತ ವಿಶ್ವ ಚಾಂಪಿಯನ್: ಟಿ20 ವಿಶ್ವಕಪ್ ಮತ್ತೆ ಭಾರತಕ್ಕೇ! ಟೀಮ್ ಇಂಡಿಯಾ ಇತಿಹಾಸ ಸೃಷ್ಟಿಸಿದೆ. ಹಾಲಿ ಚಾಂಪಿಯನ್ ಆಗಿ ಟಿ20 ವಿಶ್ವಕಪ್ ಉಳಿಸಿಕೊಳ್ಳುವುದರ ಜೊತೆಗೆ, ತವರು ನೆಲದಲ್ಲಿ...

ಭಾರತಕ್ಕೆ ಮೂರನೇ ಟಿ20 ವಿಶ್ವಕಪ್ ಕಿರೀಟ – ಐತಿಹಾಸಿಕ ಸಾಧನೆ

ಭಾರತಕ್ಕೆ ಮೂರನೇ ಟಿ20 ವಿಶ್ವಕಪ್ ಕಿರೀಟ – ಐತಿಹಾಸಿಕ ಸಾಧನೆ ಕ್ರಿಕೆಟ್ ಲೋಕದಲ್ಲಿ ಮತ್ತೊಮ್ಮೆ ಇತಿಹಾಸ ನಿರ್ಮಿಸಿದ Team India ತಂಡವು ಟಿ20 ವಿಶ್ವಕಪ್‌ನಲ್ಲಿ ತನ್ನ ಪ್ರಭಾವವನ್ನು...
- Advertisement -spot_imgspot_img

NIPM ಕ್ರಿಕೆಟ್ ಎಕ್ಸ್‌ಪ್ಲೋಶನ್ ಕಾರ್ಪೊರೇಟ್ ಟೂರ್ನಮೆಂಟ್ 2026: NMPA ಚಾಂಪಿಯನ್

NIPM ಕ್ರಿಕೆಟ್ ಎಕ್ಸ್‌ಪ್ಲೋಶನ್ ಕಾರ್ಪೊರೇಟ್ ಟೂರ್ನಮೆಂಟ್ 2026: NMPA ಚಾಂಪಿಯನ್ **New Mangalore Port Authority (ಎನ್‌ಎಂಪಿಎ)** ತಂಡವು **NIPM Cricket Explosion Corporate Cricket Tournament...

ಮಂಗಳೂರಿನಲ್ಲಿ ಕಾರ್ಪೊರೇಟ್ ಕ್ರಿಕೆಟ್ ಹಬ್ಬಕ್ಕೆ ಚಾಲನೆ; NIPM ಮಂಗಳೂರು ಚಾಪ್ಟರ್‌ನಿಂದ “ಕ್ರಿಕೆಟ್ ಎಕ್ಸ್‌ಪ್ಲೋಷನ್” ಟೂರ್ನಿ

ಮಂಗಳೂರಿನಲ್ಲಿ ಕಾರ್ಪೊರೇಟ್ ಕ್ರಿಕೆಟ್ ಹಬ್ಬಕ್ಕೆ ಚಾಲನೆ NIPM ಮಂಗಳೂರು ಚಾಪ್ಟರ್‌ನಿಂದ “ಕ್ರಿಕೆಟ್ ಎಕ್ಸ್‌ಪ್ಲೋಷನ್” ಟೂರ್ನಿ ಮಂಗಳೂರು: ಮಾನವ ಸಂಪನ್ಮೂಲ ಕ್ಷೇತ್ರದ ಪ್ರಮುಖ ಸಂಘಟನೆಯಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪರ್ಸನಲ್ ಮ್ಯಾನೇಜ್‌ಮೆಂಟ್ (NIPM)...

Must read

- Advertisement -spot_imgspot_img

You might also likeRELATED
Recommended to you