ಕ್ರಿಕೆಟ್ಆರ್.ಸಿ.ಬಿ ಯಾವತ್ತೂ ಮರೆಯದ..ಮರೆಯಲಾಗದ.. ಮರೆಯಬಾರದ ಮಾಣಿಕ್ಯ..!

ಆರ್.ಸಿ.ಬಿ ಯಾವತ್ತೂ ಮರೆಯದ..ಮರೆಯಲಾಗದ.. ಮರೆಯಬಾರದ ಮಾಣಿಕ್ಯ..!

-

- Advertisment -spot_img

ಆರ್.ಸಿ.ಬಿ ಯಾವತ್ತೂ ಮರೆಯದ..ಮರೆಯಲಾಗದ.. ಮರೆಯಬಾರದ ಮಾಣಿಕ್ಯ..!

ಅವನ ಜೀವನವೇ ಹೋರಾಟ.. ಕೈ ಹಿಡಿದ ಪತ್ನಿಯಿಂದ ಮೋಸ..
ಪ್ರಾಣ ಸ್ನೇಹಿತನಿಂದ ನಂಬಿಕೆ ದ್ರೋಹ.. ಜೀವನವನ್ನೇ ಕೊನೆಗಾಣಿಸಿ ಬಿಡಬೇಕೆಂಬ ಜಿಗುಪ್ಸೆ.. ಹತಾಶೆ.. ಮನೆಯ ನಾಲ್ಕು ಗೋಡೆಗಳ ಮಧ್ಯೆ ತನ್ನನ್ನು ಬಂಧಿಸಿಕೊಂಡು ಪ್ರತೀ ದಿನ ಮಾನಸಿಕ ಚಿತ್ರಹಿಂಸೆ ಅನುಭವಿಸಿದ್ದವನು ಅಲ್ಲಿಂದ ಎದ್ದು ಬಂದು ಇಟ್ಟ ಒಂದೊಂದು ಹೆಜ್ಜೆಯೂ ಚರಿತ್ರೆ..

ಆಟಗಾರನಾಗಿ ಕ್ರಿಕೆಟ್ ಬದುಕಿನ ಕೊನೆಯ ಅಧ್ಯಾಯ ಆರಂಭಿಸಿದ್ದವನಿಗೆ ಅವಕಾಶ ಕೊಟ್ಟದ್ದು ರಾಯಲ್ ಚಾಲೆಂಜರ್ಸ್..

ಬೆಂಗಳೂರು ಬಳಗ ಸೇರಿಕೊಂಡವನು ಹೊಸ ಇತಿಹಾಸವನ್ನೇ ಬರೆದು ಬಿಟ್ಟ. ಅಲ್ಲಿಂದ ಒಂದು ಹೆಜ್ಜೆ ಮುಂದಿಟ್ಟವನು ನಂಬಲಸಾಧ್ಯ ರೀತಿಯಲ್ಲಿ ಭಾರತ ಪರ 12 ವರ್ಷಗಳ ನಂತರ ಟಿ20 ವಿಶ್ವಕಪ್ ಆಡಿದ.. ಮತ್ತೆರಡು ವರ್ಷ ಆರ್.ಸಿ.ಬಿ ಪರ ಆಟ.. ಕಳೆದ ವರ್ಷ ನಿವೃತ್ತಿ ಘೋಷಿಸಿದವನು ರಾಯಲ್ ಚಾಲೆಂಜರ್ಸ್ ತಂಡದ ಮಾರ್ಗದರ್ಶಕ ಜವಾಬ್ದಾರಿ ಹೊತ್ತುಕೊಳ್ಳುತ್ತಾನೆ.

ಆ ಕ್ಷಣ ಮತ್ತದೇ ಕುಹಕ, ಮತ್ತದೇ ಮೂದಲಿಕೆ..
‘’17 ವರ್ಷಗಳಲ್ಲಿ ಎಂತೆಂಥವರ ಕೈಯಲ್ಲಿ ಏನೂ ಆಗಲಿಲ್ಲ, ಈಗ ಇವನೇನು ಮಾಡಿಯಾನು..?’ ಎಂದವರಿಗೆ ಉತ್ತರ ಕೊಟ್ಟಿದ್ದಾನೆ ಅವನು.. ಅಂದ ಹಾಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಾಗುತ್ತಿದ್ದ ದಿಕ್ಕನ್ನೇ ಬದಲಿಸಿದವನ ಹೆಸರು ಡಿ.ಕೆ.. ದಿನೇಶ್ ಕಾರ್ತಿಕ್..

ರಾಯಲ್ ಚಾಲೆಂಜರ್ಸ್’ನ ಯಶೋಗಾಥೆಯ ಶ್ರೇಯಸ್ಸು ನಿಸ್ಸಂದೇಹವಾಗಿ ಆಟಗಾರರದ್ದು. ಆದರೆ ಒಬ್ಬ ಡಿ.ಕೆ ಸಾಹೇಬನ ಪಾತ್ರವನ್ನು ಮರೆತು ಬಿಟ್ಟರೆ ಅದು ಸಾಧುವಲ್ಲ.

‘’17 ವರ್ಷಗಳಲ್ಲಿ ಆಗದ್ದು ಈಗೇಕೆ ಸಾಧ್ಯವಾಯಿತು’’ ಎಂಬ ಪ್ರಶ್ನೆಗೆ ಉತ್ತರ ದಿನೇಶ್ ಕಾರ್ತಿಕ್.
ಮೆಂಟರ್ ಆಗಿ ಆರ್.ಸಿ.ಬಿ ತಂಡದಲ್ಲಿ ಹೊಸ ಜವಾಬ್ದಾರಿಗೆ ಹೆಗಲಾಗಿದ್ದ ಡಿ.ಕೆ ಪ್ಲಾನ್ ಆಫ್ ಆ್ಯಕ್ಷನ್ ಸ್ಪಷ್ಟ ಇತ್ತು. ಪ್ರತೀ ಬಾರಿ ದೊಡ್ಡ ಸ್ಟಾರ್’ಗಳ ಹಿಂದೆ ಬಿದ್ದು ಅವರಿಗೆ ಕೋಟಿ ಕೋಟಿ ಸುರಿದು ಕೈ ಸುಟ್ಟುಕೊಳ್ಳುತ್ತಿದ್ದ ಆರ್.ಸಿ.ಬಿ ಈ ಬಾರಿ ಆ ತಪ್ಪು ಮಾಡಲಿಲ್ಲ. ಕಾರಣ, ಅಲ್ಲಿ ದಿನೇಶ್ ಕಾರ್ತಿಕ್ ಕುಳಿತಿದ್ದ.

‘’ಖ್ಯಾತಿಗಿಂತ ಕೌಶಲ್ಯ ಮುಖ್ಯ’’ ಎಂಬ ಸತ್ಯವೇ ಆರ್.ಸಿ.ಬಿಯನ್ನು ಈ ಬಾರಿ ಚಾಂಪಿಯನ್ ಆಗಿಸಿದ್ದು. ಅದಿಲ್ಲದೇ ಹೋಗಿದ್ದರೆ ಒಬ್ಬ ಕೃಣಾಲ್ ಪಾಂಡ್ಯ, ಒಬ್ಬ ಭುವನೇಶ್ವರ್ ಕುಮಾರ್, ಒಬ್ಬ ಜಿತೇಶ್ ಶರ್ಮಾ, ಒಬ್ಬ ಫಿಲ್ ಸಾಲ್ಟ್, ಒಬ್ಬ ಸುಯಾಶ್ ಶರ್ಮಾ ಆರ್.ಸಿ.ಬಿ ತಂಡ ಸೇರಿಕೊಳ್ಳಲು ಸಾಧ್ಯವೇ ಇರಲಿಲ್ಲ.
ಇದರ ಸಂಪೂರ್ಣ ಶ್ರೇಯ ಸಲ್ಲಬೇಕಿರುವುದು ದಿನೇಶ್ ಕಾರ್ತಿಕ್’ಗೆ.

ಮತ್ತೊಂದು ವಿಚಾರವನ್ನು ಇಲ್ಲಿ ಹೇಳಲೇಬೇಕು. ಹಿಂದೊಮ್ಮೆ ಆರ್.ಸಿ.ಬಿ ಪರ ಆಡಿ 2016ರ ಫೈನಲ್ ಸೋಲಿಗೆ ಕಾರಣನಾಗಿದ್ದ ಶೇನ್ ವಾಟ್ಸನ್ 2021ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್’ಗೆ ಕಪ್ ಗೆಲ್ಲಿಸುತ್ತಾನೆ. ‘ಆರ್.ಸಿ.ಬಿಗೂ ಸಿ.ಎಸ್.ಕೆಗೂ ಏನು ವ್ಯತ್ಯಾಸ’ ಎಂದು ಕೇಳಿದ ಪ್ರಶ್ನೆಗೆ ಆತ ಕೊಟ್ಟ ಉತ್ತರವೇನು ಗೊತ್ತೇ..? ‘’ಅಲ್ಲಿ ನನ್ನ ಪಾತ್ರದ ಬಗ್ಗೆ, ಜವಾಬ್ದಾರಿ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಇಲ್ಲಿ ಆ ಸ್ಪಷ್ಟತೆ ಇದೆ’’ ಎಂದು.

ಈ ಬಾರಿ ಆರ್.ಸಿ.ಬಿ ಆಟಗಾರರಿಗೆ ಆ ಸ್ಪಷ್ಟತೆಯನ್ನು ದಿನೇಶ್ ಕಾರ್ತಿಕ್ ಸ್ಪಷ್ಟವಾಗಿ ಕೊಟ್ಟು ಬಿಟ್ಟಿದ್ದ. ಫಲಿತಾಂಶ ಕಣ್ಣ ಮುಂದೆಯೇ ಇದೆ.

 

LEAVE A REPLY

Please enter your comment!
Please enter your name here

five × two =

Latest news

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ ಸಿರ್ಸಿಯ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ Shri Marikamba Trophy ಓಪನ್ ಹಾರ್ಡ್ ಟೆನಿಸ್ ಕ್ರಿಕೆಟ್...

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ!

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ! ಹೆಜಮಾಡಿ ಸಮೀಪದ ಶಾನುಭಾಗ...

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ ಉಡುಪಿ, ಏಪ್ರಿಲ್ 5, 2026: ಪರಿಸರ ಸಂರಕ್ಷಣೆಗೆ ಹೊಸ ದಿಕ್ಕು ತೋರಿಸುವ ವಿಶಿಷ್ಟ ಪ್ರಯತ್ನವಾಗಿ, ಕ್ರಿಕೆಟ್ ದಂತಕಥೆ...

ಅಮ್ಗೆಲೆ ಅಭರಣ್ GPL ಉತ್ಸವ – 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ

ಅಮ್ಗೆಲೆ ಅಭರಣ್ GPL– 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ ಜಿಎಸ್‌ಬಿ ಕ್ರೀಡಾಭಿಮಾನಿಗಳು ಆತುರದಿಂದ ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. *ಅಮ್ಗೆಲೆ ಅಭರಣ್ GPL...
- Advertisement -spot_imgspot_img

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ ರೈಲ್ವೇಸ್ ಪರವಾಗಿ ರಣಜಿ ಟ್ರೋಫಿಯಲ್ಲಿ ಪ್ರತಿನಿಧಿಸಿದ್ದ ಮಾಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ಅವರು ಹೃದಯಾಘಾತದಿಂದ ಮುಂಬೈನ ಮುಲುಂಡ್‌ನಲ್ಲಿರುವ...

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು ಫ್ರೆಂಡ್ಸ್ ಅಳಿಯೂರು ವತಿಯಿಂದ ಮೊದಲ ಬಾರಿಗೆ ಅಳಿಯೂರು ಪ್ರೀಮಿಯರ್ ಲೀಗ್ (APL-2026) – ಸೀಸನ್ 1 ಆಯೋಜಿಸಲಾಗಿದೆ....

Must read

- Advertisement -spot_imgspot_img

You might also likeRELATED
Recommended to you