ಕ್ರಿಕೆಟ್ತಮ್ಮ ಪಾಲಿಗೆ ಬಂದ ಎರಡೂವರೆ ಕೋಟಿ ದುಡ್ಡನ್ನು ಬೇಡ ಎಂದರು ‘ಅಪ್ಪಟ...

ತಮ್ಮ ಪಾಲಿಗೆ ಬಂದ ಎರಡೂವರೆ ಕೋಟಿ ದುಡ್ಡನ್ನು ಬೇಡ ಎಂದರು ‘ಅಪ್ಪಟ ಅಪರಂಜಿ’ ದ್ರಾವಿಡ್!

-

- Advertisment -spot_img
“ಹಣ ಕಂಡರೆ ಹೆಣವೂ ಬಾಯಿ ಬಿಡುತ್ತದೆ” ಎಂಬ ಮಾತಿದೆ. ಹಣದ ಮುಂದೆ ಯಾವ ಆದರ್ಶಗಳೂ ನಿಲ್ಲುವುದಿಲ್ಲ ಎಂಬ ಕಾಲದಲ್ಲಿ ಇಲ್ಲೊಬ್ಬರು ಹಣಕ್ಕಿಂತ ನನಗೆ ನಾನು ನಂಬಿದ ಆದರ್ಶವೇ ಮುಖ್ಯ ಎಂಬುದನ್ನು ಮತ್ತೆ ಮತ್ತೆ ಸಾರಿ ಹೇಳುತ್ತಿದ್ದಾರೆ. ಅವರು ರಾಹುಲ್ ದ್ರಾವಿಡ್.
ಕೋಟಿ ಹಣ ಮತ್ತು ನಂಬಿದ ಆದರ್ಶ.. ಇದರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಿ ಎಂದರೆ ರಾಹುಲ್ ದ್ರಾವಿಡ್ ಅವರ ಆಯ್ಕೆ ಆದರ್ಶ.
ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ₹125 ಕೋಟಿ cash prizeನ್ನು ಬಿಸಿಸಿಐ ಘೋಷಣೆ ಮಾಡಿತ್ತು. ಇದರಲ್ಲಿ 15 ಮಂದಿ ಆಟಗಾರರಿಗೆ ತಲಾ ₹5 ಕೋಟಿ, ಹೆಡ್ ಕೋಚ್ ದ್ರಾವಿಡ್ ಅವರಿಗೂ ₹5 ಕೋಟಿ; ಬ್ಯಾಟಿಂಗ್ ಕೋಚ್, ಬೌಲಿಂಗ್ ಕೋಚ್, ಫೀಲ್ಡಿಂಗ್ ಕೋಚ್’ಗೆ ತಲಾ ₹2.5 ಕೋಟಿ ಕೊಡುವುದೆಂದು ಬಿಸಿಸಿಐ ತೀರ್ಮಾನ ಮಾಡಿತ್ತು.
ವಿಶ್ವಕಪ್ ಗೆದ್ದ ಮರುದಿನ.. ಅಂದರೆ ಜೂನ್ 30..
ಬಾರ್ಬೆಡೋಸ್’ನ ಹಿಲ್ಟನ್ ಹೋಟೆಲ್’ನಲ್ಲಿ prize money ಬಗ್ಗೆ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಅವರ ಬಳಿ ಬಿಸಿಸಿಐ secretary ಜಯ್ ಶಾ ಮಾತುಕತೆ ನಡೆಸುತ್ತಾನೆ. ಆಗ ರಾಹುಲ್ ದ್ರಾವಿಡ್ ಏನು ಹೇಳಿದರು ಗೊತ್ತೇ..
“ನನ್ನ ಸಪೋರ್ಟಿಂಗ್ ಸ್ಟಾಫ್’ಗೆ (ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಕೋಚ್) ಎಷ್ಟು ಕೊಡುತ್ತಿರೋ, ನನಗೂ ಅಷ್ಟೇ ಕೊಡಿ. ನಮ್ಮ ಮಧ್ಯೆ discrimination ಮಾಡುವುದು ನನಗೆ ಇಷ್ಟವಿಲ್ಲ”.
ಆದರೆ ಸಪೋರ್ಟಿಂಗ್ ಸ್ಟಾಫ್’ಗೆ ₹5 ಕೋಟಿ ಕೊಡಲು ಜಯ್ ಶಾ ಸುತಾರಾಂ ಒಪ್ಪಲೇ ಇಲ್ಲ. ಕೊನೆಗೆ ರಾಹುಲ್ ದ್ರಾವಿಡ್ ಅವರೇ ನನಗೆ ಎರಡೂವರೆ ಕೋಟಿ ರೂಪಾಯಿಗಳೇ ಸಾಕು ಅಂದು ಬಿಟ್ಟರು. ಹೀಗೆ ತಮ್ಮ ಪಾಲಿಗೆ ಬಂದಿದ್ದ ಎರಡೂವರೆ ಕೋಟಿಗಳನ್ನು ತಮ್ಮ ಜೊತೆ ಕೆಲಸ ಮಾಡಿದವರ ಕಾರಣಕ್ಕೆ ದ್ರಾವಿಡ್ ತಿರಸ್ಕರಿಸಿ ಬಿಟ್ಟಿದ್ದಾರೆ.
2018ರಲ್ಲಿ ಭಾರತ ತಂಡ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಅಂಡರ್-19 ವಿಶ್ವಕಪ್ ಗೆದ್ದಾಗಲೂ ಇಂಥದ್ದೇ ಘಟನೆ ನಡೆದಿತ್ತು. ಅವತ್ತು ಕೋಚ್ ದ್ರಾವಿಡ್ ಅವರಿಗೆ ₹50 ಲಕ್ಷ, ಆಟಗಾರರಿಗೆ ₹30 ಲಕ್ಷ ಕೊಡಲು ಬಿಸಿಸಿಐ ನಿರ್ಧರಿಸಿತ್ತು. “ಆಟಗಾರರಿಗೆ ಕೊಡುವಷ್ಟೇ ನನಗೂ ಕೊಡಿ, ನನಗೆ ಹೆಚ್ಚು, ಅವರಿಗೆ ಕಡಿಮೆ ಬೇಡವೇ ಬೇಡ” ಎಂದು ಕಡ್ಡಿ ಮುರಿದಂತೆ ದ್ರಾವಿಡ್ ಹೇಳಿದ್ದರು.
ಬೇರೆಯವರಿಗಿಂತ ರಾಹುಲ್ ದ್ರಾವಿಡ್ different ಅನ್ನಿಸಿಕೊಳ್ಳುವುದು ಇಂಥದ್ದೇ ಕಾರಣಗಳಿಗೆ❤️

LEAVE A REPLY

Please enter your comment!
Please enter your name here

nine + 5 =

Latest news

ಆರ್‌ಪಿ ಟ್ರೋಫಿಗೆ ಕರ್ನಾಟಕದ ಅಕುಲ್ ಟೂರಿಸಂ XI ತಂಡ ಘೋಷಣೆ

ಆರ್‌ಪಿ ಟ್ರೋಫಿಗೆ ಕರ್ನಾಟಕದ ಅಕುಲ್ ಟೂರಿಸಂ XI ತಂಡ ಘೋಷಣೆ ಮಂಗಳೂರು/ಬೆಂಗಳೂರು: ಪ್ರತಿಷ್ಠಿತ ಆರ್‌ಪಿ ಟ್ರೋಫಿ 2026 ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಿಗೆ ಕರ್ನಾಟಕದ ಅಕುಲ್ ಟೂರಿಸಂ...

ಬೈಂದೂರಿನಲ್ಲಿ “ವಿಕ್ರಂ ಟ್ರೋಫಿ–2026” ಅಂಡರ್-23 ಟಿ-20 ಕ್ರಿಕೆಟ್ ಟೂರ್ನಿಗೆ ಭರ್ಜರಿ ಸಿದ್ಧತೆ

ಬೈಂದೂರಿನಲ್ಲಿ “ವಿಕ್ರಂ ಟ್ರೋಫಿ–2026” ಅಂಡರ್-23 ಟಿ-20 ಕ್ರಿಕೆಟ್ ಟೂರ್ನಿಗೆ ಸಿದ್ಧತೆ ಬೈಂದೂರು: ಯುವ ಕ್ರಿಕೆಟ್ ಪ್ರತಿಭೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ವಿಕ್ರಂ ಕ್ರಿಕೆಟ್ ಕ್ಲಬ್ ಬೈಂದೂರು ವತಿಯಿಂದ,...

ಉರ್ವಾ ಮೈದಾನದಲ್ಲಿ ಮಂಗಳಾಪುರ ಟ್ರೋಫಿ ಸಂಭ್ರಮ – ಕೊಂಕಣ್ ಎಕ್ಸ್‌ಪ್ರೆಸ್ ಚಾಂಪಿಯನ್

ಉರ್ವಾ ಮೈದಾನದಲ್ಲಿ ಮಂಗಳಾಪುರ ಟ್ರೋಫಿ ಸಂಭ್ರಮ – ಕೊಂಕಣ್ ಎಕ್ಸ್‌ಪ್ರೆಸ್ ಚಾಂಪಿಯನ್ ಮಂಗಳೂರು ಉರ್ವಾ ಮೈದಾನದಲ್ಲಿ ಎರಡು ದಿನಗಳ ಕಾಲ ಹೊನಲು ಬೆಳಕಿನಲ್ಲಿ ನಡೆದ “ಮಂಗಳಾಪುರ ಟ್ರೋಫಿ...

ಹೊಸಂಗಡಿಯಲ್ಲಿ ಕುಂಬ್ರಿ ಪ್ರೀಮಿಯರ್ ಲೀಗ್ – 2026 ‘HPL-2K26’ ಕ್ರಿಕೆಟ್ ಸಂಭ್ರಮ

ಹೊಸಂಗಡಿಯಲ್ಲಿ ಕುಂಬ್ರಿ ಪ್ರೀಮಿಯರ್ ಲೀಗ್ – 2026 'HPL-2K26’ ಕ್ರಿಕೆಟ್ ಸಂಭ್ರಮ ಫ್ರೆಂಡ್ಸ್ ಹೊಸಂಗಡಿ ವತಿಯಿಂದ ಮೇ 9 ಮತ್ತು 10 ರಂದು ಹೊಸಂಗಡಿಯ ಅಂಬೇಡ್ಕರ್ ಕ್ರೀಡಾಂಗಣದಲ್ಲಿ...
- Advertisement -spot_imgspot_img

ಮಾರುತಿ ಆಶ್ರಯ ಹಸ್ತಾಂತರ ಕಾರ್ಯಕ್ರಮ: ಮಾನವೀಯ ಸೇವೆಯ ಉದಾತ್ತ ಉದಾಹರಣೆ

ಮಾರುತಿ ಆಶ್ರಯ ಹಸ್ತಾಂತರ ಕಾರ್ಯಕ್ರಮ: ಮಾನವೀಯ ಸೇವೆಯ ಉದಾತ್ತ ಉದಾಹರಣೆ ಉಳ್ಳಾಲ, ಮೇ 5: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾರುತಿ ಜನಸೇವಾ ಸಂಘ (ರಿ) ಹಾಗೂ...

ಎಸ್‌ವಿಎಸ್ ಮೈದಾನದಲ್ಲಿ ಚಾರಿಟಿ ಕ್ರಿಕೆಟ್: ವಿಜೇತರಿಂದ ದೇಣಿಗೆಯ ಮಹತ್ವದ ಹೆಜ್ಜೆ

  ಎಸ್‌ವಿಎಸ್ ಮೈದಾನದಲ್ಲಿ ಚಾರಿಟಿ ಕ್ರಿಕೆಟ್: ವಿಜೇತರಿಂದ ದೇಣಿಗೆಯ ಮಹತ್ವದ ಹೆಜ್ಜೆ ಬಂಟ್ವಾಳ: ಅರ್ಜುನ್ ಭಂಡಾರ್ಕರ್ ಅವರ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ (ರಿ) ವತಿಯಿಂದ ಆಶಕ್ತ ಕುಟುಂಬಗಳಿಗೆ...

Must read

- Advertisement -spot_imgspot_img

You might also likeRELATED
Recommended to you