Categories
ಕ್ರಿಕೆಟ್

ಬಿ.ಸಿ.ಸಿ.ಐ ನ 39ನೇ ಅಧ್ಯಕ್ಷರಾಗಿ ಪ್ರಿನ್ಸ್ ಆಫ್ ಕಲ್ಕತ್ತಾ ಗಂಗೂಲಿ

ಭಾರತೀಯ ಟೆಸ್ಟ್ ತಂಡಕ್ಕೆ ಆಯ್ಕೆಗೊಂಡು ಪ್ರಥಮ ಪಂದ್ಯದಲ್ಲೇ ಶತಕದ ದಾಖಲೆ ಬರೆದು,ಏಕದಿನ ಪಂದ್ಯದಲ್ಲೂ ಸಚಿನ್ ತೆಂಡೂಲ್ಕರ್ ಜೊತೆ ಶತಕಗಳ ಸುರಿಮಳೆಯನ್ನೇ ಹರಿಸಿದ್ದರು ಸೌರವ್ ಗಂಗೂಲಿ.

ಮೊಹಮ್ಮದ್ ಅಜರುದ್ದೀನ್ ನಾಯಕತ್ವದ ಬಳಿಕ ಅಸ್ತವ್ಯಸ್ತಗೊಂಡಿದ್ದ ಭಾರತ ತಂಡಕ್ಕೆ ನಾಯಕನಾಗಿ ಆಯ್ಕೆಗೊಂಡು ವಿಶ್ವ ಕ್ರಿಕೆಟ್ ನಲ್ಲಿ ಭಾರತ ತಂಡವನ್ನು ನಂ.1 ಪಟ್ಟಕ್ಕೆ ಕೊಂಡೊಯ್ದ ಯಶಸ್ವಿ ಕಪ್ತಾನ ಸೌರವ್ ಗಂಗೂಲಿ.

ಕಪ್ತಾನನಾಗಿ ಜವಾಬ್ದಾರಿಯುತ ಆರಂಭಿಕ ಆಟಗಾರನಾಗಿ, ಉಪಯುಕ್ತ ಬೌಲರ್ ಆಗಿ ಸೇವೆ ಸಲ್ಲಿಸಿದ್ದ ಗಂಗೂಲಿ,ಬಲಿಷ್ಟ ಪಡೆಗಳನ್ನು ಹೊಂದಿದ್ದ ಆಸೀಸ್,ಹರಿಣಗಳು,ಸಿಂಹಳೀಯರ ಮೇಲೆ ದಿಗ್ವಿಜಯ ಸಾಧಿಸಿ, ಹಲವಾರು ಮೈಲಿಗಲ್ಲನ್ನು ಸ್ಥಾಪಿಸಿದ್ದರು.

ಇಂದು ವಿಶ್ವ ಕ್ರಿಕೆಟ್ ನ ಶ್ರೀಮಂತ ಸಂಸ್ಥೆ ಬಿ.ಸಿ.ಸಿ.ಐ ನ 39 ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಆರ್.ಕೆ.ಆಚಾರ್ಯ ಕೋಟ

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

15 − twelve =