ಶಿವಮೊಗ್ಗ-ತೀರ್ಥಹಳ್ಳಿ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್,ದೇಶಕ್ಕಾಗಿ ನಾವು ತೀರ್ಥಹಳ್ಳಿ,ಸ್ನೇಹಜೀವಿ ಗೆಳೆಯರ ಬಳಗದ ಅಶ್ವಲ್ ಗೌಡ,ಪೂರ್ಣೇಶ್ ಕೆಳಕೆರೆ,ಶ್ರೇಯು ಎಸ್.ರಾವ್,ಆಸಿಫ್,ಧೃವ ಕುಮಾರ್,ಮದನ್ ಶೆಟ್ಟಿ ಇವರೆಲ್ಲರ ಸಾರಥ್ಯದಲ್ಲಿ ಫೆಬ್ರವರಿ 23,24 ಮತ್ತು 25 ರಂದು ತೀರ್ಥಹಳ್ಳಿ ಸಾರ್ವಜನಿಕ ಕ್ರೀಡಾಂಗಣದಲ್ಲಿರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ “ಡಿ.ಕೆ.ಶಿವಕುಮಾರ್ ಕಪ್-ಸೀಸನ್ 2” ಆಯೋಜಿಸಲಾಗಿದೆ.
ಚಾಂಪಿಯನ್ ತಂಡ 3 ಲಕ್ಷ ನಗದು ಹಾಗೂ ದ್ವಿತೀಯ ಸ್ಥಾನಿ 2 ಲಕ್ಷ ನಗದು ಬಹುಮಾನ ಸಹಿತ ಆಕರ್ಷಕ ಪಾರಿತೋಷಕಗಳನ್ನು ಪಡೆಯಲಿದ್ದಾರೆ.
ದುಬೈ,ಮಧ್ಯಪ್ರದೇಶ,ಛತ್ತೀಸಗಡ್,ಗೋವಾ ,ಚೆನ್ನೈ ಸೇರಿದಂತೆ ಬೆಂಗಳೂರು,ಮಂಗಳೂರು, ಹಾಸನ,ದಾವಣಗೆರೆ,ಉಡುಪಿ,ಕುಂದಾಪುರ, ಚಿಕ್ಕಬಳ್ಳಾಪುರ,ಶಿವಮೊಗ್ಗ,ತೀರ್ ಥಹಳ್ಳಿಯ
ಒಟ್ಟು 24 ಪ್ರತಿಷ್ಠಿತ ತಂಡಗಳು ಭಾಗವಹಿಸಲಿದೆ.
ವಿಶೇಷವಾಗಿ ಕುರುವಳ್ಳಿ ಬಂಡೆ ಕಲ್ಲಿನಿಂದ ಆಕರ್ಷಕ ಟ್ರೋಫಿಗಳನ್ನು ತಯಾರಿಸಲಾಗಿದ್ದು ಫೆಬ್ರವರಿ 19 ರಂದು ಟ್ರೋಫಿ ಅನಾವರಣಗೊಳಿಸಲಾಯಿತು.
ಪಂದ್ಯಾಟದ ನೇರ ಪ್ರಸಾರ MSports ಯೂಟ್ಯೂಬ್ ಚಾನೆಲ್ ನಲ್ಲಿ ಬಿತ್ತರಗೊಳ್ಳಲಿದೆ.