ಯಶೋಗಾಥೆಅದು ಬರೀ ವೇಗ ಅಲ್ಲ, ಶರವೇಗ.. ಉರಿವೇಗ. ಕ್ವಿಂಟನ್ ಡಿ’ಕಾಕ್ ಹೇಳಿದಂತೆ...

ಅದು ಬರೀ ವೇಗ ಅಲ್ಲ, ಶರವೇಗ.. ಉರಿವೇಗ. ಕ್ವಿಂಟನ್ ಡಿ’ಕಾಕ್ ಹೇಳಿದಂತೆ ಚಿನ್ನಸ್ವಾಮಿ ಮೈದಾನದಲ್ಲಿ ನಿನ್ನೆ ನುಗ್ಗಿ ಬರುತ್ತಿದ್ದದ್ದು ಕ್ರಿಕೆಟ್ ಚೆಂಡಿನ ಅವತಾರ ಎತ್ತಿದ್ದ ರಾಕೆಟ್’ಗಳು.

-

- Advertisment -spot_img
ಎರಡು ಮ್ಯಾಚ್, 48 ಎಸೆತ. ಈ ಪೈಕಿ ಕನಿಷ್ಠ 40 ಎಸೆತಗಳ ವೇಗ ಗಂಟೆಗೆ 150 ಕಿ.ಮೀ.ಗೂ ಹೆಚ್ಚು. ಒಬ್ಬ genuine fast bowler ಟಿ20 ಕ್ರಿಕೆಟ್’ನಲ್ಲಿ back to back ಪ್ಲೇಯರ್ ಆಫ್ ದಿ ಮ್ಯಾಚ್ ಆಗುವುದು ತುಂಬಾ ಖುಷಿ ಕೊಡುತ್ತದೆ.
ಹೆಸರು ಮಯಾಂಕ್ ಯಾದವ್. ವಯಸ್ಸು 21. ನಿನ್ನೆ
RCB ದಾಂಡಿಗರು ಆರಡಿ ಒಂದಿಂಚು ಎತ್ತರದ ಈ ಹುಡುಗನ ಬೆಂಕಿ ಚೆಂಡುಗಳ ಮುಂದೆ ತರಗೆಲೆಗಳಂತೆ ಉದುರಿ ಹೋಗಿದ್ದಾರೆ. ಸತತವಾಗಿ 150+ ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುತ್ತಿರುವ ಮಯಾಂಕ್ ಯಾದವ್ ಭಾರತದ ಹೊಸ ಸ್ಪೀಡ್ ಗನ್. ಈತ ತನ್ನ ಯಶಸ್ಸಿನ ಶ್ರೇಯಸ್ಸನ್ನು ಲಕ್ನೋ ತಂಡದ ನಾಯಕ ಕೆ.ಎಲ್ ರಾಹುಲ್’ಗೆ ನೀಡುತ್ತಿದ್ದಾನೆ. ಕಾರಣವೂ ಇದೆ.
ಮಯಾಂಕ್ ಯಾದವ್’ಗೆ ಚೆನ್ನೈ ಅಥವಾ ಡೆಲ್ಲಿ ತಂಡ ಸೇರುವ ಆಸೆ ಇತ್ತು. ಆದರೆ ಅವರು pick ಮಾಡಲಿಲ್ಲ. ನಂತರ ಲಕ್ನೋ ತಂಡ ಸೇರಿಕೊಂಡ. ಮೊದಲ ವರ್ಷ ಆಡುವ ಅವಕಾಶ ಸಿಗಲಿಲ್ಲ.  ಎರಡನೇ ವರ್ಷ ಗಾಯದ ಕಾರಣ ಆಡಲು ಸಾಧ್ಯವಾಗಲಿಲ್ಲ. ಕಳೆದ ವರ್ಷವೇ ಆತನನ್ನು ತಂಡದಿಂದ ಕೈ ಬಿಡಲು ಲಕ್ನೋ ಫ್ರಾಂಚೈಸಿ ನಿರ್ಧರಿಸಿತ್ತು. ಆದರೆ ಕ್ಯಾಪ್ಟನ್ ರಾಹುಲ್ ಆ ಹುಡುಗನ ಹಿಂದೆ ಗಟ್ಟಿಯಾಗಿ ನಿಂತು ಬಿಟ್ಟಿದ್ದ. ಅದರ ಪ್ರತಿಫಲ ಆಗ ಕಾಣುತ್ತಿದೆ.
ದೆಹಲಿಯ ಸೋನೆಟ್ ಕ್ರಿಕೆಟ್ ಕ್ಲಬ್ ನೆಟ್ಸ್’ನಲ್ಲಿ ಬೌಲಿಂಗ್ ಮಾಡುತ್ತಿದ್ದ ಮಯಾಂಕ್ ಯಾದವ್. ವೀರೇಂದ್ರ ಸೆಹ್ವಾಗ್, ವಿರಾಟ್ ಕೊಹ್ಲಿ ಅವರನ್ನು ಆರಂಭದಲ್ಲಿ reject ಮಾಡಿದಂತೆ ಈ ಹುಡುಗನನ್ನೂ ಡೆಲ್ಲಿ ಕ್ರಿಕೆಟ್ ಸಂಸ್ಥೆಯ ಸೆಲೆಕ್ಟರ್ಸ್ reject ಮಾಡಿದ್ದರು. ಆದರೆ ಈತನ raw pace ಜ್ವಾಲಾಮುಖಿಯಂತೆ ಸ್ಫೋಟಿಸಲು ಹೆಚ್ಚು ದಿನ ಹಿಡಿಯಲಿಲ್ಲ. ಡೆಲ್ಲಿ ರಣಜಿ ತಂಡಕ್ಕೆ ಆಯ್ಕೆಯಾದ ಸ್ಪೀಡ್ ಗನ್, ಈಗ ತನ್ನ ಶರವೇಗದ ಬೌಲಿಂಗ್’ನಿಂದ  ಐಪಿಎಲ್ ಟೂರ್ನಿಯನ್ನೇ ನಡುಗಿಸುತ್ತಿದ್ದಾನೆ..!
ಭಾರತ ತಂಡದ ಪರ ಆಡುವುದು ನನ್ನ ಕನಸು ಎಂದು ಮಯಾಂಕ್ ಯಾದವ್ ಹೇಳಿದ್ದಾನೆ. ಈ ಹುಡುಗನ ವಿಚಾರದಲ್ಲಿ ಬಿಸಿಸಿಐ ಒಂದಷ್ಟು ಕಾಳಜಿ ವಹಿಸಿ ಸರಿಯಾಗಿ nurture ಮಾಡಿದಲ್ಲಿ ಭಾರತ ತಂಡಕ್ಕೆ ದೊಡ್ಡ ಆಸ್ತಿಯಾಗಬಲ್ಲ.
#mayankyadavvv #mayankyadav #klrahul #LucknowSuperGiants #ipl #ipl24 #rcb

LEAVE A REPLY

Please enter your comment!
Please enter your name here

twenty − 5 =

Latest news

ಸುರತ್ಕಲ್‌ನಲ್ಲಿ ಮತ್ತೆ ಕ್ರಿಕೆಟ್ ಸಂಭ್ರಮ – ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್-5

ಸುರತ್ಕಲ್‌ನಲ್ಲಿ ಮತ್ತೆ ಕ್ರಿಕೆಟ್ ಸಂಭ್ರಮ – ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್-5 ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ (ರಿ.) ಹಾಗೂ ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್...

ಆಜ್ಮಾ ಟ್ರೋಫಿ – 2026 ಕ್ರಿಕೆಟ್ ಟೂರ್ನಿಗೆ ಭರ್ಜರಿ ಸಿದ್ಧತೆ

ಆಜ್ಮಾಟ್ರೋಫಿ – 2026 ಕ್ರಿಕೆಟ್ ಟೂರ್ನಿಗೆ ಭರ್ಜರಿ ಸಿದ್ಧತೆ ಪ್ರೆಂಡ್ಸ್ ನೇಜಾರ್ ಮತ್ತು ಇಸಾಕ್ ನೇಜಾರ್ ಇವರ ನೇತೃತ್ವದಲ್ಲಿ ನಡೆಯಲಿರುವ **ಆಜ್ಮಾ ಟ್ರೋಫಿ – 2026**...

ತೆಂಕಪೇಟೆ ಫ್ರೆಂಡ್ಸ್ ಉಡುಪಿ ಚಾಂಪಿಯನ್ – ಎಂಜಾಯ್ ಪ್ರೀಮಿಯರ್ ಲೀಗ್ 2026 ಯಶಸ್ವಿ ಸಮಾಪ್ತಿ

ತೆಂಕಪೇಟೆ ಫ್ರೆಂಡ್ಸ್ ಉಡುಪಿ ಚಾಂಪಿಯನ್ – ಎಂಜಾಯ್ ಪ್ರೀಮಿಯರ್ ಲೀಗ್ 2026 ಯಶಸ್ವಿ ಸಮಾಪ್ತಿ ಮಂಗಳೂರು: ಎಂಜಾಯ್ ಟೈಟನ್ಸ್ ಯುನೈಟೆಡ್ ಆಯೋಜಿಸಿದ್ದ ಜಿಎಸ್‌ಬಿ ಸಮುದಾಯದ ಪ್ರತಿಷ್ಠಿತ “ಎಂಜಾಯ್...

ಕಲ್ಲು ಗಣಪತಿ ಟ್ರೋಫಿ 2026-27 – 16 ತಂಡಗಳ ಕ್ರಿಕೆಟ್ ಮಹಾಸಂಗ್ರಾಮ

ಕಲ್ಲು ಗಣಪತಿ ಟ್ರೋಫಿ 2026-27 – 16 ತಂಡಗಳ ಕ್ರಿಕೆಟ್ ಮಹಾಸಂಗ್ರಾಮ ಕುಂದಾಪುರದ ಪ್ರತಿಷ್ಠಿತ  ನಕ್ಷತ್ರ ಜ್ಯುವೆಲ್ಲರ್ಸ್ ಪ್ರಸ್ತುತಪಡಿಸುವ ಕಲ್ಲು ಗಣಪತಿ ಟ್ರೋಫಿ 2026-27 ಕ್ರಿಕೆಟ್ ಟೂರ್ನಮೆಂಟ್‌ಗೆ...
- Advertisement -spot_imgspot_img

ವಿಕ್ರಮ್ ಟ್ರೋಫಿ 2026 – ಉದಯೋನ್ಮುಖ ಕ್ರಿಕೆಟಿಗರಿಗೆ ಅದ್ಭುತ ವೇದಿಕೆ

ವಿಕ್ರಮ್ ಟ್ರೋಫಿ 2026 – ಉದಯೋನ್ಮುಖ ಕ್ರಿಕೆಟಿಗರಿಗೆ ಅದ್ಭುತ ವೇದಿಕೆ ಬೈಂದೂರಿನ ಪ್ರತಿಷ್ಠಿತ ವಿಕ್ರಮ್ ಕ್ರಿಕೆಟ್ ಕ್ಲಬ್ (VCC) ವತಿಯಿಂದ, ಉಡುಪಿ ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ (UDCA)...

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ ಸಿರ್ಸಿಯ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ Shri Marikamba Trophy ಓಪನ್ ಹಾರ್ಡ್ ಟೆನಿಸ್ ಕ್ರಿಕೆಟ್...

Must read

- Advertisement -spot_imgspot_img

You might also likeRELATED
Recommended to you