
ಮಾಹೆ: ಕ್ಯಾನ್ಸರ್ ನಿಂದ ಬಳಲುತ್ತಿರುವ ಬಡ ಮಕ್ಕಳ ನೆರವಿಗಾಗಿ ಸ್ಪಂದನ ಟ್ರೋಫಿ ಟೂರ್ನಮೆಂಟ್ ಆಯೋಜನೆ
ಕಸ್ತೂರ್ಬಾ ಹಾಸ್ಪಿಟಲ್ ಮಣಿಪಾಲದ ಏರ್ ಕಂಡೀಷನಿಂಗ್ ಡಿಪಾರ್ಟ್ಮೆಂಟ್ ನ ಸಿಬ್ಬಂದಿಗಳು ಕ್ಯಾನ್ಸರ್ ಪೀಡಿತ ಮಕ್ಕಳ ನೆರವಿಗಾಗಿ ಸ್ಪಂದನ ಟ್ರೋಫಿ ಎನ್ನುವ ಕ್ರಿಕೆಟ್ ಟೂರ್ನಮೆಂಟ್ ಅನ್ನು 2023 ರಿಂದ ಆಯೋಜಿಸುತ್ತಾ ಬಂದಿದ್ದಾರೆ. ಈ ಟೂರ್ನಿಯಿಂದ ಸಂಗ್ರಹವಾದ ಹಣವನ್ನು ಕ್ಯಾನ್ಸರ್ ಪೀಡಿತ ಮಕ್ಕಳ ಚಿಕಿತ್ಸೆಗೆ ಸಹಾಯ ಧನವನ್ನಾಗಿ ನೀಡುತ್ತಾ ಬಂದಿದ್ದಾರೆ.

2025ರಲ್ಲಿ ಸ್ಪಂದನಾ ಟ್ರೋಫಿ ಸೀಸನ್ 3 ನ್ನು ಮತ್ತೆ ಇನ್ನಷ್ತೂ ಯಶಸ್ವಿಯಾಗಿ ಆಯೋಜಿಸುವ ನಿಟ್ಟಿನಲ್ಲಿ ಫೆಬ್ರವರಿ 15 ಮತ್ತು 16 ರಂದು ಮಣಿಪಾಲದ ಎಂಐಟಿ ಮೈದಾನದಲ್ಲಿ ಸ್ಪಂದನ ಟ್ರೋಫಿ ಟೂರ್ನಮೆಂಟನ್ನು ಆಯೋಜಿಸಲಾಗಿದೆ. ಈ ವರ್ಷ ಪುರುಷರ ಕ್ರಿಕೆಟ್ ಜೊತೆಗೆ ಮಹಿಳೆಯರಿಗಾಗಿ ಥ್ರೋ ಬಾಲ್ ಆಯೋಜನೆಯೊಂದಿಗೆ ಸ್ಪಂದನಾ ಟ್ರೋಫಿ ಸೀಸನ್ 3 ಮತ್ತಷ್ಟು ವಿಸ್ತರಿಸಿದೆ. ಕ್ರೀಡೆಯ ಮೂಲಕ ಮಾನವೀಯತೆ ಮತ್ತು ಸೇವಾ ಮನೋಭಾವವನ್ನು ಉತ್ತೇಜಿಸುವ ಈ ಉತ್ತಮ ಕಾರ್ಯ ನಿಜಕ್ಕೂ ಶ್ಲಾಘನೀಯ.


ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮಣಿಪಾಲದ ಡಿಪಾರ್ಟ್ ಮೆಂಟ್ ಆಫ್ ಜನರಲ್ ಸರ್ವಿಸ್, ಏರ್ ಕಂಡೀಶನ್ ಡಿಪಾರ್ಟ್ ಮೆಂಟ್ ಫೆಬ್ರವರಿ 15 ಮತ್ತು 16 2025 ರಂದು “ಸ್ಪಂದನ ಟ್ರೋಫಿ” ಕ್ರಿಕೆಟ್ ಪಂದ್ಯಾವಳಿಯನ್ನು ಮಾಹೆ ಉದ್ಯೋಗಿಗಳಿಗೆ ಆಯೋಜಿಸಲಿದೆ. ಮಣಿಪಾಲದ ಆಕ್ಸೆಸ್ ಲೈಫ್ ಸೆಂಟರ್ನಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗುತ್ತಿರುವ ಮಕ್ಕಳಿಗೆ ಸಹಾಯ ಹಸ್ತ ನೀಡುವುದಕ್ಕಾಗಿ ಈ ವಿಶೇಷ ಕಾರ್ಯಕ್ರಮವನ್ನು ಸಮರ್ಪಿಸಲಾಗಿದೆ. ಈ ಕಾರ್ಯಕ್ರಮವು ಕ್ಯಾನ್ಸರ್ ಪೀಡಿತ ಮಕ್ಕಳಿಗೆ, ವಿಶೇಷವಾಗಿ ಹಿಂದುಳಿದ ಹಿನ್ನೆಲೆಯಿಂದ ಬಂದ ಮಕ್ಕಳಿಗೆ ಆರ್ಥಿಕ ನೆರವು ನೀಡುವ ಗುರಿಯನ್ನು ಹೊಂದಿದೆ.
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ನ ಪ್ರೊ ಚಾನ್ಸೆಲರ್ ಡಾ.ಎಚ್.ಎಸ್.ಬಲ್ಲಾಲ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಪಂದ್ಯಾವಳಿಯನ್ನು ಉದ್ಘಾಟಿಸಲಿದ್ದಾರೆ. ಗೌರವ ಅತಿಥಿಗಳಾಗಿ ಮಾಹೆ ಮಣಿಪಾಲದ VSM( Retd) ಉಪಕುಲಪತಿ ಲೆಫ್ಟಿನೆಂಟ್ ಜನರಲ್ ಡಾ ಎಂ. ಡಿ.ವೆಂಕಟೇಶ್,
ಮಾಹೆ ಹೆಲ್ತ್ ಸೈನೆನ್ಸ್ಸ್ ನ ಪ್ರೊ- ವೈಸ್ ಚಾನ್ಸೆಲರ್ ಡಾ. ಶರತ್ ರಾವ್ ಕೆ, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ CFO ಡಾ ಆನಂದ್ ವೇಣುಗೋಪಾಲ್, ಮಾಹೆ ಮಣಿಪಾಲದ ಸಿಎಫ್ಒ ಡಾ. ರವೀಂದ್ರ ಎನ್.ಎಸ್, ಕೆಎಂಸಿ ಮಣಿಪಾಲದ ಡೀನ್ ಡಾ. ಪದ್ಮರಾಜ್ ಹೆಗ್ಡೆ, ಮಕ್ಕಳ ಹೆಮಟೋ ಆಂಕೊಲಾಜಿ ಮುಖ್ಯಸ್ಥ ಡಾ. ವಾಸುದೇವ್ ಭಟ್, ಕಸ್ತೂರ್ಬಾ ಮಣಿಪಾಲ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಡಾ.ಅವಿನಾಶ್ ಶೆಟ್ಟಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಉಡುಪಿಯ ನಾಡೋಜ ಡಾ. ಜಿ .ಶಂಕರ್ ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ
16ರಂದು ಸಂಜೆ 5.30ಕ್ಕೆ ಸಮಾರೋಪ ಕಾರ್ಯಕ್ರಮ ನಡೆಯಲಿದೆ.. ಈ ಕ್ರಿಕೆಟ್ ಪಂದ್ಯಾವಳಿಯ ಲೈವ್ ಸ್ಟ್ರೀಮಿಂಗ್ ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಚಾನೆಲ್ನಲ್ಲಿ ಪ್ರಸಾರ ಮಾಡಲಾಗುವುದು.




