
ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೊನಲು ಬೆಳಕಿನ ಕ್ರಿಕೆಟ್, ಕಬಡ್ಡಿ ಮತ್ತು ವಾಲಿಬಾಲ್ ಪಂದ್ಯಾಕೂಟ ಶ್ರೀ ಅಥರ್ವ ಕಪ್ 2025 – ಏಪ್ರಿಲ್ 9 ರಿಂದ 14 ರವರೆಗೆ
ಶ್ರೀ ಅಥರ್ವ ಕನ್ಸ್ಟ್ರಕ್ಷನ್ ಮತ್ತು ಇಂಟೀರಿಯರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಮತ್ತು ಶ್ರೀ ಅಥರ್ವ ಕ್ರಿಕೆಟರ್ಸ್ ಇವರ ಆಶ್ರಯದಲ್ಲಿ ಶ್ರೀ ಅಥರ್ವ ಕಪ್ 2025
ಚಿಕ್ಕಮಗಳೂರು ಜಿಲ್ಲೆ, ಕೊಪ್ಪ ತಾಲೂಕಿನ ಬಾಳಗಡಿ ಕಾಲೇಜು ಮೈದಾನದಲ್ಲಿ ಈ ವರ್ಷದ ಏಪ್ರಿಲ್ 9ರಿಂದ 14ರವರೆಗೆ ರಾಜ್ಯ ಮಟ್ಟದ ಹಾಗೂ ಅಂತರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್, ಕಬಡ್ಡಿ ಮತ್ತು ವಾಲಿಬಾಲ್ ಪಂದ್ಯಾಕೂಟವನ್ನು ವಿಜೃಂಭಣೆಯಿಂದ ಆಯೋಜಿಸಲಾಗಿದೆ.

ಈ ಲೀಗ್ ಮಾದರಿಯ ಕ್ರೀಡಾ ಹಬ್ಬದಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳ ಪ್ರತಿಷ್ಠಿತ ಆಟಗಾರರು ಹಾಗೂ ತಂಡಗಳು ಭಾಗವಹಿಸಲಿದ್ದು, ಇದೇ ಮೊದಲ ಬಾರಿಗೆ ನೆರೆಯ ರಾಷ್ಟ್ರ ಶ್ರೀಲಂಕಾದ ತಂಡವೂ ಈ ಕ್ರೀಡಾಕೂಟದಲ್ಲಿ ಭಾಗಿಯಾಗಲಿದೆ.

ಕಾರ್ಯಕ್ರಮದ ಮುಖ್ಯ ವಿವರಗಳು:
ಏಪ್ರಿಲ್ 9 (ಬುಧವಾರ) – ಸಂಜೆ 6:00 ಗಂಟೆಗೆ ಭವ್ಯ ಉದ್ಘಾಟನಾ ಸಮಾರಂಭ ನಡೆಯಲಿದೆ.
ಏಪ್ರಿಲ್ 10 (ಗುರುವಾರ) – ಮಧ್ಯಾಹ್ನ 2:30 ರಿಂದ ಶೃಂಗೇರಿ ಕ್ಷೇತ್ರ ಮಟ್ಟದ ಕಬಡ್ಡಿ ಮತ್ತು ವಾಲಿಬಾಲ್ ಪಂದ್ಯಾವಳಿಗಳು ನಡೆಯಲಿವೆ.

ಏಪ್ರಿಲ್ 11 (ಶುಕ್ರವಾರ) – ಬೆಳಿಗ್ಗೆ 9:00 ರಿಂದ ಕರ್ನಾಟಕ ರಾಜ್ಯದ ಎಂಟು ಶ್ರೇಷ್ಠ ತಂಡಗಳ ನಡುವೆ ಕ್ರಿಕೆಟ್ ಟೂರ್ನಮೆಂಟ್ ನಡೆಯಲಿದೆ. ಈ ಪಂದ್ಯಾವಳಿಯಲ್ಲಿ ಭಾಗವಹಿಸುವ ಪ್ರಮುಖ ತಂಡಗಳು:
ಫ್ರೆಂಡ್ಸ್, ಬೆಂಗಳೂರು
ಪಾಂಚಜನ್ಯ ಕೋಟ
ಮೈಟಿ, ಬೆಂಗಳೂರು
ಜೈ ಕರ್ನಾಟಕ
ಜಾನ್ಸನ್ ರಿಯಲ್ ಫೈಟರ್ಸ್
ಇಜಾನ್ ಸ್ಪೋರ್ಟ್ಸ್, ಉಡುಪಿ
ನ್ಯಾಶ್, ಬೆಂಗಳೂರು
ಶ್ರೀಲಂಕಾ ತಂಡ
ಬಹುಮಾನಗಳು:
ಪ್ರಥಮ ಬಹುಮಾನ: ₹2,12,000 ನಗದು ಮತ್ತು ಟ್ರೋಫಿ
ದ್ವಿತೀಯ ಬಹುಮಾನ: ₹1,00,000 ನಗದು ಮತ್ತು ರನ್ನರ್ ಅಪ್ ಟ್ರೋಫಿ
ತೃತೀಯ ಸ್ಥಾನ: ₹75,000
ಚತುರ್ಥ ಸ್ಥಾನ: ₹65,000 (ಎರಡಕ್ಕೂ ಟ್ರೋಫಿ ಸೇರಿದೆ)
ಏಪ್ರಿಲ್ 12 ಮತ್ತು 13 – ಶೃಂಗೇರಿ ಮಟ್ಟದ 28 ಕ್ರಿಕೆಟ್ ತಂಡಗಳ ನಡುವೆ ಸ್ಪರ್ಧಾತ್ಮಕ ಪಂದ್ಯಾವಳಿಗಳು ನಡೆಯಲಿದ್ದು, ಈ ತಂಡಗಳಿಗೂ ನಗದು ಬಹುಮಾನದೊಂದಿಗೆ ಆಕರ್ಷಕ ಟ್ರೋಫಿಗಳು ಲಭಿಸಲಿವೆ.

ಏಪ್ರಿಲ್ 14 (ಸೋಮವಾರ) –
ರಾಜ್ಯದ ಆರು ಶ್ರೇಷ್ಠ ತಂಡಗಳ ನಡುವೆ ವಾಲಿಬಾಲ್ ಟೂರ್ನಮೆಂಟ್
ಎಂಟು ಶ್ರೇಷ್ಠ ಕಬಡ್ಡಿ ತಂಡಗಳ ನಡುವೆ ಕಬಡ್ಡಿ ಪಂದ್ಯಾಕೂಟ
ಈ ಟೂರ್ನಮೆಂಟ್ ಆಯೋಜಕರು, ತಮ್ಮ ಜಿಲ್ಲೆಯಲ್ಲಿ ಈ ಮಟ್ಟದ ಕ್ರಿಕೆಟ್, ಕಬಡ್ಡಿ ಮತ್ತು ವಾಲಿಬಾಲ್ ಸ್ಪರ್ಧೆಗಳನ್ನು ಹಮ್ಮಿಕೊಳ್ಳುವುದು ಹೆಮ್ಮೆದಾಯಕವೆಂದು ತಿಳಿಸಿದ್ದು, ರಾಜ್ಯದ ಹಾಗೂ ದೇಶದ ಎಲ್ಲಾ ಕ್ರೀಡಾಪ್ರೇಮಿಗಳು ಭಾಗವಹಿಸಿ ಈ ಕ್ರೀಡಾ ಹಬ್ಬವನ್ನು ಯಶಸ್ವಿಗೊಳಿಸಬೇಕೆಂದು ಕೋರಿದ್ದಾರೆ.
ಈ ಕ್ರೀಡಾ ಟೂರ್ನಿಯ ಪ್ರಮುಖ ಧ್ಯೇಯವೆಂದರೆ ಕ್ರೀಡಾಪ್ರೇಮಿಗಳಿಗೆ ವೇದಿಕೆಯನ್ನು ಒದಗಿಸುವದಷ್ಟೇ ಅಲ್ಲದೆ, ಕ್ರೀಡೆಯ ಮಾರ್ಗದಲ್ಲಿ ಸಮಾಜ ಸೇವೆಗೂ ಪೂರಕವಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವುದಾಗಿದೆ.
ಟೂರ್ನಿಯಿಂದ ಉಂಟಾಗುವ ಆದಾಯವನ್ನು ಪ್ರತಿಭಾವಂತ ಮತ್ತು ಆರ್ಥಿಕವಾಗಿ ಹಿಂದೆಪಟ್ಟಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ಸಹಾಯಧನವಾಗಿ ನೀಡಲಾಗುತ್ತದೆ. ಜೊತೆಗೆ, ಅನಾರೋಗ್ಯದಿಂದ ಪೀಡಿತರಾಗಿರುವ ವ್ಯಕ್ತಿಗಳಿಗೆ ಚಿಕಿತ್ಸಾ ನೆರವಿನ ರೂಪದಲ್ಲಿ ಸಹಾಯಧನ ನೀಡುವ ಉದ್ದೇಶವೂ ಈ ಕ್ರೀಡಾ ಕೂಟ ಹೊಂದಿದೆ.
ಈ ಮೂಲಕ, ಕ್ರೀಡೆ ಕೇವಲ ಮನರಂಜನೆಯ ಹಾದಿಯಲ್ಲ, ಅದು ಸಮಾಜದ ಉನ್ನತಿಗೆ ಪೂರಕವಾದ ಶಕ್ತಿ ಎಂಬ ಸಂದೇಶವನ್ನು ಈ ಟೂರ್ನಿ ನೀಡುತ್ತಿದೆ.





