ಕ್ರಿಕೆಟ್ಕನ್ನಡಿಗ ‘ಜ್ಯಾಕ್’ ಕಟ್ಟಿದ ತಂಡ ಟಿ20 ವಿಶ್ವಕಪ್’ನಲ್ಲಿ ಪಾಕಿಸ್ತಾನವನ್ನೇ ಹೊಡೆದು ಹಾಕಿತು..!

ಕನ್ನಡಿಗ ‘ಜ್ಯಾಕ್’ ಕಟ್ಟಿದ ತಂಡ ಟಿ20 ವಿಶ್ವಕಪ್’ನಲ್ಲಿ ಪಾಕಿಸ್ತಾನವನ್ನೇ ಹೊಡೆದು ಹಾಕಿತು..!

-

- Advertisment -spot_img
ಮೊನ್ನೆ ಮೊನ್ನೆಯೊಷ್ಟೇ ಅಮೆರಿಕ ತಂಡ ಟಿ20 ವಿಶ್ವಕಪ್’ನಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿ ದೊಡ್ಡ ಅಚ್ಚರಿಗೆ ಕಾರಣವಾಗಿತ್ತು.
ಆದರೆ ಅದು ಹೊರ ಜಗತ್ತಿಗಷ್ಟೇ ಅಚ್ಚರಿ. ಅಮೆರಿಕ ತಂಡದ ಆಟಗಾರರನ್ನು ಹತ್ತಿರದಿಂದ ನೋಡಿದವರಿಗೆ ಅದೇನು ದೊಡ್ಡ ಅಚ್ಚರಿಯಲ್ಲ.
ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ಕೆನಡಾದ reject pieceಗಳನ್ನೆಲ್ಲಾ ಸೇರಿಸಿ ಕಟ್ಟಲಾಗಿರುವ ‘ಲಗಾನ್’ ತಂಡ ಅದು. ಎಲ್ಲರಲ್ಲೂ ಒಂದು ಹಸಿವಿದೆ. ತಾವೇನು ಎಂಬುದನ್ನು ಜಗತ್ತಿಗೆ ತೋರಿಸಿಕೊಡುವ ಕಿಚ್ಚಿದೆ. ಅಂದ ಹಾಗೆ, ಅಮೆರಿಕ ತಂಡದ ಆಟಗಾರರ ಎದೆಯಲ್ಲಿ ಇಂತಹ ಒಂದು ಕಿಚ್ಚನ್ನು ತುಂಬಿದ ದ್ರೋಣಾಚಾರ್ಯ ನಮ್ಮ ಕರ್ನಾಟಕದವರು. ಕರ್ನಾಟಕ ಕ್ರಿಕೆಟ್ ಕಂಡ ಲೆಜೆಂಡರಿ ಓಪನಿಂಗ್ ಬ್ಯಾಟ್ಸ್’ಮನ್ ಜ್ಯಾಕ್.., ಜೆ.ಅರುಣ್ ಕುಮಾರ್.
ಜೆ.ಅರುಣ್ ಕುಮಾರ್ ನಿಸ್ಸಂದೇಹವಾಗಿ ಭಾರತ ಪರ ಆಡಬೇಕಿದ್ದ ಕ್ರಿಕೆಟಿಗ. 2000ನೇ ಇಸವಿಯ ಆರಂಭದ ವರ್ಷಗಳಲ್ಲಿ ವೀರೇಂದ್ರ ಸೆಹ್ವಾಗ್ ಆಡಿದ್ದ ಹೊಡಿಬಡಿಯ ಆಟವನ್ನು 90ರ ದಶಕದಲ್ಲೇ ಕರ್ನಾಟಕ ಪರ ಆಡಿದವರು ಜ್ಯಾಕ್. ರಣಜಿ ಟ್ರೋಫಿಯಲ್ಲಿ ಲಂಚ್ ಬ್ರೇಕ್ ಒಳಗೆ ಶತಕ ಚಚ್ಚಿ ಔಟಾಗಿ ಪೆವಿಲಿಯನ್’ನಲ್ಲಿ ಕುಳಿತು ಬಿಡುತ್ತಿದ್ದರೆಂದರೆ ಲೆಕ್ಕ ಹಾಕಿ,
ಆ ಆರ್ಭಟ ಹೇಗಿದ್ದಿರಬಹುದೆಂದು.
ಜೆ.ಅರುಣ್ ಕುಮಾರ್ ಅವರ ಆಟವನ್ನು ನಾನು ಕಣ್ಣಾರೆ ಕಂಡವನಲ್ಲ, ಆದರೆ ಅವರ ಜೊತೆಗೆ ಆಡಿದವರಿಂದಲೇ ಆ ಗತವೈಭವವನ್ನು ಕೇಳಿದ್ದೇನೆ. ರಣಜಿ ಟ್ರೋಫಿ ಪಂದ್ಯಗಳಲ್ಲಿ ಜ್ಯಾಕ್ ಅಬ್ಬರಿಸುತ್ತಿದ್ದ ಪರಿಯನ್ನು ಒಬ್ಬರಂತೂ ರೋಮಾಂಚಿತರಾಗಿ ವಿವರಿಸಿದ್ದರು. ಅದಾದ ನಂತರ 1998-98ರ ರಣಜಿ ಫೈನಲ್ ಪಂದ್ಯದ ವೀಡಿಯೊವನ್ನು ಹುಡುಕಿ ತೆಗೆದು ನೋಡಿದಾಗ ಅನ್ನಿಸಿದ್ದು.. ಛೇ.. ಇಂಥಾ ಆಟಗಾರನಿಗೆ ಭಾರತ ತಂಡದ ಪರ ಒಂದೇ ಒಂದು ಪಂದ್ಯವಾಡುವ ಅವಕಾಶವೂ ಸಿಗಲಿಲ್ಲವಲ್ಲಾ ಎಂದು.
1997-98ರ ರಣಜಿ ಫೈನಲ್’ನಲ್ಲಿ ಉತ್ತರ ಪ್ರದೇಶ ವಿರುದ್ಧ ಶತಕ, 1998-99ರ ರೋಚಕ ರಣಜಿ ಫೈನಲ್’ನಲ್ಲಿ ಮಧ್ಯಪ್ರದೇಶ ವಿರುದ್ಧ 2ನೇ ಇನ್ನಿಂಗ್ಸ್’ನಲ್ಲಿ ಶತಕ ಬಾರಿಸಿ ಕರ್ನಾಟಕದ ರಣಜಿ ವಿಕ್ರಮಕ್ಕೆ ಕಾರಣವಾದವರು ಜೆ.ಅರುಣ್ ಕುಮಾರ್.
ಆಟಗಾರನಾಗಿ ಅಷ್ಟೇ ಅಲ್ಲ, ಕೋಚ್ ಆಗಿಯೂ ಯಶಸ್ಸು ಕಂಡಿರುವ ಜ್ಯಾಕ್, 2013-14 ಮತ್ತು 2014-15ನೇ ಸಾಲಿನಲ್ಲಿ ಕರ್ನಾಟಕ ತಂಡ ಸತತ ಎರಡೆರಡು ಬಾರಿ ರಣಜಿ ಟ್ರೋಫಿ, ಇರಾನಿ ಕಪ್ ಮತ್ತು ವಿಜಯ್ ಹಜಾರೆ ಟ್ರೋಫಿಗಳನ್ನು ಗೆದ್ದು ಇತಿಹಾಸ ನಿರ್ಮಿಸಿದಾಗ ಆ ಐತಿಹಾಸಿಕ ತಂಡದ ಕೋಚ್ ಆಗಿದ್ದವರು ಇದೇ ಅರುಣ್ ಕುಮಾರ್.
ಕರ್ನಾಟಕ ಕ್ರಿಕೆಟ್’ನ successful  ಕ್ರಿಕೆಟರ್, successful ಕೋಚ್ ಜೆ.ಅರುಣ್ ಕುಮಾರ್ 2020ರಲ್ಲಿ ಎರಡು ವರ್ಷಗಳ ಅವಧಿಗೆ ಅಮೆರಿಕ ತಂಡದ ಕೋಚ್ ಆಗಿ ನೇಮಕಗೊಂಡಿದ್ದರು. ಈಗ ಟಿ20 ವಿಶ್ವಕಪ್’ನಲ್ಲಿ ಆಡುತ್ತಿರುವ ಅಮೆರಿಕ ತಂಡದಲ್ಲಿರುವ ಬಹುತೇಕ ಆಟಗಾರರು ಪಳಗಿದ್ದು ನಮ್ಮ ಕನ್ನಡಿಗನ ಗರಡಿಯಲ್ಲೇ.
ಜೆ.ಅರುಣ್ ಕುಮಾರ್, ಅಮೆರಿಕ ಕ್ರಿಕೆಟ್ ಸಾಗುತ್ತಿದ್ದ ದಿಕ್ಕನ್ನೇ ಬದಲಿಸಿದ ಕೋಚ್. ಐಸಿಸಿ ಪೂರ್ಣ ಸದಸ್ಯತ್ವ ಪಡೆದ ತಂಡದ ವಿರುದ್ಧ ಅಮೆರಿಕ ತಂಡ ಮೊದಲ ಏಕದಿನ ಮತ್ತು ಟಿ20 ಗೆಲುವು ದಾಖಲಿಸಿದ್ದು ಜ್ಯಾಕ್ ಅವರ ಅವಧಿಯಲ್ಲೇ.
ಕೋಚ್ ಆಗಿ ಜ್ಯಾಕ್ ಅಮೆರಿಕ ತಂಡವನ್ನು busy ಆಗಿ ಇಟ್ಟಿದ್ದರು. 40 ಅಧಿಕೃತ ಅಂತರಾಷ್ಟ್ರೀಯ ಪಂದ್ಯಗಳು, ಅಂತರಾಷ್ಟ್ರೀಯ ಕ್ರಿಕೆಟ್ ಪ್ರವಾಸಗಳು, ಅಭ್ಯಾಸ ಪಂದ್ಯಗಳು, ತರಬೇತಿ ಶಿಬಿರಗಳು.. ಹೀಗೆ ತಾವು ಕೋಚ್ ಆಗಿದ್ದಷ್ಟು ದಿನ ಜ್ಯಾಕ್, ಅಮೆರಿಕ ಆಟಗಾರರಿಗೆ ದೀರ್ಘವಾಗಿ ಉಸಿರೆದುಕೊಳ್ಳಲೂ ಅವಕಾಶ ಕೊಟ್ಟಿರಲಿಲ್ಲ.
ಜ್ಯಾಕ್ ಯುಎಸ್ಎ ತಂಡದ ಕೋಚ್ ಹುದ್ದೆ ತೊರೆಯುವ ಹೊತ್ತಿಗೆ ತಂಡಕ್ಕೊಂದು ಗಟ್ಟಿ ಅಡಿಪಾಯ ಹಾಕಿ ಕೊಟ್ಟಿದ್ದರು. ಹೊಸ ಹೊಸ ಆಟಗಾರರನ್ನು ಪರಿಚಯಿಸಿದ್ದರು. ಅದರ ಪ್ರತಿಫಲ ಈಗ ಕಾಣುತ್ತಿದೆ.
2022ರಲ್ಲಿ ಯುಎಸ್ಎ ತಂಡದ ಕೋಚ್ ಹುದ್ದೆ ತ್ಯಜಿಸಿದ್ದ ಜೆ.ಅರುಣ್ ಕುಮಾರ್ ಕಳೆದ ಮೂರು ವರ್ಷಗಳಿಂದ ಮುಂಬೈ ಇಂಡಿಯನ್ಸ್ ತಂಡದ ಅಸಿಸ್ಟೆಂಟ್ ಬ್ಯಾಟಿಂಗ್ ಕೋಚ್ ಆಗಿದ್ದಾರೆ.
Arunkumar Jagadeesh #Jak USA Cricket #usacricket #icct20worldcup2024 #T20WorldCup

LEAVE A REPLY

Please enter your comment!
Please enter your name here

4 × three =

Latest news

Gates of Olympus: Mythic Thrills in Quick Spin Sessions

When you’re looking for instant excitement, a slot that delivers rapid bursts of possibility can be a real treat.Gates...

Sugar Rush Slot: Quick‑Hit Candy Thrills for Rapid Play Fans

Sweet Start: Why Sugar Rush Appeals to Quick Play EnthusiastsIn the world of online slots, few titles capture the...

test123123

test123123

ಟೆಂಪೋ ಚಾಲಕರು ಮತ್ತು ಮಾಲಕರ ಸಂಘ (ರಿ.) ಮಲ್ಪೆ ಆಯೋಜಕರಿಂದ “ಸಾರಥಿ ಮಾನ್ಸೂನ್ ಟ್ರೋಫಿ – 2026” ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ

ಟೆಂಪೋ ಚಾಲಕರು ಮತ್ತು ಮಾಲಕರ ಸಂಘ (ರಿ.) ಮಲ್ಪೆ ಆಯೋಜಕರಿಂದ “ಸಾರಥಿ ಮಾನ್ಸೂನ್ ಟ್ರೋಫಿ – 2026” ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ ಉಡುಪಿ ಜಿಲ್ಲೆಯ ಮಲ್ಪೆಯ...
- Advertisement -spot_imgspot_img

ಯೋಗದಿಂದ ಗೋಸೇವೆ-ಕಾಮಧೇನು ಗೋಶಾಲೆಯ ಅನಾಥ ಗೋವುಗಳ ಪಾಲನೆಗೆ ಯೋಗರತ್ನ ತನುಶ್ರೀ ಪಿತ್ರೋಡಿ 300 ಯೋಗಾಸನ ಪ್ರದರ್ಶನ

ಯೋಗದಿಂದ ಗೋಸೇವೆ-ಕಾಮಧೇನು ಗೋಶಾಲೆಯ ಅನಾಥ ಗೋವುಗಳ ಪಾಲನೆಗೆ ಯೋಗರತ್ನ ತನುಶ್ರೀ ಪಿತ್ರೋಡಿ 300 ಯೋಗಾಸನ ಪ್ರದರ್ಶನ ಕಾಮಧೇನು‌ ಗೋಶಾಲೆ ಮಹಾಸಂಘ ಟ್ರಸ್ಟ್(ರಿ)ನಂಚಾರು ಇಲ್ಲಿರುವ ಗೋವುಗಳಿಗಾಗಿ 12 ನೇ...

ವಿದ್ಯಾ ಬೆಳಕು-ವೆಂಕಟರಮಣ ಪಿತ್ರೋಡಿ ಸಂಸ್ಥೆಯಿಂದ ವಿದ್ಯಾರ್ಥಿ ವೇತನ ವಿತರಣೆ

ವಿದ್ಯಾ ಬೆಳಕು-ವೆಂಕಟರಮಣ ಪಿತ್ರೋಡಿ ಸಂಸ್ಥೆಯಿಂದ ವಿದ್ಯಾರ್ಥಿ ವೇತನ ವಿತರಣೆ ಉಡುಪಿ-ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೆಂಕಟರಮಣ ಸ್ಪೋರ್ಟ್ಸ್ & ಕಲ್ಚರಲ್ಸ್ ಪಿತ್ರೋಡಿ(ರಿ) ಇವರ ವತಿಯಿಂದ ವಿದ್ಯಾ ಬೆಳಕು...

Must read

- Advertisement -spot_imgspot_img

You might also likeRELATED
Recommended to you