
ಸ್ಪೋರ್ಟ್ಸ್ ಕನ್ನಡ ಉತ್ತರ ಕನ್ನಡ ಜಿಲ್ಲೆ ಪ್ರತಿನಿಧಿಯಾಗಿ ಇಬ್ರಾಹಿಂ ನಫೀಸ್ ನೇಮಕ
ಉತ್ತರ ಕನ್ನಡ ಜಿಲ್ಲೆಯ ಕ್ರೀಡಾ ಕ್ಷೇತ್ರದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಇಬ್ರಾಹಿಂ ನಫೀಸ್ ಕ್ವಾಜಿ ಅವರು ಸ್ಪೋರ್ಟ್ಸ್ ಕನ್ನಡದ ಉತ್ತರ ಕನ್ನಡ ಜಿಲ್ಲೆ ಪ್ರತಿನಿಧಿಯಾಗಿ ನೇಮಕಗೊಂಡಿದ್ದಾರೆ. ಕುಮಟಾ ಮೂಲದ ಇಬ್ರಾಹಿಂ ನಫೀಸ್ ಅವರು ಕ್ರೀಡೆಗಳ ಮೇಲಿನ ಅಪಾರ ಆಸಕ್ತಿ, ನಿಷ್ಠೆ ಮತ್ತು ಸಂಘಟನೆ ಕೌಶಲ್ಯದ ಮೂಲಕ ಜಿಲ್ಲೆಯಲ್ಲೇ ವಿಶಿಷ್ಟ ಸ್ಥಾನವನ್ನು ಪಡೆದಿದ್ದಾರೆ.

ಇವರು ಕೇವಲ ಆಟಗಾರರಾಗಿ ಮಾತ್ರವಲ್ಲದೆ, ಯಶಸ್ವಿ ಆರ್ಗನೈಸರ್ ಮತ್ತು ಆಕ್ಷನಿಯರ್ ಆಗಿಯೂ ತಮ್ಮನ್ನು ತಾವು ಸಾಬೀತುಪಡಿಸಿದ್ದಾರೆ. ಪ್ರಸ್ತುತ ಕರಾವಳಿ ಸ್ಪೋರ್ಟ್ಸ್ ಕ್ಲಬ್, ಕುಮಟಾ ಇದರ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಅವರು, ವಿವಿಧ ಕ್ರೀಡಾ ಚಟುವಟಿಕೆಗಳ ಮೂಲಕ ಯುವ ಪ್ರತಿಭೆಗಳಿಗೆ ಉತ್ತಮ ವೇದಿಕೆಯನ್ನು ಒದಗಿಸುತ್ತಿದ್ದಾರೆ.

ಇಬ್ರಾಹಿಂ ನಫೀಸ್ ಅವರ ನೇತೃತ್ವದಲ್ಲಿ ಹಲವು ಪ್ರಮುಖ ಟೂರ್ನಮೆಂಟ್ಗಳು ಯಶಸ್ವಿಯಾಗಿ ನಡೆದಿವೆ. MICMAC ಟ್ರೋಫಿ (ಸೀಸನ್ 1 ಮತ್ತು 2), BCA ಕಪ್, KMYF ಕಬಡ್ಡಿ ಕಪ್, ಗಾಡ್ವಿನ್ ಸೈಕಲ್ ರೇಸ್, ಇಂಡೋರ್ ಬಾಕ್ಸ್ ಕ್ರಿಕೆಟ್ ಮತ್ತು KSC ಕಪ್ ಮುಂತಾದ ಕಾರ್ಯಕ್ರಮಗಳು ಜಿಲ್ಲೆಯ ಕ್ರೀಡಾ ಚಟುವಟಿಕೆಗಳಿಗೆ ಹೊಸ ಚೈತನ್ಯ ತುಂಬಿವೆ.

ಪ್ರಸ್ತುತ ಅವರು ಹೊನ್ನಾವರದಲ್ಲಿರುವ ಗಾಡ್ವಿನ್ ಸೈಕಲ್ಸ್ನಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ತಮ್ಮ ವೃತ್ತಿ ಜೀವನದ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ತಮ್ಮ ಉತ್ತಮ ವ್ಯಕ್ತಿತ್ವ, ಕ್ರೀಡೆಗಳ ಮೇಲಿನ ಅಪಾರ ಪ್ರೀತಿ ಮತ್ತು ನಿಷ್ಠೆಯಿಂದ ಇಬ್ರಾಹಿಂ ನಫೀಸ್ ಅವರು ಸ್ಪೋರ್ಟ್ಸ್ ಕನ್ನಡದ ಉತ್ತರ ಕನ್ನಡ ಜಿಲ್ಲೆ ಪ್ರತಿನಿಧಿಯಾಗಿ ನೇಮಕವಾಗಿರುವುದು ಜಿಲ್ಲೆಯ ಕ್ರೀಡಾಭಿಮಾನಿಗಳಿಗೆ ಸಂತಸದ ವಿಷಯವಾಗಿದೆ. ಇವರ ನೇಮಕದಿಂದ ಉತ್ತರ ಕನ್ನಡ ಜಿಲ್ಲೆಯ ಕ್ರೀಡಾ ಚಟುವಟಿಕೆಗಳಿಗೆ ಇನ್ನಷ್ಟು ಉತ್ತೇಜನ ದೊರೆಯಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲ, ಕುಮಟಾ, ಹೊನ್ನಾವರ, ಭಟ್ಕಳ, ಸಿರ್ಸಿ, ಸಿದ್ಧಾಪುರ, ಯಲ್ಲಾಪುರ, ಹಳಿಯಾಳ, ಮುಂಡಗೋಡು ಮತ್ತು ಜೊಯ್ಡಾ ಈ ಭಾಗದ ಕ್ರೀಡಾಕೂಟದ ಆಯೋಜಕರು ತಮ್ಮ ಕ್ರೀಡಾಕೂಟದ ಸುದ್ದಿ ನೇರ ಪ್ರಸಾರ ಅಥವಾ ಜಾಹೀರಾತು ನೀಡಲು ಇಚ್ಛಿಸುವವರು ಇಬ್ರಾಹಿಂ ನಫೀಸ್ ಅವರ 79968 28178 ಈ ನಂಬರ್ ಸಂಪರ್ಕಿಸಬಹುದು.




