Action Replayಅಡೆತಡೆಗಳ ಮೀರಿ ನಡೆಯದಿದ್ದರೆ ಸಾಧನೆ ಅಸಾಧ್ಯವೆಂದು ತೋರಿಸಿದವನೀತ.

ಅಡೆತಡೆಗಳ ಮೀರಿ ನಡೆಯದಿದ್ದರೆ ಸಾಧನೆ ಅಸಾಧ್ಯವೆಂದು ತೋರಿಸಿದವನೀತ.

-

- Advertisment -spot_img

ಅವನಿಗೆ ಆಗ ಹದಿನೇಳನೇ ವಯಸ್ಸು. ವೃತ್ತಿಪರ ಆಟಗಾರನಾಗಿ ತನ್ನ ವೃತ್ತಿಜೀವನ ಶುರು ಮಾಡಿದ್ದ ಆದಿಕಾಲ. ಅಷ್ಟರಲ್ಲಾಗಲೇ ಆಘಾತವೊಂದು ಅವನಿಗೆ ಕಾದಿತ್ತು. ಅಪರೂಪದ ಕಾಯಿಲೆಯಾಗಿರುವ ಆದರೆ ಕ್ರೀಡಾಪಟುಗಳಿಗೆ ಕಂಟಕವೆನ್ನಿಸುವ ಕೋಹ್ಲರ್ಸ್ ಫುಟ್ ಎನ್ನುವ ಪಾದದ ಸಮಸ್ಯೆ ಅವನಿಗಿತ್ತು ಎನ್ನುವುದು ಎಲ್ಲರಿಗೂ ಗೊತ್ತಿದ್ದ ವಿಷಯವೇ. ಆದರೆ ಸರಿಯಾದ ಸಮಯಕ್ಕೆ ಅದು ತನ್ನ ಪ್ರಭಾವವನ್ನು ತೋರಿತ್ತು. ಅವನ ಎಡಪಾದದ ಮೂಳೆಯ ಅಸ್ಥಿಮಜ್ಜೆಯ ಅಭಾವ ಅವನಿಗೆ ತೀವ್ರ ಭಾದೆಯನ್ನುಂಟು ಮಾಡುತ್ತಿತ್ತು. ವೈದ್ಯರನ್ನು ಸಂಪರ್ಕಿಸಿದರೆ ವೈದ್ಯರಿಂದ ನಕಾರಾತ್ಮಕ ಉತ್ತರ. ನೀನಿನ್ನು ಟೆನ್ನಿಸ್ ಆಡುವುದು ಸಾಧ್ಯವಿಲ್ಲ ಎಂಬ ನಿರಾಸೆಯ ಮಾತುಗಳು.

ಆದರೆ ಅವನ ಕನಸುಗಳು ದೊಡ್ಡವಿದ್ದವು. ಟೆನ್ನಿಸ್ ಲೋಕದ ಮಹಾನ್ ಆಟಗಾರನಾಗಬೇಕೆನ್ನುವ ದೊಡ್ಡ ಮಹತ್ವಾಕಾಂಕ್ಷೆ ಅವನದಾಗಿತ್ತು. ತೀರ ಆಸೆಯಿಂದ ಆರನೇಯ ವಯಸ್ಸಿಗೆ ಟೆನ್ನಿಸ್ ರ‌್ಯಾಕೆಟ್ ಕೈಗೆತ್ತಿಕೊಂಡವನಿಗೆ ಕಾಲು ನೋವಿಗಿಂತ, ಬದುಕಿನ ಸೋಲಿನ ವೇದನೆ ದೊಡ್ಡದೆನ್ನಿಸಿತ್ತು. ಮನೆಯವರ ಹಿಂಜರಿಕೆಯ ಹೊರತಾಗಿಯೂ ಆತ ಆಟದಲ್ಲಿಯೇ ಮುಂದುವರೆಯಲು ನಿರ್ಧರಿಸಿದ್ದ. ಅವನ ಕೆಚ್ಚಿಗೆ ಮೆಚ್ಚಿದ ಅವನ ತರಬೇತಿಯ ತಂಡವೂ ಅವನ ಸಹಾಯಕ್ಕೆ ನಿರ್ಧರಿಸಿತ್ತು. ಅವನಪ್ಪ ಅವನ ಬೆಂಬಲಕ್ಕೆ ನಿಂತಿದ್ದ. ಮತ್ತೊಬ್ಬ ವೈದ್ಯರ ಸಲಹೆಯ ಮೇರೆಗೆ ಒರ್ಥೋಡಿಕ್ಸ್ ತಂತ್ರಜ್ಞಾನದಡಿ ತಯಾರಾದ ವಿಶೇಷ ಶೂ ಬಳಸಿ ತನ್ನ ಟೆನ್ನಿಸ್ ಜೀವನ ಮುಂದುವರೆಸಲು ನಿರ್ಧರಿಸಿದ.

2004ರ ವೇಳೆಗೆ ತನ್ನ ಮೊದಲ ಪ್ರತಿಷ್ಠಿತ ಟೆನ್ನಿಸ್ ಟೂರ್ನಿಯನ್ನಾಡಿದ್ದ ಅವನಾಗಲೇ ಒಂದು ಬಾರಿ ಎಟಿಪಿಯ ಟೂರ್ನಿಯೊಂದರಲ್ಲಿ ಅಗ್ರಶ್ರೇಯಾಂಕಿತ ಫೆಡರರ್‌ನನ್ನು ಸೋಲಿಸಿದ್ದ. ಅಷ್ಟಾಗಿಯೂ ಗ್ರಾಂಡಸ್ಲಾಮ್‌ನಲ್ಲಿ ಮೊದಲ ಯಶಸ್ಸು ಅವನಿಗೆ ದೊರಕಿದ್ದು 2005ರ ಫ್ರೆಂಚ್ ಓಪನ್ ಪಂದ್ಯಾವಳಿಯಲ್ಲಿ. ಉಪಾಂತ್ಯದಲ್ಲಿ ಫೆಡರರ್‌ನನ್ನು ಮಣಿಸಿ ಫೈನಲ್ಲಿನಲ್ಲಿ ಮರಿಯಾನೋ ಪುಯೆರ್ಟಾನನ್ನು ಸೋಲಿಸಿ ಚೊಚ್ಚಲ ಗ್ರಾಂಡಸ್ಲಾಮ್ ಪ್ರಶಸ್ತಿ ಗೆದ್ದುಕೊಂಡ. ಮುಕ್ತ ಯುಗದಲ್ಲಿ ತನ್ನ ಮೊದಲ ಟೊರ್ನಿಯಲ್ಲಿಯೇ ಪಂದ್ಯಾವಳಿ ಗೆದ್ದುಕೊಂಡ ಎರಡನೇ ಆಟಗಾರ ಎನ್ನಿಸಿಕೊಂಡ. ಮುಂದೆ ನಾಲ್ಕು ಬಾರಿ ಕೇವಲ ಫ್ರೆಂಚ್ ಓಪನ್ ಮಾತ್ರ ಗೆದ್ದಾಗ ಟೆನ್ನಿಸ್ಪಂಡಿತರಿಂದ,’ಇವನು ಮಣ್ಣಿಗೆ ಮಾತ್ರ ಸೈ’ ಎನ್ನುವ ಟೀಕೆಗೆ ಗುರಿಯಾದ.ಆದರೆ ಅಷ್ಟರಲ್ಲಾಗಲೇ ಪಂಡಿತರ ಲೆಕ್ಕಾಚಾರವನ್ನು ಅವನು ತಲೆಕೆಳಗಾಗಿಸಿದ್ದ.

ಸತತ ಐದು ಬಾರಿ ವಿಂಬಲ್ಡನ್ ‌ಗೆದ್ದು ತನ್ನೆದುರೇ ಸತತ ಎರಡು ಬಾರಿ ಫೈನಲ್ ಗೆದ್ದಿದ್ದ ಫೆಡರರ್‌ನನ್ನು ಹುಲ್ಲಿನಂಕಣದಲ್ಲಿ ಸೋಲಿಸಿ ಇತಿಹಾಸ ನಿರ್ಮಿಸಿದ್ದ.ಮುಂದೆ ಎರಡೇ ವರ್ಷಗಳ ಅವಧಿಯಲ್ಲಿ ಕರಿಯರ್ ಗ್ರಾಂಡ್‌ಸ್ಲಾಮ್ ಪೂರ್ತಿಗೊಳಿಸಿ ಟೀಕಾಕಾರರ ಬಾಯಿಮುಚ್ಚಿಸಿದ್ದ.

ಹಿಂತಿರುಗಿ ನೋಡಿದರೇ ರಾಫೆಲ್ ನಡಾಲ್ ಎನ್ನುವ ಟೆನ್ನಿಸ್ ಗಾರುಡಿಗ ಗೆದ್ದಿರುವ ಒಟ್ಟು ಗ್ರಾಂಡ್‌ಸ್ಲಾಮ್‌ಗಳು ಹದಿನೆಂಟು. ಒಟ್ಟು ಫ್ರೆಂಚ್ ಓಪನ್‌ಗಳ ಸಂಖ್ಯೆಯೇ ಹನ್ನೆರಡು.ಟೆನ್ನಿಸ್ ಲೋಕದ ಅವನ ಸಾಧನೆಯ ಗೌರವಾರ್ಥ 2008ರಲ್ಲಿ ಅಂತರಾಷ್ಟ್ರೀಯ ಖಗೋಳ ಒಕ್ಕೂಟ, ಮಂಗಳ ಮತ್ತು ಗುರುಗ್ರಹದ ನಡುವಣ ಆಕಾಶಕಾಯವೊಂದಕ್ಕೆ ‘ರಾಫಾಲ್ ನಡಾಲ್’ ಎಂದು ನಾಮಕರಣ ಮಾಡಿತು. ಸಾರ್ವಕಾಲಿಕ ಶ್ರೇಷ್ಠ ಆಟಗಾರನೆಂದೇ ಗುರುತಿಸಲ್ಪಟ್ಟಿರುವ ಫೆಡರರ್‌ನ ಬೆನ್ನಟ್ಟಿರುವ ಈ ಸ್ಪೇನ್ ಗೂಳಿ ಫೆಡರರ್‌ನನ್ನು ಮೀರಿ ನಡೆಯುವ ಸಾಧ್ಯತೆಗಳು ಇಲ್ಲದಿಲ್ಲ. ಮೀರದಿದ್ದರೂ ಟೆನ್ನಿಸ್ ಲೋಕ ಕಂಡ ಮಹಾನ್ ದಂತಕತೆಗಳ ಪೈಕಿ ನಡಾಲ್ ಕೂಡ ಒಬ್ಬ ಎನ್ನುವುದು ಸುಳ್ಳಲ್ಲ.

ನೋವಿಗೆ ಸೋತು ಕೈ ಚೆಲ್ಲಿದ್ದರೆ ಬಹುಶ: ನಡಾಲ್ ಎನ್ನುವ ದಂತಕತೆಯ ಹುಟ್ಟು ಸಾಧ್ಯವಿರಲಿಲ್ಲ.ಬದುಕಿನ ಅಡೆತಡೆಗಳನ್ನು ಮೀರಿ ನಡೆಯುವ ಕಿಚ್ಚಿರದಿದ್ದರೆ ಸಾಧನೆ ಅಸಾಧ್ಯವೆನ್ನುವುದನ್ನು ಬದುಕಿ ತೋರಿಸಿದ ಆವೆಮಣ್ಣಿನಂಕಣದ ರಾಜ. ಇಷ್ಟಾಗಿಯೂ ಅವನನ್ನು ಟೀಕಿಸುವವರ ಸಂಖ್ಯೆ ಕಡಿಮೆಯೇನಿಲ್ಲ. ಅವನಂತೆಯೇ ಸಾಧಕರ ಸಾಧನೆಯೆಡೆಗೆ ಕುಹಕವಾಡುವವರ, ಸಾಧಕರ ಗುಂಪೆನ್ನುವುದು ಅದೃಷ್ಟವಂತ ಜನಾಂಗ ಎಂದು ನಿಟ್ಟುಸಿರಾಗುವವರ ಲೆಕ್ಕವೂ ದೊಡ್ಡದಿದೆ. ಹಾಗೆ ಬಡಬಡಿಸುವ ಮುನ್ನ ಇಂಥಹ ಸಾಧಕರ ಸಾಧನೆಯ ಹಿಂದಿನ ಬೆವರಗಾಥೆಯನ್ನರಿತುಕೊಳ್ಳಲು ಪ್ರಯತ್ನಿಸಿದರೆ ಒಂದಷ್ಟು ಹಳಹಳಿಕೆಗಳು ಕಡಿಮೆಯಾಗಿ, ಸಾಧಿಸುವ ಛಲವಿಲ್ಲದೇ ಗೆಲುವಿನ ರುಚಿಯಿಲ್ಲ ಬದುಕಿನಲ್ಲಿ ಎಂಬ ವಾಸ್ತವದ ಅರಿವು ಮೂಡಬಹುದೇನೋ ಅಲ್ಲವೇ..?

                                                                                                                              – ಗುರುರಾಜ ಕೊಡ್ಕಣಿ ಯಲ್ಲಾಪುರ

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

two × 3 =

Latest news

ಉಡುಪಿ ಜಿಲ್ಲಾಮಟ್ಟದ ಅಂಡರ್-15 ಲೆದರ್ ಬಾಲ್ ಕ್ರಿಕೆಟ್ ಟೂರ್ನಿ – 2026

ಉಡುಪಿ ಜಿಲ್ಲಾಮಟ್ಟದ ಅಂಡರ್-15 ಲೆದರ್ ಬಾಲ್ ಕ್ರಿಕೆಟ್ ಟೂರ್ನಿ – 2026 ಉಡುಪಿ: ಅಕ್ಷಯ ಕ್ರಿಕೆಟ್ ಅಕಾಡೆಮಿ, ಉಡುಪಿ ಮತ್ತು ಸನ್‌ರೈಸ್ ಕ್ರಿಕೆಟ್ ಅಕಾಡೆಮಿ, ರಂಗನಪಾಲ್ಕೆ ಇವರ...

ಗುರುಗಣೇಶ್ ನೇಜಾರು ಫ್ರೆಂಡ್ಶಿಫ್ ಟ್ರೋಫಿ-2026 ಚಾಂಪಿಯನ್ಸ್

ಗುರುಗಣೇಶ್ ನೇಜಾರು ಫ್ರೆಂಡ್ಶಿಫ್ ಟ್ರೋಫಿ-2026 ಚಾಂಪಿಯನ್ಸ್ ಕುಂದಾಪುರ-ಇಲ್ಲಿನ ಫ್ರೆಂಡ್ಸ್ ಕೆದೂರು ಮೊತ್ತ ಮೊದಲ ಬಾರಿಗೆ ಆಯೋಜಿಸಿದ 60 ಗಜಗಳ ಮುಕ್ತ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾಟ ಫ್ರೆಂಡ್ಶಿಫ್ ಟ್ರೋಫಿ-2026...

ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿ ಸಂಘ (ರಿ) ಮತ್ತು ಜಿಲ್ಲಾ ಘಟಕ ಶಿವಮೊಗ್ಗ ವತಿಯಿಂದ ರಾಜ್ಯಮಟ್ಟದ ಕ್ರೀಡಾಕೂಟ 2026

ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿ ಸಂಘ (ರಿ) ಮತ್ತು ಜಿಲ್ಲಾ ಘಟಕ ಶಿವಮೊಗ್ಗ ವತಿಯಿಂದ ರಾಜ್ಯಮಟ್ಟದ ಕ್ರೀಡಾಕೂಟ 2026 ಕಂದಾಯ ಇಲಾಖೆ ಕರ್ನಾಟಕ ರಾಜ್ಯ ಗ್ರಾಮ...

ಮಣಿಪಾಲದಲ್ಲಿ ಅಂಡರ್-21 ಫ್ಲಡ್‌ಲೈಟ್ ಫುಟ್‌ಬಾಲ್ ಟೂರ್ನಿ – CHIVAS ಕಪ್ 2026

ಮಣಿಪಾಲದಲ್ಲಿ ಅಂಡರ್-21 ಫ್ಲಡ್‌ಲೈಟ್ ಫುಟ್‌ಬಾಲ್ ಟೂರ್ನಿ – CHIVAS CUP 2026 CHIVAS ಎಫ್‌ಸಿ ವತಿಯಿಂದ ಅಂಡರ್-21 ಫ್ಲಡ್‌ಲೈಟ್ ಟರ್ಫ್ ಲೀಗ್ ಟೂರ್ನಮೆಂಟ್ “CHIVAS ಕಪ್ 2026”...
- Advertisement -spot_imgspot_img

ಸುರತ್ಕಲ್‌ನಲ್ಲಿ ಮತ್ತೆ ಕ್ರಿಕೆಟ್ ಸಂಭ್ರಮ – ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್-5

ಸುರತ್ಕಲ್‌ನಲ್ಲಿ ಮತ್ತೆ ಕ್ರಿಕೆಟ್ ಸಂಭ್ರಮ – ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್-5 ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ (ರಿ.) ಹಾಗೂ ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್...

ಆಜ್ಮಾ ಟ್ರೋಫಿ – 2026 ಕ್ರಿಕೆಟ್ ಟೂರ್ನಿಗೆ ಭರ್ಜರಿ ಸಿದ್ಧತೆ

ಆಜ್ಮಾಟ್ರೋಫಿ – 2026 ಕ್ರಿಕೆಟ್ ಟೂರ್ನಿಗೆ ಭರ್ಜರಿ ಸಿದ್ಧತೆ ಪ್ರೆಂಡ್ಸ್ ನೇಜಾರ್ ಮತ್ತು ಇಸಾಕ್ ನೇಜಾರ್ ಇವರ ನೇತೃತ್ವದಲ್ಲಿ ನಡೆಯಲಿರುವ **ಆಜ್ಮಾ ಟ್ರೋಫಿ – 2026**...

Must read

- Advertisement -spot_imgspot_img

You might also likeRELATED
Recommended to you