ಕ್ರಿಕೆಟ್ಬೆಂಗಳೂರು-ಜಿ.ಗುರು ಪ್ರಸಾದ್ ಸಾರಥ್ಯದಲ್ಲಿ ದಾಸರಹಳ್ಳಿಯಲ್ಲಿ ಕ್ರಿಕೆಟ್ ಹಬ್ಬ-ಬಿಗ್ ಬ್ಯಾಷ್ ದಾಸರಹಳ್ಳಿ

ಬೆಂಗಳೂರು-ಜಿ.ಗುರು ಪ್ರಸಾದ್ ಸಾರಥ್ಯದಲ್ಲಿ ದಾಸರಹಳ್ಳಿಯಲ್ಲಿ ಕ್ರಿಕೆಟ್ ಹಬ್ಬ-ಬಿಗ್ ಬ್ಯಾಷ್ ದಾಸರಹಳ್ಳಿ

-

- Advertisment -spot_img
ದಾಸರಹಳ್ಳಿ ಪರಿಸರದ ಕ್ರಿಕೆಟ್ ಉತ್ಸಾಹಿ,ಬಿ.ಜೆ.ಪಿ ಮುಖಂಡರಾದ ಜಿ‌.ಗುರು ಪ್ರಸಾದ್ ಸಾರಥ್ಯದಲ್ಲಿ,2019 ರಲ್ಲಿ  ಗುರು ಕ್ರಿಕೆಟರ್ಸ್ ಸ್ಥಾಪನೆಯಾಗಿದ್ದು,ಪ್ರಸ್ತುತ ದಿನಗಳಲ್ಲಿ ಬೆಂಗಳೂರು ಪರಿಸರದ ಪ್ರಬಲ ತಂಡವಾಗಿ ಗುರುತಿಸಿಕೊಂಡಿದೆ.
ಗ್ರಾಮಾಂತರ ಪ್ರತಿಭೆಗಳನ್ನು ರಾಜ್ಯ,ರಾಷ್ಟ್ರ ಮಟ್ಟಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಜಿ.ಗುರು ಪ್ರಸಾದ್ ರವರ
ಸಾರಥ್ಯದ ಗುರು ಕ್ರಿಕೆಟರ್ಸ್, ಸ್ಯಾನ್ ಸಿಟಿ ಮತ್ತು ರಾಜ್ಯ ಬಿ.ಜೆ.ಪಿ ಕಾರ್ಯಕಾರಿಣಿ ಸದಸ್ಯರು ಮತ್ತು ದಾಸರ ವಿಧಾನಸಭಾ ಕ್ಷೇತ್ರದ ನಿಕಟಪೂರ್ವ ಶಾಸಕರಾದ ಶ್ರೀ.ಎಸ್.ಮುನಿರಾಜು ಇವರ ಪ್ರಾಯೋಜಕತ್ವದಲ್ಲಿ,
 ಮೊದಲ ಆವೃತ್ತಿಯ ಅದ್ಧೂರಿಯ ಹೊನಲು ಬೆಳಕಿನ “ಬಿಗ್ ಬ್ಯಾಷ್ ದಾಸರಹಳ್ಳಿ” ಪಂದ್ಯಾಕೂಟವನ್ನು ಆಯೋಜಿಸಲಾಗಿದೆ.
ಫೆಬ್ರವರಿ 26,27,28 ಮತ್ತು ಮಾರ್ಚ್ 1 ರಂದು,ಬಗಲಗುಂಟೆ ವಾರ್ಡ್ ನಂ-14,ಎಮ್.ಇ.ಐ ಲೇಯೌಟ್ ಮೈದಾನದಲ್ಲಿ ಈ ಪಂದ್ಯಾವಳಿ ನಡೆಯಲಿದ್ದು,ಪ್ರಥಮ ಬಹುಮಾನ 3,99,999 ಮತ್ತು ಬೆಳ್ಳಿ ಟ್ರೋಫಿ,ದ್ವಿತೀಯ ಬಹುಮಾನ 2,22,222 ಮತ್ತು ಬೆಳ್ಳಿ ಟ್ರೋಫಿ ತೃತೀಯ 77,777 ಮತ್ತು ಬೆಳ್ಳಿ ಟ್ರೋಫಿ ಮತ್ತು ಚತುರ್ಥ 55,555 ಮತ್ತು ಬೆಳ್ಳಿ ಟ್ರೋಫಿ ನೀಡಲಾಗುತ್ತಿದ್ದು,ವೈಯಕ್ತಿಕ ಶ್ರೇಷ್ಠ ನಿರ್ವಹಣೆ ನೀಡಿದ ಆಟಗಾರರು ವಿಶೇಷ ಉಡುಗೊರೆಗಳನ್ನು ಪಡೆಯಲಿದ್ದಾರೆ.
ಫೆಬ್ರವರಿ 25 ಶುಕ್ರವಾರ ಸಂಜೆ 6 ಗಂಟೆಗೆ ವರ್ಣರಂಜಿತ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು,ಕೇಂದ್ರ
 ಸರಕಾರದ ಮಾಜಿ ಸಚಿವರು ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು,ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮಾನ್ಯ ಸಂಸದರು ಶ್ರೀ‌.ಡಿ.ವಿ.ಸದಾನಂದ ಗೌಡ ಮತ್ತು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ನಿಕಟಪೂರ್ವ ಶಾಸಕರಾದ ಶ್ರೀ.ಎಸ್.ಮುನಿರಾಜು ಇವರು  “ಬಿಗ್ ಬ್ಯಾಶ್ ದಾಸರಹಳ್ಳಿ ಸೀಸನ್-೧” ಉದ್ಘಾಟನೆ ನೆರವೇರಿಸಲಿದ್ದಾರೆ.ಈ ಸಂದರ್ಭ ತಂಡದ ಮಾಲೀಕರ ಭೇಟಿ,ಆಟಗಾರರ ಪರಿಚಯ,ಟ್ರೋಫಿ ಅನಾವರಣ ಆಟಗಾರರಿಗೆ ಜೆರ್ಸಿ ವಿತರಣೆ ನಡೆಯಲಿದೆ.
ಉದ್ಘಾಟನೆಯ ಬಳಿಕ ಟೂರ್ನಮೆಂಟ್ ನ ಆಯೋಜಕರ ವಿರುದ್ಧವಾಗಿ ಪೊಲೀಸ್ ತಂಡ ಮತ್ತು A ಗ್ರೂಪ್ ನ  ಮಾಲೀಕರ ತಂಡದ ವಿರುದ್ಧವಾಗಿ B ಗ್ರೂಪ್ ನ ಮಾಲೀಕರ ತಂಡದ ನಡುವೆ ಪ್ರದರ್ಶನ ಪಂದ್ಯ ನಡೆಯಲಿದೆ.
ಭಾಗವಹಿಸುವ 12 ತಂಡಗಳ ವಿವರ ಈ ಕೆಳಗಿನಂತಿದೆ
1)ಸುಧೀರ್ ರೆಡ್ಡಿ ಮಾಲೀಕತ್ವದ ಟೆಂಪಲ್ ಬುಲ್ಸ್
2)ಎನ್‌‌.ನರಸಿಂಹ ಮೂರ್ತಿ ಮಾಲೀಕತ್ವದ ಸಿಂಹ ಇಲೆವೆನ್
3)ಸತೀಶ್ ಮಿತ್ರವೃಂದ ಮಾಲೀಕತ್ವದ ಸತೀಶ್ ಇಲೆವೆನ್
4)ಶಶಿಕಾಂತ್ ರಾವ್ ಮಾಲೀಕತ್ವದ ಸ್ನೇಹಜೀವಿ
5)ಮಣಿ ಶಶಾಂಕ್ ಮಾಲೀಕತ್ವದ ಆರ್.ಸಿ‌.ಬಿ ಇಲೆವೆನ್
6)ಮನೋಜ್ ಮಾಲೀಕತ್ವದ ರಂಗ ಇಲೆವೆನ್
7)ಪಿ.ಎನ್‌.ಕೃಷ್ಣಮೂರ್ತಿಯವರ ಮಾಲೀಕತ್ವದ ಪಿ‌.ಎನ್‌.ಕೆ ಟೀಮ್
8)ಮಂಜುನಾಥ್.ಟಿ‌.ಮಾಲೀಕತ್ವದ ಕ್ರಿಕೆಟ್ ನಕ್ಷತ್ರ
9)ಮುರಳೀಧರ್.ಹೆಚ್.ಎಮ್ ಮಾಲೀಕತ್ವದ  ಮಹಾಶ್ರೀ ಇಲೆವೆನ್
10)ಪಿ.ಎನ್.ದಿನೇಶ್ ಮಾಲೀಕತ್ವದ ದಿನೇಶ್ ಸಾಂಘ್ವಿ ಕ್ರಿಕೆಟ್
11)ಮಂಜುನಾಥ್.ಎಸ್ ಮಾಲೀಕತ್ವದ ಚೇತು ಇಲೆವೆನ್
12)ಅರುಣ್ ಮಾಲೀಕತ್ವದ ವಿಷು ಎಂಟರ್ ಪ್ರೈಸಸ್
ಪಂದ್ಯಾವಳಿಯ ನೇರ ಪ್ರಸಾರ M.Sports ಯೂಟ್ಯೂಬ್ ಚಾನೆಲ್ ನಲ್ಲಿ ಬಿತ್ತರಗೊಳ್ಳಲಿದೆ.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

15 + 20 =

Latest news

ಉರ್ವಾ ಮೈದಾನದಲ್ಲಿ ಮಂಗಳಾಪುರ ಟ್ರೋಫಿ ಸಂಭ್ರಮ – ಕೊಂಕಣ್ ಎಕ್ಸ್‌ಪ್ರೆಸ್ ಚಾಂಪಿಯನ್

ಉರ್ವಾ ಮೈದಾನದಲ್ಲಿ ಮಂಗಳಾಪುರ ಟ್ರೋಫಿ ಸಂಭ್ರಮ – ಕೊಂಕಣ್ ಎಕ್ಸ್‌ಪ್ರೆಸ್ ಚಾಂಪಿಯನ್ ಮಂಗಳೂರು ಉರ್ವಾ ಮೈದಾನದಲ್ಲಿ ಎರಡು ದಿನಗಳ ಕಾಲ ಹೊನಲು ಬೆಳಕಿನಲ್ಲಿ ನಡೆದ “ಮಂಗಳಾಪುರ ಟ್ರೋಫಿ...

ಹೊಸಂಗಡಿಯಲ್ಲಿ ಕುಂಬ್ರಿ ಪ್ರೀಮಿಯರ್ ಲೀಗ್ – 2026 ‘HPL-2K26’ ಕ್ರಿಕೆಟ್ ಸಂಭ್ರಮ

ಹೊಸಂಗಡಿಯಲ್ಲಿ ಕುಂಬ್ರಿ ಪ್ರೀಮಿಯರ್ ಲೀಗ್ – 2026 'HPL-2K26’ ಕ್ರಿಕೆಟ್ ಸಂಭ್ರಮ ಫ್ರೆಂಡ್ಸ್ ಹೊಸಂಗಡಿ ವತಿಯಿಂದ ಮೇ 9 ಮತ್ತು 10 ರಂದು ಹೊಸಂಗಡಿಯ ಅಂಬೇಡ್ಕರ್ ಕ್ರೀಡಾಂಗಣದಲ್ಲಿ...

ಮಾರುತಿ ಆಶ್ರಯ ಹಸ್ತಾಂತರ ಕಾರ್ಯಕ್ರಮ: ಮಾನವೀಯ ಸೇವೆಯ ಉದಾತ್ತ ಉದಾಹರಣೆ

ಮಾರುತಿ ಆಶ್ರಯ ಹಸ್ತಾಂತರ ಕಾರ್ಯಕ್ರಮ: ಮಾನವೀಯ ಸೇವೆಯ ಉದಾತ್ತ ಉದಾಹರಣೆ ಉಳ್ಳಾಲ, ಮೇ 5: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾರುತಿ ಜನಸೇವಾ ಸಂಘ (ರಿ) ಹಾಗೂ...

ಎಸ್‌ವಿಎಸ್ ಮೈದಾನದಲ್ಲಿ ಚಾರಿಟಿ ಕ್ರಿಕೆಟ್: ವಿಜೇತರಿಂದ ದೇಣಿಗೆಯ ಮಹತ್ವದ ಹೆಜ್ಜೆ

  ಎಸ್‌ವಿಎಸ್ ಮೈದಾನದಲ್ಲಿ ಚಾರಿಟಿ ಕ್ರಿಕೆಟ್: ವಿಜೇತರಿಂದ ದೇಣಿಗೆಯ ಮಹತ್ವದ ಹೆಜ್ಜೆ ಬಂಟ್ವಾಳ: ಅರ್ಜುನ್ ಭಂಡಾರ್ಕರ್ ಅವರ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ (ರಿ) ವತಿಯಿಂದ ಆಶಕ್ತ ಕುಟುಂಬಗಳಿಗೆ...
- Advertisement -spot_imgspot_img

ಕೌಡೂರು ಮೈದಾನದಲ್ಲಿ ಉಡುಪಿ ಅಂಡರ್-15 ಟಿ-20 ಕ್ರಿಕೆಟ್ ಟೂರ್ನಿ: ಅಕ್ಷಯ ಕ್ರಿಕೆಟ್ ಅಕಾಡೆಮಿ ಚಾಂಪಿಯನ್

ಕೌಡೂರು ಮೈದಾನದಲ್ಲಿ ಉಡುಪಿ ಅಂಡರ್-15 ಟಿ-20 ಕ್ರಿಕೆಟ್ ಟೂರ್ನಿ: ಅಕ್ಷಯ ಕ್ರಿಕೆಟ್ ಅಕಾಡೆಮಿ ಚಾಂಪಿಯನ್ ಮಟ್ಟು ಅಸೋಸಿಯೇಟ್ಸ್, ಉಡುಪಿ, ಇವರ ಪ್ರಾಯೋಜಕತ್ವದಲ್ಲಿ, ಅಕ್ಷಯ ಕ್ರಿಕೆಟ್ ಅಕಾಡೆಮಿ ಉಡುಪಿ...

ಉಡುಪಿಯಲ್ಲಿ ಸುಸಜ್ಜಿತ ಫುಟ್ಬಾಲ್ ಕ್ರೀಡಾಂಗಣ ನಿರ್ಮಾಣ-ಎಂ.ಗಫೂರ್

ಉಡುಪಿಯಲ್ಲಿ ಸುಸಜ್ಜಿತ ಫುಟ್ಬಾಲ್ ಕ್ರೀಡಾಂಗಣ ನಿರ್ಮಾಣ-ಎಂ.ಗಫೂರ್ ಉಡುಪಿ-ಶಿವಾಸ್ ಫುಟ್ಬಾಲ್ ಕ್ಲಬ್ ಇವರ ವತಿಯಿಂದ ಅಂಡರ್ 21 ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾಟದ ಉದ್ಘಾಟನಾ ಸಮಾರಂಭ ಸಿಟಿ ಅರೆನಾ...

Must read

- Advertisement -spot_imgspot_img

You might also likeRELATED
Recommended to you