Categories
ಕ್ರಿಕೆಟ್

ಬೆಂಗಳೂರು-ಹಾಲಪ್ಪ ಭರ್ಜರಿ ಆಟ-ರೋಚಕ ಪಂದ್ಯಾಟ- ಮಿನುಗಿದ ಕ್ರಿಕೆಟ್ ನಕ್ಷತ್ರ

ಕೆ‌.ಟಿ.ಪಿ‌.ಎಲ್ ದ್ವಿತೀಯ ಪಂದ್ಯದಲ್ಲಿ ಕ್ರಿಕೆಟ್ ನಕ್ಷತ್ರ,ಕ್ರಿಶಾ ಇಲೆವೆನ್ ಕುಂದಾಪುರದ ತಂಡದ ವಿರುದ್ಧ 1 ರನ್ ಗಳ ಅಂತರದ ರೋಚಕ ಗೆಲುವು ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಇಳಿಸಲ್ಪಟ್ಟ ಕ್ರಿಕೆಟ್ ನಕ್ಷತ್ರದ ಬ್ಯಾಟಿಂಗ್ ಐಕಾನ್ ದಾವಣಗೆರೆ ಹಾಲಪ್ಪ ಬಿರುಸಿನ 19 ರನ್ ಮತ್ತು ಸಚಿನ್ ಮಹಾದೇವ್ 11 ರನ್ ಗಳ ನೆರವಿನಿಂದ 8 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 62 ರನ್ ಪೇರಿಸಿತ್ತು.
ಇದಕ್ಕುತ್ತರವಾಗಿ ಕ್ರಿಶಾ ಇಲೆವೆನ್ ಕುಂದಾಪುರದ ಸುಜಿತ್ 17,ಮತ್ತು ಕಿಝರ್ 11 ಬಿರುಸಿನ ರನ್ ಗಳಿಸಿಯೂ,
ಅಂತಿಮವಾಗಿ 9 ವಿಕೆಟ್ ನಷ್ಟಕ್ಕೆ 61ರನ್ ಗಳಿಸಿ 1 ರನ್ ಅಂತರದ ಸೋಲೊಪ್ಪಿಕೊಂಡಿತು‌.
ಬ್ಯಾಟಿಂಗ್ ನಲ್ಲಿ ಮಿಂಚಿ,ರೋಚಕ‌ ಘಟ್ಟದಲ್ಲಿ ನೇರ ಗುರಿಯ ಮೂಲಕ ಎದುರಾಳಿಯ ವಿಕೆಟ್ ಉರುಳಿಸಿದ ಹಾಲಪ್ಪ ಪಂದ್ಯಶ್ರೇಷ್ಟ ಗೌರವಕ್ಕೆ ಪಾತ್ರರಾದರು.

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

two × 1 =