Categories
ಕ್ರಿಕೆಟ್

ಬೆಂಗಳೂರು-ಭಂಡಾರಿ ದಾಳಿಗೆ ಕುಸಿದ ನಾಗಾ ಇಲೆವೆನ್-M.K.S ಕೋಲಾರ ತಂಡಕ್ಕೆ 6 ರನ್ ಜಯ

ಕೆ.ಟಿ‌.ಪಿ‌.ಎಲ್ ಮೊದಲ ಪಂದ್ಯದಲ್ಲಿ ಎಮ್.ಕೆ.ಎಸ್ ಕೋಲಾರ ತಂಡ,ನಾಗಾ ಇಲೆವೆನ್ ವಿರುದ್ಧ 6 ರನ್ ಗಳ ಅಂತರದ ಜಯ ಸಾಧಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಎಮ್.ಕೆ.ಎಸ್ ಕೋಲಾರ ಅಜರ್ ಅಹಮದ್ 13,ಅಕ್ಷಯ್ ಶೆಟ್ಟಿ 9,ಮಹೇಶ್ 8 ರನ್ ಗಳ ನೆರವಿನಿಂದ 8 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 64 ರನ್ ಪೇರಿಸಿತ್ತು.
ಚೇಸಿಂಗ್ ವೇಳೆ ನಾಗಾ ಇಲೆವೆನ್,ಸಾಗರ್ ಭಂಡಾರಿ ಮೊದಲ ಓವರ್ ನ ಉರಿ ದಾಳಿಗೆ ತತ್ತರಿಸಿ,ಲಗು ಬಗನೆ ಆರಂಭಿಕ ಕ್ರಮಾಂಕದ ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡಿತು.ಅಂತಿಮ ಹಂತದಲ್ಲಿ ಪ್ರಶಾಂತ್ ಕುಟ್ಟಿ ಬಿರುಸಿನ 16,ಯತೀಶ್ 14,ಸೋನು 11 ರನ್ ಗಳಿಸಿದರೂ,ಅಂತಿಮವಾಗಿ 8 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 58 ರನ್ ಗಳಿಸಲಷ್ಟೇ ಶಕ್ತವಾಯಿತು.
ಆರಂಭಿಕ ಆಟಗಾರನಾಗಿ ಕಣಕ್ಕಿಳಿದು ಇನ್ನಿಂಗ್ಸ್ ಆಧರಿಸಿ,ಬೌಲಿಂಗ್ ನಲ್ಲಿ 2 ಓವರ್ ಗಳಲ್ಲಿ 7 ರನ್ ನೀಡಿ 2 ವಿಕೆಟ್ ಪಡೆದ ಸಾಗರ್ ಭಂಡಾರಿ ಅರ್ಹವಾಗಿ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದುಕೊಂಡರು.
ಚಿತ್ರ ಕೃಪೆ-M Sports

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

18 − 10 =